“ದೊಡ್ಡ ತಲೆಗಳೇ ಉರುಳುತ್ತವೆ” ಹೂತ ಹೆಣಗಳು ಎದ್ದು ಮಾತಾಡುತ್ತವೆ- ಪ್ರೇತ ಭಾದೆ ಎದುರಾಗಲಿದೆ ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು!

ಹಾಸನ: ಕೊರೋನಾ 2ನೇ ಅಲೆ ನಿಯಂತ್ರಣ ಆಗುತ್ತಿರುವ ಬೆನ್ನಲ್ಲೇ ಕೋಡಿ ಮಠದ ಶ್ರೀಗಳು ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.

ಔಷಧಿಯೇ ಇಲ್ಲದಂತಹ ಕಾಯಿಲೆಗಳು ಭಾರೀ ಪ್ರಭಾವವನ್ನು ಬೀರುತ್ತದೆ ಎಂದು ಎರಡು ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಗಳು, ಮತ್ತೆ ಭವಿಷ್ಯವನ್ನು ನುಡಿದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜೂನ್ 20ರ ವೇಳೆಯಲ್ಲಿ ಇದರ ಹಾವಳಿ ಕ್ಷೀಣಿಸಲಿದೆ ಎಂದು ಹೇಳಿದ್ದಾರೆ.

ಆದರೆ ಮುಂದೆ ಕಾದಿದೆ ಮಾರಿಹಬ್ಬ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಗಮನಿಸಬೇಕಾದ ವಿಚಾರ ಏನಂದರೆ, ಕಳೆದ ಕಾರ್ತಿಕ ಮಾಸದಲ್ಲಿ ಕೊರೊನಾ ಮೊದಲನೇ ಕಮ್ಮಿಯಾಗುತ್ತದೆ ಎಂದು ಕೋಡಿಶ್ರೀಗಳು, ಮುಂಬರುವ ಕಾರ್ತಿಕದಲ್ಲಿ ದೇಶಕ್ಕೆ ಹೊಸ ಸಮಸ್ಯೆ/ಕಾಯಿಲೆ ಎದುರಾಗಲಿದೆ ಎಂದು ಹೇಳಿರುವುದು ಜ್ಯೋತಿಷ್ಯ ಶಾಸ್ತ್ರ ನಂಬುವವರನ್ನು ಆತಂಕಕ್ಕೆ ದೂಡಿದೆ.

ಈಗಿನ ಕಾಯಿಲೆ ಜೂನ್ ಇಪ್ಪತ್ತರ ಮೇಲೆ ಕಮ್ಮಿಯಾಗುತ್ತಾ ಬರುತ್ತದೆ
ಕೊರೊನಾ ಎನ್ನುವ ಕಾಯಿಲೆ ಏನು ವಿಶ್ವವನ್ನು ಕಾಡುತ್ತಿದೆಯೋ ಅದು ಸಂಪೂರ್ಣ ಹೋಗಲು ಇನ್ನು ಹತ್ತು ವರ್ಷ ಬೇಕಾದೀತು. ಆದರೆ, ಈಗಿನ ಕಾಯಿಲೆ ಜೂನ್ ಇಪ್ಪತ್ತರ ಮೇಲೆ ಕಮ್ಮಿಯಾಗುತ್ತಾ ಬರುತ್ತದೆ. ಈಗ ಬಂದಿರುವ ರೋಗವನ್ನು ನಾವು ಗಂಟಲು ಬೇನೆ ಎಂದು ಕರೆಯುತ್ತಿದ್ದೆವು. ಯಾವಾಗ ಮನುಷ್ಯನಲ್ಲಿ ಸ್ವಚ್ಚತೆ ಹೋಯಿತೋ ಆಗ ಇಂತಹ ಕಾಯಿಲೆಗಳು ಕಫ, ಪಿತ್ತ, ವಾತ ರೀತಿಯಲ್ಲಿ ಮನುಷ್ಯನನ್ನು ಆವರಿಸುತ್ತದೆ.

ಮನುಷ್ಯ ತನ್ನ ನಿಯಂತ್ರಣ ತಪ್ಪಿದಾಗ ಇಂತಹ ಕಾಯಿಲೆಗಳು ಜನರನ್ನು ಕಾಡಲು ಆರಂಭಿಸುತ್ತದೆ

ಕಾಯಿಲೆಗಳು ಮಾರಕವಾಗದಿದ್ದರೂ, ಮನುಷ್ಯ ತನ್ನ ನಿಯಂತ್ರಣ ತಪ್ಪಿದಾಗ ಇಂತಹ ಕಾಯಿಲೆಗಳು ಜನರನ್ನು ಕಾಡಲು ಆರಂಭಿಸುತ್ತದೆ. ಮುಂದಿನ ದಿನಗಳಲ್ಲಿ ಇನ್ನೊಂದು ಅಲೆ ಎದುರಾಗಲಿದೆ. ಸಾವಿರಾರು ಸಾವುಗಳಾಗಿವೆ, ಎಲ್ಲರೂ ಮೆಡಿಶಿನ್ ಹಾಕಿ ಸತ್ತು ಹೋದವರು. ಇದರ ವಿಷ ಭೂಮಿಯನ್ನು ಸೇರುತ್ತಿದೆ, ಅದು ಹೊರಗೆ ಬರುತ್ತದೆ
ಕುಂಭ ರಾಶಿಯಲ್ಲಿ ಗುರು ಬಂದರೆ ಆ ವರ್ಷವೆಲ್ಲಾ ಮಳೆ ಬೆಳೆ ಜಾಸ್ತಿಯಾಗುತ್ತೆ.

ಹೋದ ಹೊತ್ತಲ್ಲೇ ಸತ್ತ, ಬಿದ್ದ ಎಂದು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಅಂತಹ ಕಾಯಿಲೆ ಮುಂದೆ ಬರುತ್ತದೆ, ಕುಂಭದಲ್ಲಿ ಗುರು ಬರಲು, ತುಂಬೋ ಕೆರೆಕಟ್ಟೆ ಶಂಭವಿನ ಪದಶಾಕ್ಷಿ ಡಬ್ಬವೆನಿಸಬೇಡಿ ಎನ್ನುವ ಪದ ನಮ್ಮಲ್ಲಿ ಬಳಕೆಯಲ್ಲಿದೆ.


ಹೂತ ಹೆಣಗಳು ಎದ್ದು ಮಾತಾಡುತ್ತಾವೆ. ಪ್ರೇತಗಳ ಭಾದೆ ಎದುರಾಗಲಿದೆ:

ಕಾರ್ತಿಕದ ವರೆಗೂ ಮಳೆ ಸುರಿಯುತ್ತೆ, ಮಳೆ ಬಂದರೆ ಶೀತ, ಇದು ಈಗಿನ ಕಾಯಿಲೆಯ ಸ್ನೇಹಿತ. ಜಗತ್ತಿಗೆ ಅಪಾಯಕಾರಿ ಸನ್ನಿವೇಶ ಎದುರಾಗಲಿದೆ, ದೊಡ್ಡದೊಡ್ಡ ತಲೆಗಳು ಉರುಳಲಿವೆ, ರಾಜಕೀಯ ವಿಪ್ಲವವಾಗಲಿದೆ. ಸಾಮೂಹಿಕ ಸಾವುನೋವುಗಳು ಆಗುತ್ತವೆ, ಹೂತ ಹೆಣಗಳು ಎದ್ದು ಮಾತಾಡುತ್ತಾವೆ. ಪ್ರೇತಗಳ ಭಾದೆ ಎದುರಾಗಲಿದೆ

Spread the love
  • Related Posts

    ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ ಹಬ್ಬದ ವೈಶಿಷ್ಟ್ಯ ಆಚರಣೆಗಳ ಮಹತ್ವ

    ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ “ಹಬ್ಬಗಳು”. ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ…

    Spread the love

    ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ ಆಯ್ಕೆ

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಜ.5 ರಂದು ಸಂಘದ ಕಚೇರಿಯಲ್ಲಿ ನಡೆದು 2024 ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಉದಯವಾಣಿ ವರದಿಗಾರ ಚೈತ್ರೇಶ್ ಇಳಂತಿಲ, ಉಪಾಧ್ಯಕ್ಷರಾಗಿ ವಾರ್ತಾಭಾರತಿ ವರದಿಗಾರ ಶಿಬಿ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಪ್ರಜಾವಾಣಿ ವರದಿಗಾರ…

    Spread the love

    You Missed

    ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

    • By admin
    • October 23, 2025
    • 12 views
    ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

    ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಪೋಸ್ಟ್ ಕಾರ್ಡ್ ಚಳವಳಿ

    • By admin
    • October 23, 2025
    • 62 views
    ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಪೋಸ್ಟ್ ಕಾರ್ಡ್ ಚಳವಳಿ

    17ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    • By admin
    • October 19, 2025
    • 65 views
    17ವಯೋಮಾನದ  ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ

    • By admin
    • October 19, 2025
    • 57 views
    14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ  ರಾಷ್ಟ್ರಮಟ್ಟಕ್ಕೆ ಆಯ್ಕೆ

    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

    • By admin
    • October 15, 2025
    • 29 views
    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

    ಸಕಲೇಶಪುರ: ನಾಳೆ ದುಶ್ಚಟಗಳ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಮಾವೇಶ

    • By admin
    • October 13, 2025
    • 25 views
    ಸಕಲೇಶಪುರ: ನಾಳೆ ದುಶ್ಚಟಗಳ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಮಾವೇಶ