ಕೊರೋನಾದಿಂದ ಮೃತಪಟ್ಟ ಮಹಿಳೆಯ ಮೊಬೈಲ್ ನಾಪತ್ತೆ! ಆ ಮೊಬೈಲ್ ನಲ್ಲಿತ್ತು ಅಮ್ಮನ ಸವಿ ನೆನಪುಗಳ ಪೋಟೋ…! ದಯವಿಟ್ಟು ಅಮ್ಮನ ಮೊಬೈಲ್ ಹುಡಕಿಕೊಡಿ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದ ಮಗಳು…

ಕೊಡಗು: ಕೊರೊನಾದಿಂದ ಸಾವನ್ನಪ್ಪಿದ ಮಹಿಳೆಯ ಮೊಬೈಲ್ ಕಳ್ಳತನ ಮಾಡಿರುವ ಘಟನೆ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಗುಮ್ಮನಕೊಲ್ಲಿ ಗ್ರಾಮದ ಪ್ರಭಾ ಎಂಬವರು ಕೊರೊನಾ ಹಿನ್ನೆಲೆ ಮೇ 6 ರಂದು ಕೊಡಗು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮೇ  16 ರಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.  ಈ ವೇಳೆ ಅವರ ಮೊಬೈಲ್ ನ್ನು ಪಾಪಿಗಳು ಯಾರೋ ಕದ್ದಿದ್ದಾರೆ. ಇದೀಗ ಅವರ ಪುಟ್ಟ ಮಗಳು ಅಮ್ಮನ ಮೊಬೈಲ್ ದಯವಿಟ್ಟು ಹುಡುಕಿ ಕೊಡಿ, ತೆಗೆದುಕೊಂಡವರು ದಯವಿಟ್ಟು ವಾಪಾಸ್ ಕೊಡಿ ಎಂದು ಅಂಗಲಾಚುತ್ತಿದ್ದಾಳೆ.

ಅಲ್ಲದೇ ಅದರಲ್ಲಿ ನನ್ನ ಅಮ್ಮನ ಸವಿ ನೆನಪುಗಳಿವೆ. ಅದರಲ್ಲಿ ಆಕೆಯ ಫೋಟೋಗಳಿವೆ ಎಂದು  ಬೇಡಿಕೊಂಡಿದ್ದಾಳೆ. ಅಲ್ಲದೇ ಪತ್ರ ಕೂಡ ಬರೆದಿದ್ದಾಳೆ.

ಪತ್ರದಲ್ಲಿ ಏನಿದೆ?

ಕೊಡಗು ಜಿಲ್ಲಾಧಿಕಾರಿಗಳು ಮತ್ತು ಶಾಸಕರುಗಳು ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆ ಸಿಬ್ಬಂದಿಗಳಲ್ಲಿ ಮನವಿ..

ಸುಮಾರು 15 ದಿನಗಳ ಹಿಂದೆ ನಾನು ಮತ್ತು ಅಪ್ಪ, ಅಮ್ಮ ಅವರು ಕೋವಿಡ್ ಗೆ ತುತ್ತಾಗಿದ್ದು, ತಾಯಿಯವರು 15 ದಿನಗಳ ಹಿಂದೆ ಕೋವಿಡ್ ಆಸ್ಪತ್ರೆ, ಮಡಿಕೇರಿ ಇಲ್ಲಿಗೆ ಕಾಯಿಲೆ ಉಲ್ಬಣಗೊಂಡು, ಸೇರಿರುತ್ತಾರೆ.

ನಾನು ಮತ್ತು ಅಪ್ಪ, ಹೋಂ ಕ್ವಾರೆಂಟ್ ಆಗಿದ್ದು, ಹೊರಗೆ ಬರಲಾರದ ಸ್ಥಿತಿಯಲ್ಲಿದ್ದು, ತಂದೆಯವರು ದಿನಗೂಲಿ ನೌಕರರಾಗಿದ್ದು, ಅಕ್ಕ-ಪಕ್ಕದವರ ಸಹಾಯದಿಂದ ಈ ದಿನಗಳನ್ನು ಕಳೆದೆವು.

ದಿನಾಂಕ 16-05-2021ರಂದು ನಮ್ಮ ತಾಯಿಯವರು ಮೃತರಾದರು. ಅವರ ಜೊತೆಯಲ್ಲಿ ಇದ್ದಂತಹ ಮೊಬೈಲ್ ಅನ್ನು ಯಾರೋ ತೆಗೆದುಕೊಂಡಿರುತ್ತಾರೆ. ನಾನು ತಬ್ಬಲಿಯಾಗಿದ್ದು, ನನ್ನ ತಾಯಿಯ ನೆನಪುಗಳು ಆ ಮೊಬೈಲ್ ನಲ್ಲಿ ಇರುತ್ತದೆ. ಆದ್ದರಿಂದ ಯಾರಾದರೂ ತೆಗೆದುಕೊಂಡಿದ್ದಾರೆ ಅಥವಾ ಸಿಕ್ಕಿದ್ದರೆ, ದಯವಿಟ್ಟು ಈ ತಬ್ಬಲಿಯ ವಿಳಾಸ ಹಾರಂಗಿ ರಸ್ತೆ, ಗುಮ್ಮನಕೊಲ್ಲಿ ಗ್ರಾಮ, ಬಸಪ್ಪ ಬಡಾವಣೆ, ಕುಶಾಲನಗರ-571234, ಕೊಡಗು ಜಿಲ್ಲೆ ಇಲ್ಲಿಗೆ ತಲುಪಿಸಿ ಕೊಡಬೇಕಾಗಿ ಕೇಳಿಕೊಳ್ಳುತ್ತೇನೆ.

ಇಂತಿ……… ತಾಯಿಯನ್ನು ಕಳೆದುಕೊಂಡ ನತದೃಷ್ಟೆ, ಹೃತಿಕ್ಷ

ಹೀಗೆಂದು ಬರೆದುಕೊಂಡಿದ್ದು ಬಾಲಕಿಯ ಮನವಿ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಅನೇಕರು ಮೊಬೈಲ್ ಕದ್ದವರು ದಯವಿಟ್ಟು ವಾಪಾಸ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Spread the love
  • Related Posts

    ಬಾರ್ಯ ಗ್ರಾಮದ ಮುಜ್ಜಾಳೆ – ಪೆರಿಯೊಟ್ಟು ರಸ್ತೆ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಒದಗಿಸಿದ ರೂ.10 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ

    ಬಾರ್ಯ : ಬಾರ್ಯ ಗ್ರಾಮದ ಮುಜ್ಜಾಳೆ -ಪೆರಿಯೊಟ್ಟು ಭಾಗದ ನಾಗರಿಕರ ಹಲವಾರು ವರ್ಷದ ಬಹುಬೇಡಿಕೆಯ ರಸ್ತೆ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ನೀಡಿದ ಭರವಸೆಯಂತೆ ರೂ. 10 ಲಕ್ಷ ಅನುದಾನ ಒದಗಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡು ಸಂಚಾರಕ್ಕೆ ಸುಗಮವಾಗಿದೆ. ಶಾಸಕರಿಗೆ…

    Spread the love

    ಹದಗೆಟ್ಟ ರಸ್ತೆ ದುರಸ್ತಿ, ಕಾನರ್ಪದ ನವೀನ್ ರವರಿಂದ ಸ್ವಂತ ಖರ್ಚಿನಲ್ಲಿ ದುರಸ್ತಿ ಕಾರ್ಯ

    ಕಡಿರುದ್ಯಾವರ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಹೇಡ್ಯದಿಂದ ಕುಕ್ಕಾವುವರೆಗೆ ಅಲ್ಲಲ್ಲಿ ರಸ್ತೆ ಹಾಳಾಗಿದ್ದು, ಎರ್ಮಾಲ್ ಪಲ್ಕೆ ಬಳಿ ಮೋರಿ ಕುಸಿದು ವಾಹನ ಸವಾರರಿಗೆ ತುಂಬ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ಕಡಿರುದ್ಯಾವರದ ಕಾನರ್ಪ ಪಣಿಕಲ್ ನವೀನ್ ಅವರು ತನ್ನ ಸ್ವಂತ ಖರ್ಚಿನಿಂದ ಹಿಟಾಚಿ…

    Spread the love

    You Missed

    ಬಾರ್ಯ ಗ್ರಾಮದ ಮುಜ್ಜಾಳೆ – ಪೆರಿಯೊಟ್ಟು ರಸ್ತೆ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಒದಗಿಸಿದ ರೂ.10 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ

    • By admin
    • November 12, 2025
    • 102 views
    ಬಾರ್ಯ ಗ್ರಾಮದ ಮುಜ್ಜಾಳೆ – ಪೆರಿಯೊಟ್ಟು ರಸ್ತೆ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಒದಗಿಸಿದ ರೂ.10 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ

    ಹದಗೆಟ್ಟ ರಸ್ತೆ ದುರಸ್ತಿ, ಕಾನರ್ಪದ ನವೀನ್ ರವರಿಂದ ಸ್ವಂತ ಖರ್ಚಿನಲ್ಲಿ ದುರಸ್ತಿ ಕಾರ್ಯ

    • By admin
    • November 11, 2025
    • 176 views
    ಹದಗೆಟ್ಟ ರಸ್ತೆ ದುರಸ್ತಿ, ಕಾನರ್ಪದ ನವೀನ್ ರವರಿಂದ ಸ್ವಂತ ಖರ್ಚಿನಲ್ಲಿ ದುರಸ್ತಿ ಕಾರ್ಯ

    ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸುವ ಕ್ರೀಡಾ ಪ್ರತಿಭೆಗಳಿಗೆ ಶಾಸಕ ಹರೀಶ್ ಪೂಂಜಾರಿಂದ ಕ್ರೀಡಾ ಸಮವಸ್ತ್ರ ವಿತರಣೆ

    • By admin
    • November 10, 2025
    • 64 views
    ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸುವ ಕ್ರೀಡಾ ಪ್ರತಿಭೆಗಳಿಗೆ ಶಾಸಕ ಹರೀಶ್ ಪೂಂಜಾರಿಂದ ಕ್ರೀಡಾ ಸಮವಸ್ತ್ರ ವಿತರಣೆ

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 15ರಿಂದ 19ರವರೆಗೆ ಲಕ್ಷದೀಪೋತ್ಸವ ಸಂಭ್ರಮ

    • By admin
    • November 9, 2025
    • 233 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 15ರಿಂದ 19ರವರೆಗೆ ಲಕ್ಷದೀಪೋತ್ಸವ ಸಂಭ್ರಮ

    ಪುತ್ತೂರಿನ ಶಾಸಕರ ಮನವಿ ಮೇರೆಗೆ ದೇವಸ್ಥಾನ, ದೈವಸ್ಥಾನ ಹಾಗೂ ಸಂಘ ಸಂಸ್ಥೆಗಳ ಜಾಗವನ್ನು ಸಕ್ರಮಗೊಳಿಸಲು ಕಂದಾಯ ಸಚಿವರಿಂದ ಆದೇಶ

    • By admin
    • November 5, 2025
    • 187 views
    ಪುತ್ತೂರಿನ ಶಾಸಕರ ಮನವಿ ಮೇರೆಗೆ ದೇವಸ್ಥಾನ, ದೈವಸ್ಥಾನ ಹಾಗೂ ಸಂಘ ಸಂಸ್ಥೆಗಳ ಜಾಗವನ್ನು ಸಕ್ರಮಗೊಳಿಸಲು ಕಂದಾಯ ಸಚಿವರಿಂದ ಆದೇಶ

    ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ 13ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ

    • By admin
    • November 5, 2025
    • 78 views
    ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ 13ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ