ಬೆಳ್ತಂಗಡಿ: 2025-26ನೇ ಸಾಲಿನ SSLC ಪರೀಕ್ಷೆಯಲ್ಲಿ ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕುವೆಟ್ಟು ಗ್ರಾಮದ ಶಕ್ತಿನಗರ ನಿವಾಸಿ ಪ್ರಗತಿ ಸ್ವ-ಸಹಾಯ ಸಂಘದ ಸದಸ್ಯರಾಗಿರುವ ಮಿನಾಕ್ಷಿ ಮತ್ತು ಮಹಾಬಲಗೌಡ ದಂಪತಿಯ ಪುತ್ರಿ ಕುIಪ್ರಾಪ್ತಿ ಎಂ. ಗೌಡ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ, ಜಿಲ್ಲಾ ಮಟ್ಟದಲ್ಲಿ 4ನೇ ಸ್ಥಾನ, ತಾಲೂಕು ಮಟ್ಟದಲ್ಲಿ 2ನೇ ಸ್ಥಾನ, ವಾಣಿ ಶಿಕ್ಷಣ ಸಂಸ್ಥೆಗೆ ಪ್ರಥಮ ಸ್ಥಾನ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಸಾಧನೆ ಮಾಡಿದಕ್ಕಾಗಿ ಪ್ರಗತಿ ಸ್ವ-ಸಹಾಯ ಸಂಘದ ವತಿಯಿಂದ ಅಭಿನಂದಿಸಿ, ಗೌರವಿಸಲಾಯಿತು.

ಈ ಸಂಧರ್ಭ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷ ಸೋಮೆಗೌಡ, ವಾಣಿ ಸೌಹಾರ್ಧ ಕೋ-ಆಪರೇಟಿವ್ ಸೊಸೈಟಿ ಸದಸ್ಯರಾದ ಉಷಾದೇವಿ ಕಿನ್ಯಾಜೆ, ಸುರೇಶ್ ಕೌಡಂಗೆ, ಪ್ರಗತಿ ಸ್ವ-ಸಹಾಯ ಸಂಘದ ಅಧ್ಯಕ್ಷ ಮೋಹನ ಗೌಡ, ಸದಸ್ಯರುಗಳಾದ ಸೀತಾರಾಮ ಗೌಡ ಬೆಳಾಲು, ಮಹೇಶ್ ಗೌಡ ಬೆಳಾಲು, ಚಿತ್ರಾ ಮಹೇಶ್ ಗೌಡ ಬೆಳಾಲು, ಚಿದಾನಂದ ಗೌಡ ಬೆಳಾಲು, ಗೋಪಾಲ ಬೆಳಾಲು, ನಿತಿನ್ ಕಲ್ಮಂಜ, ಕುಸುಮ ಉಜಿರೆ, ಚಿದಾನಂದ ಬೆಳ್ತಂಗಡಿ, ಬೆಳಿಯಪ್ಪ ಗೌಡ, ವಾಣಿ ಸೌಹಾರ್ಧ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಧನಂಜಯ್ ಕುಮಾರ್, ಸೋಮಂತ್ತಡ್ಕ ಶಾಖಾ ವ್ಯವಸ್ಥಾಪಕರಾದ ಉಮೇಶ್ ಮೈರ್ನೋಡಿ, ವಾಣಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಯದುಪತಿ ಗೌಡ, ವಾಣಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ಮುಖ್ಯೋಪಾಧ್ಯಯರಾದ ಲಕ್ಷ್ಮೀನಾರಾಯಣ ಕೆ., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯಿನಿ ಸುಹಾಸಿನಿ ಧನಂಜಯ್ ಗೌಡ, ವಿದ್ಯಾರ್ಥಿನಿಯ ಹೆತ್ತವರಾದ ಮಿನಾಕ್ಷಿ ಮತ್ತು ಮಹಾಬಲ ಗೌಡ ಮೊದಲಾದವರು ಉಪಸ್ಥಿತರಿದ್ದು ವಿದ್ಯಾರ್ಥಿನಿಯ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.






