ಬುಧವಾರದ ದಿನ ಭವಿಷ್ಯ ಯಾರಿಗೆ ಶುಭ ಯಾರಿಗೆ ಅಶುಭ!

ಪಂಡಿತ್ ಶ್ರೀಎಂಎಚ್ ಭಟ್ ಶ್ರೀ ಶಿವ ಕಾಳಿ ಜೋತಿಷ್ಯ ಪೀಠ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು, ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರಕ್ಕಾಗಿ ಕರೆ ಮಾಡಿ 9901881377

ಮೇಷ ರಾಶಿ:
ಹುಟ್ಟು ಗುಣ ಸುಟ್ಟರೂ ಹೋಗದು ಎಂಬ ಮಾತಿದೆ. ಬದಲಾವಣೆಗೆ ದಾರಿ ಮಾಡಿಕೊಂಡರೆ ಕ್ಷೇಮ. ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಉನ್ನತ ಹುದ್ದೆ ಪಡೆಯುವಿರಿ ಮತ್ತು ಅಧಿಕಾರಿಗಳಿಂದ ಪ್ರಶಂಸೆ ಗಳಿಸುವಿರಿ. ಕೆಲವು ಕಾರಣಗಳಿಂದ ಮನಸ್ಸಿಗೆ ಕಿರಿಕಿರಿ ಹೆಚ್ಚಾಗಬಹುದು. ಆದಾಯವು ತೃಪ್ತಿಕರವಾಗಿರುತ್ತದೆ.

ವೃಷಭ ರಾಶಿ:
ಕಚೇರಿಯಲ್ಲಿ ಮೇಲಧಿಕಾರಿಗಳು ನಿಮಗೆ ಅನವಶ್ಯಕವಾಗಿ ಕಿರಿಕಿರಿ ನೀಡಿದರೂ ದಿನದ ಕೊನೆಗೆ ಮೆಚ್ಚುಗೆ ಗಳಿಸುವಿರಿ. ಆರೋಗ್ಯದ ವಿಚಾರದಲ್ಲಿ ಬೇಗನೆ ಚೇತರಿಕೆಯನ್ನು ಕಾಣಲಿದ್ದೀರಿ. ಉದ್ಯೋಗದಲ್ಲಿ ಸ್ಥಳಾಂತರವು ಪ್ರಗತಿಯೊಂದಿಗೆ ಇರುತ್ತದೆ. ಕುಟುಂಬ ಜೀವನದಲ್ಲಿ ಸರಳತೆ ಇರುತ್ತದೆ. ಈ ಸಮಯದಲ್ಲಿ ನೀವು ಖರ್ಚಿನ ಮೇಲೆ ಸ್ವಲ್ಪ ನಿಯಂತ್ರಣವನ್ನು ಇಟ್ಟುಕೊಳ್ಳಬೇಕು.

ಮಿಥುನ ರಾಶಿ:
ಹೊಸ ಮನೆಯನ್ನು ನಿರ್ಮಿಸುವ ವಿಚಾರದಲ್ಲಿ ಬಹಳ ಪ್ರಮುಖವಾದ ಬೆಳವಣಿಗೆಯೊಂದು ಶೀಘ್ರದಲ್ಲೇ ಸಂಭವಿಸಲಿದೆ. ಅಕ್ಕಪಕ್ಕದವರ ಜತೆಗೆ ಮಾತುಕತೆ ಇದ್ದೇ ಇರಲಿ ಆದರೆ ಯಾರನ್ನೂ ಸಂಪೂರ್ಣವಾಗಿ ನಂಬಿ ಮೂರ್ಖರಾಗದಿರಿ. ಇಂದು ನಿಮಗೆ ಶುಭ ದಿನವಾಗಿರುತ್ತದೆ, ಹತಾಶೆಯ ಮನಃಸ್ಥಿತಿ ಕೊನೆಗೊಳ್ಳುತ್ತದೆ.

ಕಟಕ ರಾಶಿ:
ಸಿಹಿ ಕಹಿ ಬಗೆಯ ಸಮಾಚಾರಗಳು ಲಭ್ಯವಾಗಲಿವೆ. ನಿರಾಶೆ ಹೊಂದಬೇಡಿ. ಮುಂದೆ ಶುಭವಾಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಕಾಟ ಹೆಚ್ಚಾಗಬಹುದು. ರೇಗಾಡದೆ ನಗುನಗುತ್ತಲೇ ಅವರನ್ನು ನಿರ್ಲಕ್ಷಿಸಿಬಿಡಿ. ವ್ಯವಹಾರದಲ್ಲಿ ಪಾಲುದಾರರ ಸಹಕಾರವು ಸಾಕಾಗುತ್ತದೆ. ಸೋಮಾರಿಯಾಗದಿರಿ ಮತ್ತು ಸಕ್ರಿಯರಾಗಿರಿ.

ಸಿಂಹ ರಾಶಿ:
ಮುಂದೆ ಕೈಗೊಳ್ಳಲಿರುವ ಕಾರ್ಯಯೋಜನೆಗಳ ಬಗೆಗೆ ಪ್ರಾರಂಭವಾದ ಮಾತುಕತೆಗಳಿಗೆ ಪ್ರೇರಣೆ ದೊರೆಯಲಿದೆ. ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಸಂಭವಿಸಬಹುದು. ಪುನಃ ಹೀಗಾಗದಂತೆ ಎಚ್ಚರ ವಹಿಸಿ. ಮುನ್ನಡೆಯಿರಿ. ವೃತ್ತಿಯಲ್ಲಿ ಹೆಚ್ಚಿನ ಶ್ರಮವಿರುತ್ತದೆ ಮತ್ತು ಆದಾಯವೂ ಹೆಚ್ಚಾಗುತ್ತದೆ. ಕೋಪವನ್ನು ನಿಯಂತ್ರಿಸಿ.

ಕನ್ಯಾ ರಾಶಿ :
ಆರ್ಥಿಕ ವಿಷಯಕ್ಕೆ ಸಂಬಂಧಪಟ್ಟಂತೆ ಎಚ್ಚರ ಅಗತ್ಯವಿದೆ. ಹಣವೇ ಮಾಯವಾಗಬಹುದು. ಜಾಗ್ರತೆ ಇರಲಿ. ಸ್ನೇಹಿತರ ಸಹಾಯದಿಂದ ವ್ಯವಹಾರದ ಹೊಸ ಮೂಲಗಳನ್ನು ಕಂಡುಕೊಳ್ಳುವಿರಿ.ಕೆಲವು ಕಾರಣಗಳಿಂದಾಗಿ ನಿಮಗೆ ಸಮಸ್ಯೆಗಳಿರಬಹುದು ಮತ್ತೊಂದು ನಿಮ್ಮ ಮನಸ್ಸಿನಲ್ಲಿರುವ ಯಾವುದೋ ವಿಷಯದ ಬಗ್ಗೆಯೂ ನಿಮಗೆ ಅಸಮಾಧಾನವಿದೆ.

ತುಲಾ ರಾಶಿ:
ಹಿತಶತ್ರುಗಳು ನಿಮಗೆ ಕಿರಿಕಿರಿ ಉಂಟುಮಾಡಲು ಸಿದ್ಧರಾಗಿದ್ದಾರೆ. ಬಾಳ ಸಂಗಾತಿ ನೀಡುವ ಸಲಹೆಯಿಂದ ಎಲ್ಲ ಕ್ಷೇಮ. ವೃತ್ತಿ ಎಂದ ಮೇಲೆ ಕಷ್ಟನಷ್ಟಗಳು ಇದ್ದೇ ಇರುತ್ತವೆ. ಅವುಗಳಿಗೆ ಅಧೀರರಾಗದೆ ಹಿಂಜರಿಯದೆ ಮುಂದಕ್ಕೆ ಸಾಗಿ. ಕುಟುಂಬದಲ್ಲಿ ವಿವಾದಗಳು ಹೆಚ್ಚಾಗಬಹುದು. ಸಹೋದರರಲ್ಲಿ ಸೈದ್ಧಾಂತಿಕ ವ್ಯತ್ಯಾಸಗಳು ಉದ್ಭವಿಸಬಹುದು.

ವೃಶ್ಚಿಕ ರಾಶಿ:
ಮಕ್ಕಳಿಂದ ಕಷ್ಟಗಳು ಎದುರಾಗಬಹುದು. ಅವರ ಮೇಲೆ ಕೋಪಿಸಿಕೊಳ್ಳುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಕಾರ್ಯಗಳಲ್ಲಿ ವಿಜಯ. ಬಂಧುಗಳಿಂದಲೂ ಹೆಚ್ಚಿನ ಸಹಾಯ ಲಭ್ಯವಾಗಲಿದೆ. ಮಹಾಗಣಪತಿಯ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಇಚ್ಛೆಗೆ ವಿರುದ್ಧವಾಗಿ ಏನಾದರೂ ಮಾಡುವುದರಿಂದ ನಿಮ್ಮ ಮನಸ್ಸು ತೊಂದರೆಗೊಳಗಾಗಬಹುದು.

ಧನುಸ್ಸು ರಾಶಿ:
ಮನಸ್ಸನ್ನು ಗೊಂದಲದ ಗೂಡನ್ನಾಗಿ ಮಾಡಿಕೊಳ್ಳದೆ ಜೇನುಗೂಡಾಗಿ ಪರಿವರ್ತಿಸಿ. ಶಾಂತಿ ಸಮಾಧಾನ ಇರಲಿದೆ. ಮಾಡುತ್ತಿರುವ ಕೆಲಸಗಳು ಯಶಸ್ಸಿನತ್ತ ತಿರುಗಲು ಸಾಧ್ಯವಾಗಲಿದೆ. ಯಾವುದೇ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಮನಸ್ಸಿನಲ್ಲಿ ಸಂತೋಷದ ಭಾವನೆ ಇರುತ್ತದೆ. ನೀವು ಸ್ನೇಹಿತರು ಮತ್ತು ಕುಟುಂಬದಿಂದ ಲಾಭ ಪಡೆಯುತ್ತೀರಿ.

ಮಕರ ರಾಶಿ:
ವಿರೋಧಿಗಳ ಜತೆಗೆ ಮಾತುಕತೆಗಳು ಬೇಡ. ಅವಿವೇಕಿಗಳಿಗೆ ಮಾತು ಅರ್ಥವಾಗದು. ನಿಮಗೇ ಜಯವಾಗಲಿದೆ. ಜೀವನದ ಎಲ್ಲ ಏರಿಳಿತಗಳೂ ವಿಧಿಯ ಸಂಕಲ್ಪದಂತೆ ಆಗುತ್ತಿರುತ್ತದೆ. ಭಕ್ತಿಯಿಂದ ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸಿ. ನೀವು ಅನುಕೂಲಕರ ಗ್ರಹಗಳ ಸ್ಥಾನಗಳ ಲಾಭವನ್ನು ಪಡೆಯಲಿದ್ದೀರಿ. ಗೌರವ ಮತ್ತು ಮೆಚ್ಚುಗೆಯೊಂದಿಗೆ ಹಣದ ಪ್ರಯೋಜನ ಪಡೆಯುವಿರಿ.

ಕುಂಭ ರಾಶಿ:
ಅಕ್ಕಪಕ್ಕದವರು ನಿಮ್ಮನ್ನು ಆತ್ಮೀಯತೆಯಿಂದ ಕಾಣುತ್ತಾರೆ. ನಿಮ್ಮ ನಾಯಕತ್ವದ ಗುಣಗಳಿಂದ ಪ್ರಶಂಸೆಯನ್ನು ಪಡೆಯಲಿದ್ದೀರಿ. ಅನ್ಯ ವ್ಯಕ್ತಿಗಳ ಜತೆ ವ್ಯವಹರಿಸುವಾಗ ಜಾಗ್ರತೆ ಇಲ್ಲದಿದ್ದರೆ ನಾನಾ ರೀತಿಯ ತೊಂದರೆಗಳು ಬರಬಹುದು. ಧರ್ಮದಲ್ಲಿ ನಂಬಿಕೆ ಹೆಚ್ಚಾಗುತ್ತದೆ. ಆಸ್ತಿಯ ಸುಧಾರಣೆ ಮತ್ತು ನಿರ್ವಹಣೆಯಲ್ಲಿ ವೆಚ್ಚಗಳು ಹೆಚ್ಚಾಗುತ್ತವೆ.

ಮೀನ ರಾಶಿ:
ಅನೇಕ ಸ್ನೇಹಿತರು ನಿಮ್ಮ ಏಳಿಗೆಗಾಗಿ ನೆರವನ್ನು ನೀಡಲಿದ್ದಾರೆ. ಅವರನ್ನು ಪ್ರೀತಿ ಗೌರವಗಳಿಂದ ಉಪಚರಿಸಿ. ಇಷ್ಟಕ್ಕೆ ವಿರುದ್ಧದ ಕೆಲಸಗಳನ್ನೇ ಮಾಡಬೇಕಾಗಿ ಬರಬಹುದು. ಜಾಣತನದಿಂದ ಅದನ್ನು ನಿಭಾಯಿಸುವುದು ಉತ್ತಮ. ವೃತ್ತಿಯಲ್ಲಿ ಹೆಚ್ಚುವರಿ ಜವಾಬ್ದಾರಿಯಿಂದಾಗಿ ಕಾರ್ಯನಿರತತೆ ಹೆಚ್ಚಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹುಟ್ಟುತ್ತದೆ. ಆಸ್ತಿ ವಿಸ್ತರಿಸಿದಂತೆ ಆಸ್ತಿಯಿಂದ ಆದಾಯ ಹೆಚ್ಚಾಗುತ್ತದೆ.

Spread the love
  • Related Posts

    ಶನಿವಾರದ ದಿನಭವಿಷ್ಯ ಯಾವ ರಾಶಿಯವರಿಗಿದೆ ಶುಭ ಫಲ!

    ಮೇಷ ರಾಶಿ: ನಿಮ್ಮ ಸಂಗಾತಿ ಎಂದಿಗೂ ಇಷ್ಟೊಂದು ಸುಂದರವಾಗಿರಲಿಲ್ಲ ಎಂದು ನಿಮಗೆ ಅರಿವಾಗುತ್ತದೆ. ನಿಮ್ಮ ಹಿತನುಡಿಗಳಿಂದ ಸಂಗಾತಿ ಫುಲ್ ಖುಷಿ. ನೀವು ಸಂಗಾತಿಯೊಡನೆ ದಿನಪೂರ್ತಿ ಕಾಲ ಕಳೆಯಬಹುದು. ಕೆಲಸದಲ್ಲಿ ಸಂಭವಿಸುವ ದೌರ್ಜನ್ಯ ಅದು ನಿಮಗೆ ಮುಂದಿನ ಭವಿಷ್ಯದಲ್ಲಿ ಪ್ರಜ್ವಲ ಶಕ್ತಿ ನೀಡುತ್ತದೆ.…

    Spread the love

    ಶನಿವಾರದ ರಾಶಿಭವಿಷ್ಯ ಯಾರಿಗೆಲ್ಲ ಇಂದು ಶುಭಕರ

    ಮೇಷ: ಸಾಲದ ಸಹಾಯ, ಆರ್ಥಿಕ ಚೇತರಿಕೆಯ ಲಕ್ಷಣ, ಉದ್ಯೋಗದಲ್ಲಿ ಹಿನ್ನಡೆ, ಆತುರದಿಂದ ಸಂಕಷ್ಟ ತಂದುಕೊಳ್ಳುವಿರಿ, ಶುಭಕಾರ್ಯಕ್ಕೆ ಮನಸ್ಸು ಮಾಡುವಿರಿ ವೃಷಭ: ಸ್ವಯಂಕೃತ ಅಪರಾಧಗಳು, ಆರ್ಥಿಕ ಸಂಕಷ್ಟದ ದಿವಸಗಳು, ಶುಭಕಾರ್ಯದ ಚಿಂತೆ, ಕಾರ್ಯ ವಿಘ್ನ, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಸೋಲು, ತಂದೆಯಿಂದ ನಷ್ಟ, ಸರ್ಕಾರಿ…

    Spread the love

    You Missed

    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ

    • By admin
    • January 28, 2026
    • 63 views
    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ

    ಸಿ.ಎಸ್. ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅಭೂತಪೂರ್ವ ಸಾಧನೆ, ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ

    • By admin
    • January 20, 2026
    • 306 views
    ಸಿ.ಎಸ್. ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅಭೂತಪೂರ್ವ ಸಾಧನೆ,  ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ

    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    • By admin
    • January 20, 2026
    • 103 views
    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    ಹಳ್ಳಿ ಹೈದ ಗಿಲ್ಲಿ ನಟನಿಗೆ ‘ಬಿಗ್’ ಕಿರೀಟ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ರನ್ನರ್ ಆಫ್

    • By admin
    • January 18, 2026
    • 97 views
    ಹಳ್ಳಿ ಹೈದ ಗಿಲ್ಲಿ ನಟನಿಗೆ ‘ಬಿಗ್’ ಕಿರೀಟ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ರನ್ನರ್ ಆಫ್

    ಚಾರ್ಮಾಡಿ ಘಾಟಿಯಲ್ಲಿ ಹಬ್ಬಿದ ಕಾಡ್ಗಿಚ್ಚು ಅಪಾರ ಸಸ್ಯ ಪ್ರಬೇಧಗಳು, ಪ್ರಾಣಿ ಸಂಕುಲಕ್ಕೆ ಹಾನಿ ಸಾಧ್ಯತೆ!!! ನಿರಂತರ ಕಾಡ್ಗಿಚ್ಚಿಗೆ ಶಾಶ್ವತ ಪರಿಹಾರ ಯಾವಾಗ???

    • By admin
    • January 18, 2026
    • 89 views
    ಚಾರ್ಮಾಡಿ ಘಾಟಿಯಲ್ಲಿ ಹಬ್ಬಿದ ಕಾಡ್ಗಿಚ್ಚು ಅಪಾರ ಸಸ್ಯ ಪ್ರಬೇಧಗಳು, ಪ್ರಾಣಿ ಸಂಕುಲಕ್ಕೆ ಹಾನಿ ಸಾಧ್ಯತೆ!!! ನಿರಂತರ ಕಾಡ್ಗಿಚ್ಚಿಗೆ ಶಾಶ್ವತ ಪರಿಹಾರ ಯಾವಾಗ???

    ಚಾರ್ಮಾಡಿ ಘಾಟಿಯ ತುತ್ತ ತುದಿಯಲ್ಲಿ ಕಾಣಿಸಿಕೊಂಡ ಬೆಂಕಿ ಇದು ಆಕಸ್ಮಿಕವೋ‼️ ಅಥವಾ ದುಷ್ಟರ ಕೃತ್ಯವೋ⁉️

    • By admin
    • January 18, 2026
    • 69 views
    ಚಾರ್ಮಾಡಿ ಘಾಟಿಯ ತುತ್ತ ತುದಿಯಲ್ಲಿ ಕಾಣಿಸಿಕೊಂಡ ಬೆಂಕಿ ಇದು ಆಕಸ್ಮಿಕವೋ‼️ ಅಥವಾ ದುಷ್ಟರ ಕೃತ್ಯವೋ⁉️