ಜುಲೈ 21-2020 ಮಂಗಳವಾರ : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಪಾಡ್ಯ ತಿಥಿ,
ಮಂಗಳವಾರ, ಪುಷ್ಯ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:41 ರಿಂದ 5:17
ಗುಳಿಕಕಾಲ: ಮಧ್ಯಾಹ್ನ 12:30 ರಿಂದ 2:05
ಯಮಗಂಡಕಾಲ: ಬೆಳಗ್ಗೆ 9:18 ರಿಂದ 10:54

READ ALSO

ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA

ಮೇಷ

ಉದ್ಯೋಗ ವ್ಯವಹಾರಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ಹೊಸ ವಸ್ತುಗಳ ಖರೀದಿಯನ್ನು ಮಾಡುವಾಗ ಎಚ್ಚರಿಕೆ ಅಗತ್ಯ. ವೃತ್ತಿಯಲ್ಲಿ ಸ್ಥಾನ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ. ಕೆಲಸದ ನಿಮಿತ್ತ ಅಲೆದಾಟ ಮಾಡಬೇಕಾದೀತು.

ವೃಷಭ

ಪ್ರಯಾಣದಲ್ಲಿ ಸಂಕಟ ತಲೆದೋರಬಹುದು. ಭೂ ವ್ಯವಹಾರದಿಂದ ಧನ ಲಾಭವಾಗುವ ಸಾಧ್ಯತೆ ಕಂಡುಬರುತ್ತಿದೆ. ಉದರ ಸಂಬಂಧಿ ವ್ಯಾಧಿಗಳು ತಲೆದೋರಬಹುದು. ಅನಿರೀಕ್ಷಿತ ವ್ಯಕ್ತಿಗಳ ಆಗಮನದಿಂದ ಸಂತಸ ಮೂಡಲಿದೆ.

ಮಿಥುನ

ಹೂಡಿಕೆಯಿಂದ ಧನಲಾಭವಾಗಲಿದೆ. ಮನೆಯಲ್ಲಿ ಸಂತೋಷ ಸಂಭ್ರಮದ ಕಾರ್ಯಕ್ರಮಗಳು ಜರುಗಲಿವೆ. ಅಪರಿಚಿತ ಸ್ತಿçÃಯೊಂದಿಗೆ ಜಗಳ ಉಂಟಾಗುವ ಸಾಧ್ಯತೆ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ಅವಶ್ಯಕವಾಗಿದೆ.

ಕಟಕ

ಹಿರಿಯ ಅಧಿಕಾರಿಗಳಿಂದ ಕಿರಿ ಕಿರಿ ಅನುಭವಿಸಬೇಕಾದೀತು. ಲೋಕೋಪಯೋಗಿ ಇಲಾಖಾ ನೌಕರರು ವೃತ್ತಿಯಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ. ಕೈಗಾರಕೋದ್ಯಮಿಗಳಿಗೆ ಪ್ರಶಂಸೆಯ ಮಾತುಗಳು ಕೇಳಿಬರಲಿವೆ. ಸಾಹಿತಿಗಳಿಗೆ ಶುಭದ ದಿನ

ಸಿಂಹ

ಗೃಹ ನಿರ್ಮಾಣ, ಬಾವಿ ನಿರ್ಮಾಣದಂತಹ ಕೆಲಸಗಳಿಗೆ ಚಾಲನೆ ನೀಡುವ ಸಾಧ್ಯತೆಯೊಂದಿಗೆ ಯಶಸ್ಸನ್ನು ಸಾಧಿಸುವಿರಿ. ವ್ಯವಹಾರದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಆರ್ಥಿಕ ಅನುಕೂಲತೆ ಕೂಡಿಬರಲಿದೆ. ಹತ್ತಿ ಬಟ್ಟೆ ವ್ಯಾಪಾರದಲ್ಲಿ ವ್ಯತ್ಯಯದ ಸಾಧ್ಯತೆ.

ಕನ್ಯಾ

ಸಾಮಾಜಿಕ ಗೌರವಕ್ಕೆ ಪಾತ್ರರಾಗಲಿದ್ದೀರಿ. ಕೋರ್ಟ್ ವ್ಯವಹಾರಗಳಲ್ಲಿ ಜಯವು ನಿಮ್ಮ ಪಾಲಿಗೆ ಒದಗಿ ಬರಲಿದೆ. ಕುಟುಂಬದ ಸದಸ್ಯರೊಂದಿಗೆ ವಿನಾ ನಿಷ್ಟೂರದ ಮಾತುಗಳನ್ನು ಆಡದಿರುವುದು ಉತ್ತಮ. ಮೂತ್ರ ಸಂಬAಧಿ ರೋಗಗಳು ತಲೆದೋರುವ ಸಾಧ್ಯತೆ.

ತುಲಾ

ವಿಪರೀತ ಕೆಲಸದಿಂದಾಗಿ ದೇಹಾಲಸ್ಯ ಉಂಟಾದೀತು. ಮಾನಸಿಕ ಒತ್ತಡ, ಮಾತೃವರ್ಗದವರಿಗೆ ಆರೋಗ್ಯದಲ್ಲಿ ವ್ಯತ್ಯಯದ ಸಾಧ್ಯತೆ ಕಂಡುಬರುತ್ತಿದೆ. ಮಿತ್ರರ ಸಹಾನುಭೂತಿಯೊಂದಿಗೆ ಆಪತ್ಕಾಲದ ಸಹಾಯವೂ ದೊರಕಲಿದೆ. ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಪ್ರಾಪ್ತಿಯಾಗಲಿದೆ.

ವೃಶ್ಚಿಕ

ಯೋಧರು, ಆರಕ್ಷಕ ಇಲಾಖೆಯಲ್ಲಿ ಕೆಲಸ ಮಾಡುವವರಿಗೂ ಯಶಸ್ಸಿನೊಂದಿಗೆ ಭಡ್ತಿಯ ಅವಕಾಶಗಳು ಕಂಡುಬರುತ್ತಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಸಾಧನೆಯ ಗರಿ ಮುಡಿಗೇರಲಿದೆ. ರಾಜಕಾರಣಿಗಳಿಗೆ ವಿದೇಶ ಯಾತ್ರೆಯ ಸಂಭವ ಕಂಡುಬರುತ್ತಿದೆ.

ಧನು

ವ್ಯವಹಾರದಲ್ಲಿ ವಿಶೇಷ ಧನಲಾಭವನ್ನು ಕಾಣುವಿರಿ. ಶುಭ ವಾರ್ತೆಯೊಂದಿಗೆ ಗೌರವ ಸನ್ಮಾನಗಳು ನಿಮ್ಮನ್ನು ಅರಸಿ ಬರಲಿವೆ. ಮೇಲಾಧಿಕಾರಿಗಳ ನೆರವಿನಿಂದಾಗಿ ವ್ಯವಹಾರ ಸುಗಮವಾಗಲಿದೆ. ಶೃಂಗಾರ ಸಾಧನಗಳ ವ್ಯವಹಾರದಿಂದ ವಿಶೇಷ ಲಾಭವನ್ನು ಪಡೆಯಲಿದ್ದೀರಿ.

ಮಕರ

ಶೇರು ವ್ಯವಹಾರದಿಂದಾಗಿ ಧನ ಲಾಭದ ಲಕ್ಷಣಗಳು ತೋರುತ್ತಿದೆ. ಅನಾವಶ್ಯಕ ಓಡಾಟ ಮಾಡಬೇಕಾದೀತು. ಕುಟುಂಬ ಸದಸ್ಯರೊಂದಿಗೆ ತಾಳ್ಮೆಯ ಅವಶ್ಯಕತೆ ಕಂಡುಬರುತ್ತಿದೆ. ವ್ಯಕ್ತಿಯೊಬ್ಬರ ಸಹಕಾರದಿಂದಾಗಿ ಕೆಲಸ ಕರ‍್ಯಗಳಲ್ಲಿ ಸಾಫಲ್ಯತೆ ಕಾಣಲಿದ್ದೀರಿ.

ಕುಂಭ

ಅನವಶ್ಯಕ ವಿಚಾರದಿಂದಾಗಿ ಮನೆಯಲ್ಲಿ ಮನಸ್ತಾಪ ಉಂಟಾಗುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ವಹಿಸುವುದು ಒಳ್ಳೆಯದು. ಕೋರ್ಟ್, ಕಛೇರಿಗಳಲ್ಲಿನ ವಿವಾದಗಳು ಪರಿಹಾರವಾಗಿ ಯಶಸ್ಸನ್ನು ಸಾಧಿಸಲಿದ್ದೀರಿ.

ಮೀನ

ಹಣಕಾಸಿನ ಅನುಕೂಲತೆಗಳು ಕೂಡಿಬರುವುದಲ್ಲದೆ ಹೊಸ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ. ಅಧ್ಯನ ನಿಮಿತ್ತ ದೂರದ ಊರುಗಳಿಗೆ ಪ್ರವಾಸ ಮಾಡಬೇಕಾದೀತು. ಮಂಗಳ ಕಾರ್ಯ ನಿಮಿತ್ತ ಓಡಾಟ ಮಾಡಲಿದ್ದೀರಿ.