ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡುವ ಮೂಲಕ ಯುವ ಸಮೂಹವನ್ನು ಜಾಗೃತಗೊಳಿಸುವ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡುತ್ತಿರುವುದು ಶ್ಲಾಘನೀಯ

ತುಮಕೂರು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಮಕೂರು ಇದರ ಜಿಲ್ಲಾ ಮಟ್ಟದ ಗಾಂಧೀ ಸ್ಮೃತಿ ಮತ್ತು ಪಾನಮುಕ್ತ ನವಜೀವನ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮ ವನ್ನು ಶಿರಾ ತಾಲೂಕಿನ ಶ್ರೀ ಕನ್ನಿಕಾ ಪರಮೇಶ್ವರಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದು ಜಿಲ್ಲಾ ಕಚೇರಿಯಿಂದ ಕನ್ನಿಕಾ ಪರಮೇಶ್ವರಿ ದೇವಸ್ಥಾನದವರೆಗೆ ಜಾಥಾ ಕಾರ್ಯಕ್ರಮ ನಡೆಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಶ್ರೀ ಕಾರದೇಶ್ವರ ಮಠದ ಶ್ರೀ ಶಾರದಾ ವೀರ ಬಸವ ಮಹಾಸ್ವಾಮಿಗಳು ಮಾತನಾಡುತ್ತಾ ಮಧ್ಯಪಾನ ನಮ್ಮ ಸಮಾಜಕ್ಕೆ ಅನೇಕ ಹಾನಿಗಳನ್ನು ಉಂಟು ಮಾಡುತ್ತಿದೆ. ಇದರ ಪರಿಣಾಮವಾಗಿ ಆರೋಗ್ಯ ಹಾನಿ, ಕುಟುಂಬ ಕಲಹ, ಆರ್ಥಿಕ ಹಾನಿ, ಅಪರಾಧಗಳು, ಅಪಘಾತಗಳು, ಸಾಮಾಜಿಕ ಅಶಾಂತಿ ಮುಂತಾದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ. ಇಂತಹ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಶ್ರಮಿಸುತ್ತಿರುವುದು ಲೋಕ ಕಲ್ಯಾಣ ಕಾರ್ಯವಾಗಿದೆ ಯುವ ಜನತೆ ಇಂದಿನ ದಿನಗಳಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಹಾಗೂ ಮೊಬೈಲ್ ಗೀಳಿಗೆ ಹಾಳಾಗುತ್ತಿದೆ. ಯುವ ಜನತೆಯ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ದೇಶದ ಆರ್ಥಿಕತೆಗೆ ಭಾರಿ ಪೆಟ್ಟನ್ನು ನೀಡುತ್ತದೆ. ಜನಜಾಗೃತಿ ಸಂಘಗಳು ಯುವಕರಿಗೆ ಜಾಗೃತಿ ಮೂಡಿಸಲಿ ಎಂದರು.

ತುಮುಲ್ ನಿರ್ದೇಶಕ ಎಸ್.ಆರ್. ಗೌಡ ಮಾತನಾಡಿ ಕುಡಿತ ಕುಡುಕನ ದೇಹವನ್ನು ಅಷ್ಟೇ ಹಾಳು ಮಾಡುವುದಿಲ್ಲ ಇಡೀ ಕುಟುಂಬವನ್ನೇ ನಿರ್ನಾಮ ಮಾಡುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಯುವ ಜನತೆ ಮಧ್ಯವಸನಿಗಳಾಗಿರಬಾರದು ಎಂಬುದು ಮಹಾತ್ಮ ಗಾಂಧಿ ಆಶಯ, ಅದರಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಘ ರಾಜ್ಯದ್ಯಂತ ಮಧ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಮಧ್ಯಪಾನ ಮುಕ್ತರನ್ನಾಗಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಮಂಜುನಾಥ್ ಲಾಲಪೇಟೆಯವರು ಮಾತನಾಡಿ ಜನಜಾಗೃತಿ ಕಾರ್ಯಕ್ರಮದ ಮೂಲಕ ಸಾಮಾಜಿಕ ಪಿಡುಗುಗಳಾದ ಮಧ್ಯಪಾನ ಮಾದಕ ಸೇವನೆಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಯುವಜನತೆಯನ್ನು ವ್ಯಸನದಿಂದ ಮುಕ್ತ ರನ್ನಾಗಿ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನಿಕಟಪೂರ್ವ ಅಧ್ಯಕ್ಷರಾದ ಎಸ್ ಕೆ ರಾಮಚಂದ್ರ ಗುಪ್ತ ಮಾತನಾಡಿ ಸರ್ಕಾರದ ಮಟ್ಟದಲ್ಲಿ ಮದ್ಯ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ,ಜನಜಾಗೃತಿ ಕಾರ್ಯಕ್ರಮಗಳು. ಮದ್ಯಪಾನಕ್ಕೆ ಪರ್ಯಾಯ ಮನರಂಜನಾ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರೋತ್ಸಾಹ.ಸಮಾಜದ ಮಟ್ಟದಲ್ಲಿ
ಸ್ವಯಂಸೇವಾ ಸಂಘಟನೆಗಳ ಮೂಲಕ ಜಾಗೃತಿ ಮೂಡಿಸುವುದು.ಶಾಲೆ, ಕಾಲೇಜು, ಗ್ರಾಮ, ನಗರಗಳಲ್ಲಿ ಅಭಿಯಾನಗಳು ನಡೆಸುವುದು.ಮದ್ಯಪಾನವನ್ನು ವಿರೋಧಿಸುವ ಸಾಮಾಜಿಕ ಚಳವಳಿಗಳನ್ನು ಪ್ರೋತ್ಸಾಹಿಸುವುದರ ಮೂಲಕ ಮಧ್ಯಪಾನ ತಡೆಗಟ್ಟಬಹುದು ಎಂದರು.ಈ ಸಂದರ್ಭದಲ್ಲಿ ಪೋಲಿಸ್ ಉಪ ಅಧೀಕ್ಷಕರಾದ ಶ್ರೀ ಶೇಖರ್ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯರ ಜನಪರ ಕಾರ್ಯಕ್ರಮಗಳನ್ನು ಶ್ಲಾಘಿಸಿ ಯುವಜನತೆ ಉತ್ತಮ ಚಟುವಟಿಕೆಗಳಲ್ಲಿ ಸ್ವ ಉದ್ಯೋಗದಲ್ಲಿ ತಮ್ಭನ್ನು ತಾವು ತೊಡಗಿಸಿಕೊಂಡು ದುಶ್ಚಟಗಳಿಂದ ದೂರವಿದ್ದು ದೇಶದ ಸತ್ಪ್ರಜೆಗಳಾಗಿ ಬಾಳಬೇಕೆಂದು ತಿಳಿಸಿದರು, ಬೆಂಗಳೂರು ಪ್ರಾದೇಶಿಕ ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರವೀಣ್ ಕುಮಾರ್ ಎಲ್ಲರನ್ನೂ ಸ್ವಾಗತಿಸಿದರು, ಯೋಜನಾಧಿಕಾರಿ ದಿನೇಶ್ ಕುಮಾರ್ ಹಾಗೂ ಶಶಿಧರ್ ಕಾರ್ಯಕ್ರಮ ನಿರೂಪಿಸಿದರು, ಜಿಲ್ಲಾ ಜನಜಾಗೃತಿ ವೇಿಕೆ ಸದಸ್ಯರುಗಳಾದ ನಾಗರಾಜು, ಬಿಕೆ ಲಕ್ಷ್ಮಣ್ ಗೌಡ ,ಬೋರಸಂದ್ರ ಬಸವರಾಜು, ಸಾಯಿ ದರ್ಶನ್ ,ಲತಾ ಪ್ರದೀಪ್ ರಾಜಣ್ಣ , ರಾಜೇಶ್ವರಿ , ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಯೋಜನಾಧಿಕಾರಿಗಳಾದ ಸದಾಶಿವ ಗೌಡ ಹಾಗೂ ರಮೇಶ್ ಎನ್, ಜಿಲ್ಲೆಯ ನವಜೀವನ ಸಮಿತಿ ಸದಸ್ಯರು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Spread the love
  • Related Posts

    ವಿದ್ಯುತ್ ಕಣ್ಣಾಮುಚ್ಚಾಲೆ! ⚡ಮಿತ್ತಬಾಗಿಲು–ಮಲವಂತಿಗೆ–ಕಡಿರುದ್ಯಾವರದಲ್ಲಿ ವಿದ್ಯುತ್ ಸಮಸ್ಯೆ: ಗ್ರಾಮಸ್ಥರ ಆಕ್ರೋಶ, ಮೆಸ್ಕಾಂ ವಿರುದ್ಧ ಅಸಮಾಧಾನ

    ಬೆಳ್ತಂಗಡಿ: ತಾಲೂಕಿನ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಹೊಂದಿರುವ ಮಿತ್ತಬಾಗಿಲು, ಮಲವಂತಿಗೆ ಮತ್ತು ಕಡಿರುದ್ಯಾವರ ಗ್ರಾಮಗಳಲ್ಲಿ ಪದೇಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದು ಗ್ರಾಮಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಜೂರು ದರ್ಗಾ ಶರೀಫ್, ಶ್ರೀ ಕ್ಷೇತ್ರ ಕೊಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ…

    Spread the love

    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆಸರ್‌ದ ಕಂಡೊಡೊಂಜಿ ದಿನ’ ಮುಂದಿನ ಪೀಳಿಗೆಗೆ ತುಳುನಾಡಿನ ಮೂಲ ಪರಂಪರೆ ಉಳಿಸುವ & ಪರಿಚಯಿಸುವ ಪ್ರಯತ್ನ: ಅನಿಲ್ ಕುಮಾರ್ ಎಸ್.ಎಸ್

    ಬೆಳ್ತಂಗಡಿ: ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ, ಕೃಷಿ ಪರಂಪರೆ ಹಾಗೂ ಗ್ರಾಮೀಣ ಬದುಕಿನ ವೈಶಿಷ್ಟ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್…

    Spread the love

    You Missed

    ವಿದ್ಯುತ್ ಕಣ್ಣಾಮುಚ್ಚಾಲೆ! ⚡ಮಿತ್ತಬಾಗಿಲು–ಮಲವಂತಿಗೆ–ಕಡಿರುದ್ಯಾವರದಲ್ಲಿ ವಿದ್ಯುತ್ ಸಮಸ್ಯೆ: ಗ್ರಾಮಸ್ಥರ ಆಕ್ರೋಶ, ಮೆಸ್ಕಾಂ ವಿರುದ್ಧ ಅಸಮಾಧಾನ

    • By admin
    • August 24, 2026
    • 6 views
    ವಿದ್ಯುತ್ ಕಣ್ಣಾಮುಚ್ಚಾಲೆ! ⚡ಮಿತ್ತಬಾಗಿಲು–ಮಲವಂತಿಗೆ–ಕಡಿರುದ್ಯಾವರದಲ್ಲಿ ವಿದ್ಯುತ್ ಸಮಸ್ಯೆ: ಗ್ರಾಮಸ್ಥರ ಆಕ್ರೋಶ, ಮೆಸ್ಕಾಂ ವಿರುದ್ಧ ಅಸಮಾಧಾನ

    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆಸರ್‌ದ ಕಂಡೊಡೊಂಜಿ ದಿನ’ ಮುಂದಿನ ಪೀಳಿಗೆಗೆ ತುಳುನಾಡಿನ ಮೂಲ ಪರಂಪರೆ ಉಳಿಸುವ & ಪರಿಚಯಿಸುವ ಪ್ರಯತ್ನ: ಅನಿಲ್ ಕುಮಾರ್ ಎಸ್.ಎಸ್

    • By admin
    • August 23, 2026
    • 8 views
    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆಸರ್‌ದ ಕಂಡೊಡೊಂಜಿ ದಿನ’ ಮುಂದಿನ ಪೀಳಿಗೆಗೆ ತುಳುನಾಡಿನ ಮೂಲ ಪರಂಪರೆ ಉಳಿಸುವ & ಪರಿಚಯಿಸುವ ಪ್ರಯತ್ನ: ಅನಿಲ್ ಕುಮಾರ್ ಎಸ್.ಎಸ್

    ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!

    • By admin
    • August 20, 2026
    • 8 views
    ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!

    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    • By admin
    • August 20, 2026
    • 14 views
    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ

    • By admin
    • August 16, 2026
    • 11 views
    ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ

    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    • By admin
    • August 15, 2026
    • 14 views
    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ