ಇಂದಿನ ರಾಶಿಫಲ ಯಾರಿಗೆ ಶುಭ ಯಾರಿಗೆ ಆಶುಭ ಫಲ!

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:30 ರಿಂದ 2:05
ಗುಳಿಕಕಾಲ: ಬೆಳಗ್ಗೆ 10:55 ರಿಂದ 12:30
ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:20

ಮೇಷ

ಅನಾವಶ್ಯಕ ಖರ್ಚು ಸಂಭವಿಸಬಹುದು. ಮಾನಸಿಕ ಉದ್ವೇಗದಿಂದ ಉದ್ಯೋಗದಲ್ಲಿ ತೊಡಕು. ಅಜೀರ್ಣ ಮುಂತಾದ ತೊಂದರೆ ಬಂದೊದಗಬಹುದು. ನೀರು ಆಹಾರದ ವಿಷಯದಲ್ಲಿ ಜಾಗೃತೆ ಅಗತ್ಯ.

ವೃಷಭ

ಮದುವೆ ಮಂಗಳಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ನೌಕರಸ್ಥರಿಗೆ ಬಡ್ತಿಯೊಂದಿಗೆ ಉದ್ಯೋಗದಲ್ಲಿ ಬದಲಾವಣೆ. ಆರ್ಥಿಕ ಅನುಕೂಲತೆ ಒದಗಿಬರುವುದು. ಬಂಧುಗಳಿಂದ ಅಶುಭ ಸಮಾಚಾರ ಸಿಗಲಿದೆ.

ಮಿಥುನ

ಹಿರಿಯರೊಂದಿಗೆ ಶಾಂತತೆಯಿಂದ ವ್ಯವಹರಿಸುವುದು ಉತ್ತಮ. ವೃಥಾ ಖರ್ಚು. ಸಾಮಾಜಿಕ ಕಾರ್ಯಗಳಲ್ಲಿ ಹೊಂದಾಣಿಕೆ ಅವಶ್ಯ. ಕಿವಿ, ಗಂಟಲು ನೋವುಗಳು ನಿಮ್ಮನ್ನು ಪೀಡಿಸುವ ಸಾಧ್ಯತೆ.

ಕಟಕ

ವ್ಯವಹಾರಗಳಲ್ಲಿ ಉತ್ತಮ ಪ್ರಗತಿಯಿಂದಾಗಿ ಉತ್ತಮ ಆದಾಯ. ಪ್ರತಿಯೊಂದು ವಿಷಯದಲ್ಲೂ ನೀವು ತೆಗೆದುಕೊಳ್ಳುವ ನಿರ್ಧಾರವೇ ಸರಿಯಾಗಿರುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ನಿರೀಕ್ಷೆ.

ಸಿಂಹ

ಆರ್ಥಿಕ ಪ್ರಗತಿ ಉತ್ತಮಗೊಂಡು ಸಂತೋಷ ಮೂಡುವುದು. ಶತ್ರುಗಳ ವಿರುದ್ಧ ಜಯ. ಬಹಳ ದಿನಗಳ ಸಮಸ್ಯೆಗಳು ಪರಿಹಾರವಾಗಿ ನಿರಾಳತೆ ತಲೆದೋರುವುದು. ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುವಿರಿ.

ಕನ್ಯಾ

ಸಂಕಷ್ಟಗಳು ಪರಿಹಾರವಾಗಲಿವೆ. ಹಿಂದಿನ ಕೆಲಸಗಳಿಗೆ ಪುನಃ ಚಾಲನೆ ದೊರೆತು ಪ್ರಗತಿ ಪಥದಲ್ಲಿ ಸಾಗುವವು. ದುಡುಕುತನದಿಂದಾಗಿ ಉದ್ವೇಗಗೊಳ್ಳುವುದರಿಂದ ಸಮಸ್ಯೆಗಳು ತಲೆದೋರಬಹುದು. ದುರ್ಗಾಸ್ತೋತ್ರ ಪಠಿಸಿ.

ತುಲಾ

ಕೆಲಸ–ಕಾರ್ಯಗಳಲ್ಲಿ ಮಂದಗತಿ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ. ಹೊಸ ಕೆಲಸಗಳನ್ನು ಪ್ರಾರಂಭಿಸುವುದು ಬೇಡ. ಅಪವಾದಕ್ಕೆ ತುತ್ತಾಗುವ ಸಾಧ್ಯತೆ ಇದ್ದು ಧೃತಿಗೆಡಬೇಕಾಗಿಲ್ಲ.

ವೃಶ್ಚಿಕ

ಕಣ್ಣು ಅಥವಾ ತಲೆನೋವು ತೀವ್ರವಾಗಿ ಕಾಡುವ ಸಾಧ್ಯತೆ. ವೃಥಾ ವಾದವಿವಾದದಿಂದಾಗಿ ಅನಗತ್ಯ ವೈರತ್ವ ಉಂಟಾಗಬಹುದು. ಅಯೋಗ್ಯರೊಂದಿಗೆ ಯಾವುದೇ ಕಾರಣಕ್ಕೂ ವ್ಯವಹಾರ ಬೇಡ.

ಧನು

ಆರ್ಥಿಕ ಸುಧಾರಣೆ. ಧಾರ್ಮಿಕ ಕಾರ್ಯಗಳಿಗೆ ಖರ್ಚುಮಾಡುವ ಸಾಧ್ಯತೆ ಇದ್ದು ಕೈಗೊಳ್ಳುವ ಕಾರ್ಯದಲ್ಲಿ ಯಶಸ್ಸು ಸಾಧಿಸಿ ಕೀರ್ತಿ ಸಂಪಾದನೆ. ಧೈರ್ಯದಿಂದ ಎದುರಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

ಮಕರ

ಸ್ವಂತ ಉದ್ಯೋಗಿಗಳು ಹಾಗೂ ನೌಕರಿಯಲ್ಲಿರುವವರು ತಮ್ಮ ನಡೆ ನುಡಿ, ಕೆಲಸಗಳ ಬಗ್ಗೆ ಜಾಗ್ರತೆಯಿಂದಿರುವುದು ಸೂಕ್ತ. ಚಿಕ್ಕ ತಪ್ಪಿಗೂ ಮಹತ್ತರ ದಂಡ ತೆರಬೇಕಾದೀತು. ಉತ್ತಮ ಅವಕಾಶಗಳು ಬಂದೊದಗುವವು.

ಕುಂಭ

ಅಶುಭ ಸ್ವಪ್ನಗಳಿಂದಾಗಿ ಮಾನಸಿಕ ಚಂಚಲತೆ. ನಿರಾಸೆಯಿಂದಾಗಿ ದುಃಖದ ಅನುಭವ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ಬೇರೆಯವರ ಅಪಹಾಸ್ಯಕ್ಕೆ ಒಳಗಾಗುವ ಸಾಧ್ಯತೆ. ಈಶ್ವರನ ಆರಾಧನೆ ಮಾಡಿ.

ಮೀನ

ಆದಾಯ ಮತ್ತು ಉಳಿಕೆಗಳಲ್ಲಿ ಪ್ರಗತಿಯಿರುವುದು. ಆರೋಗ್ಯದಲ್ಲಿ ಸುಧಾರಣೆ. ಸಂಬಂಧಿಗಳಲ್ಲಿ ವಂಶವೃದ್ಧಿಯ ಶುಭ ಸಂದೇಶ ಕೇಳಲಿದ್ದೀರಿ. ನಿಂತುಹೋದ ಕೆಲಸಗಳಿಗೆ ಮರುಚಾಲನೆ ದೊರೆಯುವ ಸಾಧ್ಯತೆ.

Spread the love
  • Related Posts

    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    ಉಜಿರೆ: ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮೊಬೈಲ್‌ ಫೋನ್‌ ರಿಪೇರಿ ತರಬೇತಿಯನ್ನು ಆಯೋಜಿಸಿದ್ದು ದಿನಾಂಕ: 17.03.2025 ರಿಂದ 15.04.2025ರ ವರೆಗೆ (30ದಿನ) ತರಬೇತಿ ನಡೆಯುತ್ತದೆ. ತರಬೇತಿಯು ಊಟ, ವಸತಿಯೊಂದಿಗೆ ಉಚಿತವಾಗಿದ್ದು 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ ಭಾಗವಹಿಸಿಸುವವರು ಈ ಕೆಳಗಿನ ಲಿಂಕ್…

    Spread the love

    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    ಮಡಿಕೇರಿ:- ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಶ್ರೀ ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ(ರಿ.), ಅಶ್ವಿನಿ ಆಸ್ಪತ್ರೆ ಮಡಿಕೇರಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಶಾಖೆ…

    Spread the love

    You Missed

    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    • By admin
    • March 15, 2025
    • 68 views
    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

    • By admin
    • February 21, 2025
    • 54 views
    ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    • By admin
    • February 15, 2025
    • 63 views
    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

    • By admin
    • February 15, 2025
    • 231 views
    ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

    ತುಳುನಾಡಿನ ಕೆಡ್ಡಸ ಹಬ್ಬದ ಆಚರಣೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ತುಳುನಾಡ ಕಂಪನ್ನು ರಾಷ್ಟ್ರ ರಾಜಧಾನಿಯಲ್ಲಿ ಪಸರಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು

    • By admin
    • February 12, 2025
    • 85 views
    ತುಳುನಾಡಿನ ಕೆಡ್ಡಸ ಹಬ್ಬದ ಆಚರಣೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ತುಳುನಾಡ ಕಂಪನ್ನು ರಾಷ್ಟ್ರ ರಾಜಧಾನಿಯಲ್ಲಿ ಪಸರಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು

    ಕಡಿರುದ್ಯಾವರ ಗ್ರಾಮದ ಬೆಳ್ಳೂರು ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ

    • By admin
    • February 12, 2025
    • 160 views
    ಕಡಿರುದ್ಯಾವರ ಗ್ರಾಮದ ಬೆಳ್ಳೂರು ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ