ಫೇಸ್‌ಬುಕ್ ಪಾಸ್ ವರ್ಡ್ ಗೆ ಕನ್ನ ಗೂಗಲ್ ಪ್ಲೇಸ್ಟೋರ್ ನಿಂದ 25 ಆ್ಯಪ್ಗಳ ಔಟ್

ನ್ಯೂಯಾರ್ಕ್: ಫೇಸ್ ಬುಕ್ ಬಳಕೆದಾರರ ಪಾಸ್ ವರ್ಡ್ ಮತ್ತು ಇತರ ಮಾಹಿತಿಗಳನ್ನು ಕೆಲವು ಆಯಪ್ ಗಳು ಹ್ಯಾಕ್ ಮಾಡಿವೆ ಎಂದು ಫ್ರೆಂಚ್ ಸೈಬರ್-ಸೆಕ್ಯುರಿಟಿ ಸಂಸ್ಥೆ ಮಾಹಿತಿ ನೀಡಿದ ಬೆನ್ನಲ್ಲೇ, ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 25 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ ಎಂದು ವರದಿಯಾಗಿದೆ.

ಆದರೇ ರಿಮೂವ್ ಮಾಡುವ ಮೊದಲು ಈ 25 ಅಪ್ಲಿಕೇಶನ್‌ಗಳನ್ನು ಒಟ್ಟು 2.34 ಮಿಲಿಯನ್ ಬಾರಿ ಜನರು ಡೌನ್‌ಲೋಡ್ ಮಾಡಿದ್ದಾರೆ ಎಂದು ಸಂಸ್ಥೆಯು ಉಲ್ಲೇಖಿಸಿದೆ. ಮಾತ್ರವಲ್ಲದೆ ಈ ಆಯಪ್ ಗಳನ್ನು ಒಂದೇ ಗುಂಪು ಸೇರಿ ರಚಿಸಿದೆ ಎಂಬ ಆಘಾತಕಾರಿ ಮಾಹಿತಿಯು ಹೊರಬಿದ್ದಿದೆ.

ಈ ಆಯಪ್ ಗಳ ಫೀಚರ್ ಮತ್ತು ವೈಶಿಷ್ಟ್ಯಗಳು ವಿಭಿನ್ನವಾಗಿ ಕಂಡರೂ, ಇವುಗಳ ಉದ್ದೇಶ ಒಂದೇ ಆಗಿದ್ದವು. ಇದರಲ್ಲಿ ಕೆಲವು ಫೋಟೋ ಎಡಿಟರ್‌, ವಿಡಿಯೋ ಎಡಿಟರ್ ಅಪ್ಲಿಕೇಶನ್‌ಗಳು, ವಾಲ್‌ ಪೇಪರ್ ಅಪ್ಲಿಕೇಶನ್‌ಗಳು, ಫ್ಲ್ಯಾಷ್‌ಲೈಟ್ ಅಪ್ಲಿಕೇಶನ್‌ಗಳು, ಫೈಲ್ ಮ್ಯಾನೇಜರ್‌ಗಳು ಮತ್ತು ಮೊಬೈಲ್ ಗೇಮ್‌ಗಳು ಕೂಡ ಸೇರಿವೆ.

ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿರುವ ಅಪ್ಲಿಕೇಶನ್ ಗಳ ಪಟ್ಟಿ:

ಸೂಪರ್ ವಾಲ್ ಪೇಪರ್ ಫ್ಲ್ಯಾಶ್ ಲೈಟ್, ವಾಲ್ ಪೇಪರ್ ಲೆವೆಲ್, ಕಾನ್ ಟೂರ್ ಲೆವೆಲ್ ವಾಲ್ ಪೇಪರ್, ಐ ಪ್ಲೇಯರ್ ಮತ್ತು ಐ ವಾಲ್ ಪೇಪರ್, ವಿಡಿಯೋ ಮೇಕರ್, ಕಲರ್ ವಾಲ್ ಪೇಪರ್ಸ್, ಪೆಡೋಮೀಟರ್. ಪವರ್ ಫುಲ್ ಫ್ಲ್ಯಾಶ್ ಲೈಟ್, ಸೂಪರ್ ಬ್ರೈಟ್ ಫ್ಲ್ಯಾಶ್ ಲೈಟ್, ಸೂಪರ್ ಫ್ಲ್ಯಾಶ್ ಲೈಟ್, ಸೋಲಿಟೈರ್, ಅಕ್ಯುರೇಟ್ ಸ್ಕ್ಯಾನಿಂಗ್ ಆಫ್ ಕ್ಯೂ ಆರ್ ಕೋಡ್, ಕ್ಲಾಸಿಕ್ ಕಾರ್ಡ್ ಗೇಮ್. ಜಂಕ್ ಫೈಲ್ ಕ್ಲೀನಿಂಗ್, ಸಿಂಥೇಟಿಕ್ ಝಡ್, ಫೈಲ್ ಮೆನೇಜರ್, ಕಾಂಪೋಸೈಟ್ ಝಡ್, ಸ್ಕ್ರೀನ್ ಶಾಟ್ ಕ್ಯಾಪ್ಚರ್, ಡೈಲಿ ಹೋರೋಸ್ಕೋಪ್ ವಾಲ್ ಪೇಪರ್ಸ್, ವುಕ್ಸಿಯಾ ರೀಡರ್, ಪ್ಲಸ್ ವೆದರ್, ಎನಿಮ್ ಲೈವ್ ವಾಲ್ ಪೇಪರ್, ಐ ಹೆಲ್ತ್ ಸ್ಟೆಪ್ ಕೌಂಟರ್, ಕಾಮ್ ಟೈಪ್ ಫಿಕ್ಷನ್,ಪಾಡೆನಾಟೆಫ್

ಇವುಗಳಲ್ಲಿ ಸೂಪರ್ ವಾಲ್ ಪೇಪರ್ಸ್ ಫ್ಲ್ಯಾಶ್ ಲೈಟ್ ಮತ್ತು ಪಾಡೆನಾಟೆಫ್ ಆಯಪ್ ಗಳು 5,00,000 ಡೌನ್ ಲೋಡ್ ಕಂಡಿವೆ. ಇನ್ನು ಕೆಲವು ಅಪ್ಲಿಕೇಶನ್ ಗಳು 1,00,000 ಬಾರಿ ಡೌನ್ ಲೋಡ್ ಆಗಿವೆ.

ಈ ಅಪ್ಲಿಕೇಶನ್‌ಗಳು ದುರುದ್ದೇಶಪೂರಿತ ಕೋಡ್ ಅನ್ನು ಒಳಗೊಂಡಿದ್ದು, ಈಗಾಗಲೇ ಬಳಸುತ್ತಿರುವ ಫೇಸ್‌ಬುಕ್ ಅಥವಾ ಇತರ ಆಯಪ್ ಗಳ ಬ್ರೌಸರ್ ವಿಂಡೋವನ್ನು ನಕಲಿ ಮಾಡಿ ಲೋಡ್ ಮಾಡುತ್ತದೆ. ಆದರೇ ಬಳಕೆದಾರರು ಇದನ್ನು ಅಸಲಿ ಎಂದೇ ತಿಳಿದು ಕಾರ್ಯನಿರ್ವಹಿಸುತ್ತಾರೆ. ಈ ಎಲ್ಲಾ ಅಪ್ಲಿಕೇಶನ್‌ ಗಳ ಮೇಲೆ ಮೇ ತಿಂಗಳಲ್ಲಿ ಗೂಗಲ್‌ ಗೆ ರಿಪೋರ್ಟ್ ಮಾಡಲಾಗಿತ್ತು. ಇದೀಗ ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ಈ ಆಯಪ್ ಗಳನ್ನು ಕಿತ್ತೆಸೆದಿದೆ.

Spread the love
  • Related Posts

    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸರ್ಕಾರವು ರಾಜ್ಯದ ವಿವಿಧ ಭಾಗಗಳಲ್ಲಿ ನೂತನ 12 ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಸಾರ್ವಜನಿಕರ ಭದ್ರತೆ, ಅಪರಾಧ ನಿಯಂತ್ರಣ ಹಾಗೂ ಪೊಲೀಸ್ ಸೇವೆಗಳನ್ನು ಜನರಿಗೆ ಇನ್ನಷ್ಟು ಸಮೀಪಕ್ಕೆ ತಲುಪಿಸಲು ಈ ಕ್ರಮ…

    Spread the love

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಮುಂಬೈ: ಐಸಿಸಿ ಟಿ–20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸಮಗ್ರ ಆಟದ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ…

    Spread the love

    You Missed

    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    • By admin
    • March 6, 2026
    • 8 views
    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    • By admin
    • March 5, 2026
    • 14 views
    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    • By admin
    • March 5, 2026
    • 39 views
    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    • By admin
    • March 5, 2026
    • 52 views
    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ, ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    • By admin
    • March 5, 2026
    • 23 views
    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ,  ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್

    • By admin
    • March 5, 2026
    • 17 views
    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್