ತುಳುನಾಡಿನಲ್ಲಿ ಆಟಿ ಸೋಣ ತಿಂಗಳುಗಳು ತುಳುವರ ಸುಖ-ದುಃಖಗಳ ಸೂಚಕ:- ಗೋಪಾಕೃಷ್ಣ ವಾಂತಿಚ್ಚಾಲ್

ಜೈ ತುಳುನಾಡ್ (ರಿ) ಸಂಘಟನೆಯ ಕಾಸರಗೋಡು ಘಟಕದಿಂದ ಆಯೋಜಿಸಿದ್ದ ಆಟಿದ ಕೂಟ ಎಂಬ ಆನೈಲೈನ್ ಕಾರ್ಯಕ್ರಮದಲ್ಲಿ ವಿಷೇಶ ಉಪನ್ಯಾಸಕರಾಗಿ ಪಾಲ್ಗೋಂಡ ಪ್ರಮುಖ ದೈವರಾದನೆಯ ಚಿಂತಕ ಗೋಪಾಲಕೃಷ್ಣ ವಾಂತಿಚ್ಚಾಲು ಅವರು ಕಾರ್ಯಕ್ರಮದಲ್ಲಿ ತುಳುನಾಡಿನ ತುಳುವರ ವಿಶೇಷ ರೀತಿಯಲ್ಲಿ ಆಚರಿಸಲ್ಪಡುವ ಆಟಿ ತಿಂಗಳ ಕಾರ್ಯಕ್ರಮದ ಬಗ್ಗೆ ವಿವರಿಸುತ್ತಾ ಆಟಿ ಎಂಬುದು ತುಳುವರ ಆಚರಣೆಯಲ್ಲ ಅದು ತುಳುವರ ಸಂಸ್ಕೃತಿ. ಹಿಂದಿನ ಕಾಲದಲ್ಲಿ ಬೂಮಿಗೆ ಅತೀವೃಷ್ಟಿ ಹಾಗೂ ಸಂಕಷ್ಟ ಸಮಯವೆಂದರೆ ಅದು ಆಟಿ ತಿಂಗಳು. ಆದುದರಿಂದ ತುಲುವರು ತೀರಾ ಬಡತನ ಹಾಗೂ ಕಷ್ಟಮಯ ಜೀವನದಲ್ಲಿರಬೇಕಾದರೆ ಹಸಿವು ನೀಗಿಸಲು ಕೆಲವು ಸೊಪ್ಪು,ಹಣ್ಣು ಗಳನ್ನು ಸೇವಿಸಿ ಹಸಿವನ್ನು ನೀಗುಸುತಿದ್ದರು. ಹಾಗೂ ಅವುಗಳಲ್ಲಿ ಔಷಧಿಯನ್ನು ಕಂಡುಕೊಂಡಿದ್ದರು. ಇಂದು ಮನುಷ್ಯ ಆಡಂಬರ ಹಾಗೂ ವೈಜ್ಞಾನಿಕ ಯುಗದಲ್ಲಿ ಜೀವನ ನಡೆಸುತ್ತಿರಬೇಕಾದರೆ, ಪ್ರಕೃತಿಯನ್ನು ನಾಶ ಮಾಡುತ್ತಾನೆ. ಅಂದು ಪ್ರಕೃತಿಯನ್ನು ಬಳಸಿ ನಾಡಿಗೆ ಬಂದ ಸಂಕಷ್ಟವನ್ನು ತಡೆಯುತಿದ್ದರು. ಹಾಗೂ ಆಟಿ ತಿಂಗಳಿನ ವಿಷೇಷ, ಕೆಲವು ಆಚರಣಾ ಪದ್ದತಿಗಳ ಬಗ್ಗೆ ಬಹಳ ಸೊಗಸಾಗಿ ಮಾರ್ಮಿಕವಾಗಿ ಉಪನ್ಯಾಸವನ್ನು ಕೊಟ್ಟು ನೆರೆದಿದ್ದವರಿಗೆ ಬಹಳಷ್ಟು ವಿಷಯಗಳು ಅರಿಯುಂತಾಯಿತು.

ಗೂಗಲ್ ಮೀಟ್ ವೇದಿಕೆ ಯಲ್ಲಿ ನಡೆದ ಕಾರ್ಯಕ್ರಮವು ಶ್ರೀಮತಿ ಲಕ್ಷೀ ಗೋಪಾಲ ಗುಂಡಿಬೈಲ್ ಅವರ ಆಟಿ ಕಲೆಂಜ ಪಾಡ್ದನದೊಂದಿಗೆ ಆರಂಬವಾಯಿತು. ತುಳು ಸಾಹಿತಿ ಹಾಗು ಜೈತುಳುನಾಡ್ (ರಿ) ಕಾಸ್ರೋಡು ಘಟಕ ಸದಸ್ಯೆ ಕುಶಲಾಕ್ಷಿ ವಿ ಕುಲಾಲ್ ಅವರು ಆಟಿ ತಿಂಗಳ ತಿನಸುಗಳು ಹಾಗೂ ಕೆಲವೊಂದು ಔಷದೀಯ ಸಸ್ಯಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು .ಮುಂದಕ್ಕೆ ಕಾರ್ಯಕ್ರಮ ಅಧ್ಯಕ್ಷರಾಗಿ ಘಟಕದ ಅಧ್ಯಕ್ಷ ಹರಿಕಾಂತ್ ಸಾಲ್ಯಾನ್ ಕಾಸರಗೋಡು ಅವರು ಮಾತನಾಡಿ ಆಟಿ ತಿಂಗಳ ತುಳುವರ ನಂಬಿಕೆ ಆಚಾರದ ಬಗ್ಗೆ ವಿವರಗಳನ್ನು ಹಂಚಿದರು.


ನಂತರ ಪ್ರಶ್ನೋತ್ತರವಾಗಿ ಶೋತೃಗಳಿಂದ ಅನಿಸಿಕೆಗಳನ್ನು ಪಡೆಯಲಾಯಿತು. ದೇಶ ವಿದೇಶಗಳಿಂದ ಗಣ್ಯಾದಿ ಗಣ್ಯರು ಪಾಲ್ಗೊಂಡು ಕಾರ್ಯ ಕ್ರಮವನ್ನು ಯಶಸ್ವಿ ಗೊಳಿಸಿದರು ಕಾರ್ಯಕ್ರಮನ್ನು ಘಟಕದ ಸದಸ್ಯೆ ಹಾಗು ಯುವ ತುಳು ಸಾಹಿತಿ ರಾಜ ಶ್ರೀ ಟಿ ರೈ ಪೆರ್ಲ ಬಹಳ ಸೊಗಸಾಗಿ ಕಾರ್ಯಕ್ರಮನ್ನು ನಿರೂಪಿಸಿದರು ಘಟಕದ ಕಾರ್ಯದರ್ಶಿ ಕಾರ್ತಿಕ್ ಪೆರ್ಲ ಸ್ವಾಗತಿಸಿ ಘಟಕದ ಉಪಾಧ್ಯಕ್ಷೆ ವಿನೋದ ಪ್ರಸಾದ್ ರೈ ಕಾರಿಂಜೆ ವಂದಿಸಿದರು

Spread the love
  • Related Posts

    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

    ಬೆಳ್ತಂಗಡಿ: ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸಲುವಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರ ಸಾರಥ್ಯದಲ್ಲಿ 6ನೇ ವರ್ಷದ ದೋಸೆ ಹಬ್ಬ ಹಾಗೂ ಗೋ ಪೂಜಾ ಉತ್ಸವ ಅಕ್ಟೋಬರ್ 20 ಸೋಮವಾರದಂದು ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿ…

    Spread the love

    ಸಕಲೇಶಪುರ: ನಾಳೆ ದುಶ್ಚಟಗಳ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಮಾವೇಶ

    ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜಾಗೃತಿ ವೇದಿಕೆ ಹಾಸನ, ಲಯನ್ಸ್ ಕ್ಲಬ್ ಸಕಲೇಶಪುರ, ರೋಟರಿ ಕ್ಲಬ್ ಸಕಲೇಶಪುರ, ಬಂಟರ ಸಂಘ ಸಕಲೇಶಪುರ, ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ 14/10/2025ನೇ ಮಂಗಳವಾರ ಬೆಳಿಗ್ಗೆ 10ಗಂಟೆಯಿಂದ…

    Spread the love

    You Missed

    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

    • By admin
    • October 15, 2025
    • 22 views
    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

    ಸಕಲೇಶಪುರ: ನಾಳೆ ದುಶ್ಚಟಗಳ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಮಾವೇಶ

    • By admin
    • October 13, 2025
    • 19 views
    ಸಕಲೇಶಪುರ: ನಾಳೆ ದುಶ್ಚಟಗಳ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಮಾವೇಶ

    ಶ್ರದ್ಧಾ ಭಕ್ತಿಯಿಂದ ಭಗವಂತನ ಆರಾಧನೆಯೊಂದಿಗೆ ಸಾಧ್ಯವಾದಷ್ಟು ಪರೋಪಕಾರ ಹಾಗೂ ಇತರರ ಸೇವೆ ಮಾಡಿದಾಗ ದೇವರು ಸಂತೃಪ್ತರಾಗಿ ನಮ್ಮನ್ನು ಅನುಗ್ರಹಿಸುತ್ತಾರೆ.

    • By admin
    • October 12, 2025
    • 46 views
    ಶ್ರದ್ಧಾ ಭಕ್ತಿಯಿಂದ ಭಗವಂತನ ಆರಾಧನೆಯೊಂದಿಗೆ ಸಾಧ್ಯವಾದಷ್ಟು ಪರೋಪಕಾರ ಹಾಗೂ ಇತರರ ಸೇವೆ ಮಾಡಿದಾಗ ದೇವರು ಸಂತೃಪ್ತರಾಗಿ ನಮ್ಮನ್ನು ಅನುಗ್ರಹಿಸುತ್ತಾರೆ.

    ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಿಂದ ಉಸ್ತುವಾರಿ ಸಚಿವರಿಗೆ ಮನವಿ

    • By admin
    • October 11, 2025
    • 40 views
    ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಿಂದ ಉಸ್ತುವಾರಿ ಸಚಿವರಿಗೆ ಮನವಿ

    ಅಗ್ನಿ ಅವಘಡದಿಂದ ಮನೆ ಸುಟ್ಟ ಪ್ರಕರಣ ಕಿರಣ್ ಚಂದ್ರ ಡಿ ಪುಷ್ಪಗಿರಿಯವರಿಂದ ತುರ್ತು ಸ್ಪಂದನೆ

    • By admin
    • October 7, 2025
    • 61 views
    ಅಗ್ನಿ ಅವಘಡದಿಂದ ಮನೆ ಸುಟ್ಟ ಪ್ರಕರಣ ಕಿರಣ್ ಚಂದ್ರ ಡಿ ಪುಷ್ಪಗಿರಿಯವರಿಂದ ತುರ್ತು ಸ್ಪಂದನೆ

    ನೆರಿಯಾದಲ್ಲಿ ಮನೆಗೆ ಬೆಂಕಿ ತಗುಲಿ ಅಪಾರ ಹಾನಿ

    • By admin
    • October 7, 2025
    • 58 views
    ನೆರಿಯಾದಲ್ಲಿ ಮನೆಗೆ ಬೆಂಕಿ ತಗುಲಿ ಅಪಾರ ಹಾನಿ