ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ಸ ಮಜ್ದೂರು ಸಂಘ ದ ಜಿಲ್ಲಾ ಸಮಿತಿಯ ಅಧಿಕೃತ ಘೋಷಣಾ ಸಭೆ ಮತ್ತು ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಇವರಿಗೆ ಗೌರವಾರ್ಪಣೆ

ಬೆಳ್ತಂಗಡಿ: ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ಸಂಯೋಜಿತ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ಸ ಮಜ್ದೂರು ಸಂಘ ದ ಜಿಲ್ಲಾ ಸಮಿತಿಯ ಅಧಿಕೃತ ಘೋಷಣಾ ಸಭೆ ಮತ್ತು ಭಾರತೀಯ ಮಜ್ದೂರು ಸಂಘ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀಯುತ ಜಯರಾಜ್ ಸಾಲ್ಯಾನ್ ಇವರಿಗೆ ಗೌರವಾರ್ಪಣಾ ಸಮಾರಂಭ ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ನಡೆಯಿತು.


ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿಯ ಕಾರ್ಯದರ್ಶಿ ಶ್ರೀಯುತ ಜಯರಾಜ್ ಸಾಲ್ಯಾನ್ ಕಾನರ್ಪ ಇವರಿಗೆ ರಬ್ಬರ್ ಟ್ಯಾಪರ್ಸ ಮಜ್ದೂರು ಸಂಘದ ಪ್ರದಾನ ಕಾರ್ಯದರ್ಶಿ ನಾಗರಾಜ್ ಬದಣಾಜೆ ಹೂ ಗುಚ್ಚ ನೀಡಿ, ಅಧ್ಯಕ್ಷರಾದ ದಯಾನಂದ ಇವರುಗಳು ರಬ್ಬರ್ ಟ್ಯಾಪರ್ಸ ಕಾರ್ಮಿಕರ ಪರವಾಗಿ ಶಾಲು ಹೊದಿಸಿ ಗೌರವಸಿದರು.


ಈ ಸಂಧರ್ಭದಲ್ಲಿ ಗೌರವಾನ್ವಿತ ಭಾರತೀಯ ಮಜ್ದೂರು ಸಂಘದ ರಾಜ್ಯ ಕಾರ್ಯದರ್ಶಿ ಯಾದ ಜಯರಾಜ್ ಸಾಲ್ಯಾನ್ ಕಾನರ್ಪ ಇವರು ಸಂಘ ಎಂಬುದು ಒಂದು ಭಕ್ತಿ ಪೂರ್ವಕ ವಾದದ್ದು ಮತ್ತು ಸಮಾಜ ಸೇವೆಯಲ್ಲಿ ಶಿಸ್ತಿನಿಂದ ತೊಡಗಿಸಿಕೊಂಡಾಗ ಅದು ದೇವರ ಕೆಲಸವಾಗುತ್ತದೆ. ಭಾರತೀಯ ಮಜ್ದೂರು ಸಂಘದ ಸ್ಥಾಪಕರಾದ ಥೆಂಘಡಿಜಿ ಅವರ ಮಾರ್ಗ ದರ್ಶನ ವನ್ನು ಪಾಲಿಸುವ ಮತ್ತು ನಾವೆಲ್ಲರೂ ಜಾತಿ,ಮೇಲು ಕೀಳು ಎಂದಿಲ್ಲದೆ ಸಹೋದರತ್ವದೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ ನೀಡಿದರು.


ನಂತರ ನಡೆದ ರಬ್ಬರ್ ಟ್ಯಾಪರ್ಸ ಮಜ್ದೂರು ಸಂಘದ ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ದಯಾನಂದ, ಪ್ರಧಾನ ಕಾರ್ಯದರ್ಶಿ ಯಾಗಿ ನಾಗರಾಜ್ ಬದಣಾಜೆ, ಉಪ ಪ್ರಧಾನ ಕಾರ್ಯದರ್ಶಿ ಯಾಗಿ ಸುರೇಶ್ ಕುತ್ತಿನ,ಸಂಘಟನ ಕಾರ್ಯದರ್ಶಿ ಯಾಗಿ ಭುವನೇಶ್ವರ ಕಾರಿಂಜ,ಕೋಶಾಧಿಕಾರಿ ರಾಜ ಮಾಚಾರು ಹಾಗು ಉಪಾಧ್ಯಕ್ಷರುಗಳಾಗಿ ಸಂದಿಲ್ ಕುಮಾರ್ ಒಟಕಜೆ,ಮನೋಜ್ ಮೂರ್ಜೆ,ಅಚ್ಚುತ ಪ್ರಭು ಕುಂಬ್ರ,ಯೋಗಿಶ್ ಪೂಂಜಾಲಕಟ್ಟೆ,ಹರಿಶಂಖರ್ ಕುಂದಾಪುರ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ನಾಗೇಂದ್ರ, ರಘುಪತಿ, ಅಶೋಕ್ ಮೂರ್ಜೆ ಹಾಗೂ ನಿರ್ದೇಶಕರಾಗಿ ಅರುಣ್ ವರ್ಧನ್,ಅಜಿತ್ ಕಿನ್ಯಾಜೆ,ಶಶಿಕುಮಾರ್ ತೊಡಿಕಾನ ಆಯ್ಕೆ ಮಾಡಲಾಯಿತು.ಭುವನೇಶ್ವರ ಕಾರಿಂಜ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ,ವಂದಿಸಿದರು.

Spread the love
  • Related Posts

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಡಾ.ಹೆಗ್ಗಡೆಯವರಿಂದ ಚಾಲನೆ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದೀಪಬೆಳಗಿಸಿ ಚಾಲನೆ ನೀಡಿದರು. “ಸರ್ವೇಜನಾಃ ಸುಖಿನೋ ಭವಂತು”. ಎಲ್ಲರಿಗೂ ಸುಖ-ಶಾಂತಿ, ನೆಮ್ಮದಿಯೊಂದಿಗೆ ಸನ್ಮಂಗಳವಾಗಲಿ ಸರ್ವರಿಗೂ ಕಲ್ಯಾಣವಾಗಲಿ ಎಂದು ಹಾರೈಸಿದರು. ಬಳಿಕ ಎಲ್ಲರೂ ಸಾಮೂಹಿಕವಾಗಿ…

    Spread the love

    ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಬಡಿಸಲು ಆಮೆಗಳ ಬೇಟೆ, ಆಮೆಗಳ ಸಹಿತ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

    ಬೆಳ್ತಂಗಡಿ : ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಪದಾರ್ಥ ಮಾಡಿ ಬಡಿಸಲು ಅಜ್ಜಿಗೆ ಇಷ್ಟವಾದ ಆಮೆಯನ್ನು ಸಂಬಂಧಿಕರು ನದಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮಾಂಸ ಮಾಡಲು ಪ್ರಯತ್ನಿಸುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ನಾಲ್ಕು ಆಮೆ ಸಮೇತ ನಾಲ್ಕು ಮಂದಿ…

    Spread the love

    You Missed

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಡಾ.ಹೆಗ್ಗಡೆಯವರಿಂದ ಚಾಲನೆ

    • By admin
    • February 15, 2026
    • 21 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಡಾ.ಹೆಗ್ಗಡೆಯವರಿಂದ ಚಾಲನೆ

    ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಬಡಿಸಲು ಆಮೆಗಳ ಬೇಟೆ, ಆಮೆಗಳ ಸಹಿತ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

    • By admin
    • February 15, 2026
    • 75 views
    ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಬಡಿಸಲು ಆಮೆಗಳ ಬೇಟೆ, ಆಮೆಗಳ ಸಹಿತ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

    ಮುಂಡಾಜೆ ಮೈರಣಗುಡ್ಡೆಯಲ್ಲಿ ಕಾಣಿಸಿಕೊಂಡ ಬೆಂಕಿ

    • By admin
    • February 14, 2026
    • 25 views
    ಮುಂಡಾಜೆ ಮೈರಣಗುಡ್ಡೆಯಲ್ಲಿ  ಕಾಣಿಸಿಕೊಂಡ ಬೆಂಕಿ

    ಬೆಳ್ತಂಗಡಿಯ KAF ಕ್ರಿಯೇಟಿವ್ ಶಾಪ್ ನಲ್ಲಿ ಹಿಲಿಯಂ ಗ್ಯಾಸ್ ಬ್ಲಾಸ್ಟ್

    • By admin
    • February 14, 2026
    • 54 views
    ಬೆಳ್ತಂಗಡಿಯ KAF ಕ್ರಿಯೇಟಿವ್ ಶಾಪ್ ನಲ್ಲಿ  ಹಿಲಿಯಂ ಗ್ಯಾಸ್ ಬ್ಲಾಸ್ಟ್

    ಪುತ್ತೂರಿನಲ್ಲಿ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆ

    • By admin
    • February 13, 2026
    • 39 views
    ಪುತ್ತೂರಿನಲ್ಲಿ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆ

    ಅಪಘಾತದ ಪರಿಹಾರದ ಹಣ ನೀಡದ ಕಾರಣ 2 ಕೆಎಸ್ಆರ್ ಟಿಸಿ ಬಸ್ ಸೀಜ್ ಮಾಡಿದ ಕೋರ್ಟ್

    • By admin
    • February 13, 2026
    • 35 views
    ಅಪಘಾತದ ಪರಿಹಾರದ ಹಣ ನೀಡದ ಕಾರಣ 2 ಕೆಎಸ್ಆರ್ ಟಿಸಿ ಬಸ್ ಸೀಜ್ ಮಾಡಿದ ಕೋರ್ಟ್