ನೆಲಬಾಂಬು ಪತ್ತೆ ಮಾಡಿ ಚಿನ್ನದ ಪದಕ ಪಡೆದಿದ್ದ ಪ್ರಚಂಡ ಇಲಿ ನಿವೃತ್ತಿ; ಇದರ ಒಂದೊಂದು ಕಥೆಯೂ ರೋಚಕ!

ಕಾಂಬೋಡಿಯಾದಲ್ಲಿ ತನ್ನ ಐದು ವರ್ಷಗಳ ಸೇವಾ ಕಾಲದಲ್ಲಿ ಈ ಮೂಷಿಕವು 71 ನೆಲಬಾಂಬುಗಳನ್ನು ಹಾಗೂ 12ಕ್ಕೂ ಅಧಿಕ ಸ್ಫೋಟಗೊಳ್ಳದ ಭೂಸ್ಫೋಟಕಗಳನ್ನು ಮೂಸಿಕ ಕಂಡು ಹಿಡಿದಿತ್ತು.

ತನ್ನ ಅದ್ವಿತೀಯ ಸೇವೆಯ ಕಾರಣಕ್ಕೆ ಚಿನ್ನದ ಪದಕ ಪಡೆದು ವಿಶ್ವಾದ್ಯಂತ ಖ್ಯಾತವಾಗಿದ್ದ ಮಗಾವಾ ಎಂಬ ಇಲಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ತನ್ನ ಹೀರೋಯಿಸಂ ಕಾರಣಕ್ಕೆ ಅಲ್ಲ. ಬದಲಿಗೆ ತನ್ನ ಸುದೀರ್ಘ ವೃತ್ತಿ ಜೀವನದಿಂದ ನಿವೃತ್ತಿ ಪಡೆಯುತ್ತಿರುವ ಕಾರಣಕ್ಕೆ. ನೆಲಬಾಂಬು ಪತ್ತೆ ಮಾಡುವ ಪ್ರಾಣಿಗಳ ಪೈಕಿ ಅತ್ಯಂತ ಕುಶಾಗ್ರಮತಿ, ಚಾಣಾಕ್ಷ ಹಾಗೂ ಚುರುಕುತನಕ್ಕಾಗಿ ಕಳೆದ ಸೆಪ್ಟೆಂಬರ್ ನಲ್ಲಿ ಮಗಾವಾಗೆ ಪಿಡಿಎಸ್ಎ ಚಿನ್ನದ ಪದಕ ಒಲಿದು ಬಂದಿತ್ತು. ಈ ಪದಕವನ್ನು ಕರ್ತವ್ಯಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡುವ ಪ್ರಾಣಿಗಳ ಪಾಲಿನ ಅತ್ಯಂತ ಶ್ರೇಷ್ಠ ಪ್ರಶಸ್ತಿ ಎಂದೂ ಪರಿಗಣಿಸಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪ್ರಶಸ್ತಿಯ 77 ವರ್ಷದ ಇತಿಹಾಸದಲ್ಲಿ ಒಂದು ಇಲಿ ಮೊದಲ ಬಾರಿಗೆ ಈ ಪ್ರಶಸ್ತಿಗೆ ಭಾಜನವಾಗಿತ್ತು ಅಂದರೆ ಈ ಮೂಷಿಕದ ಅಗಾಧ ಪ್ರತಿಭೆಯನ್ನು ನಾವು ಅಂದಾಜಿಸಬಹುದು.

ಈ ಇಲಿ ಮಾಡಿದ್ದ ಸಾಧನೆ ಸಣ್ಣದೇನಲ್ಲ:

ಮೂರ್ತಿ ಚಿಕ್ಕದಾದರೂ ಮಗಾವಾ ಇಲಿಯ ಕೀರ್ತಿ ಮಾತ್ರ ದೊಡ್ಡದು. ಇದರ ತೂಕ 1.2 ಕೆಜಿ ಮತ್ತು ಉದ್ದ 70 ಸೆಂಟಿ ಮೀಟರ್ಗಳು. ಸಾಮಾನ್ಯ ಇಲಿಗಳಿಗಿಂತಲೂ ಇದರ ಗಾತ್ರ ದೊಡ್ಡದಾದರೂ, ನೆಲಬಾಂಬು ಇತ್ಯಾದಿ ಸ್ಫೋಟಕದ ಮೇಲೆ ಓಡಾಡಿದರೂ ಅದು ಸ್ಫೋಟಗೊಳ್ಳದು ಎನ್ನುವಷ್ಟು ಸಣ್ಣ ಹಾಗೂ ಹಗುರವಾಗಿರುವುದು ಇದರ ವಿಶೇಷತೆ.

ಅದೇ ಕಾರಣಕ್ಕೆ ಮಗಾವಾನಂಥ ಹಲವಾರು ಇಲಿಗಳಿಗೆ ಸ್ಫೋಟಕಗಳಲ್ಲಿರುವ ರಾಸಾಯನಿಕಗಳನ್ನು ಪರಿಚಯಿಸುವ ತರಬೇತಿ ನೀಡಲಾಗುತ್ತದೆ. ಹೀಗಾಗಿ ಅವು ಭೂಮಿಯೊಳಗಿನ ಗುಜರಿ ಲೋಹಗಳನ್ನು ನಿರ್ಲಕ್ಷಿಸಿ ನೆಲಬಾಂಬುಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ನೆಲಬಾಂಬು ಇತ್ಯಾದಿ ಭೂಮಿಯೊಳಗೆ ಅಡಗಿಸಿಡಲಾದ ಸ್ಫೋಟಕಗಳನ್ನು ಪತ್ತೆ ಹಚ್ಚಿದ ಕೂಡಲೇ ಅವು ಆ ಜಾಗದಲ್ಲಿ ನಿಂತು ತಲೆ ಕೆರೆದುಕೊಂಡು ತಮ್ಮೊಂದಿಗೆ ಇರುವ ಮನುಷ್ಯರಿಗೆ ಸಂಕೇತ ನೀಡುತ್ತದೆ. ಮುಂದಿನ ಕೆಲಸವನ್ನು ಮನುಷ್ಯರು ನಿರ್ವಹಿಸುತ್ತಾರೆ.

ಅಭೂತಪೂರ್ವ ಸಾಮರ್ಥ್ಯ, ಪ್ರತಿಭೆಯ ಮೂಷಿಕ!

ಕಾಂಬೋಡಿಯಾದಲ್ಲಿ ತನ್ನ ಐದು ವರ್ಷಗಳ ಸೇವಾ ಕಾಲದಲ್ಲಿ ಈ ಮೂಷಿಕವು 71 ನೆಲಬಾಂಬುಗಳನ್ನು ಹಾಗೂ 12ಕ್ಕೂ ಅಧಿಕ ಸ್ಫೋಟಗೊಳ್ಳದ ಭೂಸ್ಫೋಟಕಗಳನ್ನು ಮೂಸಿಕ ಕಂಡು ಹಿಡಿದಿತ್ತು. ತನ್ನ ಪತ್ತೆದಾರಿಕೆ ಶಕ್ತಿಯಿಂದಾಗಿ ಅತ್ಯಮೂಲ್ಯ ಪ್ರಾಣಿಯಾಗಿ ಕಾಂಬೋಡಿಯಾದಲ್ಲಿ ಮನೆಮಾತಾಗಿರುವ ಈ ಇಲಿಯ ಚುರುಕುತನ, ಸಾಮರ್ಥ್ಯ ನಿಬ್ಬೆರಗಾಗಿಸುತ್ತದೆ.

ಒಂದು ಟೆನಿಸ್ ಕೋರ್ಟ್ನಷ್ಟು ವಿಶಾಲವಾದ ಜಾಗದಲ್ಲಿ ನೆಲದಡಿ ಯಾವುದಾದರೂ ಸ್ಫೋಟಕ ಹುದುಗಿಸಲಾಗಿದೆಯೇ ಎಂದು ಪತ್ತೆದಾರಿಕೆ ಮಾಡುವ ಕೆಲಸವನ್ನು ಮಗಾವಾಗೆ ನೀಡಿದರೆ, ಕೇವಲ 20 ನಿಮಿಷಗಳಲ್ಲಿ ಆ ಕೆಲಸವನ್ನು ಮಾಡುವ ಸಾಮರ್ಥ್ಯ ಈ ಗಂಡು ಇಲಿಗೆ ಇದೆ. ಇದೇ ಕೆಲಸವನ್ನು ಲೋಹ ಶೋಧಕ ಯಂತ್ರ ಕೊಟ್ಟು ಮನುಷ್ಯನ ಕೈಯಲ್ಲಿ ಈ ಕೆಲಸ ಮಾಡಿಸಿದರೆ ಇವಿಷ್ಟು ಜಾಗದ ಶೋಧಕ್ಕಾಗಿ ಒಂದರಿಂದ ನಾಲ್ಕು ದಿನಗಳು ಬೇಕಾಗುತ್ತದೆಯಂತೆ.

ಪ್ರಚಂಡ ಪ್ರತಿಭೆ ಇದ್ದರೂ ನಿವೃತ್ತಿಯ ಮಾತೇಕೆ..?

ಮಗಾವಾ ಎಂಬುದು ಮೂತಿ ಬಳಿ ವಿಶಾಲಕಾಯದ ಚೀಲವಿರುವ ಆಫ್ರಿಕಾದ ಜಾತಿಗೆ ಸೇರಿದ ಇಲಿಯಾಗಿದ್ದು, ಇದಕ್ಕೆ ತಾಂಜೇನಿಯಾದಲ್ಲಿರುವ ಬೆಲ್ಜಿಯಂ ನೋಂದಾಯಿತ ದತ್ತಿಸಂಸ್ಥೆ ಅಪೊಪೊ ತರಬೇತಿ ನೀಡಿದೆ. ಈ ಸಂಸ್ಥೆ ಹೀರೋ ರ‍್ಯಾಟ್ಸ್ ಎಂದೇ ಖ್ಯಾತವಾಗಿರುವ ಇಲಿಗಳಿಗೆ 1990ರಿಂದಲೂ ನೆಲಬಾಂಬು ಪತ್ತೆಗೆ ತರಬೇತಿ ನೀಡುತ್ತಿದೆ. ತರಬೇತಿ ಪೂರ್ಣವಾದ ನಂತರ ಪ್ರಮಾಣ ಪತ್ರವನ್ನೂ ನೀಡುತ್ತದೆ.

ಹೀಗೆ ತರಬೇತಿ ಪಡೆದ ಮಗಾವಾ ಇಲಿಗೆ ಈಗ ಏಳು ವರ್ಷ. ಈ ಗಂಡು ಇಲಿಯನ್ನು ನಿರ್ವಹಿಸುವ ಮಲೆನ್ ಅವರ ಪ್ರಕಾರ, ಮಗಾವಾಗೆ ಈಗ ವಯಸ್ಸಾಗುತ್ತಿದೆ. ವಯೋಸಹಜವಾಗಿ ಅದೀಗ ಮೊದಲಿನ ಥರ ಚುರುಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಗಾವಾನ ಅಗತ್ಯಗಳನ್ನು ಗೌರವಿಸುವ ಹಿನ್ನೆಲೆಯಲ್ಲಿ ಅದರ ಸೇವಾ ವೃತ್ತಿಯಿಂದ ಬಿಡುಗಡೆ ನೀಡಲಾಗುತ್ತಿದೆ.

“ಮಗಾವಾನ ನಿರ್ವಹಣಾ ಸಾಮರ್ಥ್ಯ ಅಸಾಧಾರಣವಾದದ್ದು. ಆತನ ಜತೆ ಕೆಲಸ ಮಾಡಲು ನನಗೆ ಹೆಮ್ಮೆಯಾಗುತ್ತಿತ್ತು. ಆತ ಪುಟ್ಟ ಕಾಯವನ್ನು ಹೊಂದಿದ್ದರೂ ಹಲವು ಪ್ರಾಣಗಳನ್ನು ಉಳಿಸುವ ಕೆಲಸ ಮಾಡಿದ್ದಾನೆ. ನೆಲವನ್ನು ನೆಲಬಾಂಬ್ ಮುಕ್ತಗೊಳಿಸಿ, ಅಗತ್ಯವಿರುವ ಜನರಿಗೆ ಒದಗಿಸುವ ಪ್ರಕ್ರಿಯೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಧ್ಯವಾಗುವಂತೆ ಮಾಡಿದ್ದಾನೆ.” ಎಂದು ಮಲೆನ್ ಅವರು ಮಗಾವಾನ ಗುಣಗಾನ ಮಾಡುತ್ತಾರೆ.

ಇನ್ನು ಮಗಾವಾನ ಜಾಗಕ್ಕೆ ಹೊಸ ಪೀಳಿಗೆಯ ಹೀರೋರ‍್ಯಾಟ್‍ಗಳು ಬರಲಿವೆ. ಅವು ಮಗಾವಾ ಉಳಿಸಿರುವ ಕೆಲಸವನ್ನು ಮುಂದುವರಿಸಲಿವೆ. ಜಗತ್ತು ನಡೆಯುವುದು ಹೀಗೇ ಅಲ್ಲವೇ?

Spread the love
  • Related Posts

    ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ ಹಬ್ಬದ ವೈಶಿಷ್ಟ್ಯ ಆಚರಣೆಗಳ ಮಹತ್ವ

    ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ “ಹಬ್ಬಗಳು”. ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ…

    Spread the love

    ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ ಆಯ್ಕೆ

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಜ.5 ರಂದು ಸಂಘದ ಕಚೇರಿಯಲ್ಲಿ ನಡೆದು 2024 ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಉದಯವಾಣಿ ವರದಿಗಾರ ಚೈತ್ರೇಶ್ ಇಳಂತಿಲ, ಉಪಾಧ್ಯಕ್ಷರಾಗಿ ವಾರ್ತಾಭಾರತಿ ವರದಿಗಾರ ಶಿಬಿ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಪ್ರಜಾವಾಣಿ ವರದಿಗಾರ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 341 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 302 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 201 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 301 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 159 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 90 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ