ಪುತ್ತೂರಿನಲ್ಲಿ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆ

ಪುತ್ತೂರು: ಬೈಪಾಸ್ ರಸ್ತೆ ಇಲ್ಲಿನ ರವಿಂದ ಕಾಂಪ್ಲೆಕ್ಸ್ ನಲ್ಲಿ ಪ್ರಥಮ ಬಾರಿಗೆ ಸೈಕಾಲಜಿಸ್ಟ್ ಹಾಗೂ ಶಿಕ್ಷಣ ತಜ್ಞರಿಂದಲೇ ನಡೆಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆಗೊಂಡಿತು.

ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಜಿತಕಾಮನಂದಜಿ ಲಕ್ಷ್ಯ ಡೇ ಕೇರ್ ಸೆಂಟರ್ ಉದ್ಘಾಟಿಸಿ, ಲಕ್ಷ್ಯ ಡೇ ಕೇರ್ ಒಂದು ವಿನೂತನ ಹೆಜ್ಜೆಯನ್ನು ಇಡುತ್ತಿದೆ. ಮನಃ ಶಾಸ್ತ್ರದ ಹಾಗೂ ಆತ್ಯಾತ್ಮಿಕ ಹಿನ್ನೆಯಲ್ಲಿ ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಜೋಡಿಸಿಕೊಂಡಿರುವುದು ಶ್ಲಾಘನೀಯ ಸಂಗತಿ. ಒಂದು ಎಳೆ ಮಗುವಿಗೆ ಕೇವಲ ಉತ್ತಮ ಆಹಾರಕ್ರಮ ಮಾತ್ರವೇ ಪರಿಣಾಮವನ್ನು ಬೀರುವುದಿಲ್ಲ. ಮಗುವಿನ ಮಿದುಳಿಗೆ ಸರಿಯಾದ ಪ್ರಮಾಣದಲ್ಲಿ ಜ್ಞಾನಾರ್ಜನೆಯಾಗಬೇಕು. ಆಗ ಮಾತ್ರವೇ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಇದರೊಂದಿಗೆ ಪಾಲಕರು ಕೂಡಾ ಇತ್ತೀಚಿನ ದಿನಗಳಲ್ಲಿ ಮಾರ್ಗದರ್ಶನವನ್ನು ಪಡೆಯಬೇಕಿರುವ ಅಗತ್ಯತೆ ಕಾಣುತ್ತಿದೆ. ಗರ್ಭಾವಸ್ಥೆಯಲ್ಲೇ ಮಗುವಿಗೆ ಸಂಸ್ಕಾರವನ್ನು ಕೊಡಲು ಅವಕಾಶವಿದ್ದು ಅದನ್ನು ಪುತ್ತೂರಿನಲ್ಲೇ ಪಡೆಯಲು ಸಾಧ್ಯವಾಗುವಂತೆ ಲಕ್ಷ್ಯ ತಂಡವು ಮಾಡುತ್ತಿದೆ. ಮಗುವಿನ ಹುಟ್ಟು ಸಂಸ್ಕಾರ ಅದರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.

ತದನಂತರ ಕಲ್ಲಡ್ಕ ಡಾ.ಪ್ರಭಾಕರ ಭಟ್ ಇವರು ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಉದ್ಘಾಟಿಸಿ, ಮನಸ್ಸು ಒಂದಿದ್ದರೆ ಏನನ್ನು ಬೇಕಿದ್ದರೂ ಸಾಧಿಸಬಹುದು. ಮನಸ್ಸೇ ಎಲ್ಲದಕ್ಕೂ ಕಾರಣವಾಗಿರುವಾಗ ನೆಮ್ಮದಿಯ ಮನಸ್ಸಿಲ್ಲದಿದ್ದರೆ ಜೀವನದಲ್ಲಿ ಯಾವುದೂ ಇಲ್ಲವಾದಂತೆ. ಲಕ್ಷ್ಯ ತಂಡವು ಈ ಮೊದಲು ಅನೇಕ ಸಂಶೋಧನೆಯನ್ನು ಮಾಡುತ್ತಾ ಒಂದು ಬಾರಿ ನಮ್ಮ ಬಳಿಗೂ ಬಂದಿದ್ದರು. ಶ್ರೀ ದುರ್ಗಾಪರಮೇಶ್ವರ ಭಟ್ಟರಲ್ಲಿ ಶಿಕ್ಷಣದ ಬಗ್ಗೆ ವಿಶೇಷವಾದ ಚಾಕಚಕ್ಯತೆ ಇದೆ. ಶಿಕ್ಷಣ ಕ್ಷೇತ್ರದ ಹಲವಾರು ಸಂಸ್ಯೆಗಳಿಗೆ ಇದೊಂದು ಉತ್ತರವಾಗಬಲ್ಲದು. ತಮ್ಮ ತಾರುಣ್ಯಾವಸ್ಥೆಯಲ್ಲೇ ಬಹುದೊಡ್ಡ ಆಲೋಚನೆಗಳನ್ನು ಹೊಂದಿರುವ ಸಂಸ್ಥೆಯೊಂದನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಎಂದರು. ಸಂಸ್ಥೆಯ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಬೆಳಗ್ಗೆ. ಸರಸ್ವತಿ ಪೂಜಾ ಕಾರ್ಯವು ವೇದ ಮೂರ್ತಿ ಶ್ರೀ ಕೃಷ್ಣ ಕುಮಾರ ಉಪಾಧ್ಯಾಯ ಇವರಿಂದ ನಡೆಯಿತು. ಲಕ್ಷ್ಯ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ದುರ್ಗಾಪರಮೇಶ್ವರ ಭಟ್ ಇವರು ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆ ನಡೆಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸನಾತನ ಸಂಸ್ಕೃತಿ ಬಲವರ್ಧನೆ ಹಿನ್ನಲೆಯಲ್ಲಿ “ ಸಮಾಜ ನಿಧಿ” ಕಾಣಿಕೆಯನ್ನು ಶ್ರೀ ಸುಬ್ರಹ್ಮಣ್ಯ ಭಟ್ ಮಜ್ಜಾರಡ್ಕ ಇವರು ಡಾ. ಪ್ರಭಾಕರ ಭಟ್ ಇವರಿಗೆ ಹಸ್ತಾಂತರ ಮಾಡಿದರು. ಡೇ ಕೇರ್ ಸೆಂಟರ್ ಮುಖ್ಯ ನಿರ್ವಾಹಕಿ ಅರ್ಪಿತಾ ಎಂ, ನೇತ್ರಪ್ರಭಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು

Spread the love
  • Related Posts

    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆಸರ್‌ದ ಕಂಡೊಡೊಂಜಿ ದಿನ’ ಮುಂದಿನ ಪೀಳಿಗೆಗೆ ತುಳುನಾಡಿನ ಮೂಲ ಪರಂಪರೆ ಉಳಿಸುವ & ಪರಿಚಯಿಸುವ ಪ್ರಯತ್ನ: ಅನಿಲ್ ಕುಮಾರ್ ಎಸ್.ಎಸ್

    ಬೆಳ್ತಂಗಡಿ: ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ, ಕೃಷಿ ಪರಂಪರೆ ಹಾಗೂ ಗ್ರಾಮೀಣ ಬದುಕಿನ ವೈಶಿಷ್ಟ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್…

    Spread the love

    ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!

    ಬೆಳ್ತಂಗಡಿ: ಆಧುನಿಕತೆಯ ಆಡಂಬರವಿಲ್ಲ… ಮೊಬೈಲ್ ನೆಟ್‌ವರ್ಕ್ ಇಲ್ಲ… ಸುಗಮ ಸಂಚಾರಕ್ಕೆ ಉತ್ತಮ ರಸ್ತೆಗಳಿಲ್ಲ. ಆದರೆ ಎದೆಯಾಳದಲ್ಲಿ ಅಖಂಡ ದೇಶಪ್ರೇಮವಿದೆ! ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದುರ್ಗಮ ಮಲೆನಾಡಿನ ಕಾನನದ ನಡುವೆ ಇರುವ ಪುಟ್ಟ ಹಳ್ಳಿ ಬಾಂಜಾರುಮಲೆ. ಮತದಾನದಲ್ಲಿ…

    Spread the love

    You Missed

    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆಸರ್‌ದ ಕಂಡೊಡೊಂಜಿ ದಿನ’ ಮುಂದಿನ ಪೀಳಿಗೆಗೆ ತುಳುನಾಡಿನ ಮೂಲ ಪರಂಪರೆ ಉಳಿಸುವ & ಪರಿಚಯಿಸುವ ಪ್ರಯತ್ನ: ಅನಿಲ್ ಕುಮಾರ್ ಎಸ್.ಎಸ್

    • By admin
    • August 23, 2026
    • 4 views
    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆಸರ್‌ದ ಕಂಡೊಡೊಂಜಿ ದಿನ’ ಮುಂದಿನ ಪೀಳಿಗೆಗೆ ತುಳುನಾಡಿನ ಮೂಲ ಪರಂಪರೆ ಉಳಿಸುವ & ಪರಿಚಯಿಸುವ ಪ್ರಯತ್ನ: ಅನಿಲ್ ಕುಮಾರ್ ಎಸ್.ಎಸ್

    ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!

    • By admin
    • August 20, 2026
    • 7 views
    ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!

    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    • By admin
    • August 20, 2026
    • 13 views
    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ

    • By admin
    • August 16, 2026
    • 10 views
    ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ

    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    • By admin
    • August 15, 2026
    • 13 views
    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ

    • By admin
    • August 14, 2026
    • 27 views
    ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ