![](https://kalanirnayanews.com/wp-content/uploads/2023/12/97889490.jpg-1.png)
ದೆಹಲಿ: ಲೋಕಸಭಾ ಕಲಾಪದ ಸಮಯದಲ್ಲಿ ಭದ್ರತಾ ಲೋಪ ಉಂಟಾಗಿರುವ ಕಾರಣದಿಂದ ವೀಕ್ಷಕರ ಪಾಸನ್ನು ನಿಷೇಧಿಸಿ ಸ್ಪೀಕರ್ ಓಂ ಬಿರ್ಲಾ (Speaker Om Birla) ಆದೇಶ ಹೊರಡಿಸಿದ್ದಾರೆ.
ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಸ್ಪೀಕರ್ ಬಳಿ ನುಗ್ಗಿ ಬಳಿಸ ಸ್ಮೋಕ್ ಕ್ರ್ಯಾಕರ್ನ್ನು ಸಿಡಿಸಿದ್ದರು. ಇದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಈ ಕಾರಣದಿಂದ ಪ್ರೇಕ್ಷಕರ ಪಾಸನ್ನು ನೀಡಲಾಗುವುದಿಲ್ಲ ಎಂದು ಓಂ ಬಿರ್ಲಾ ಅವರು ಹೇಳಿದ್ದಾರೆ.
ಇದೀಗ ಕಲಾಪ ಮುಂದುವರಿದಿದ್ದು, ಪ್ರಾಣತ್ಯಾಗಕ್ಕೂ ನಾವು ಸಿದ್ಧ, ಆದರೆ ಕಲಾಪ ನಿಲ್ಲುವಿದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಇಬ್ಬರು ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಲೋಕಸಭಾ ಸಂಸದ ಪ್ರತಾಪ್ ಸಿಂಹ ಅವರ ಪಿಎ ಪ್ರವೇಶ ಪಾಸ್ ನೀಡಿದ್ದಾಗಿ ಹೇಳಲಾಗುತ್ತಿದೆ. ಈಗ ಬಂಧಿಸಿದವರನ್ನು ವಿಚಾರಣೆ ನಡೆಸಲಾಗುತ್ತಿದೆ.
ನಿಮ್ಮೆಲ್ಲರ ರಕ್ಷಣೆ ನನ್ನ ಹೊಣೆ ಎಂದು ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರ ಕುಳಿತು ಮಾತಾಡಲಿದ್ದೇನೆ ಎಂದು ಹೇಳಿದ್ದಾರೆ. ಯಾವುದೇ ಸದಸ್ಯರು ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸದನದಲ್ಲಿ ಬಿಟ್ಟ ಹೊಗೆಯ ಪ್ರಾಥಮಿಕ ಮಾಹಿತಿ ನನ್ನ ಬಳಿ ಇದೆ, ನಿಮಗೆ ಇದೆಲ್ಲ ತಿಳಿಸುತ್ತೇನೆ ಎಂದು ಹೇಳಿದ್ದಾರೆ.