ಫೇಸಬುಕ್‌ನ ಪಕ್ಷಪಾತ ನೀತಿ – ಹಿಂದುತ್ವವಾದಿ ಭಾಜಪ ಶಾಸಕ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ ನಿಷೇಧ! – HJS ಖಂಡನೆ

ಭಾಗ್ಯನಗರದ ಭಾಜಪ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ಅನ್ನು ನಿಷೇಧಿಸುವ ಮೂಲಕ ಫೇಸಬುಕ್ ಭಾರತದ ‘ವಾಕ್ ಸ್ವಾತಂತ್ರ್ಯ’ವನ್ನು ನಿರ್ಬಂಧಿಸಿದೆ. ಅವರ ಪೇಜ್‌ನಲ್ಲಿ ದ್ವೇಷ ಹಬ್ಬಿಸುತ್ತಿದ್ದರೆ ಭಾರತದಲ್ಲಿ ‘ವಾಂಟೆಡ್’ ಆಗಿರುವ ಮತ್ತು ಮುಸಲ್ಮಾನ ಯುವಕರನ್ನು ಉಗ್ರರನ್ನಾಗಿಸಲು ಪ್ರೋತ್ಸಾಹಿಸುವ ಜಿಹಾದಿ ಡಾ. ಝಾಕೀರ್ ನಾಯಿಕ್ ಇವರ ಹಾಗೂ 100 ಕೋಟಿ ಹಿಂದೂಗಳನ್ನು ಮುಗಿಸುವ ಬಹಿರಂಗ ಬೆದರಿಕೆಯೊಡ್ಡುವ ‘ಎಮ್‌ಐ.ಎಮ್’ನ ಶಾಸಕ ಅಕ್ಬರುದ್ದೀನ್ ಓವೈಸಿ ಇವರ ‘ಫೇಸಬುಕ್ ಪೇಜ್’ ಮೇಲೆ ಏಕೆ ನಿಷೇಧ ಹೇರಿಲ್ಲ ? ಅನೇಕ ಜಿಹಾದಿ ಉಗ್ರವಾದಿ ಸಂಘಟನೆಗಳ ‘ಫೇಸಬುಕ್ ಪೇಜ್’ ಇಂದಿಗೂ ಜಿಹಾದ್‌ನ ಪ್ರಚಾರ ಮಾಡುತ್ತಿವೆ. ಆದುದರಿಂದ ‘ಫೇಸಬುಕ್’ ಭಾರತದಲ್ಲಿ ಮುಸಲ್ಮಾನರಿಗೊಂದು ಹಿಂದೂಗಳಿಗೆ ಮತ್ತೊಂದು ನಿಯಮ ಅಳವಡಿಸಿ ಧಾರ್ಮಿಕ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಹಿಂದೂ ಜನಜಾಗೃತಿಸ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಈ ಪ್ರಕರಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಫೇಸಬುಕ್’ ತಕ್ಷಣವೇ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ ಮುಂಚಿನಂತೆ ಆರಂಭಿಸಬೇಕು, ಇಲ್ಲದಿದ್ದರೆ ಹಿಂದೂ ಸಮಾಜಕ್ಕೇ ಫೇಸಬುಕ್ ನಿಷೇಧಿಸುವಂತೆ ಕರೆ ನೀಡಬೇಕಾಗುವುದು, ಎಂದು ಶ್ರೀ. ಶಿಂದೆಯವರು ಎಚ್ಚರಿಕೆ ನೀಡಿದರು.

ದೆಹಲಿಯಲ್ಲಿ ಮತ್ತು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಲಭೆಗಳ ಸಮಯದಲ್ಲಿಯೂ ಮತಾಂಧರು ತಮ್ಮ ‘ಫೇಸ್‌ಬುಕ್ ಪೇಜ್’ನಲ್ಲಿ ಒಟ್ಟಿಗೆ ಸೇರಲು ಕರೆ ನೀಡಿದ್ದರು ಎಂಬುದು ತಿಳಿದುಬಂದಿದೆ. ಭಾರತದ ನಗರಗಳಲ್ಲಿ ಗಲಭೆಗಳಿಗೆ ಭುಗಿಲೆಬ್ಬಿಸಿದ ‘ಫೇಸ್‌ಬುಕ್ ಪೇಜ್’ನಲ್ಲಿ ಫೇಸ್‌ಬುಕ್ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಅದೇ ರೀತಿ ‘ಫೇಸಬುಕ್’ನಲ್ಲಿ ಇದುವರೆಗೆ ಅನೇಕ ಸಲ ಹಿಂದೂ ದೇವತೆಗಳು, ರಾಷ್ಟ್ರಪುರುಷರ ವಿಷಯದಲ್ಲಿ ಅಶ್ಲೀಲ ಮತ್ತು ಆಕ್ಷೇಪಾರ್ಹ ಪೋಸ್ಟ್ ಪ್ರಸಾರಿತವಾಗುತ್ತಿವೆ. ಇದರ ಬಗ್ಗೆ ಹಿಂದೂತ್ವವಾದಿ ಸಂಘಟನೆಗಳು ಅನೇಕ ಬಾರಿ ‘ಫೇಸ್‌ಬುಕ್’ ಇಂತಹ ಪೋಸ್ಟ್ ಅಥವಾ ಪೇಜ್ ನಿರ್ಬಂಧಿಸುವಂತೆ ವಿನಂತಿಸಿವೆ; ಆದರೆ ಅದರ ಬಗ್ಗೆ ‘ಫೇಸಬುಕ್’ ಎಂದೂ ಕ್ರಮಕೈಗೊಂಡಿಲ್ಲ, ಇದು ‘ಫೇಸಬುಕ್’ನ ಪಕ್ಷಪಾತ!

ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ ‘ಪುಟ’ವನ್ನೂ ಇದೇ ರೀತಿ 2012 ರಲ್ಲಿ ಯಾವುದೇ ರೀತಿಯ ಕಾರಣವನ್ನು ನೀಡದೇ ಫೇಸ್‌ಬುಕ್’ ಬಂದ್ ಮಾಡಿತ್ತು. ಇದರಿಂದ ‘ಫೇಸ್‌ಬುಕ್’ನ ಹಿಂದೂದ್ವೇಷ ಸ್ಪಷ್ಟವಾಗಿ ಕಾಣುತ್ತದೆ. ಶಾಸಕ ಟಿ. ರಾಜಾಸಿಂಹ ಇವರು ಜನಪ್ರತಿನಿಧಿಯಾಗಿದ್ದಾರೆ, ಅವರ ‘ಪೇಜ್’ ಬಂದ್ ಮಾಡಿದ್ದರಿಂದ ಜನಸಾಮಾನ್ಯರಿಗೆ ಅವರೊಂದಿಗೆ ನೇರ ಸಂಪರ್ಕ ಮಾಡಿ ಸಮಸ್ಯೆಗಳನ್ನು ಬಿಡಿಸುವಲ್ಲಿ ಅಡಚಣೆಯಾಗಲಿದೆ. ಆದ್ದರಿಂದ ಭಾರತ ಸರಕಾರವು ‘ಫೇಸ್‌ಬುಕ್’ನ ಈ ಹಿಂದೂವಿರೋಧಿ ಕೃತ್ಯಕ್ಕೆ ನಿರ್ಬಂಧ ಹೇರಬೇಕು, ಎಂದು ಕೇಂದ್ರ ಸರಕಾರದ ಬಳಿ ನಾವು ಆಗ್ರಹಿಸುತ್ತೇವೆ. ಶಾಸಕ ಟಿ. ರಾಜಾ ಸಿಂಹ ಇವರ ಫೇಸ್‌ಬುಕ್ ಪೇಜ್ ಬಂದ್ ಮಾಡುವುದೆಂದರೆ ಒಂದು ರೀತಿಯಲ್ಲಿ ಹಿಂದೂಜನರ ಧ್ವನಿಯನ್ನು ಅದುಮುವ ಕೆಲಸವನ್ನು ‘ಫೇಸ್‌ಬುಕ್’ ಮಾಡುತ್ತಿದೆ. ಭಾರತದಲ್ಲಿ ಕೋಟಿಗಟ್ಟಲೆ ರೂಪಾಯಿಯನ್ನು ಸಂಪಾಧಿಸುವ ಫೇಸ್‌ಬುಕ್ ಒಂದು ವೇಳೆ ಬಹುಸಂಖ್ಯಾತ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಲ್ಲಿ, ಹಿಂದೂಗಳೂ ‘ಫೇಸ್‌ಬುಕ್’ನ್ನು ಬಹಿಷ್ಕರಿಸುವರು, ಎಂಬುದು ‘ಫೇಸ್‌ಬುಕ್’ನವರು ಗಮನದಲ್ಲಿಡಬೇಕು.

Spread the love
  • Related Posts

    ಕಡಿರುದ್ಯಾವರ ಗ್ರಾಮದ ಕುಕ್ಕುದಡಿಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ– ಶಾಸಕ ಹರೀಶ್ ಪೂಂಜ

    ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಡಿರುದ್ಯಾವರ ಗ್ರಾಮದ ಕುಕ್ಕುದಡಿ ಪ್ರದೇಶದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ರಾಜ್ಯ ಸರ್ಕಾರವು ರೂ.1.00 ಕೋಟಿ ಅನುದಾನವನ್ನು ಮಂಜೂರು ಮಾಡಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.ಸ್ಥಳೀಯ ರೈತಾಪಿ ವರ್ಗದ ಬಹುಕಾಲದ ಬೇಡಿಕೆಗೆ…

    Spread the love

    ಬೆಳ್ತಂಗಡಿ :ನ್ಯೂಸ್ 18 ಕನ್ನಡ ಚಾನೆಲ್ ಅರ್ಪಿಸುವ ಈ ವರ್ಷದ ಕನ್ನಡಿಗ 2026 ಅವಾರ್ಡ್ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾವಯವ ಪ್ರಗತಿಪರ ಕೃಷಿಕರಾದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮ ಕಡಮ್ಮಾಜೆ ಫಾರ್ಮ್ಸ್ ದೇವಿಪ್ರಸಾದ್ ಕೆ. ಗೌಡ ರವರಿಗೆ ಪ್ರಶಸ್ತಿ

    ಬೆಳ್ತಂಗಡಿ :ನ್ಯೂಸ್ 18 ಕನ್ನಡ ಚಾನೆಲ್ ಅರ್ಪಿಸುವ ಈ ವರ್ಷದ ಕನ್ನಡಿಗ 2026 ಅವಾರ್ಡ್ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾವಯವ ಪ್ರಗತಿಪರ ಸಾವಯವ ಕೃಷಿಕರಾದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮ ಕಡಮ್ಮಾಜೆ ಫಾರ್ಮ್ಸ್ ನ ದಿ.ದಿನಕರ ಗೌಡ ದಂಪತಿಗಳ ಪುತ್ರ…

    Spread the love

    You Missed

    ಕಡಿರುದ್ಯಾವರ ಗ್ರಾಮದ ಕುಕ್ಕುದಡಿಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ– ಶಾಸಕ ಹರೀಶ್ ಪೂಂಜ

    • By admin
    • March 4, 2026
    • 13 views
    ಕಡಿರುದ್ಯಾವರ ಗ್ರಾಮದ ಕುಕ್ಕುದಡಿಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ– ಶಾಸಕ ಹರೀಶ್ ಪೂಂಜ

    ಬೆಳ್ತಂಗಡಿ :ನ್ಯೂಸ್ 18 ಕನ್ನಡ ಚಾನೆಲ್ ಅರ್ಪಿಸುವ ಈ ವರ್ಷದ ಕನ್ನಡಿಗ 2026 ಅವಾರ್ಡ್ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾವಯವ ಪ್ರಗತಿಪರ ಕೃಷಿಕರಾದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮ ಕಡಮ್ಮಾಜೆ ಫಾರ್ಮ್ಸ್ ದೇವಿಪ್ರಸಾದ್ ಕೆ. ಗೌಡ ರವರಿಗೆ ಪ್ರಶಸ್ತಿ

    • By admin
    • March 4, 2026
    • 21 views
    ಬೆಳ್ತಂಗಡಿ :ನ್ಯೂಸ್ 18 ಕನ್ನಡ ಚಾನೆಲ್ ಅರ್ಪಿಸುವ ಈ ವರ್ಷದ ಕನ್ನಡಿಗ 2026 ಅವಾರ್ಡ್ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾವಯವ ಪ್ರಗತಿಪರ ಕೃಷಿಕರಾದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮ ಕಡಮ್ಮಾಜೆ ಫಾರ್ಮ್ಸ್ ದೇವಿಪ್ರಸಾದ್ ಕೆ. ಗೌಡ ರವರಿಗೆ ಪ್ರಶಸ್ತಿ

    ಉಜಿರೆ ಶ್ರೀ ಜನಾರ್ದನ ಸ್ವಾಮಿಗೆ ಬ್ರಹ್ಮಕಲಶೋತ್ಸವದ ಸಂಭ್ರಮ ಉಜಿರೆಯಲ್ಲಿ ವೈಭವದ ಮೆರವಣಿಗೆಯಲ್ಲಿ ಸಾಗಿಬಂದ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಹಸಿರುವಾಣಿ

    • By admin
    • March 3, 2026
    • 67 views
    ಉಜಿರೆ ಶ್ರೀ ಜನಾರ್ದನ ಸ್ವಾಮಿಗೆ ಬ್ರಹ್ಮಕಲಶೋತ್ಸವದ ಸಂಭ್ರಮ ಉಜಿರೆಯಲ್ಲಿ ವೈಭವದ ಮೆರವಣಿಗೆಯಲ್ಲಿ ಸಾಗಿಬಂದ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಹಸಿರುವಾಣಿ

    ಇಸ್ರೇಲ್-ಅಮೆರಿಕ ದಾಳಿಗೆ ಪ್ರತಿಯಾಗಿ ಯುಎಇ, ಸೌದಿ ಮೇಲೆ ಇರಾನ್ ಕ್ಷಿಪಣಿ ದಾಳಿ ಜಾಗತಿಕ ವಿಮಾನಯಾನ ಸ್ಥಗಿತ:

    • By admin
    • February 28, 2026
    • 110 views
    ಇಸ್ರೇಲ್-ಅಮೆರಿಕ ದಾಳಿಗೆ ಪ್ರತಿಯಾಗಿ ಯುಎಇ, ಸೌದಿ ಮೇಲೆ ಇರಾನ್ ಕ್ಷಿಪಣಿ ದಾಳಿ ಜಾಗತಿಕ ವಿಮಾನಯಾನ ಸ್ಥಗಿತ:

    ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ- 2026ಕ್ಕೆ ಭಾಜನರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    • By admin
    • February 26, 2026
    • 69 views
    ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ- 2026ಕ್ಕೆ ಭಾಜನರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    ಉಜಿರೆಯಲ್ಲಿ ನಡೆಯಲಿದೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ “ವಿಜಯ ಗೋಪುರ” ಲೋಕಾರ್ಪಣೆ

    • By admin
    • February 23, 2026
    • 108 views
    ಉಜಿರೆಯಲ್ಲಿ ನಡೆಯಲಿದೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ “ವಿಜಯ ಗೋಪುರ” ಲೋಕಾರ್ಪಣೆ