ಪಿಎಫ್​​ ಖಾತೆ​​ಯಿಂದ ಅನಗತ್ಯವಾಗಿ ಹಣ ತೆಗೆದು ಕೈ ಸುಟ್ಟುಕೊಳ್ಳಬೇಡಿ; 1 ಲಕ್ಷ ರೂ.ವಿತ್​ಡ್ರಾ ಮಾಡಿದರೆ 11 ಲಕ್ಷ ರೂ. ನಷ್ಟ ಗ್ಯಾರಂಟಿ !

ತಿಂಗಳ ವೇತನದಿಂದ ಭವಿಷ್ಯ ನಿಧಿಗಾಗಿ (PF)ಹಣ ಕಡಿತಗೊಳ್ಳುತ್ತಿದ್ದರೆ ಅದನ್ನು ಸುಮ್ಮನೆ ವಿತ್​ ಡ್ರಾ ಮಾಡಬಾರದು. ತೀರ ಅಗತ್ಯವಿದ್ದರೆ ಮಾತ್ರ ಪಿಎಫ್​ ಅಕೌಂಟ್​​ನಿಂದ ಹಣ ತೆಗೆಯಬೇಕು. ಆದರೆ ಅದೆಷ್ಟೋ ಜನರು, ಸುಮ್ಮನೆ ಹಣವನ್ನು ತೆಗೆದು ಖರ್ಚು ಮಾಡಿಕೊಳ್ಳುತ್ತಾರೆ. ಇದು ಒಳ್ಳೆಯದಲ್ಲ. ಪಿಎಫ್​ ನಿಮ್ಮ ಆಪತ್ಕಾಲಕ್ಕಾಗುವ ಉಳಿತಾಯದ ಹಣ ಆಗಿರುತ್ತದೆ. ಪ್ರತಿ ತಿಂಗಳೂ ಆ ಖಾತೆಯಲ್ಲಿ ಹೆಚ್ಚೆಚ್ಚು ಹಣ ಸಂಗ್ರಹವಾಗುತ್ತದೆ. ಹಾಗೇ ನಿಮ್ಮ ಪಿಎಫ್ ಠೇವಣಿ ಹಣಕ್ಕೆ ಒಳ್ಳೆಯ ಬಡ್ಡಿಯೂ ಸಿಗುತ್ತದೆ.

ಪಿಎಫ್​ ಹಣವನ್ನು ಅನಗತ್ಯವಾಗಿ ತೆಗೆಯಬಾರದು. ತೀರ ಅನಿವಾರ್ಯ ಸಂದರ್ಭವಿದ್ದರೆ ಮಾತ್ರ ವಿತ್​ ಡ್ರಾ ಮಾಡಿ, ಅದಿಲ್ಲದಿದ್ದರೆ ನಿಮ್ಮ ನಿವೃತ್ತಿಯವರೆಗೂ ಉಳಿಸಿಕೊಳ್ಳುವುದು ಒಳಿತು.

ನಿವೃತ್ತಿಗೆ ಮೊದಲೇ ಪಿಎಫ್ ಹಣ ತೆಗೆದರೆ ಖಂಡಿತ ನಿಮಗೆ ದೊಡ್ಡಪ್ರಮಾಣದಲ್ಲಿ ನಷ್ಟವಾಗುತ್ತದೆ. ಉದಾಹರಣೆಗೆ, ನೀವು ನಿವೃತ್ತಿಗೂ ಮೊದಲು 1 ಲಕ್ಷ ರೂಪಾಯಿ ವಿತ್​ ಡ್ರಾ ಮಾಡಿದಿರಿ ಎಂದಾದರೆ, ನಿಮಗೆ 11 ಲಕ್ಷ ರೂಪಾಯಿ ನಷ್ಟ ಆಗುತ್ತದೆ. ಅರೆ ! ಇದು ಹೇಗೆ ಸಾಧ್ಯ? 1 ಲಕ್ಷ ರೂ. ವಿತ್​ಡ್ರಾ ಮಾಡಿದರೆ 11 ಲಕ್ಷ ರೂ. ನಷ್ಟ ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಇಲ್ಲಿದೆ ನೋಡಿ ಉತ್ತರ..

ನೀವು ನಿವೃತ್ತರಾಗಲು ಇನ್ನೂ 30ವರ್ಷವಿದೆ ಎಂದಿಟ್ಟುಕೊಳ್ಳೋಣ. ಈಗ ನೀವೇನಾದರೂ 1 ಲಕ್ಷ ರೂ.ವಿತ್​ ಡ್ರಾ ಮಾಡಿದರೆ ನೀವು 11.55 ಲಕ್ಷ ರೂ.ಕಳೆದುಕೊಂಡಂತೆ ಎನ್ನುತ್ತಾರೆ ನಿವೃತ್ತ ಇಪಿಎಫ್​ಒ ನಿವೃತ್ತ ಸಹಾಯಕ ಆಯುಕ್ತ ಎ.ಕೆ. ಶುಕ್ಲಾ. ಒಮ್ಮೆ ಈ ಒಂದು ಲಕ್ಷ ರೂಪಾಯಿ ನಿಮ್ಮ ಪಿಎಫ್​ ಅಕೌಂಟ್​​ನಲ್ಲೇ ಇದ್ದರೆ ಅದಕ್ಕೆ ಬಡ್ಡಿ ಸೇರಿ, 30 ವರ್ಷ, ಅಂದರೆ ನಿಮ್ಮ ನಿವೃತ್ತಿ ಹೊತ್ತಿಗೆ 11.55 ಲಕ್ಷ ರೂ.ಆಗಿರುತ್ತದೆ. ಸದ್ಯ ಪಿಎಫ್​ ಹಣಕ್ಕೆ ಶೇ.8.5ರಷ್ಟು ಬಡ್ಡಿದರ ಇದೆ. ಉಳಿದೆಲ್ಲ ಸಣ್ಣ ಉಳಿತಾಯ ಯೋಜನೆಗಳಲ್ಲಿ, ಪಿಎಫ್​ಗೆ ಇರುವಷ್ಟು ಬಡ್ಡಿದರದ ಪ್ರಮಾಣ ಇನ್ಯಾವುದಕ್ಕೂ ಇಲ್ಲ. ಹೀಗಿರುವಾಗ ಪಿಎಫ್​ನಲ್ಲಿ ನೀವು ಹೆಚ್ಚೆಚ್ಚು ಹಣ ಸಂಗ್ರಹಿಸಿದಂತೆ ಸಹಜವಾಗಿ ಅದರ ಮೊತ್ತವೂ ಜಾಸ್ತಿಯಾಗುತ್ತ ಹೋಗುತ್ತದೆ.

ನಿವೃತ್ತಿಗೆ 20ವರ್ಷವಿದ್ದಾಗ 50 ಸಾವಿರ ತೆಗೆದರೆ ಏನಾಗುತ್ತದೆ? ನಿವೃತ್ತಿಗೆ ಮೊದಲು ಎಷ್ಟೇ ಹಣ ತೆಗೆದರೂ ದೊಡ್ಡ ಪ್ರಮಾಣದ ನಷ್ಟ ಆಗುವುದರಲ್ಲಿ ಸಂದೇಹವಿಲ್ಲ. ಹಾಗೇ, ನಿವೃತ್ತಿಗೆ 20 ವರ್ಷ ಬಾಕಿ ಇದ್ದಾಗ ಒಮ್ಮೆ ನಿಮ್ಮ ಪಿಎಫ್​ ಅಕೌಂಟ್​ನಿಂದ 50 ಸಾವಿರ ರೂ. ವಿತ್​ಡ್ರಾ ಮಾಡಿದಿರಿ ಎಂದಾದರೆ ಏನಿಲ್ಲವೆಂದರೂ 2 ಲಕ್ಷದ 5 ಸಾವಿರ ರೂ.ನಷ್ಟ ಅನುಭವಿಸುತ್ತೀರಿ. ಹಾಗೇ 1 ಲಕ್ಷ ರೂ.ತೆಗೆದರೆ 5.11 ಲಕ್ಷ ರೂ., 2 ಲಕ್ಷ ರೂ.ಕ್ಕೆ 10.22 ಲಕ್ಷ ರೂ. ಮತ್ತು 3 ಲಕ್ಷಕ್ಕೆ 15.33 ಲಕ್ಷ ರೂ. ನಷ್ಟ ಉಂಟಾಗುವುದು ಗ್ಯಾರಂಟಿ. ಇದೇ ಕಾರಣಕ್ಕೆ ಪಿಎಫ್ ಹಣವನ್ನು ನಿವೃತ್ತಿಗೆ ಮೊದಲು ಅನಗತ್ಯವಾಗಿ ತೆಗೆಯುವ ಮೊದಲು ಒಮ್ಮೆ ಯೋಚಿಸುವುದು ಒಳ್ಳೆಯದು.

Spread the love
  • Related Posts

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    ಕಾನರ್ಪ ನೂಜಿ ರಸ್ತೆಯಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಬಾಕಿ; ಸ್ಥಳೀಯರಿಂದ ಪ್ರತಿಭಟನೆ ಕಡಿರುದ್ಯಾವರ: ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ನಿರಂತರವಾಗಿ ಮರ ಸಾಗಾಟದ ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾನರ್ಪದಲ್ಲಿ ತಡರಾತ್ರಿ ಮರ ಸಾಗಾಟ ಮಾಡುತ್ತಿದ್ದ…

    Spread the love

    ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ ಕಾರ್ಯಕ್ರಮ

    ಪದ್ಮುಂಜ: ಸೆ 12 ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ, ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ವಿಜೃಂಭಣೆಯಿಂದ ನೆರವೇರಿತು.ಬೆಳಗ್ಗೆ ಉಮಾಮಹೇಶ್ವರ ಮಹಿಳಾ ಭಜನಾ ತಂಡ,…

    Spread the love

    You Missed

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    • By admin
    • September 13, 2026
    • 6 views
    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ ಕಾರ್ಯಕ್ರಮ

    • By admin
    • September 13, 2026
    • 11 views
    ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ ಕಾರ್ಯಕ್ರಮ

    ಕೊಕ್ಕಡ ಸಮೀಪ ಭೀಕರ ಅಪಘಾತ: ಸರ್ಕಾರಿ ಬಸ್–ಕಾರು ಡಿಕ್ಕಿ

    • By admin
    • September 12, 2026
    • 6 views
    ಕೊಕ್ಕಡ ಸಮೀಪ ಭೀಕರ ಅಪಘಾತ: ಸರ್ಕಾರಿ ಬಸ್–ಕಾರು ಡಿಕ್ಕಿ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    • By admin
    • September 8, 2026
    • 12 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    • By admin
    • September 8, 2026
    • 18 views
    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    • By admin
    • September 3, 2026
    • 15 views
    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು