ದ್ವಿತೀಯ ಪಿ.ಯು.ಸಿ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಶುಭ ಸುದ್ಧಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಕುರಿತು ಸರಕಾರದಿಂದ ಹೈಕೋರ್ಟ್ ಗೆ ಹೇಳಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದು ಪಡಿಸಲಾಗಿತ್ತು. ಆದ್ರೇ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಆದ್ರೇ ವಿದ್ಯಾರ್ಥಿಗಳು ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವಂತ ರಾಜ್ಯ ಸರ್ಕಾರವು ದ್ವಿತೀಯ ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪಾಸ್ ಮಾಡೋದಾಗಿ ತಿಳಿಸಿದೆ.

ಈ ಕುರಿತಂತೆ ಇಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರ ತನ್ನ ಹೇಳಿಕೆಯನ್ನು ಸಲ್ಲಿಸಿದ್ದು, ಶೇ.35ರಷ್ಟು ಅಂಕಗಳನ್ನು ನೀಡುವ ಮೂಲಕ, ದ್ವಿತೀಯ ಪಿಯು ರಿಪೀಟರ್ಸ್ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತದೆ.

ಶೇ.35ರಷ್ಟು ಅಂಕ ನೀಡಿ ಪಾಸ್ ಮಾಡೋದಕ್ಕೆ ನಿರ್ಧರಿಸಲಾಗಿದೆ ಎಂಬುದಾಗಿ ತಮ್ಮ ನಿರ್ಧಾರವನ್ನು ತಿಳಿಸಿದೆ. ಹೀಗಾಗಿ ದ್ವಿತೀಯ ಪಿಯು ರಿಪೀಟರ್ಸ್ ಎಲ್ಲಾ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಇಲ್ಲದೇ ಪಾಸ್ ಮಾಡಲಿದೆ.

ಈ ಮೊದಲು ಸರ್ಕಾರ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗ್ರೇಡ್ ನೀಡೋ ಮೂಲಕ ಪಾಸ್ ಮಾಡಲು ನಿರ್ಧರಿಸಿತ್ತು. ಬಳಿಕ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಅಂಕಗಳನ್ನು ನೀಡಲಾಗುತ್ತದೆ ಎಂಬುದಾಗಿ ಪ್ರಕಟಿಸಿತ್ತು. ದ್ವಿತೀಯ ಪಿಯು ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ನಿರ್ಧರಿಸಿರಲಿಲ್ಲ. ಇದರಿಂದಾಗಿ ರಿಪೀಟರ್ಸ್ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು ನಡೆಸಿದಂತ ಸಂದರ್ಭದಲ್ಲಿ ಸರ್ಕಾರ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪಾಸ್ ಮಾಡೋ ನಿರ್ಧಾರವನ್ನು ಕೋರ್ಟ್ ಗೆ ತಿಳಿಸಿದೆ.

Spread the love
  • Related Posts

    ಬೆಳ್ತಂಗಡಿ: ನೆರಿಯದಲ್ಲಿ ರಬ್ಬರ್ ತೋಟದಲ್ಲಿ ಚಿರತೆ ಓಡಾಟ

    ಬೆಳ್ತಂಗಡಿ : ನೆರಿಯ ಗ್ರಾಮದ ಅಲವೂರು ಎಂಬಲ್ಲಿ ಬಾಬಿ ಎಂಬವರ ಎಸ್ಟೇಟ್ ನ ರಬ್ಬರ್ ತೋಟದಲ್ಲಿ ಬೆಳಗ್ಗಿನ ಜಾವ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕಾರ್ಮಿಕರಿಗೆ ಚಿರತೆಯೊಂದು ಕಾಣಲು ಸಿಕ್ಕಿದ್ದು ಜನರಲ್ಲಿ ಭಯ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಚಿರತೆ ಕಾಣಿಸಿಕೊಂಡಿರಲಿಲ್ಲ.…

    Spread the love

    “ಜೀವನದ ಮೌಲ್ಯ ವರ್ಷಗಳಲ್ಲಿ ಅಲ್ಲ, ಬದುಕಿನ ರೀತಿಯಲ್ಲಿ” – ಡಾ. ಪದ್ಮಪ್ರಸಾದ ಅಜಿಲ

    ಬೆಳ್ತಂಗಡಿ: ತಾಲೂಕಿನ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ತಾ.ಪಂ ನಿವೃತ್ತ ಅಧೀಕ್ಷಕ ಪ್ರಶಾಂತ್ ಬಳಂಜ ಅವರಿಂದ ಆಯೋಜಿಸಲಾದ ವಿಶಿಷ್ಟ ಕೃತಜ್ಞತಾ ಸಮಾರಂಭವು ಅರ್ಥಪೂರ್ಣವಾಗಿ ನಡೆಯಿತು. ತಮ್ಮ ದೀರ್ಘ ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ವಿಭಿನ್ನವಾಗಿ…

    Spread the love

    You Missed

    ಬೆಳ್ತಂಗಡಿ: ನೆರಿಯದಲ್ಲಿ ರಬ್ಬರ್ ತೋಟದಲ್ಲಿ ಚಿರತೆ ಓಡಾಟ

    • By admin
    • April 5, 2026
    • 25 views
    ಬೆಳ್ತಂಗಡಿ: ನೆರಿಯದಲ್ಲಿ ರಬ್ಬರ್ ತೋಟದಲ್ಲಿ ಚಿರತೆ ಓಡಾಟ

    “ಜೀವನದ ಮೌಲ್ಯ ವರ್ಷಗಳಲ್ಲಿ ಅಲ್ಲ, ಬದುಕಿನ ರೀತಿಯಲ್ಲಿ” – ಡಾ. ಪದ್ಮಪ್ರಸಾದ ಅಜಿಲ

    • By admin
    • April 5, 2026
    • 40 views
    “ಜೀವನದ ಮೌಲ್ಯ ವರ್ಷಗಳಲ್ಲಿ ಅಲ್ಲ, ಬದುಕಿನ ರೀತಿಯಲ್ಲಿ” – ಡಾ. ಪದ್ಮಪ್ರಸಾದ ಅಜಿಲ

    ತೋಟಕ್ಕೆ ಅಕ್ರಮ ಪ್ರವೇಶಿಸಿ ಅಡಿಕೆ ಗಿಡ ನಾಶ ಯತ್ನ; ಮಹಿಳೆ ಮೇಲೆ ದೌರ್ಜನ್ಯ – ವಕೀಲೆಯೊಬ್ಬರು ₹50 ಸಾವಿರ ವಸೂಲಿ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲು

    • By admin
    • April 4, 2026
    • 64 views
    ತೋಟಕ್ಕೆ ಅಕ್ರಮ ಪ್ರವೇಶಿಸಿ ಅಡಿಕೆ ಗಿಡ ನಾಶ ಯತ್ನ; ಮಹಿಳೆ ಮೇಲೆ ದೌರ್ಜನ್ಯ – ವಕೀಲೆಯೊಬ್ಬರು ₹50 ಸಾವಿರ ವಸೂಲಿ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲು

    ಉಜಿರೆಯ ಹೃದಯ ಭಾಗದಲ್ಲಿ ಎಂಪಿರಿಯಾ ಕಾರ್ಪೋರೇಷನ್ ಇದರ ಜಿ-ಮಾಲ್ ಉದ್ಘಾಟನೆಗೆ ಸಜ್ಜು

    • By admin
    • April 4, 2026
    • 235 views
    ಉಜಿರೆಯ ಹೃದಯ ಭಾಗದಲ್ಲಿ ಎಂಪಿರಿಯಾ ಕಾರ್ಪೋರೇಷನ್ ಇದರ ಜಿ-ಮಾಲ್ ಉದ್ಘಾಟನೆಗೆ ಸಜ್ಜು

    ಸುವರ್ಣ ನಿಲಯ ಬಳಂಜದಲ್ಲಿ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ

    • By admin
    • April 4, 2026
    • 47 views
    ಸುವರ್ಣ ನಿಲಯ ಬಳಂಜದಲ್ಲಿ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ

    ಕಡಬ ಸಮೀಪ ಅಕ್ರಮ ಗೋಸಾಗಾಟ ತಡೆ: 19 ಗೋವುಗಳ ರಕ್ಷಣೆ

    • By admin
    • April 3, 2026
    • 43 views
    ಕಡಬ ಸಮೀಪ ಅಕ್ರಮ ಗೋಸಾಗಾಟ ತಡೆ: 19 ಗೋವುಗಳ ರಕ್ಷಣೆ