ಫೇಸಬುಕ್‌ನ ಪಕ್ಷಪಾತ ನೀತಿ – ಹಿಂದುತ್ವವಾದಿ ಭಾಜಪ ಶಾಸಕ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ ನಿಷೇಧ! – HJS ಖಂಡನೆ

ಭಾಗ್ಯನಗರದ ಭಾಜಪ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ಅನ್ನು ನಿಷೇಧಿಸುವ ಮೂಲಕ ಫೇಸಬುಕ್ ಭಾರತದ ‘ವಾಕ್ ಸ್ವಾತಂತ್ರ್ಯ’ವನ್ನು ನಿರ್ಬಂಧಿಸಿದೆ. ಅವರ ಪೇಜ್‌ನಲ್ಲಿ ದ್ವೇಷ ಹಬ್ಬಿಸುತ್ತಿದ್ದರೆ ಭಾರತದಲ್ಲಿ ‘ವಾಂಟೆಡ್’ ಆಗಿರುವ ಮತ್ತು ಮುಸಲ್ಮಾನ ಯುವಕರನ್ನು ಉಗ್ರರನ್ನಾಗಿಸಲು ಪ್ರೋತ್ಸಾಹಿಸುವ ಜಿಹಾದಿ ಡಾ. ಝಾಕೀರ್ ನಾಯಿಕ್ ಇವರ ಹಾಗೂ 100 ಕೋಟಿ ಹಿಂದೂಗಳನ್ನು ಮುಗಿಸುವ ಬಹಿರಂಗ ಬೆದರಿಕೆಯೊಡ್ಡುವ ‘ಎಮ್‌ಐ.ಎಮ್’ನ ಶಾಸಕ ಅಕ್ಬರುದ್ದೀನ್ ಓವೈಸಿ ಇವರ ‘ಫೇಸಬುಕ್ ಪೇಜ್’ ಮೇಲೆ ಏಕೆ ನಿಷೇಧ ಹೇರಿಲ್ಲ ? ಅನೇಕ ಜಿಹಾದಿ ಉಗ್ರವಾದಿ ಸಂಘಟನೆಗಳ ‘ಫೇಸಬುಕ್ ಪೇಜ್’ ಇಂದಿಗೂ ಜಿಹಾದ್‌ನ ಪ್ರಚಾರ ಮಾಡುತ್ತಿವೆ. ಆದುದರಿಂದ ‘ಫೇಸಬುಕ್’ ಭಾರತದಲ್ಲಿ ಮುಸಲ್ಮಾನರಿಗೊಂದು ಹಿಂದೂಗಳಿಗೆ ಮತ್ತೊಂದು ನಿಯಮ ಅಳವಡಿಸಿ ಧಾರ್ಮಿಕ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಹಿಂದೂ ಜನಜಾಗೃತಿಸ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಈ ಪ್ರಕರಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಫೇಸಬುಕ್’ ತಕ್ಷಣವೇ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ ಮುಂಚಿನಂತೆ ಆರಂಭಿಸಬೇಕು, ಇಲ್ಲದಿದ್ದರೆ ಹಿಂದೂ ಸಮಾಜಕ್ಕೇ ಫೇಸಬುಕ್ ನಿಷೇಧಿಸುವಂತೆ ಕರೆ ನೀಡಬೇಕಾಗುವುದು, ಎಂದು ಶ್ರೀ. ಶಿಂದೆಯವರು ಎಚ್ಚರಿಕೆ ನೀಡಿದರು.

ದೆಹಲಿಯಲ್ಲಿ ಮತ್ತು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಲಭೆಗಳ ಸಮಯದಲ್ಲಿಯೂ ಮತಾಂಧರು ತಮ್ಮ ‘ಫೇಸ್‌ಬುಕ್ ಪೇಜ್’ನಲ್ಲಿ ಒಟ್ಟಿಗೆ ಸೇರಲು ಕರೆ ನೀಡಿದ್ದರು ಎಂಬುದು ತಿಳಿದುಬಂದಿದೆ. ಭಾರತದ ನಗರಗಳಲ್ಲಿ ಗಲಭೆಗಳಿಗೆ ಭುಗಿಲೆಬ್ಬಿಸಿದ ‘ಫೇಸ್‌ಬುಕ್ ಪೇಜ್’ನಲ್ಲಿ ಫೇಸ್‌ಬುಕ್ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಅದೇ ರೀತಿ ‘ಫೇಸಬುಕ್’ನಲ್ಲಿ ಇದುವರೆಗೆ ಅನೇಕ ಸಲ ಹಿಂದೂ ದೇವತೆಗಳು, ರಾಷ್ಟ್ರಪುರುಷರ ವಿಷಯದಲ್ಲಿ ಅಶ್ಲೀಲ ಮತ್ತು ಆಕ್ಷೇಪಾರ್ಹ ಪೋಸ್ಟ್ ಪ್ರಸಾರಿತವಾಗುತ್ತಿವೆ. ಇದರ ಬಗ್ಗೆ ಹಿಂದೂತ್ವವಾದಿ ಸಂಘಟನೆಗಳು ಅನೇಕ ಬಾರಿ ‘ಫೇಸ್‌ಬುಕ್’ ಇಂತಹ ಪೋಸ್ಟ್ ಅಥವಾ ಪೇಜ್ ನಿರ್ಬಂಧಿಸುವಂತೆ ವಿನಂತಿಸಿವೆ; ಆದರೆ ಅದರ ಬಗ್ಗೆ ‘ಫೇಸಬುಕ್’ ಎಂದೂ ಕ್ರಮಕೈಗೊಂಡಿಲ್ಲ, ಇದು ‘ಫೇಸಬುಕ್’ನ ಪಕ್ಷಪಾತ!

ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ ‘ಪುಟ’ವನ್ನೂ ಇದೇ ರೀತಿ 2012 ರಲ್ಲಿ ಯಾವುದೇ ರೀತಿಯ ಕಾರಣವನ್ನು ನೀಡದೇ ಫೇಸ್‌ಬುಕ್’ ಬಂದ್ ಮಾಡಿತ್ತು. ಇದರಿಂದ ‘ಫೇಸ್‌ಬುಕ್’ನ ಹಿಂದೂದ್ವೇಷ ಸ್ಪಷ್ಟವಾಗಿ ಕಾಣುತ್ತದೆ. ಶಾಸಕ ಟಿ. ರಾಜಾಸಿಂಹ ಇವರು ಜನಪ್ರತಿನಿಧಿಯಾಗಿದ್ದಾರೆ, ಅವರ ‘ಪೇಜ್’ ಬಂದ್ ಮಾಡಿದ್ದರಿಂದ ಜನಸಾಮಾನ್ಯರಿಗೆ ಅವರೊಂದಿಗೆ ನೇರ ಸಂಪರ್ಕ ಮಾಡಿ ಸಮಸ್ಯೆಗಳನ್ನು ಬಿಡಿಸುವಲ್ಲಿ ಅಡಚಣೆಯಾಗಲಿದೆ. ಆದ್ದರಿಂದ ಭಾರತ ಸರಕಾರವು ‘ಫೇಸ್‌ಬುಕ್’ನ ಈ ಹಿಂದೂವಿರೋಧಿ ಕೃತ್ಯಕ್ಕೆ ನಿರ್ಬಂಧ ಹೇರಬೇಕು, ಎಂದು ಕೇಂದ್ರ ಸರಕಾರದ ಬಳಿ ನಾವು ಆಗ್ರಹಿಸುತ್ತೇವೆ. ಶಾಸಕ ಟಿ. ರಾಜಾ ಸಿಂಹ ಇವರ ಫೇಸ್‌ಬುಕ್ ಪೇಜ್ ಬಂದ್ ಮಾಡುವುದೆಂದರೆ ಒಂದು ರೀತಿಯಲ್ಲಿ ಹಿಂದೂಜನರ ಧ್ವನಿಯನ್ನು ಅದುಮುವ ಕೆಲಸವನ್ನು ‘ಫೇಸ್‌ಬುಕ್’ ಮಾಡುತ್ತಿದೆ. ಭಾರತದಲ್ಲಿ ಕೋಟಿಗಟ್ಟಲೆ ರೂಪಾಯಿಯನ್ನು ಸಂಪಾಧಿಸುವ ಫೇಸ್‌ಬುಕ್ ಒಂದು ವೇಳೆ ಬಹುಸಂಖ್ಯಾತ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಲ್ಲಿ, ಹಿಂದೂಗಳೂ ‘ಫೇಸ್‌ಬುಕ್’ನ್ನು ಬಹಿಷ್ಕರಿಸುವರು, ಎಂಬುದು ‘ಫೇಸ್‌ಬುಕ್’ನವರು ಗಮನದಲ್ಲಿಡಬೇಕು.

Spread the love
  • Related Posts

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಜಿಲ್ಲೆಯಾದ್ಯಂತ ಬಾರಿ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ನದಿತೀರಗಳಿಗೆ ತಗ್ಗು ಪ್ರದೇಶಗಳಿಗೆ ತೆರಳದಂತೆ ಸೂಚನೆ ನೀಡಿದೆ ಮುನ್ನೆಚ್ಚರಿಕೆ ಕ್ರಮವಾಗಿ ದ.ಕ ಜಿಲ್ಲೆಯ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿಸಲಾಗಿದೆ Spread the love

    Spread the love

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ಬಳಿಕ ಚರಂಡಿ ನಿರ್ಮಿಸಿದ್ದು, ಕೆಲವು ಕಡೆ ಮುಚ್ಚಲಾಗಿಲ್ಲ, ಇಂದು ಸಂಜೆ ತೆರೆದ ಚರಂಡಿಯ ಬಗ್ಗೆ ಅರಿವಿಲ್ಲದೆ ಅಂಗಡಿಯಿಂದ ಸಾಮಾಗ್ರಿ ಖರೀದಿಸಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯಗೊಂಡಿರುವ…

    Spread the love

    You Missed

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • June 16, 2025
    • 138 views
    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ  ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    • By admin
    • June 15, 2025
    • 154 views
    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    • By admin
    • June 12, 2025
    • 97 views
    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    • By admin
    • June 12, 2025
    • 56 views
    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    ಬೆಳ್ತಂಗಡಿ, ಪುಂಜಾಲಕಟ್ಟೆ PSI ನಂದಕುಮಾರ್ ರವರಿಗೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ

    • By admin
    • June 11, 2025
    • 67 views
    ಬೆಳ್ತಂಗಡಿ, ಪುಂಜಾಲಕಟ್ಟೆ PSI ನಂದಕುಮಾರ್ ರವರಿಗೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ

    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು

    • By admin
    • June 11, 2025
    • 75 views
    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು