![](https://kalanirnayanews.com/wp-content/uploads/2020/07/Screenshot_2020_0717_143612-compressed-1.jpg)
ಮಂಗಳೂರು: ಪಾಪಿ ಮಗ ಕಂಠಪೂರ್ತಿ ಕುಡಿದು ತಾಯಿಗೆ ಅಮಾನೂಷವಾಗಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ನಡೆದಿದೆ.
![](https://103.180.45.14/kalanirnaya1/wp-content/uploads/2020/07/Screenshot_2020_0717_160615-compressed-1.jpg)
ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಹಲಸಿನಕಟ್ಟೆ ಐದುಸೆನ್ಸ್ ನಿವಾಸಿ ಶ್ರೀನಿವಾಸ ಶೆಟ್ಟಿ, ಮತ್ತು ಅವನ ಮಗ ಪ್ರದೀಪ ಶೆಟ್ಟಿ ಸೇರಿಕೊಂಡು ವಯೇೂವೃದ್ದ ಮಹಿಳೆ ಅಪ್ಪಿ ಶೆಡ್ತಿಯವರ ಮೇಲೆ ಕಂಠಪೂರ್ತಿ ಕುಡಿದು ಅಮಾನೂಷವಾಗಿ ಹಲ್ಲೆ ನಡೆಸಿದ್ದು ಈ ಘಟನೆ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.
![](https://103.180.45.14/kalanirnaya1/wp-content/uploads/2020/07/Screenshot_2020_0717_152726-compressed-1.jpg)
ಖ್ಯಾತ ಸೂಲಗಿತ್ತಿಯಾಗಿದ್ದಂತಹ ಇವರು ಕೃಷಿ ಮತ್ತು ಜಾನಪದ ಪಾರಂಪರೆಯ ಬಗ್ಗೆ ವಿಶೇಷ ಜ್ಞಾನವುಳ್ಳ ಈ ಮಹಾತಾಯಿಗೆ ಇಂತಹ ಶಿಕ್ಷೆ ನೀಡಿದ ನೀಚ ಮಗನಿಗೆ ತಕ್ಕ ಶಾಸ್ತ್ರೀಯಾಗಬೇಕಾಗಿದೆ.
![](https://103.180.45.14/kalanirnaya1/wp-content/uploads/2020/07/Screenshot_2020_0717_151607-compressed-1.jpg)
ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಗೆ ಇಂತಹ ಶಿಕ್ಷೆ ನೀಡುವ ಪಾಪಿ ಮಗನಿಗೆ ತಕ್ಕಶಿಕ್ಷೆಯಾಗ ಬೇಕಾಗಿದೆ. ಅಜ್ಜಿಗೆ ಪ್ರತಿದಿನವೂ ಆಗುತ್ತಿರುವ ಹಲ್ಲೆಯಿಂದ ಬೇಸರಗೊಂಡ ಮತ್ತೊಬ್ಬ ಮೊಮ್ಮಗ ಇಂದು ಅಜ್ಜಿಗೆ ನೀಡುವ ಹಿಂಸೆಯನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ವಾಟ್ಸಾಪ್ ನಲ್ಲಿ ಹರಿಬಿಟ್ಟಿದ್ದಾನೆ. ಕೂಡಲೇ ವಿಡಿಯೋ ಗಮನಿಸಿದ ಬೆಳ್ತಂಗಡಿ ಠಾಣೆಯ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿಕೊಂಡು ಆರೋಪಿ ಮಗ ಮತ್ತು ಮೊಮ್ಮಗನನ್ನು ವಶಕ್ಕೆ ಪಡೆದು ಕಲಂ:323, 504 IPC & 24 senior citizen act 2007ರಂತೆ ಪ್ರಕರಣ ದಾಖಲಿಸಿದ್ದಾರೆ.