ನವದೆಹಲಿ: ಕೊರೋನಾದ ಸಾಂಕ್ರಾಮಿಕ ರೋಗದ ಸಂಕಷ್ಟ ಸಮಯ ಆರಂಭವಾದ ನಂತರ ಕಳೆದ ಏಳು ತಿಂಗಳಲ್ಲಿ ಏಳನೇ ಬಾರಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಕೋವಿಡ್ 19 ಇನ್ನೂ ಕೊನೆಗೊಂಡಿಲ್ಲ. ಕಳೆದ 7ರಿಂದ 8 ತಿಂಗಳ ಅವಧಿಯಲ್ಲಿ ಪ್ರತಿಯೊಬ್ಬ ಭಾರತೀಯನ ಪ್ರಯತ್ನದ ಫಲವಾಗಿ ಭಾರತದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಅದನ್ನು ಹಾಳುಗೆಡಹುವ ಕೆಲಸ ನಮ್ಮಿಂದ ಆಗದಂತೆ ಎಚ್ಚರಿಕೆಯಿಂದ ಇರಬೇಕು ಎಂದ ಅವರು, ಇದೇ ವೇಳೆ ನವರಾತ್ರಿ, ಈದ್ ದೀಪಾವಳಿ, ಚಥ್ ಪೂಜಾ ಶುಭಾಶಯ ತಿಳಿಸಿದರು.

ಜೀವನದ ಉದ್ದೇಶಕ್ಕಾಗಿ ನಾವು ಹೊರಬರುತ್ತಿದ್ದೇವೆ. ಲಾಕ್ಡೌನ್ ಮುಗಿಯಿತು ಎಂದ ಮಾತ್ರಕ್ಕೆ ವೈರಸ್ ಕೊನೆಗೊಂಡಿಲ್ಲ ಎಂಬುದನ್ನು ಮರೆಯಬಾರದು.
ಹಬ್ಬದ ಸಮಯ ಎಂಬುದು ಜೀವನದ ಖುಷಿ. ಈ ವೇಳೆ ಬೇಜಾವಬ್ದಾರಿ ವಹಿಸಿದರೆ, ಭಾರೀ ದಂಡ ತೆರೆಬೇಕಾಗುತ್ತದೆ. ಈ ಸಮಯದಲ್ಲಿ ಎಚ್ಚರದಿಂದ ಇದ್ದರೆ, ಉತ್ತಮ ದಿನಗಳು ನಮ್ಮ ಮುಂದಿರಲಿದೆ.
ಅಮೆರಿಕ, ಯುರೋಪ್ಗಳಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದಂತೆ ಹೆಚ್ಚಾಗಿದ್ದನ್ನು ಜನರು ಮರೆಯಬಾರದು.
Sharing a message with my fellow Indians. https://t.co/tNsiPuEUP3
— Narendra Modi (@narendramodi) October 20, 2020
ಹಬ್ಬದ ಸಮಯಲ್ಲಿ ಜನರು ಜಾಗರುಕತೆಯಿಂದ ಮೂರು ಮಂತ್ರಗಳಾದ ಸ್ವಚ್ಛತೆ, ಮಾಸ್ಕ್ಧಾರಣೆ, ಸಾಮಾಜಿಕ ಅಂತರಗಳನ್ನು ಅನುಸರಿಸಬೇಕು.
ನಿಮ್ಮನ್ನು ನೀವು ಕಾಪಾಡಿಕೊಳ್ಳುವ ಮೂಲಕ ಇದೇ ದೇಶಕ್ಕೆ ನೀಡುವ ಸೇವೆ. ಈ ವಿಷಯದಲ್ಲಿ ನೀವು ನಮಗೆ ಜೊತೆಯಾಗಬೇಕು.
ಇಂದು ದೇಶದಲ್ಲಿ ರಿಕವರಿ ರೇಟ್ ಚೆನ್ನಾಗಿದೆ. ಮರಣ ಪ್ರಮಾಣ ಕಡಿಮೆ ಇದೆ. ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ 5,500 ಜನರಷ್ಟೇ ಸೋಂಕಿತರಾಗಿದ್ದಾರೆ. ಅಮೆರಿಕ, ಬ್ರೆಜಿಲ್ ಮುಂತಾದ ರಾಷ್ಟ್ರಗಳಲ್ಲಿ ಇದು 25,000 ಇದೆ. ಮರಣ ಪ್ರಮಾಣ ಪ್ರತಿ 10 ಲಕ್ಷಕ್ಕೆ ಭಾರತದಲ್ಲಿ 83 ಇದ್ದರೆ, ಅಮೆರಿಕ, ಬ್ರೆಜಿಲ್, ಸ್ಪೇನ್, ಬ್ರಿಟನ್ಗಳಲ್ಲಿ 600ಕ್ಕೂ ಹೆಚ್ಚಿದೆ ಎಂದು ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ