ಕೊರೋನಾದಿಂದ ಮೃತಪಟ್ಟ ಮಹಿಳೆಯ ಮೊಬೈಲ್ ನಾಪತ್ತೆ! ಆ ಮೊಬೈಲ್ ನಲ್ಲಿತ್ತು ಅಮ್ಮನ ಸವಿ ನೆನಪುಗಳ ಪೋಟೋ…! ದಯವಿಟ್ಟು ಅಮ್ಮನ ಮೊಬೈಲ್ ಹುಡಕಿಕೊಡಿ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದ ಮಗಳು…

ಕೊಡಗು: ಕೊರೊನಾದಿಂದ ಸಾವನ್ನಪ್ಪಿದ ಮಹಿಳೆಯ ಮೊಬೈಲ್ ಕಳ್ಳತನ ಮಾಡಿರುವ ಘಟನೆ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಗುಮ್ಮನಕೊಲ್ಲಿ ಗ್ರಾಮದ ಪ್ರಭಾ ಎಂಬವರು ಕೊರೊನಾ ಹಿನ್ನೆಲೆ ಮೇ 6 ರಂದು ಕೊಡಗು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮೇ  16 ರಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.  ಈ ವೇಳೆ ಅವರ ಮೊಬೈಲ್ ನ್ನು ಪಾಪಿಗಳು ಯಾರೋ ಕದ್ದಿದ್ದಾರೆ. ಇದೀಗ ಅವರ ಪುಟ್ಟ ಮಗಳು ಅಮ್ಮನ ಮೊಬೈಲ್ ದಯವಿಟ್ಟು ಹುಡುಕಿ ಕೊಡಿ, ತೆಗೆದುಕೊಂಡವರು ದಯವಿಟ್ಟು ವಾಪಾಸ್ ಕೊಡಿ ಎಂದು ಅಂಗಲಾಚುತ್ತಿದ್ದಾಳೆ.

ಅಲ್ಲದೇ ಅದರಲ್ಲಿ ನನ್ನ ಅಮ್ಮನ ಸವಿ ನೆನಪುಗಳಿವೆ. ಅದರಲ್ಲಿ ಆಕೆಯ ಫೋಟೋಗಳಿವೆ ಎಂದು  ಬೇಡಿಕೊಂಡಿದ್ದಾಳೆ. ಅಲ್ಲದೇ ಪತ್ರ ಕೂಡ ಬರೆದಿದ್ದಾಳೆ.

ಪತ್ರದಲ್ಲಿ ಏನಿದೆ?

ಕೊಡಗು ಜಿಲ್ಲಾಧಿಕಾರಿಗಳು ಮತ್ತು ಶಾಸಕರುಗಳು ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆ ಸಿಬ್ಬಂದಿಗಳಲ್ಲಿ ಮನವಿ..

ಸುಮಾರು 15 ದಿನಗಳ ಹಿಂದೆ ನಾನು ಮತ್ತು ಅಪ್ಪ, ಅಮ್ಮ ಅವರು ಕೋವಿಡ್ ಗೆ ತುತ್ತಾಗಿದ್ದು, ತಾಯಿಯವರು 15 ದಿನಗಳ ಹಿಂದೆ ಕೋವಿಡ್ ಆಸ್ಪತ್ರೆ, ಮಡಿಕೇರಿ ಇಲ್ಲಿಗೆ ಕಾಯಿಲೆ ಉಲ್ಬಣಗೊಂಡು, ಸೇರಿರುತ್ತಾರೆ.

ನಾನು ಮತ್ತು ಅಪ್ಪ, ಹೋಂ ಕ್ವಾರೆಂಟ್ ಆಗಿದ್ದು, ಹೊರಗೆ ಬರಲಾರದ ಸ್ಥಿತಿಯಲ್ಲಿದ್ದು, ತಂದೆಯವರು ದಿನಗೂಲಿ ನೌಕರರಾಗಿದ್ದು, ಅಕ್ಕ-ಪಕ್ಕದವರ ಸಹಾಯದಿಂದ ಈ ದಿನಗಳನ್ನು ಕಳೆದೆವು.

ದಿನಾಂಕ 16-05-2021ರಂದು ನಮ್ಮ ತಾಯಿಯವರು ಮೃತರಾದರು. ಅವರ ಜೊತೆಯಲ್ಲಿ ಇದ್ದಂತಹ ಮೊಬೈಲ್ ಅನ್ನು ಯಾರೋ ತೆಗೆದುಕೊಂಡಿರುತ್ತಾರೆ. ನಾನು ತಬ್ಬಲಿಯಾಗಿದ್ದು, ನನ್ನ ತಾಯಿಯ ನೆನಪುಗಳು ಆ ಮೊಬೈಲ್ ನಲ್ಲಿ ಇರುತ್ತದೆ. ಆದ್ದರಿಂದ ಯಾರಾದರೂ ತೆಗೆದುಕೊಂಡಿದ್ದಾರೆ ಅಥವಾ ಸಿಕ್ಕಿದ್ದರೆ, ದಯವಿಟ್ಟು ಈ ತಬ್ಬಲಿಯ ವಿಳಾಸ ಹಾರಂಗಿ ರಸ್ತೆ, ಗುಮ್ಮನಕೊಲ್ಲಿ ಗ್ರಾಮ, ಬಸಪ್ಪ ಬಡಾವಣೆ, ಕುಶಾಲನಗರ-571234, ಕೊಡಗು ಜಿಲ್ಲೆ ಇಲ್ಲಿಗೆ ತಲುಪಿಸಿ ಕೊಡಬೇಕಾಗಿ ಕೇಳಿಕೊಳ್ಳುತ್ತೇನೆ.

ಇಂತಿ……… ತಾಯಿಯನ್ನು ಕಳೆದುಕೊಂಡ ನತದೃಷ್ಟೆ, ಹೃತಿಕ್ಷ

ಹೀಗೆಂದು ಬರೆದುಕೊಂಡಿದ್ದು ಬಾಲಕಿಯ ಮನವಿ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಅನೇಕರು ಮೊಬೈಲ್ ಕದ್ದವರು ದಯವಿಟ್ಟು ವಾಪಾಸ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Spread the love
  • Related Posts

    ಎಕ್ಸೆಲ್ ಬೆಳಕು ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದ ಶಿಕ್ಷಣದ ಜೊತೆಗೆ ಮದ್ಯಾಹ್ನದ ಊಟ ಹಾಗೂ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು: ಸುಮಂತ್ ಕುಮಾರ್ ಜೈನ್

    ಬೆಳ್ತಂಗಡಿ: ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುವ ಮೂಲಕ ರಾಜ್ಯಾದ್ಯಂತ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾಗಿರುವ ಶೈಕ್ಷಣಿಕ ರಂಗದಲ್ಲಿ ತನ್ನ ಸಾಧನೆಗಳಿಂದ ನೂತನ ಮೈಲಿಗಲ್ಲು ಸ್ಥಾಪಿಸಿದ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿನೂತನ ಅವಕಾಶ ಕಲ್ಪಿಸಿದೆ. 7…

    Spread the love

    ದೇಶದಲ್ಲಿ ‘ಎನರ್ಜಿ ಲಾಕ್‌ಡೌನ್’ ಸುಳ್ಳು ಸುದ್ದಿಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

    ನವದೆಹಲಿ (ಮಾ.27): ದೇಶದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗುತ್ತೆ ಅನ್ನೋ ಸುದ್ದಿ ಹಬ್ಬಿದೆ. ಆದರೆ, ಕೇಂದ್ರ ಸರ್ಕಾರ ಈ ವದಂತಿಗಳನ್ನು ತಳ್ಳಿಹಾಕಿದೆ. ದೇಶದಲ್ಲಿ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಇರುವುದಿಲ್ಲ, ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಸ್ಪಷ್ಟಪಡಿಸಿದೆ. ಸದ್ಯಕ್ಕೆ ಲಾಕ್‌ಡೌನ್ ಮಾಡುವಂತಹ ಯಾವುದೇ ಪರಿಸ್ಥಿತಿ…

    Spread the love

    You Missed

    ಎಕ್ಸೆಲ್ ಬೆಳಕು ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದ ಶಿಕ್ಷಣದ ಜೊತೆಗೆ ಮದ್ಯಾಹ್ನದ ಊಟ ಹಾಗೂ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು: ಸುಮಂತ್ ಕುಮಾರ್ ಜೈನ್

    • By admin
    • March 27, 2026
    • 20 views
    ಎಕ್ಸೆಲ್ ಬೆಳಕು ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದ ಶಿಕ್ಷಣದ ಜೊತೆಗೆ ಮದ್ಯಾಹ್ನದ ಊಟ ಹಾಗೂ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು: ಸುಮಂತ್ ಕುಮಾರ್ ಜೈನ್

    ದೇಶದಲ್ಲಿ ‘ಎನರ್ಜಿ ಲಾಕ್‌ಡೌನ್’ ಸುಳ್ಳು ಸುದ್ದಿಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

    • By admin
    • March 27, 2026
    • 21 views
    ದೇಶದಲ್ಲಿ ‘ಎನರ್ಜಿ ಲಾಕ್‌ಡೌನ್’ ಸುಳ್ಳು ಸುದ್ದಿಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

    ಧರ್ಮಸ್ಥಳ -ಸುಬ್ರಹ್ಮಣ್ಯ ಹೆದ್ದಾರಿಯ ಮರ್ದಾಳ ಬ್ರಾಂತಿಕಟ್ಟೆ ಬಳಿ ಕಾರು ಪಲ್ಟಿ ಹಲವರಿಗೆ ಗಂಭೀರ ಗಾಯ

    • By admin
    • March 23, 2026
    • 77 views
    ಧರ್ಮಸ್ಥಳ -ಸುಬ್ರಹ್ಮಣ್ಯ ಹೆದ್ದಾರಿಯ ಮರ್ದಾಳ ಬ್ರಾಂತಿಕಟ್ಟೆ ಬಳಿ ಕಾರು ಪಲ್ಟಿ ಹಲವರಿಗೆ ಗಂಭೀರ ಗಾಯ

    ಬೆಳ್ತಂಗಡಿ; ಸೋಮಂತ್ತಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

    • By admin
    • March 22, 2026
    • 92 views
    ಬೆಳ್ತಂಗಡಿ; ಸೋಮಂತ್ತಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

    ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.)ಅಲೆಕ್ಕಿ -ಮುಗೇರಡ್ಕ ಮೊಗ್ರು ಶ್ರೀರಾಮ ಮಂದಿರದ ಮಕ್ಕಳ ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

    • By admin
    • March 22, 2026
    • 49 views
    ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.)ಅಲೆಕ್ಕಿ -ಮುಗೇರಡ್ಕ ಮೊಗ್ರು ಶ್ರೀರಾಮ ಮಂದಿರದ ಮಕ್ಕಳ ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

    ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನಲ್ಲಿ ಪಲ್ಟಿಯಾದ ಟಿಟಿ ವಾಹನ: ಒರ್ವ ಸಾವು 9ಜನರಿಗೆ ಗಾಯ

    • By admin
    • March 21, 2026
    • 117 views
    ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನಲ್ಲಿ ಪಲ್ಟಿಯಾದ ಟಿಟಿ ವಾಹನ: ಒರ್ವ ಸಾವು 9ಜನರಿಗೆ ಗಾಯ