ದೀಪಾವಳಿವರೆಗೂ ದೇಶದ 80 ಕೋಟಿ ಜನರಿಗೆ ಉಚಿತ ರೇಷನ್: ಪ್ರಧಾನಿ ಮೋದಿ ಮಹತ್ವದ ಘೋಷಣೆ

ನವದೆಹಲಿ: ಕೊರೋನಾ ಸಂಕಷ್ಟದಿಂದ ತತ್ತರಿಸಿರುವ ದೇಶವಾಸಿಗಳ ನೆರವಿಗೆ ಧಾವಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೀಪಾವಳಿವರೆಗೂ ಉಚಿತ ರೇಷನ್ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದೆ.

ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಘೋಷಣೆ ಮಾಡಿದ್ದು, “ಪ್ರಧಾನಿ ಗರೀಬ್ ಅನ್ನ ಕಲ್ಯಾಣ ಯೋಜನೆ” ಯನ್ನು ವಿಸ್ತರಣೆ ಮಾಡಲಾಗಿದ್ದು, ದೀಪಾವಳಿವರೆಗೂ ಅಂದರೆ ನವೆಂಬರ್’ವರೆಗೂ ಉಚಿತ ರೇಷನ್ ವಿತರಣೆ ಮಾಡಲಿದ್ದು, ಇದರಿಂದ ದೇಶದ 80 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎಂದರು.

ಒಂದು ದೇಶ,ಒಂದು ರೇಷನ್ ಕಾರ್ಡ್ ಆಗುತ್ತಾ?
ಕೇಂದ್ರ ಸರ್ಕಾರ ಒಂದು ಬಹುದೊಡ್ಡ ಕನಸು ಕಂಡಿದೆ. ಒಂದು ರಾಷ್ಟ್ರಕ್ಕೆ ಒಂದೇ ರೇಷನ್ ಕಾರ್ಡ್ ಯೋಜನೆ ಜಾರಿಗೊಳಿಸುವ ಕುರಿತು ಹೇಳಿದ್ದಾರೆ. ಇದರಿಂದ ಜನರಿಗೆ ತುಂಬಾನೇ ಪ್ರಯೋಜನವಾಗಲಿದೆ. ರೇಷನ್ ಕಾರ್ಡ್ ಇದ್ದರೆ ಎಲ್ಲಿ ಬೇಕಾದ್ರೂ ಕೂಡ ಪಡಿತರವನ್ನು ಪಡೆಯಬಹುದು ಅಂತ ಮೋದಿ ಹೇಳಿದರು.


ಸರ್ಕಾರ ಬಡವರ ಜೊತೆ ಸದಾ ಇರುತ್ತೆ
ನಮ್ಮ ಸರ್ಕಾರ ಬಡವರ ಜೊತೆ ಸದಾ ಇರುತ್ತೆ ಅಂತ ಮೋದಿ ಸಾರಿದ್ರು. ಬಡವರು, ಶ್ರಮಿಕರ ಸಬಲೀಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸಾರಿದ್ರು. ಆರ್ಥಿಕ ಪರಿಸ್ಥಿತಿ ಬಲಪಡಿಸುವುದಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತೆ ಅಂತನೂ ಪ್ರಧಾನಿ ಸಾರಿದ್ದಾರೆ.


ಮೋದಿ ಮಾಡಿದ ಪ್ರಾರ್ಥನೆ ಏನು ಗೊತ್ತಾ
ಕೊರೋನಾ ವಿರುದ್ಧ ಹೋರಾಡುತ್ತಾ ಅನ್ ಲಾಕ್ 2ನ್ನು ಪ್ರವೇಶ ಮಾಡಿದ್ದೇವೆ ದೇಶದ ಜನರಲ್ಲಿ ಪ್ರಾರ್ಥನೆ ಮಾಡುವುದು ಒಂದೇ, ಮಾಸ್ಕ್ ಧರಿಸಿ, ಅಂತರವನ್ನು ಕಾಪಾಡಿಕೊಳ್ಳಿ. ಬೇರೇ ದೇಶಗಳಿಗೆ ಹೋಲಿಸಿದ್ರೆ ನಮ್ಮ ದೇಶದ ಸ್ಥಿತಿ ಉತ್ತಮವಾಗಿದೆ, ಮೊದಲ ಲಾಕ್ ಡೌನ್ ಲಕ್ಷಾಂತರ ಜನರ ಪ್ರಾಣ ಉಳಿದಿದೆ.
ಪದೇ ಪದೆ ಕೈ ತೊಳೆಯುವುದನ್ನು ಬಿಡಬೇಡಿ, ಲಾಕ್ ಡೌನ್ ಸಮಯದಲ್ಲಿ ನಿಯಮ ಪಾಲಿಸಿದಂತೆ ನಿಯಮವನ್ನು ಪಾಲನೆ ಮಾಡಿ ಎಂದರು.
ಜನ ಸಾಮಾನ್ಯನಿಗೂ ಪ್ರಧಾನಿಗೂ ಒಂದೇ ನಿಯಮ:
ಮಾಸ್ಕ್ ಧರಿಸುವ ವಿಚಾರದಲ್ಲಿ ಯಾವುದೇ ತಾರತಮ್ಯವಿಲ್ಲ, ಪ್ರಧಾನಿಯಾದರೂ ಒಂದೇ ಸಾಮಾನ್ಯನಾದರೂ ಒಂದೇ, ಮಾಸ್ಕ್ ಧರಿಸದ ದೇಶದ ಪ್ರಧಾನಿಗೆ 13 ಸಾವಿರ ರೂಪಾಯಿ ದಂಡ ವಿಧಿಸಿದ್ದು ನಿಮಗೆಲ್ಲ ಗೊತ್ತಿದೆ. ಭಾರತದಲ್ಲಿ ಸ್ಥಳೀಯ ಆಡಳಿತಗಳು ಕೂಡ ಈ ರೀತಿಯ ಕೆಲಸ ಮಾಡಬೇಕು ಎಂದರು.ಎಂದರು
9ಸಾವಿರ ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ್ ನಿಧಿ ತಲುಪಿದೆ ಅಂತ ಪ್ರಧಾನಿ ಇದೇ ವೇಳೆ ಘೋಷಣೆ ಮಾಡಿದ್ರು. ರೈತರ ಖಾತೆಗಳಿಗೆ 18 ಸಾವಿರ ಕೋಟಿ ರೂಪಾಯಿ ಹಣ ಜಮೆಯಾಗಿದೆ ಎಂದರು.

Spread the love
  • Related Posts

    ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

    ಬೆಳಾಲು : ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ ಜ. 12 ರಂದು ಜರಗಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಉದ್ಘಾಟಿಸಿ ಮಕ್ಕಳ ಗ್ರಾಮ ಸಭೆಯ ಮಹತ್ವ ಮಕ್ಕಳ ಹಕ್ಕುಗಳು ಮತ್ತು ಸಮಸ್ಯೆಗಳು ಸೂಕ್ತ ಪರಿಹಾರದ ಬಗ್ಗೆ…

    Spread the love

    ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

    Ujire: ಜನವರಿ 11ನೇ ಆದಿತ್ಯವಾರದಂದು ಬೆಲಾಲು ಗುತ್ತು ಮನೆಯಲ್ಲಿ ಇದೇ ಬರುವ 24ನೇ ತಾರೀಕು ಶನಿವಾರದಂದು ನಡೆಯುವ ರಾಜನ್ ದೈವವಾದ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ” ಕಲ್ಕುಡ ಕಲ್ಲುರ್ಟಿ ದೈವಗಳ ಉತ್ಸವ ಹಾಗೂ ಮಾರಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ…

    Spread the love

    You Missed

    ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

    • By admin
    • January 12, 2026
    • 12 views
    ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

    ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

    • By admin
    • January 12, 2026
    • 16 views
    ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

    ಜನಸ್ಪಂದನ ಸಭೆಯ ಫಲಶ್ರುತಿ108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜನ ಸ್ಪಂದನ ಸಭೆ ನಡೆದಿರುವುದು ಬೆಳ್ತಂಗಡಿಯಲ್ಲಿ: ಶಾಸಕ ಹರೀಶ್ ಪೂಂಜಾ

    • By admin
    • January 10, 2026
    • 36 views
    ಜನಸ್ಪಂದನ ಸಭೆಯ ಫಲಶ್ರುತಿ108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜನ ಸ್ಪಂದನ ಸಭೆ ನಡೆದಿರುವುದು ಬೆಳ್ತಂಗಡಿಯಲ್ಲಿ: ಶಾಸಕ ಹರೀಶ್ ಪೂಂಜಾ

    ಎಕ್ಸೆಲ್ ಬೆಳಕು ಫೌಂಡೇಶನ್ ವತಿಯಿಂದ SSLC ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿಶೇಷ ಕಾರ್ಯಾಗಾರ

    • By admin
    • January 10, 2026
    • 101 views
    ಎಕ್ಸೆಲ್ ಬೆಳಕು ಫೌಂಡೇಶನ್ ವತಿಯಿಂದ SSLC ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿಶೇಷ ಕಾರ್ಯಾಗಾರ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗೆ ದೇಶದ ಪ್ರತಿಷ್ಠಿತ ಸ್ಕಾಚ್ ಪ್ರಶಸ್ತಿ ಪ್ರಧಾನ

    • By admin
    • January 10, 2026
    • 87 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಬಿಸಿ ಟ್ರಸ್ಟ್ ಗೆ ದೇಶದ ಪ್ರತಿಷ್ಠಿತ ಸ್ಕಾಚ್ ಪ್ರಶಸ್ತಿ ಪ್ರಧಾನ

    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

    • By admin
    • January 8, 2026
    • 40 views
    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ