ಇಂದಿನ ರಾಶಿಫಲ ಯಾರಿಗೆ ಶುಭ ಯಾರಿಗೆ ಆಶುಭ ಫಲ!

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:30 ರಿಂದ 2:05
ಗುಳಿಕಕಾಲ: ಬೆಳಗ್ಗೆ 10:55 ರಿಂದ 12:30
ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:20

ಮೇಷ

ಅನಾವಶ್ಯಕ ಖರ್ಚು ಸಂಭವಿಸಬಹುದು. ಮಾನಸಿಕ ಉದ್ವೇಗದಿಂದ ಉದ್ಯೋಗದಲ್ಲಿ ತೊಡಕು. ಅಜೀರ್ಣ ಮುಂತಾದ ತೊಂದರೆ ಬಂದೊದಗಬಹುದು. ನೀರು ಆಹಾರದ ವಿಷಯದಲ್ಲಿ ಜಾಗೃತೆ ಅಗತ್ಯ.

ವೃಷಭ

ಮದುವೆ ಮಂಗಳಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ನೌಕರಸ್ಥರಿಗೆ ಬಡ್ತಿಯೊಂದಿಗೆ ಉದ್ಯೋಗದಲ್ಲಿ ಬದಲಾವಣೆ. ಆರ್ಥಿಕ ಅನುಕೂಲತೆ ಒದಗಿಬರುವುದು. ಬಂಧುಗಳಿಂದ ಅಶುಭ ಸಮಾಚಾರ ಸಿಗಲಿದೆ.

ಮಿಥುನ

ಹಿರಿಯರೊಂದಿಗೆ ಶಾಂತತೆಯಿಂದ ವ್ಯವಹರಿಸುವುದು ಉತ್ತಮ. ವೃಥಾ ಖರ್ಚು. ಸಾಮಾಜಿಕ ಕಾರ್ಯಗಳಲ್ಲಿ ಹೊಂದಾಣಿಕೆ ಅವಶ್ಯ. ಕಿವಿ, ಗಂಟಲು ನೋವುಗಳು ನಿಮ್ಮನ್ನು ಪೀಡಿಸುವ ಸಾಧ್ಯತೆ.

ಕಟಕ

ವ್ಯವಹಾರಗಳಲ್ಲಿ ಉತ್ತಮ ಪ್ರಗತಿಯಿಂದಾಗಿ ಉತ್ತಮ ಆದಾಯ. ಪ್ರತಿಯೊಂದು ವಿಷಯದಲ್ಲೂ ನೀವು ತೆಗೆದುಕೊಳ್ಳುವ ನಿರ್ಧಾರವೇ ಸರಿಯಾಗಿರುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ನಿರೀಕ್ಷೆ.

ಸಿಂಹ

ಆರ್ಥಿಕ ಪ್ರಗತಿ ಉತ್ತಮಗೊಂಡು ಸಂತೋಷ ಮೂಡುವುದು. ಶತ್ರುಗಳ ವಿರುದ್ಧ ಜಯ. ಬಹಳ ದಿನಗಳ ಸಮಸ್ಯೆಗಳು ಪರಿಹಾರವಾಗಿ ನಿರಾಳತೆ ತಲೆದೋರುವುದು. ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುವಿರಿ.

ಕನ್ಯಾ

ಸಂಕಷ್ಟಗಳು ಪರಿಹಾರವಾಗಲಿವೆ. ಹಿಂದಿನ ಕೆಲಸಗಳಿಗೆ ಪುನಃ ಚಾಲನೆ ದೊರೆತು ಪ್ರಗತಿ ಪಥದಲ್ಲಿ ಸಾಗುವವು. ದುಡುಕುತನದಿಂದಾಗಿ ಉದ್ವೇಗಗೊಳ್ಳುವುದರಿಂದ ಸಮಸ್ಯೆಗಳು ತಲೆದೋರಬಹುದು. ದುರ್ಗಾಸ್ತೋತ್ರ ಪಠಿಸಿ.

ತುಲಾ

ಕೆಲಸ–ಕಾರ್ಯಗಳಲ್ಲಿ ಮಂದಗತಿ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ. ಹೊಸ ಕೆಲಸಗಳನ್ನು ಪ್ರಾರಂಭಿಸುವುದು ಬೇಡ. ಅಪವಾದಕ್ಕೆ ತುತ್ತಾಗುವ ಸಾಧ್ಯತೆ ಇದ್ದು ಧೃತಿಗೆಡಬೇಕಾಗಿಲ್ಲ.

ವೃಶ್ಚಿಕ

ಕಣ್ಣು ಅಥವಾ ತಲೆನೋವು ತೀವ್ರವಾಗಿ ಕಾಡುವ ಸಾಧ್ಯತೆ. ವೃಥಾ ವಾದವಿವಾದದಿಂದಾಗಿ ಅನಗತ್ಯ ವೈರತ್ವ ಉಂಟಾಗಬಹುದು. ಅಯೋಗ್ಯರೊಂದಿಗೆ ಯಾವುದೇ ಕಾರಣಕ್ಕೂ ವ್ಯವಹಾರ ಬೇಡ.

ಧನು

ಆರ್ಥಿಕ ಸುಧಾರಣೆ. ಧಾರ್ಮಿಕ ಕಾರ್ಯಗಳಿಗೆ ಖರ್ಚುಮಾಡುವ ಸಾಧ್ಯತೆ ಇದ್ದು ಕೈಗೊಳ್ಳುವ ಕಾರ್ಯದಲ್ಲಿ ಯಶಸ್ಸು ಸಾಧಿಸಿ ಕೀರ್ತಿ ಸಂಪಾದನೆ. ಧೈರ್ಯದಿಂದ ಎದುರಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

ಮಕರ

ಸ್ವಂತ ಉದ್ಯೋಗಿಗಳು ಹಾಗೂ ನೌಕರಿಯಲ್ಲಿರುವವರು ತಮ್ಮ ನಡೆ ನುಡಿ, ಕೆಲಸಗಳ ಬಗ್ಗೆ ಜಾಗ್ರತೆಯಿಂದಿರುವುದು ಸೂಕ್ತ. ಚಿಕ್ಕ ತಪ್ಪಿಗೂ ಮಹತ್ತರ ದಂಡ ತೆರಬೇಕಾದೀತು. ಉತ್ತಮ ಅವಕಾಶಗಳು ಬಂದೊದಗುವವು.

ಕುಂಭ

ಅಶುಭ ಸ್ವಪ್ನಗಳಿಂದಾಗಿ ಮಾನಸಿಕ ಚಂಚಲತೆ. ನಿರಾಸೆಯಿಂದಾಗಿ ದುಃಖದ ಅನುಭವ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ಬೇರೆಯವರ ಅಪಹಾಸ್ಯಕ್ಕೆ ಒಳಗಾಗುವ ಸಾಧ್ಯತೆ. ಈಶ್ವರನ ಆರಾಧನೆ ಮಾಡಿ.

ಮೀನ

ಆದಾಯ ಮತ್ತು ಉಳಿಕೆಗಳಲ್ಲಿ ಪ್ರಗತಿಯಿರುವುದು. ಆರೋಗ್ಯದಲ್ಲಿ ಸುಧಾರಣೆ. ಸಂಬಂಧಿಗಳಲ್ಲಿ ವಂಶವೃದ್ಧಿಯ ಶುಭ ಸಂದೇಶ ಕೇಳಲಿದ್ದೀರಿ. ನಿಂತುಹೋದ ಕೆಲಸಗಳಿಗೆ ಮರುಚಾಲನೆ ದೊರೆಯುವ ಸಾಧ್ಯತೆ.

Spread the love
  • Related Posts

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಜಿಲ್ಲೆಯಾದ್ಯಂತ ಬಾರಿ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ನದಿತೀರಗಳಿಗೆ ತಗ್ಗು ಪ್ರದೇಶಗಳಿಗೆ ತೆರಳದಂತೆ ಸೂಚನೆ ನೀಡಿದೆ ಮುನ್ನೆಚ್ಚರಿಕೆ ಕ್ರಮವಾಗಿ ದ.ಕ ಜಿಲ್ಲೆಯ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿಸಲಾಗಿದೆ Spread the love

    Spread the love

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ಬಳಿಕ ಚರಂಡಿ ನಿರ್ಮಿಸಿದ್ದು, ಕೆಲವು ಕಡೆ ಮುಚ್ಚಲಾಗಿಲ್ಲ, ಇಂದು ಸಂಜೆ ತೆರೆದ ಚರಂಡಿಯ ಬಗ್ಗೆ ಅರಿವಿಲ್ಲದೆ ಅಂಗಡಿಯಿಂದ ಸಾಮಾಗ್ರಿ ಖರೀದಿಸಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯಗೊಂಡಿರುವ…

    Spread the love

    You Missed

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • June 16, 2025
    • 138 views
    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ  ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    • By admin
    • June 15, 2025
    • 154 views
    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    • By admin
    • June 12, 2025
    • 97 views
    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    • By admin
    • June 12, 2025
    • 56 views
    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    ಬೆಳ್ತಂಗಡಿ, ಪುಂಜಾಲಕಟ್ಟೆ PSI ನಂದಕುಮಾರ್ ರವರಿಗೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ

    • By admin
    • June 11, 2025
    • 67 views
    ಬೆಳ್ತಂಗಡಿ, ಪುಂಜಾಲಕಟ್ಟೆ PSI ನಂದಕುಮಾರ್ ರವರಿಗೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ

    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು

    • By admin
    • June 11, 2025
    • 75 views
    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು