ಬಂಗಾಲದ ಪ್ರಖರ ಹಿಂದುತ್ವನಿಷ್ಠ ನಾಯಕ ತಪನ ಘೋಷ ಇವರಿಗೆ ದೇಶದಾದ್ಯಂತದ ಹಿಂದುತ್ವನಿಷ್ಠ ಮುಖಂಡರಿಂದ ಶ್ರದ್ಧಾಂಜಲಿ

ಬೆಂಗಳೂರು: ಬಂಗಾಲದ ಪ್ರಖರ ಹಿಂದುತ್ವನಿಷ್ಠ ಮುಖಂಡ ಹಾಗೂ ‘ಹಿಂದೂ ಸಂಹತಿ’ ಈ ಸಂಘಟನೆಯ ಸಂಸ್ಥಾಪಕರು ಹಾಗೂ ‘ಸಿಂಹ ವಾಹಿನಿ’ಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ತಪನ ಘೋಷ ಇವರು (೬೭ ವರ್ಷ) ಇವರು ಜುಲೈ ೧೨ ರಂದು ಕೊರೊನಾ ಸೋಂಕಿನಿಂದಾಗಿ ನಿಧನರಾದರು.

ತಪನದಾ ಇವರು ಬಂಗಾಲದ ಹಿಂದೂಗಳಿಗೆ ದೊಡ್ಡ ಆಧಾರಸ್ತಂಭವಾಗಿದ್ದರು. ತಪನದಾ ಇವರ ಸ್ಮರಣೆ ಹಾಗೂ ಗುಣವೈಶಿಷ್ಟ್ಯಗಳಿಗೆ ಬೆಳಕು ಚೆಲ್ಲುತ್ತಾ ಅವರ ಧರ್ಮರಕ್ಷಣೆಯ ಮತ್ತು ಹಿಂದೂಸಂಘಟನೆಯ ಕಾರ್ಯವನ್ನು ಸಮರ್ಥವಾಗಿ ಮುಂದೆ ಕೊಂಡೊಯ್ಯುವುದಾಗಿ ದೇಶದಾದ್ಯಂತ ಹಿಂದುತ್ವನಿಷ್ಠ ಮುಖಂಡರು ಆನ್‌ಲೈನ್ ಶ್ರದ್ಧಾಂಜಲಿ ಸಭೆಯಲ್ಲಿ ನಿರ್ಧಾರ ಕೈಗೊಂಡರು. ಘೋಷ ಇವರಿಗೆ ಶ್ರದ್ಧಾಂಜಲಿಯನ್ನು ನೀಡಲು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ ೧೬ ರಂದು ಆಯೋಜಿಸಲಾಗಿದ್ದ ಸಭೆಯಲ್ಲಿ ಹಿಂದುತ್ವನಿಷ್ಠರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅವರ ಕಾರ್ಯದ ಧ್ವನಿಚಿತ್ರಮುದ್ರಿಕೆಯನ್ನು ಎಲ್ಲರಿಗೆ ತೋರಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ.ಪ್ರಮೋದ ಮುತಾಲಿಕರು, ‘ಬಂಗಾಲದ ಹಿಂದೂ ವಿರೋಧಿ ಪರಿಸ್ಥಿತಿಯಲ್ಲಿ ಶ್ರೀ. ತಪನ ಘೋಷ ಇವರು ಮಾಡಿದ ಹಿಂದೂ ಸಂಘಟನೆಯ ಕಾರ್ಯವು ಪ್ರೇರಣಾದಾಯಕವಾಗಿದೆ’ ಎಂದರು.

ಭಾಜಪದ ತೆಲಂಗಾಣದ ಶಾಸಕ ಶ್ರೀ. ಟಿ. ರಾಜಾಸಿಂಹರು ತಮ್ಮ ಮನೋಗತದಲ್ಲಿ, ‘ತಪನ ಘೋಷ ಇವರು ಬಂಗಾಲದಲ್ಲಿ ಹಿಂದುತ್ವಕ್ಕಾಗಿ ಪ್ರತಿಕೂಲ ವಾತಾವರಣವಿರುವಾಗಲೂ ಅಲ್ಲಿ ಹಿಂದುತ್ವದ ಪತಾಕೆಯನ್ನು ಹಾರಿಸಿದರು. ಅವರ ಹಿಂದುತ್ವದ ಕಾರ್ಯವನ್ನು ಮುಂದೆ ಕೊಂಡೊಯ್ಯುವುದು ಈಗ ನಮ್ಮ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.


ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಮಾತನಾಡುತ್ತಾ, ‘ಹಿಂದುತ್ವಕ್ಕಾಗಿ ಸಂಪೂರ್ಣ ಜೀವನವನ್ನು ಸಮರ್ಪಿಸಿದ ತಪನ ಘೋಷರು ಹಿಂದುತ್ವನಿಷ್ಠರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಅವರು ಧರ್ಮಕ್ಕಾಗಿ ಸಮರ್ಪಣಾಭಾವದಿಂದ ಕಾರ್ಯ ಮಾಡುವ ಅನೇಕ ಹಿಂದುತ್ವನಿಷ್ಠರನ್ನು ತಯಾರಿಸಿದರು’, ಎಂದರು.

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಮಾತನಾಡುತ್ತಾ, ‘ತಪನಜಿಯವರು ಯಾವಾಗಲೂ ‘ಹಿಂದೂಗಳಿಗಾಗಿ ಸಂಘರ್ಷ ಒಂದೇ ಆಶಾಕಿರಣವಾಗಿದೆ’ ಎನ್ನುತ್ತಿದ್ದರು. ಅವರ ತತ್ತ್ವಜ್ಞಾನವನ್ನು ಕೃತಿಯಲ್ಲಿ ತರುವುದೇ ಅವರಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ’ ಎಂದರು.

ತಪನ ಘೋಷರ ಕಾರ್ಯದ ಉತ್ತರಾಧಿಕಾರಿ ಶ್ರೀ.ಪ್ರಕಾಶ ದಾಸರು ಮಾತನಾಡುತ್ತಾ, ‘ಕಾಶ್ಮೀರದ ಹಿಂದೂಗಳ ಸ್ಥಳಾಂತರವನ್ನು ಸರಕಾರಕ್ಕೆ ತಡೆಗಟ್ಟಲಾಗದಿರುವಾಗ ದೆಹಲಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬಂಗಾಲದ ಹಿಂದೂಗಳನ್ನು ಯಾರು ಕಾಪಾಡುವರು ? ಈ ವಿಚಾರವನ್ನು ಇಟ್ಟುಕೊಂಡು ತಪನದಾ ಇವರು, ಬಂಗಾಲದಲ್ಲಿ ‘ಹಿಂದೂ ಸಂಹತಿ’ ಸಂಘಟನೆಯ ಸ್ಥಾಪನೆಯನ್ನು ಮಾಡಿದರು. ಇಲ್ಲಿ ಹಿಂದುತ್ವದ ಧ್ವನಿಯನ್ನು ಬಲಗೊಳಿಸಿದರು. ಬಂಗಾಲದಲ್ಲಿ ಪೀಡಿತ ಹಿಂದೂಗಳ ರಕ್ಷಣೆಯನ್ನು ಮಾಡುವುದರ ಜೊತೆಗೆ ಅಲ್ಲಿನ ಸಾಮಾನ್ಯ ಹಿಂದೂಗಳಲ್ಲಿ ಅವರು ಉತ್ಸಾಹವನ್ನು ತುಂಬಿದರು. ಅವರ ಧರ್ಮರಕ್ಷಣೆಯ ಕನಸನ್ನು ನನಸಾಗಿಸಲು ನಾವು ಕಾರ್ಯನಿರತರಾಗುವೆವು ಎಂದರು.

‘ರೂಟ್ಸ್ ಇನ್ ಕಾಶ್ಮೀರ’ ನ ಸಹಸಂಸ್ಥಾಪಕ ಶ್ರೀ.ಸುಶೀಲ ಪಂಡಿತರು ತಮ್ಮ ಮನೋಗತವನ್ನು ವ್ಯಕ್ತಪಡಿಸುತ್ತಾ, ‘ತಪನ ಘೋಷರು ಹಿಂದುತ್ವಕ್ಕಾಗಿ ಪ್ರಾಮಾಣಿಕ, ಧ್ಯೇಯನಿಷ್ಠ, ಸಂವೇದನಾಶೀಲ,ಕರ್ತವ್ಯನಿಷ್ಠ ಮತ್ತು ಋಷಿಸಮಾನ ವ್ಯಕ್ತಿತ್ವವನ್ನು ಹೊಂದಿದ್ದರು’ ಎಂದರು.

ಈ ಸಮಯದಲ್ಲಿ ಬಂಗಾಲದ ಭಾರತ ಸೇವಾಶ್ರಮದ ಸಂಘದ ಸ್ವಾಮಿ ಪ್ರದಿಪ್ತಾನಂದರು ಮಾತಾಡುತ್ತಾ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪೂ. ಹರಿಶಂಕರ ಜೈನ, ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ಶ್ರೀ. ವಿನೋದ ಬನ್ಸಲ್, ‘ಪನೂನ ಕಾಶ್ಮೀರ’ದ ಅಧ್ಯಕ್ಷ ಡಾ.ಅಜಯ ಚ್ರೋಂಗೂ, ತಮಿಳುನಾಡಿನ ‘ಹಿಂದೂ ಮಕ್ಕಲ ಕಚ್ಛಿ’ಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಅರ್ಜುನ ಸಂಪಥ, ‘ಸುದರ್ಶನ’ ವಾಹಿನಿಯ ಮುಖ್ಯ ಸಂಪಾದಕ ಶ್ರೀ.ಸುರೇಶ ಚವ್ಹಾಣಕೆ, ಝಾರ್ಖಂಡದ ‘ತರುಣ ಹಿಂದೂ’ ಈ ಸಂಸ್ಥೆಯ ಸಂಸ್ಥಾಪಕ ಡಾ.ನೀಲ ಮಾಧವ ದಾಸ, ಓಡಿಯಾದ ಭಾರತ ರಕ್ಷಾ ಮಂಚದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ.ಅನಿಲ ಧೀರ, ‘ಇಂಟರಫೇಥ್ ಸ್ಟ್ರೇಂಥ್’ ನ ಸಂಸ್ಥಾಪಕ ಡಾ.ರಿಚರ್ಡ್ ಬೆಂಕಿನ್ ಮುಂತಾದವರು ಸಹ ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು.

ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA

Spread the love
  • Related Posts

    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    ಉಜಿರೆ: ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮೊಬೈಲ್‌ ಫೋನ್‌ ರಿಪೇರಿ ತರಬೇತಿಯನ್ನು ಆಯೋಜಿಸಿದ್ದು ದಿನಾಂಕ: 17.03.2025 ರಿಂದ 15.04.2025ರ ವರೆಗೆ (30ದಿನ) ತರಬೇತಿ ನಡೆಯುತ್ತದೆ. ತರಬೇತಿಯು ಊಟ, ವಸತಿಯೊಂದಿಗೆ ಉಚಿತವಾಗಿದ್ದು 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ ಭಾಗವಹಿಸಿಸುವವರು ಈ ಕೆಳಗಿನ ಲಿಂಕ್…

    Spread the love

    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    ಮಡಿಕೇರಿ:- ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಶ್ರೀ ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ(ರಿ.), ಅಶ್ವಿನಿ ಆಸ್ಪತ್ರೆ ಮಡಿಕೇರಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಶಾಖೆ…

    Spread the love

    You Missed

    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    • By admin
    • March 15, 2025
    • 66 views
    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

    • By admin
    • February 21, 2025
    • 54 views
    ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    • By admin
    • February 15, 2025
    • 61 views
    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

    • By admin
    • February 15, 2025
    • 228 views
    ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

    ತುಳುನಾಡಿನ ಕೆಡ್ಡಸ ಹಬ್ಬದ ಆಚರಣೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ತುಳುನಾಡ ಕಂಪನ್ನು ರಾಷ್ಟ್ರ ರಾಜಧಾನಿಯಲ್ಲಿ ಪಸರಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು

    • By admin
    • February 12, 2025
    • 83 views
    ತುಳುನಾಡಿನ ಕೆಡ್ಡಸ ಹಬ್ಬದ ಆಚರಣೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ತುಳುನಾಡ ಕಂಪನ್ನು ರಾಷ್ಟ್ರ ರಾಜಧಾನಿಯಲ್ಲಿ ಪಸರಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು

    ಕಡಿರುದ್ಯಾವರ ಗ್ರಾಮದ ಬೆಳ್ಳೂರು ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ

    • By admin
    • February 12, 2025
    • 159 views
    ಕಡಿರುದ್ಯಾವರ ಗ್ರಾಮದ ಬೆಳ್ಳೂರು ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ