ಬಡ ಅಜ್ಜಿಯ ಗುಡಿಸಲಿಗೆ ಬಂದರು ಜಿಲ್ಲಾಧಿಕಾರಿ! ಅಲ್ಲಿಯೇ ಊಟ ಮಾಡಿ, ಹೋಗುವಾಗ ಅಜ್ಜಿ ಕೈಗೆ ಕವರ್ ಕೊಟ್ಟರು! ಆದರೆ ಅದರಲ್ಲಿ ದುಡ್ಡಿರಲಿಲ್ಲ, ಬೇರೇನಿತ್ತು ಗೊತ್ತಾ…….?

ಬಡ ಅಜ್ಜಿಯ ಗುಡಿಸಲಿಗೆ ಬಂದರು ಜಿಲ್ಲಾಧಿಕಾರಿ! ಅಲ್ಲಿಯೇ ಊಟ ಮಾಡಿ, ಹೋಗುವಾಗ ಅಜ್ಜಿ ಕೈಗೆ ಕವರ್ ಕೊಟ್ಟರು! ಆದರೆ ಅದರಲ್ಲಿ ದುಡ್ಡಿರಲಿಲ್ಲ, ಬೇರೇನಿತ್ತು ಗೊತ್ತಾ…….?

ಕರುಣೆ, ದಯೆ ಇರುವ ಸಾಕಷ್ಟು ಜನರು ನಮಗೆ ಕಾಣಸಿಗುತ್ತಾರೆ, ಒಬ್ಬರಿಗೆ ಸಹಾಯ ಮಾಡುವುದೆಂದರೆ ಕೆಲವು ಜನರಿಗೆ ಸಾಕಷ್ಟು ಖುಷಿ ನೀಡುವ ಸಂಗತಿ, ಅಂತವರುಗಳಲ್ಲಿ ಕೆಲವರು ತಮ್ಮ ಸ್ವಂತ ದುಡ್ಡಿನಿಂದ ಸಹಾಯ ಮಾಡಿದರೆ, ಇನ್ನೂ ಹಲವರು ತಮ್ಮ ಕೈಯಲ್ಲಿದ್ದ ಅಧಿಕಾರದಿಂದ ಸಹಾಯ ಮಾಡುತ್ತಿರುತ್ತಾರೆ.

ಇಂತವರುಗಳಲ್ಲಿ ಇಂದು ನಾವು ನಿಮಗೆ ಒಬ್ಬ ಕರುಣಾಳು ಅಧಿಕಾರಿಯ ಬಗ್ಗೆ ಹಾಗೂ ಅವರ ಕಾರ್ಯಗಳ ಬಗ್ಗೆ ತಿಳಿಸುತ್ತೇವೆ ಬನ್ನಿ ನೋಡೋಣ…

ಒಬ್ಬ ಅಜ್ಜಿ ಒಂದು ಮನೆಯಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದರು, ಆ ಅಜ್ಜಿಗೆ 80 ವರ್ಷ ವಯಸ್ಸು, ಅಷ್ಟೇ ಅಲ್ಲದೇ ದೈಹಿಕವಾಗಿ ಸಾಕಷ್ಟು ಬಳಲಿದ್ದರು, ರೋಗದಿಂದ ಕೂಡ ಬಲಳುತ್ತಿದ್ದರು. ಇವರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ, ಅಲ್ಲದೇ ಅವರಿಗೆ ಸರಕಾರದ ಯಾವ ಯೋಜನೆಗಳು ಸಹ ಲಭಿಸುತ್ತಿರಲಿಲ್ಲ. ಆ ಅಜ್ಜಿ ಕೇವಲ ದೇವರಲ್ಲಿ ನನ್ನನ್ನು ಬೇಗನೆ ಕರೆದುಕೊಂಡು ಬಿಡು ಎಂದು ಪ್ರಾರ್ಥಿಸುತ್ತಿದ್ದರು. ಇಂತಹ ಸಮಯದಲ್ಲಿ ಆ ಅಜ್ಜಿ ವಾಸಿಸುತ್ತಿದ್ದ ಆ ಪುಟ್ಟ ಮನೆಗೆ ಸ್ವತಃ ಆ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಭೇಟಿ ನೀಡಿದರು!

ಈ ಅಜ್ಜಿ ಇರುವುದು ತಮಿಳುನಾಡಿನ ಕರೂರ್ ಎಂಬ ಜಿಲ್ಲೆಯಲ್ಲಿ ಆ ಅಜ್ಜಿಯ ಪರಿಸ್ಥಿತಿ ಆ ಜಿಲ್ಲೆಯ ಜಿಲ್ಲಾಧಿಕಾರಿ ಟಿ.ಅಂಬಜಗೇನ್ ಅವರಿಗೆ ಹೇಗೋ ಗೊತ್ತಾಗುತ್ತದೆ. ಅವರು ತಮ್ಮ ಧರ್ಮ ಪತ್ನಿಗೆ ಊಟವನ್ನು ತಯಾರಿಸಲು ಹೇಳಿದರು, ಕ್ಯಾರಿಯರ್ ಸಮೇತ ಅವರು ಆ ಅಜ್ಜಿ ಇರುವ ಜೋಪಡಿಗೆ ತೆರಳಿದರು. ಈ ಅಜ್ಜಿಯ ಅಕ್ಕ ಪಕ್ಕದವರು ಕೂಡ ಇವರೊಂದಿಗೆ ಹೆಚ್ಚು ಮಾತಾನ್ನಾಡುತ್ತಿರಲಿಲ್ಲ, ಇನ್ನೂ ಸಹಾಯದ ಮಾತಂತೂ ದೂರ. ಆದರೆ ಒಂದು ದಿನ ಆ ಜೋಪಡಿಗೆ ಇದ್ದಕ್ಕಿದ್ದ ಹಾಗೆ ಆ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಕೈಯಲ್ಲಿ ಊಟದ ಕ್ಯಾರಿಯರ್ ಹಿಡಿದು ಆ ಅಜ್ಜಿಯ ಮನೆಯ ಮುಂದೆ ನಿಂತು ಅಜ್ಜಿ “ಒಳಗೆ ಬರಬಹುದಾ ಅಜ್ಜಿ?” ಎಂದು ಕೇಳುತ್ತ ನಿಂತಿದ್ದರು. “ಅಜ್ಜಿ ನಾನು ಇವತ್ತು ನಿಮ್ಮೊಡನೆ ಊಟ ಮಾಡಲು ಬಂದಿದ್ದೇನೆ ನಡೆಯಿರಿ” ಎಂದಾಗ ಆ ಅಜ್ಜಿ ತಡವರಿಸುತ್ತ ಒಳಗೆ ಕರೆದರು. ಒಳಗೆ ಹೋಗಿ ನೆಲದ ಮೇಲೆಯೇ ಕುಳಿತುಕೊಂಡ ಜಿಲ್ಲಾಧಿಕಾರಿ ಟಿ. ಅಂಬಜಗೇನ್ ಅವರಿಗೆ ಆ ಅಜ್ಜಿ “ಸಾಹೇಬರೆ ನನ್ನ ಮನೆಯಲ್ಲಿ ಊಟ ಮಾಡಲು ತಟ್ಟೆ ಇಲ್ಲ, ಬದಲಾಗಿ ನಾನು ಬಾಳೆ ಎಲೆಯ ಮೇಲೆ ಊಟ ಮಾಡುತ್ತೇನೆ” ಎನ್ನುತ್ತಾಳೆ. ಇದಕ್ಕೆ ಬಹಳಷ್ಟು ಸಂತಸಗೊಂಡ ಇವರು “ನಾನು ಕೂಡ ಅದರಲ್ಲಿಯೇ ಊಟ ಮಾಡುತ್ತೇನೆ” ಎಂದು ಬಾಳೆ ಎಲೆಯಲ್ಲಿಯೇ ಊಟ ಮಾಡಿದರು. ಆ ಅಜ್ಜಿ ಹಾಗೂ ಅಕ್ಕ ಪಕ್ಕದ ಮನೆಯವರು ದಂಗು ಬಡಿದು ನಿಂತಿದ್ದರು.

ನಂತರ ವಾಪಸ್ ಹೋಗುವಾಗ ಅಜ್ಜಿಯ ಕೈಗೆ ಒಂದು ಕವರ್ ಇಟ್ಟರು. ಅದರಲ್ಲಿ ದುಡ್ಡಿದೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದರಲ್ಲಿ ದುಡ್ಡಿರಲಿಲ್ಲ, ಬದಲಿಗೆ ಅದರಲ್ಲಿ ಅಜ್ಜಿಗೆ ಇಂದಿರಾ ಆವಾಸ್ ಯೋಜನೆಯ ಮನೆಪತ್ರ, ವೃದ್ದಾಪ್ಯ ವೇತನದ ದಾಖಲೆ ಸೇರಿದಂತೆ, ಆ ಅಜ್ಜಿಗೆ ನ್ಯಾಯವಾಗಿ ಸಿಗಬೇಕಾದ ಎಲ್ಲ ಯಜನೆಗಳ ದಾಖಲಾತಿಗಳಿದ್ದವು! “ನೀವು ಹಣಕ್ಕಾಗಿ ಬ್ಯಾಂಕ್ ಗೂ ಹೋಗಬೇಕಾಗಿಲ್ಲ ಬದಲಾಗಿ ಆ ಹಣವೇ ನಿಮ್ಮನ್ನು ಬಂದು ಸೇರುವಂತೆ ಮಾಡುತ್ತೇನೆ” ಎಂದು ಹೇಳಿ ಜಿಲ್ಲಾಧಿಕಾರಿ ತಮ್ಮ ಕಾರು ಏರಿ ಹೊರಟಾಗ ಅಜ್ಜಿ ಹಾಗೂ ಸುತ್ತ ನೆರೆದಿದ್ದ ಜನರ ಕಣ್ಣಲ್ಲಿ ಆನಂದಭಾಷ್ಪ ಹರಿಯುತ್ತಿದ್ದವು..! ಇಂದು ಎಲ್ಲ ಕಡೆ ಇಂಥ ಅಧಿಕಾರಿಗಳ ಅವಶ್ಯಕತೆ ಇದೆ, ಇಂತಹ ಮನಸ್ಸಿನ ಅಧಿಕಾರಿಗಳು ಇನ್ನಷ್ಟು ಹುಟ್ಟಿಬರಲಿ ಸರಕಾರದ ಕೆಲಸ ಕೇವಲ ಕಛೇರಿ ಕೆಲಸ ಮಾತ್ರ ಅಲ್ಲ ಜನರ ಸೇವೆಯೂ ಕೂಡ ಎಂದು ತೋರಿಸಿಕೊಟ್ಟ ಜಿಲ್ಲಾಧಿಕಾರಿಯವರಿಗೆ ಶುಭವಾಗಲಿ.

Spread the love
  • Related Posts

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು…

    Spread the love

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 22 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 271 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 187 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 293 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 154 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 87 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ