ಹಿಂದೂ ಧರ್ಮದ ಮೇಲೆ ಕ್ರಮಬದ್ಧವಾಗಿ ಆಘಾತ ಮಾಡುತ್ತಿರುವುದು ‘ಬಾಲಿವುಡ್’ನ ಷಡ್ಯಂತ್ರ ! – ನಟಿ ಪಾಯಲ ರೊಹತಗಿ

ಬೆಂಗಳೂರು: ‘ಪಿಕೆ’ಯಂತಹ ಚಲನಚಿತ್ರ, ‘ಪಾತಾಲಲೋಕ’ನಂತಹ ವೆಬ್‌ಸೀರಿಸ್ ಮಾಧ್ಯಮಗಳಿಂದ ಹಿಂದೂ ಧರ್ಮದ ಮೇಲೆ ಕ್ರಮಬದ್ಧವಾಗಿ ಆಘಾತ ಮಾಡುವ ‘ಬಾಲಿವುಡ್’ನ ಷಡ್ಯಂತ್ರವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮ, ದೇವತೆಗಳು, ಪರಂಪರೆ ಇತ್ಯಾದಿಗಳನ್ನು ಅಣಕಿಸಲಾಗುತ್ತಿದೆ. ಹಿಂದೂ ಸಮಾಜ ಇದರ ಬಗ್ಗೆ ಧ್ವನಿ ಎತ್ತದ ಕಾರಣ ‘ಬಾಲಿವುಡ್’ನಲ್ಲಿ ಹಿಂದೂದ್ರೋಹಕ್ಕೆ ನೀರುಗೊಬ್ಬರ ಹಾಕಲಾಗುತ್ತಿದೆ. ಬ್ರಾಹ್ಮಣ ವ್ಯಕ್ತಿಗೆ ಕಪಟಿ ಅಥವಾ ಅತ್ಯಾಚಾರಿ ಎಂದು ತೋರಿಸುವುದು, ಭಾರತದಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯವಾಗುತ್ತಿರುವಂತೆ ತೋರಿಸುವುದು, ಇವೆಲ್ಲ ಸಮಾಜದ ‘ಬ್ರೇನ್‌ವಾಶ್’ ಆಗಿದೆ. ‘ಜೈ ಶ್ರೀರಾಮ’ನ ಜಯಘೋಷವನ್ನು ಅವಮಾನಿಸುವ ಬಾಲಿವುಡ್‌ನವರು ಭಯೋತ್ಪಾದಕರ ವಿಶಿಷ್ಟ ಘೋಷಣೆಯ ಬಗ್ಗೆ ಏಕೆ ಮಾತನಾಡುವುದಿಲ್ಲ ? ‘ತ್ರಿವಳಿ ತಲಾಕ’ ಬಗ್ಗೆ ಏಕೆ ಮಾತನಾಡುವುದಿಲ್ಲ ?, ಎಂದು ಹೇಳುತ್ತಾ ಇವೆಲ್ಲ ಹಿಂದೂ ಧರ್ಮದ ಮೇಲೆ ಕ್ರಮಬದ್ಧವಾಗಿ ಆಘಾತ ಮಾಡುತ್ತಿರುವ ‘ಬಾಲಿವುಡ್’ನ ಪಿತೂರಿ ಆಗಿದೆ ಎಂದು ಹಿಂದಿ ಚಲನಚಿತ್ರದ ನಟಿ ಪಾಯಲ ರೊಹತಗಿ ಯವರು ಎಲ್ಲ ಬಾಲಿವುಡ್‌ನವರಿಗೆ ಜ್ವಲಂತ ಪ್ರಶ್ನೆಯನ್ನು ಕೇಳಿದ್ದಾರೆ.

ಅವರು ಜುಲೈ ೧೯ ರಂದು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ಜಂಟಿಯಾಗಿ ಆಯೋಜಿಸಿದ್ದ ‘ಚರ್ಚಾ ಹಿಂದೂ ರಾಷ್ಷ್ರ ಕೀ’ ಈ ಆನ್‌ಲೈನ್ ಸಂವಾದ ಸರಣಿಯಲ್ಲಿ ‘ಹಿಂದೂವಿರೋಧಿ ‘ಬಾಲಿವುಡ್’ ಕಾ ಪರ್ದಾಫಾಶ್’ ಈ ವಿಷಯದಲ್ಲಿ ‘ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು.

ಚರ್ಚೆಯ ಆರಂಭದಲ್ಲಿ ಚಲನಚಿತ್ರ, ಧಾರಾವಾಹಿ, ‘ವೆಬ್‌ಸೀರಿಸ್’ನ ಮಾಧ್ಯಮಗಳಿಂದ ಕ್ರಮಬದ್ಧವಾಗಿ ಹಿಂದೂ ಧರ್ಮ ಹಾಗೂ ಸಮಾಜ ಇವುಗಳನ್ನು ಹೇಗೆ ಅವಮಾನಿಸಲಾಗುತ್ತಿದೆ, ಎಂಬುದನ್ನು ಹೇಳುವ ವಿಡಿಯೋ ತೋರಿಸಲಾಯಿತು. ಈ ಆನ್‌ಲೈನ್ ಸಂವಾದವನ್ನು ಯೂ-ಟ್ಯೂಬ್ ಹಾಗೂ ಫೇಸ್‌ಬುಕ್‌ನ ಮಾಧ್ಯಮಗಳಿಂದ ೩,೮೯,೭೬೦ ಜನರ ತನಕ ತಲುಪಿದರೆ, ೧,೦೮,೪೧೧ ಜನರು ಪ್ರತ್ಯಕ್ಷವಾಗಿ ನೋಡಿದರು. ಈ ವಿಷಯದಲ್ಲಿ ಅನೇಕರು ಟ್ವಿಟ್ಟರ್#Censor_Web_Series ಈ ಹ್ಯಾಶ್‌ಟ್ಯಾಗ್‌ಅನ್ನು ಉಪಯೋಗಿಸಿ ಬೆಂಬಲಿಸಿದರು. ಕೆಲವೇ ಸಮಯದಲ್ಲಿ ಈ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿ ಮೊದಲನೇಯ ಸ್ಥಾನದಲ್ಲಿತ್ತು. ಈ ವಿಷಯ ಬಗ್ಗೆ ೧ ಲಕ್ಷಕ್ಕಿಂತಲೂ ಹೆಚ್ಚು ಟ್ವೀಟ್ಸ್ ಮಾಡಲಾಗಿದೆ.

ಈ ಸಂವಾದದಲ್ಲಿ ಸಹಭಾಗಿಯಾಗಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಸುಭಾಷ ಝಾರವರು ಮಾತನಾಡುತ್ತಾ, ‘ಬಾಲಿವುಡ್’ ಇದು ಜಿಹಾದಿಗಳ ತಾಣವಾಗಿದ್ದು ಇಲ್ಲಿ ‘ಲವ್ ಜಿಹಾದ್’ಗೆ ಪೋಷಿಸಲಾಗುತ್ತಿದೆ. ಭಾರತವನ್ನು ಇಸ್ಲಾಮೀಕರಣ ಮಾಡುವ ಷಡ್ಯಂತ್ರದಲ್ಲಿ ಬಾಲಿವುಡ್‌ನ ದೊಡ್ಡ ಕೈವಾಡವಿದೆ. ಹಾಜಿ ಮಸ್ತಾನ, ದಾವುದ್ ಇಬ್ರಾಹಿಮ್‌ನಂತಹ ‘ಭೂಗತ’ದ ಗೂಂಡಾಗಳು ‘ಬಾಲಿವುಡ್’ಗೆ ನಿಧಿಯನ್ನು ನೀಡಿ ಆಯೋಜನಾಬದ್ಧವಾಗಿ ‘ಖಾನ್’ಗಳನ್ನು ಸ್ಥಾಪಿಸಿದ್ದಾರೆ. ಬಾಲಿವುಡ್‌ನ ಈ ಜಿಹಾದಿ ಅಂಗವನ್ನು ‘ಎನ್‌ಐಎ’ನಿಂದ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.

ಚಲನಚಿತ್ರ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಹಿಂದೂವಿನ ಹನನವನ್ನು ತಡೆಗಟ್ಟುವ ಹಿಂದುತ್ವನಿಷ್ಠ ಶ್ರೀ. ರಮೇಶ ಸೋಲಂಕಿಯವರು ಮಾತನಾಡುತ್ತಾ, ‘ಬಾಲಿವುಡ್’ ಇದು ‘ಡಿ ಗ್ಯಾಂಗ್’ನ ಹಣವನ್ನು ಬಿಳಿ ಹಣವನ್ನಾಗಿ ಮಾಡುವ ಮಾಧ್ಯಮವಾಗಿದೆ. ವಿನೋದ ಅಥವಾ ಮನೋರಂಜನೆಗಾಗಿ ಹಾಸ್ಯವನ್ನು ಮಾಡದೇ ಹಿಂದೂ ಧರ್ಮ ಹಾಗೂ ಪರಂಪರೆಗಳ ಬಗ್ಗೆ ಅಪಹಾಸ್ಯ ಮಾಡಲಾಗುತ್ತಿದೆ. ಇದರ ವಿರುದ್ಧ ಹಿಂದೂಗಳು ಸಂಘಟಿತರಾಗಿ ಹೋರಾಡಬೇಕಿದೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಮಾತನಾಡುತ್ತಾ, ಮುಂಬಯಿಯಲ್ಲಿ ೨೦೧೨ ರಲ್ಲಿ ಗಲಭೆಯನ್ನು ಮಾಡಿದ್ದ ರಝಾ ಅಕಾಡಮಿಯವರ ಬೇಡಿಕೆಯನುಸಾರ ‘ಮಹಮ್ಮದ್ : ದ ಮೆಸೆಂಜರ ಆಫ್ ಗಾಡ್’ ಈ ಚಲನಚಿತ್ರದ ಮೇಲೆ ನಿರ್ಬಂಧ ಹೇರಲು ಮಹಾರಾಷ್ಟ್ರ ಸರಕಾರ ಕೂಡಲೇ ಶಿಫಾರಸ್ಸನ್ನು ಮಾಡಿತು; ಆದರೆ ಹಿಂದೂ ಧರ್ಮದ ಮೇಲೆ ಆಘಾತ ಮಾಡುವ ಚಲನಚಿತ್ರಗಳ ಬಗ್ಗೆ ಹಿಂದೂಗಳು ಎಷ್ಟೇ ವಿರೋಧಿಸಿದರು ಸರಕಾರದಿಂದ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಕಾನೂನಿನ ಬಂಧನ ಇಲ್ಲದ್ದರಿಂದ ‘ಓಟಿಟಿ’ ಪ್ಲಾಟ್‌ಫಾರ್ಮ್ಸ್ ನಿಂದ ಅತ್ಯಂತ ಅಕ್ಷೇಪಾರ್ಹ, ಹಿಂದೂವಿರೋಧಿ, ದೇಶವಿರೋಧಿ ಹಾಗೂ ಸೈನ್ಯವಿರೋಧಿ ‘ವೆಬ್‌ಸೀರಿಸ್’ಗಳ ಪ್ರಸಾರವಗುತ್ತಿದೆ. ‘ಕೋರ್ಟ್ ಮಾರ್ಶಲ್’, ‘ಕೋಡ್ ಎಮ್’ ನಂತಹ ವೆಬ್‌ಸೀರಿಸ್‌ಗಳಲ್ಲಿ ಭಾರತೀಯ ಸೈನಿಕರು ಸಲಿಂಗಿಗಳೆಂದು ತೋರಿಸಲಾಗಿದೆ. ಆದರೆ ಸರಕಾರ ಮಾತ್ರ ಇಂತಹ ‘ವೆಬ್‌ಸೀರಿಸ್’ ಹಾಗೂ ‘ಓಟಿಟಿ ಪ್ಲಾಟ್‌ಫಾರ್ಮ್ಸ್’ಗಳನ್ನು ಕೇಂದ್ರಿಯ ಚಲನಚಿತ್ರ ಪರೀಕ್ಷಣಾ ಮಂಡಳಿಯ ನಿಯಂತ್ರಣಕ್ಕೆ ತರಬೇಕು ಎಂದು ಹೇಳಿದರು.

Spread the love
  • Related Posts

    ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ

    ಬೆಳ್ತಂಗಡಿ: ಜಿಲ್ಲಾ ನ್ಯಾಯಾಂಗ, ದ.ಕ ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಜನತೆ ಮತ್ತು ವಕೀಲರ ಸಂಘದ ಬಹುದಿನಗಳ ಬೇಡಿಕೆಯಾಗಿದ್ದ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಕರ್ನಾಟಕ ಸರಕಾರಕ್ಕೆ ಸಲ್ಲಿಸಲಾದ ಸುಮಾರು 23 ಕೋಟಿ…

    Spread the love

    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    ಬೆಳ್ತಂಗಡಿ, ಜೂನ್ 13: ಸ್ಥಳೀಯ ಪತ್ರಿಕೋದ್ಯಮವನ್ನು ಮತ್ತಷ್ಟು ಬಲಪಡಿಸುವ ಹಾಗೂ ಪತ್ರಕರ್ತರ ಹಿತರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಬೆಳ್ತಂಗಡಿ ತಾಲೂಕು ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ಸಂಘದ ಮುಂದಿನ ಅವಧಿಗೆ…

    Spread the love

    You Missed

    ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ

    • By admin
    • June 14, 2026
    • 33 views
    ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ

    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    • By admin
    • June 13, 2026
    • 78 views
    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ, ಶ್ರದ್ಧೆ ಮತ್ತು ಪರಿಶ್ರಮದಿಂದ ಉಜ್ವಲ ಭವಿಷ್ಯ ಸಾಧ್ಯ: ಸ್ಮಿತೇಶ್ ಬಾರ್ಯ

    • By admin
    • June 13, 2026
    • 25 views
    ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ, ಶ್ರದ್ಧೆ ಮತ್ತು ಪರಿಶ್ರಮದಿಂದ ಉಜ್ವಲ ಭವಿಷ್ಯ ಸಾಧ್ಯ: ಸ್ಮಿತೇಶ್ ಬಾರ್ಯ

    ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಒಲಿಂಪಿಯಾಡ್ ಕಾರ್ಯಕ್ರಮ,ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

    • By admin
    • June 13, 2026
    • 62 views
    ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಒಲಿಂಪಿಯಾಡ್ ಕಾರ್ಯಕ್ರಮ,ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

    ಬೆಳ್ತಂಗಡಿ ನರಸಿಂಹಗಡ (ಗಡಾಯಿಕಲ್ಲು) ಚಾರಣಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಿದ ಅರಣ್ಯ ಇಲಾಖೆ!!!

    • By admin
    • June 13, 2026
    • 21 views
    ಬೆಳ್ತಂಗಡಿ ನರಸಿಂಹಗಡ (ಗಡಾಯಿಕಲ್ಲು) ಚಾರಣಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಿದ ಅರಣ್ಯ ಇಲಾಖೆ!!!

    ಲ್ಯಾಂಡಿಂಗ್ ವೇಳೆ ದುರಂತ: ಬೆಂಕಿಗಾಹುತಿಯಾದ ವಾಯುಪಡೆಯ AN-32 ವಿಮಾನ

    • By admin
    • June 13, 2026
    • 192 views
    ಲ್ಯಾಂಡಿಂಗ್ ವೇಳೆ ದುರಂತ: ಬೆಂಕಿಗಾಹುತಿಯಾದ ವಾಯುಪಡೆಯ AN-32 ವಿಮಾನ