ಚಿಕ್ಕಮಗಳೂರು: ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಮರುಏಣಿಕೆ ವೇಳೆ ಪರಾಜಿತ ಬಿಜೆಪಿಯ ಅಭ್ಯರ್ಥಿ ಡಿ.ಎನ್.ಜೀವರಾಜ್ ರವರಿಗೆ ಗೆಲುವಿನ ಲೆಕ್ಕಾಚಾರದಂತೆ ಫಲಿತಾಂಶ ಘೋಷಣೆಯಾಗಿದೆ ಈ ಪೈಕಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಡಿ.ಎನ್.ಜೀವರಾಜ್ ಜಯಗಳಿಸಿದ ಬಗ್ಗೆ ಚುನಾವಣಾ ಅಧಿಕಾರಿ ಘೋಷಣೆ ಮಾಡಿದ್ದಾರೆ.
ಕೋರ್ಟ್ ನಿರ್ದೇಶನದಂತೆ ನಡೆದ ಮರು ಮತಎಣಿಕೆ ವೇಳೆ ಜೀವರಾಜ್ ಅವರಿಗೆ ಮುನ್ನಡೆ ಲಭಿಸಿತ್ತು. ಫಲಿತಾಂಶ ಘೋಷಣೆಯಷ್ಟೇ ಬಾಕಿ ಇತ್ತು. ಇದೀಗ ಚುನಾವಣಾಧಿಕಾರಿ ಫಲಿತಾಂಶ ಘೋಷಣೆ ಮಾಡಿದ್ದಾರೆ.
2023ರಲ್ಲಿ ಸಿಂಧುವಾಗಿದ್ದ 1,540 ಮತಗಳಲ್ಲಿ ಶನಿವಾರ ಮರುಎಣಿಕೆ ವೇಳೆ 255 ಮತಗಳು ಅಸಿಂಧುವಾಗಿದ್ದವು. ತಾಂತ್ರಿಕವಾಗಿ 52 ಮತಗಳ ಮುನ್ನಡೆ ಸಾಧಿಸಿರುವ ಬಿಜೆಪಿಯ ಡಿ.ಎನ್. ಜೀವರಾಜ್ ಅವರು ಫಲಿತಾಂಶ ಪ್ರಕಟಣೆಗೆ ಕಾದಿದ್ದರು.





