ಬಂಗಾಲದ ಪ್ರಖರ ಹಿಂದುತ್ವನಿಷ್ಠ ನಾಯಕ ತಪನ ಘೋಷ ಇವರಿಗೆ ದೇಶದಾದ್ಯಂತದ ಹಿಂದುತ್ವನಿಷ್ಠ ಮುಖಂಡರಿಂದ ಶ್ರದ್ಧಾಂಜಲಿ

ಬೆಂಗಳೂರು: ಬಂಗಾಲದ ಪ್ರಖರ ಹಿಂದುತ್ವನಿಷ್ಠ ಮುಖಂಡ ಹಾಗೂ ‘ಹಿಂದೂ ಸಂಹತಿ’ ಈ ಸಂಘಟನೆಯ ಸಂಸ್ಥಾಪಕರು ಹಾಗೂ ‘ಸಿಂಹ ವಾಹಿನಿ’ಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ತಪನ ಘೋಷ ಇವರು (೬೭ ವರ್ಷ) ಇವರು ಜುಲೈ ೧೨ ರಂದು ಕೊರೊನಾ ಸೋಂಕಿನಿಂದಾಗಿ ನಿಧನರಾದರು.

ತಪನದಾ ಇವರು ಬಂಗಾಲದ ಹಿಂದೂಗಳಿಗೆ ದೊಡ್ಡ ಆಧಾರಸ್ತಂಭವಾಗಿದ್ದರು. ತಪನದಾ ಇವರ ಸ್ಮರಣೆ ಹಾಗೂ ಗುಣವೈಶಿಷ್ಟ್ಯಗಳಿಗೆ ಬೆಳಕು ಚೆಲ್ಲುತ್ತಾ ಅವರ ಧರ್ಮರಕ್ಷಣೆಯ ಮತ್ತು ಹಿಂದೂಸಂಘಟನೆಯ ಕಾರ್ಯವನ್ನು ಸಮರ್ಥವಾಗಿ ಮುಂದೆ ಕೊಂಡೊಯ್ಯುವುದಾಗಿ ದೇಶದಾದ್ಯಂತ ಹಿಂದುತ್ವನಿಷ್ಠ ಮುಖಂಡರು ಆನ್‌ಲೈನ್ ಶ್ರದ್ಧಾಂಜಲಿ ಸಭೆಯಲ್ಲಿ ನಿರ್ಧಾರ ಕೈಗೊಂಡರು. ಘೋಷ ಇವರಿಗೆ ಶ್ರದ್ಧಾಂಜಲಿಯನ್ನು ನೀಡಲು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ ೧೬ ರಂದು ಆಯೋಜಿಸಲಾಗಿದ್ದ ಸಭೆಯಲ್ಲಿ ಹಿಂದುತ್ವನಿಷ್ಠರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅವರ ಕಾರ್ಯದ ಧ್ವನಿಚಿತ್ರಮುದ್ರಿಕೆಯನ್ನು ಎಲ್ಲರಿಗೆ ತೋರಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ.ಪ್ರಮೋದ ಮುತಾಲಿಕರು, ‘ಬಂಗಾಲದ ಹಿಂದೂ ವಿರೋಧಿ ಪರಿಸ್ಥಿತಿಯಲ್ಲಿ ಶ್ರೀ. ತಪನ ಘೋಷ ಇವರು ಮಾಡಿದ ಹಿಂದೂ ಸಂಘಟನೆಯ ಕಾರ್ಯವು ಪ್ರೇರಣಾದಾಯಕವಾಗಿದೆ’ ಎಂದರು.

ಭಾಜಪದ ತೆಲಂಗಾಣದ ಶಾಸಕ ಶ್ರೀ. ಟಿ. ರಾಜಾಸಿಂಹರು ತಮ್ಮ ಮನೋಗತದಲ್ಲಿ, ‘ತಪನ ಘೋಷ ಇವರು ಬಂಗಾಲದಲ್ಲಿ ಹಿಂದುತ್ವಕ್ಕಾಗಿ ಪ್ರತಿಕೂಲ ವಾತಾವರಣವಿರುವಾಗಲೂ ಅಲ್ಲಿ ಹಿಂದುತ್ವದ ಪತಾಕೆಯನ್ನು ಹಾರಿಸಿದರು. ಅವರ ಹಿಂದುತ್ವದ ಕಾರ್ಯವನ್ನು ಮುಂದೆ ಕೊಂಡೊಯ್ಯುವುದು ಈಗ ನಮ್ಮ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.


ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಮಾತನಾಡುತ್ತಾ, ‘ಹಿಂದುತ್ವಕ್ಕಾಗಿ ಸಂಪೂರ್ಣ ಜೀವನವನ್ನು ಸಮರ್ಪಿಸಿದ ತಪನ ಘೋಷರು ಹಿಂದುತ್ವನಿಷ್ಠರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಅವರು ಧರ್ಮಕ್ಕಾಗಿ ಸಮರ್ಪಣಾಭಾವದಿಂದ ಕಾರ್ಯ ಮಾಡುವ ಅನೇಕ ಹಿಂದುತ್ವನಿಷ್ಠರನ್ನು ತಯಾರಿಸಿದರು’, ಎಂದರು.

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಮಾತನಾಡುತ್ತಾ, ‘ತಪನಜಿಯವರು ಯಾವಾಗಲೂ ‘ಹಿಂದೂಗಳಿಗಾಗಿ ಸಂಘರ್ಷ ಒಂದೇ ಆಶಾಕಿರಣವಾಗಿದೆ’ ಎನ್ನುತ್ತಿದ್ದರು. ಅವರ ತತ್ತ್ವಜ್ಞಾನವನ್ನು ಕೃತಿಯಲ್ಲಿ ತರುವುದೇ ಅವರಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ’ ಎಂದರು.

ತಪನ ಘೋಷರ ಕಾರ್ಯದ ಉತ್ತರಾಧಿಕಾರಿ ಶ್ರೀ.ಪ್ರಕಾಶ ದಾಸರು ಮಾತನಾಡುತ್ತಾ, ‘ಕಾಶ್ಮೀರದ ಹಿಂದೂಗಳ ಸ್ಥಳಾಂತರವನ್ನು ಸರಕಾರಕ್ಕೆ ತಡೆಗಟ್ಟಲಾಗದಿರುವಾಗ ದೆಹಲಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬಂಗಾಲದ ಹಿಂದೂಗಳನ್ನು ಯಾರು ಕಾಪಾಡುವರು ? ಈ ವಿಚಾರವನ್ನು ಇಟ್ಟುಕೊಂಡು ತಪನದಾ ಇವರು, ಬಂಗಾಲದಲ್ಲಿ ‘ಹಿಂದೂ ಸಂಹತಿ’ ಸಂಘಟನೆಯ ಸ್ಥಾಪನೆಯನ್ನು ಮಾಡಿದರು. ಇಲ್ಲಿ ಹಿಂದುತ್ವದ ಧ್ವನಿಯನ್ನು ಬಲಗೊಳಿಸಿದರು. ಬಂಗಾಲದಲ್ಲಿ ಪೀಡಿತ ಹಿಂದೂಗಳ ರಕ್ಷಣೆಯನ್ನು ಮಾಡುವುದರ ಜೊತೆಗೆ ಅಲ್ಲಿನ ಸಾಮಾನ್ಯ ಹಿಂದೂಗಳಲ್ಲಿ ಅವರು ಉತ್ಸಾಹವನ್ನು ತುಂಬಿದರು. ಅವರ ಧರ್ಮರಕ್ಷಣೆಯ ಕನಸನ್ನು ನನಸಾಗಿಸಲು ನಾವು ಕಾರ್ಯನಿರತರಾಗುವೆವು ಎಂದರು.

‘ರೂಟ್ಸ್ ಇನ್ ಕಾಶ್ಮೀರ’ ನ ಸಹಸಂಸ್ಥಾಪಕ ಶ್ರೀ.ಸುಶೀಲ ಪಂಡಿತರು ತಮ್ಮ ಮನೋಗತವನ್ನು ವ್ಯಕ್ತಪಡಿಸುತ್ತಾ, ‘ತಪನ ಘೋಷರು ಹಿಂದುತ್ವಕ್ಕಾಗಿ ಪ್ರಾಮಾಣಿಕ, ಧ್ಯೇಯನಿಷ್ಠ, ಸಂವೇದನಾಶೀಲ,ಕರ್ತವ್ಯನಿಷ್ಠ ಮತ್ತು ಋಷಿಸಮಾನ ವ್ಯಕ್ತಿತ್ವವನ್ನು ಹೊಂದಿದ್ದರು’ ಎಂದರು.

ಈ ಸಮಯದಲ್ಲಿ ಬಂಗಾಲದ ಭಾರತ ಸೇವಾಶ್ರಮದ ಸಂಘದ ಸ್ವಾಮಿ ಪ್ರದಿಪ್ತಾನಂದರು ಮಾತಾಡುತ್ತಾ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪೂ. ಹರಿಶಂಕರ ಜೈನ, ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ಶ್ರೀ. ವಿನೋದ ಬನ್ಸಲ್, ‘ಪನೂನ ಕಾಶ್ಮೀರ’ದ ಅಧ್ಯಕ್ಷ ಡಾ.ಅಜಯ ಚ್ರೋಂಗೂ, ತಮಿಳುನಾಡಿನ ‘ಹಿಂದೂ ಮಕ್ಕಲ ಕಚ್ಛಿ’ಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಅರ್ಜುನ ಸಂಪಥ, ‘ಸುದರ್ಶನ’ ವಾಹಿನಿಯ ಮುಖ್ಯ ಸಂಪಾದಕ ಶ್ರೀ.ಸುರೇಶ ಚವ್ಹಾಣಕೆ, ಝಾರ್ಖಂಡದ ‘ತರುಣ ಹಿಂದೂ’ ಈ ಸಂಸ್ಥೆಯ ಸಂಸ್ಥಾಪಕ ಡಾ.ನೀಲ ಮಾಧವ ದಾಸ, ಓಡಿಯಾದ ಭಾರತ ರಕ್ಷಾ ಮಂಚದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ.ಅನಿಲ ಧೀರ, ‘ಇಂಟರಫೇಥ್ ಸ್ಟ್ರೇಂಥ್’ ನ ಸಂಸ್ಥಾಪಕ ಡಾ.ರಿಚರ್ಡ್ ಬೆಂಕಿನ್ ಮುಂತಾದವರು ಸಹ ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು.

ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA

Spread the love
  • Related Posts

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು…

    Spread the love

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 330 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 301 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 201 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 301 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 159 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 90 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ