ಆರೋಗ್ಯ ಸಿಬ್ಬಂದಿಗಳ ಮಹಾಎಡವಟ್ಟು, ಸ್ಮಶಾನದಲ್ಲಿ ಮೃತದೇಹ ಅದಲು ಬದಲು!

ಕುಂದಾಪುರ: ಕೊರೋನಾ ಹೆಸರಲ್ಲಿ ಬೇರೆ ಬೇರೆ ಅವಾಂತರಗಳು ನಡೆಯುತ್ತಿದೆ. ಕೋವಿಡ್‌ನಿಂದ ಸತ್ತ ವ್ಯಕ್ತಿಯ ಶವದ ಬದಲು ಬೇರೆ ಮೃತ ವ್ಯಕ್ತಿಯ ಶವವನ್ನು ಕಳುಹಿಸಿದ ಘಟನೆ ಕುಂದಾಪುರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಅಂಬುಲೆನ್ಸ್‌ನಲ್ಲಿ ಬಂದ ಬೇರೆ ಶವವನ್ನು ಕಂಡು ಬಂಧುಗಳು, ಮನೆಯವರು ಹಾಗೂ ಸಾರ್ವಜನಿಕರು ಕುಂದಾಪುರ ಸ್ಮಶಾನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇದು ಉಡುಪಿ ಜಿಲ್ಲೆಯ ಕುಂದಾಪುರದ ಸ್ಮಶಾನದಲ್ಲಿ ಕಂಡುಬಂದ ವಿಚಿತ್ರ ದೃಶ್ಯ. ಯಾರದ್ದೋ ಹೆಸರಿನಲ್ಲಿ ಇಲ್ಲಿ ಬೇರೆ ಯಾರದ್ದೋ ದೇಹದ ಅಂತ್ಯ ಸಂಸ್ಕಾರಕ್ಕೆ ಇಲ್ಲಿ ಸಿದ್ದತೆ ನಡೆದಿತ್ತು.

ಕುಂದಾಪುರದ ನೇರಂಬಳ್ಳಿ ನಿವಾಸಿ 60 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ನಂತರ ಕೋವಿಡ್ ಪಾಸಿಟವ್ ಆಗಿದೆ ಎಂದು ಅವರನ್ನು ಉಡುಪಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಉಡುಪಿ ಆಸ್ಪತ್ರೆಯಿಂದ ವ್ಯಕ್ತಿಯ ಮನೆಗೆ ಕರೆ ಮಾಡಿ, ನಿಮ್ಮ ತಂದೆ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ನಾವೇ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದಿದ್ದರು. ನಂತರ ಮನೆಯವರ ಒತ್ತಾಯಕ್ಕೆ ಆರೋಗ್ಯ ಸಿಬ್ಬಂದಿಗಳು ಮೃತದೇಹವನ್ನು ಕುಂದಾಪುರ ಸ್ಮಶಾನಕ್ಕೆ ತಂದಿದ್ದರು.

ಸ್ಮಶಾನದಲ್ಲಿ ಮೃತದೇಹದ ಅಂತಿಮ ದರ್ಶನ ಪಡೆಯಲು ಮನೆಯವರು ಒತ್ತಾಯಿಸಿದಾಗ ಆರಂಭದಲ್ಲಿ ಅನುಮತಿ ನೀಡಿರಲಿಲ್ಲ. ಆದರೆ ಐವರಿಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಮೃತದೇಹ ಅದಲು ಬದಲಾಗಿರುವುದು ಬೆಳಕಿಗೆ ಬಂದಿದೆ.

ಆರೋಗ್ಯ ಸಿಬ್ಬಂದಿಯ ನಿರ್ಲ್ಯಕ್ಷ್ಯದ ಕುರಿತು ವ್ಯಕ್ತಿಯ ಮನೆಯವರು ಆಸ್ಪತ್ರೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಿಬ್ಬಂದಿಯ ನಿರ್ಲ್ಯಕ್ಷ್ಯದ ಕುರಿತು ವ್ಯಕ್ತಿಯ ಮನೆಯವರು ಆಸ್ಪತ್ರೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಶಾನದಲ್ಲಿ ನೂರಾರು ಮಂದಿ ಆಗಮಿಸಿದ್ದು, ಅಸಮಧಾನ ವ್ಯಕ್ತಪಡಿಸಿದ್ದಾರೆ. ತಾಲೂಕು ಅರೋಗ್ಯಾಧಿಕಾರಿ ನಾಗಭೂಷಣ್, ಸಹಾಯಕ ಆಯುಕ್ತ ರಾಜು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Spread the love
  • Related Posts

    ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಆ.29ರಂದು ನಡೆಯಲಿದೆ. ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    ಬಂಗಾಡಿ, ಆ.7: ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಬಂಗಾಡಿಯ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 29, 2026ರ ಶನಿವಾರ ಬೆಳಿಗ್ಗೆ 9.30 ಗಂಟೆಗೆ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು…

    Spread the love

    “ಶಿಕ್ಷಣದ ಹೆಮ್ಮೆಗೆ ಡ್ರಗ್ಸ್ ಕರಿನೆರಳು: ಎಚ್ಚೆತ್ತುಕೊಳ್ಳಬೇಕಿದೆ ಬೆಳ್ತಂಗಡಿಯ ಜನತೆ!!!”

    🖊️• ವರದಿ: ರಾಜೇಶ್ ಎಂ ಕಾನರ್ಪ ಬೆಳ್ತಂಗಡಿಯ ಶೈಕ್ಷಣಿಕ ಘನತೆಗೆ ಕಪ್ಪುಚುಕ್ಕೆಯಾಗುತ್ತಿರುವ ಮಾದಕ ದ್ರವ್ಯ ಜಾಲ: ಈಗಲೇ ಎಚ್ಚೆತ್ತುಕೊಳ್ಳಬೇಕಾದ ಸಮಯ ಒಂದು ಕಾಲದಲ್ಲಿ ಶಿಕ್ಷಣ, ಸಂಸ್ಕಾರ ಮತ್ತು ಶಾಂತಿಯ ನೆಲವೆಂದು ಗುರುತಿಸಿಕೊಂಡಿದ್ದ ಬೆಳ್ತಂಗಡಿ ತಾಲೂಕು ಇಂದು ರಾಜ್ಯದ ಶೈಕ್ಷಣಿಕ ನಕ್ಷೆಯಲ್ಲಿ ತನ್ನದೇ…

    Spread the love

    You Missed

    ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಆ.29ರಂದು ನಡೆಯಲಿದೆ. ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    • By admin
    • August 7, 2026
    • 3 views
    ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಆ.29ರಂದು ನಡೆಯಲಿದೆ. ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    “ಶಿಕ್ಷಣದ ಹೆಮ್ಮೆಗೆ ಡ್ರಗ್ಸ್ ಕರಿನೆರಳು: ಎಚ್ಚೆತ್ತುಕೊಳ್ಳಬೇಕಿದೆ ಬೆಳ್ತಂಗಡಿಯ ಜನತೆ!!!”

    • By admin
    • August 6, 2026
    • 9 views
    “ಶಿಕ್ಷಣದ ಹೆಮ್ಮೆಗೆ ಡ್ರಗ್ಸ್ ಕರಿನೆರಳು: ಎಚ್ಚೆತ್ತುಕೊಳ್ಳಬೇಕಿದೆ ಬೆಳ್ತಂಗಡಿಯ ಜನತೆ!!!”

    ಸಕಲೇಶಪುರ: ಬಾಳುಪೇಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    • By admin
    • August 6, 2026
    • 5 views
    ಸಕಲೇಶಪುರ: ಬಾಳುಪೇಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಬೆಸ್ಟ್ ಎಂಎಲ್ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಬಿಜೆಪಿ ಮೋರ್ಚಾಗಳಿಂದ ಅಭಿನಂದನೆ

    • By admin
    • August 6, 2026
    • 7 views
    ಬೆಸ್ಟ್ ಎಂಎಲ್ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಬಿಜೆಪಿ ಮೋರ್ಚಾಗಳಿಂದ ಅಭಿನಂದನೆ

    ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿ: ಶಾಸಕ ಹರೀಶ್ ಪೂಂಜ ಕರೆ

    • By admin
    • August 6, 2026
    • 5 views
    ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿ: ಶಾಸಕ ಹರೀಶ್ ಪೂಂಜ ಕರೆ

    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ

    • By admin
    • August 4, 2026
    • 6 views
    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ