ಮುಂಡಾಜೆ Airtel ಟವರ್ ಗೆ ಸಿಡಿಲಾಘಾತವಾಯಿತೇ??? 5ಜಿ ದುನಿಯಾದಲ್ಲಿ 2ಜಿಗೆ ಬರ – ಮುಂಡಾಜೆ, ಕಡಿರುದ್ಯಾವರ ಜನರ ವ್ಯಥೆ!!!

ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಾನರ್ಪ, ಕಡಿರುದ್ಯಾವರ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ರಾತ್ರಿ ಸಮಯದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ತೀವ್ರವಾಗುತ್ತಿದೆ ಎಂಬ ದೂರುಗಳು ಹೆಚ್ಚುತ್ತಿವೆ. ವಿಶೇಷವಾಗಿ Airtel ನೆಟ್ವರ್ಕ್ ಬಳಕೆದಾರರು “ಗರ ಬಡಿದಂತಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

5ಜಿ ದುನಿಯಾದಲ್ಲಿ 2ಜಿಗೆ ಬರ – ಮುಂಡಾಜೆ, ಕಡಿರುದ್ಯಾವರ ಜನರ ವ್ಯಥೆ

ದೇಶವೇ 5ಜಿ ಯುಗಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ, ಮುಂಡಾಜೆ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರು ಇನ್ನೂ 2ಜಿ ಮಟ್ಟದ ಸೇವೆಗಾಗಿ ಹೋರಾಡುತ್ತಿರುವುದು ವಿಷಾದನೀಯ ವಾಸ್ತವವಾಗಿದೆ. Bharti Airtel ಸೇರಿದಂತೆ ಪ್ರಮುಖ ಟೆಲಿಕಾಂ ಸೇವೆಗಳು ಲಭ್ಯವಿದ್ದರೂ, ನೆಲಮಟ್ಟದಲ್ಲಿ ಗುಣಮಟ್ಟದ ಸಂಪರ್ಕ ಸಿಗುತ್ತಿಲ್ಲ ಎಂಬುದು ಬಳಕೆದಾರರ ಆಕ್ರೋಶ.

ಸ್ಥಳೀಯರ ಪ್ರಕಾರ, ಸಿಡಿಲಿನ ಸದ್ದು ಮೈಲುಗಳಷ್ಟು ದೂರದಲ್ಲಿ ಕೇಳಿಬಂದರೂ ಸಹ ಇಲ್ಲಿನ ಟವರ್‌ಗಳು ತಕ್ಷಣವೇ ಸಿಗ್ನಲ್ ಕಳೆದುಕೊಳ್ಳುತ್ತಿವೆ. ಇದರಿಂದ ಮೊಬೈಲ್ ಕರೆಗಳು, ಇಂಟರ್ನೆಟ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತಿರುವ ಪರಿಸ್ಥಿತಿ ಉಂಟಾಗಿದೆ.ಸ್ಥಳೀಯರ ಪ್ರಕಾರ, ಸಿಡಿಲಿನ ಸದ್ದು ಮೈಲುಗಳಷ್ಟು ದೂರದಲ್ಲಿ ಕೇಳಿಬಂದರೂ ಸಹ ಇಲ್ಲಿನ ಟವರ್‌ಗಳು ತಕ್ಷಣವೇ ಸಿಗ್ನಲ್ ಕಳೆದುಕೊಳ್ಳುತ್ತಿವೆ. ಇದರಿಂದ ಮೊಬೈಲ್ ಕರೆಗಳು, ಇಂಟರ್ನೆಟ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತಿರುವ ಪರಿಸ್ಥಿತಿ ಉಂಟಾಗಿದೆ.

“ಹಣ ಕೊಟ್ಟು ನದಿ ಈಜುವ ಸ್ಥಿತಿ” – ಬಳಕೆದಾರರ ಆಕ್ರೋಶ

“ಹಣ ಕೊಟ್ಟು ಸೇವೆ ಪಡೆಯಬೇಕಾದರೆ, ಇಲ್ಲಿ ನಾವು ಹಣ ಕೊಟ್ಟು ನದಿ ಈಜುವ ಸ್ಥಿತಿ” ಎಂದು ಬಳಕೆದಾರರು ಕಿಡಿಕಾರುತ್ತಿದ್ದಾರೆ. ನಿರಂತರ ಸಮಸ್ಯೆಯಿಂದ ಕೆಲವರು ಈಗಾಗಲೇ ಬೇರೆ ನೆಟ್ವರ್ಕ್ ಕಡೆ ಮುಖ ಮಾಡುತ್ತಿದ್ದಾರೆ.

ಟವರ್ ನಿರ್ವಹಣೆ ಹಾಗೂ ಸೇವಾ ಗುಣಮಟ್ಟದ ಹೊಣೆಗಾರಿಕೆ Airtel ಕಂಪನಿಯ ಮೇಲಿದೆ. ಗ್ರಾಹಕರಿಂದ ಶುಲ್ಕ ವಸೂಲಿ ಮಾಡುತ್ತಿರುವ ಸಂಸ್ಥೆ, ನಿರಂತರ ಸೇವೆ ಒದಗಿಸುವ ಕಾನೂನು ಮತ್ತು ನೈತಿಕ ಜವಾಬ್ದಾರಿ ಹೊಂದಿದೆ.

“4ಜಿ ನೆಟ್ವರ್ಕ್ ಕೇವಲ ನೆಪ ಮಾತ್ರಕ್ಕೆ” – ಬಳಕೆದಾರರ ಆಕ್ರೋಶ

4ಜಿ, ನೆಲಮಟ್ಟದಲ್ಲಿ 2ಜಿ—ಇದೇ ಮುಂಡಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶದ ವಾಸ್ತವ ಸ್ಥಿತಿ ಎಂದು ಬಳಕೆದಾರರು ಕಿಡಿಕಾರುತ್ತಿದ್ದಾರೆ. Bharti Airtel ಸೇವೆ ಬಳಸುವ ಗ್ರಾಹಕರು, “4ಜಿ ಇದೆ ಎಂದು ಹೇಳುತ್ತಾರೆ, ಆದರೆ ಸ್ಪೀಡ್ ಹಾಗೂ ಸಿಗ್ನಲ್ ನೋಡಿದರೆ ಅದು ಕೇವಲ ನೆಪ ಮಾತ್ರಕ್ಕೆ” ಎಂದು ಆರೋಪಿಸುತ್ತಿದ್ದಾರೆ.

ಸಮಗ್ರ ತನಿಖೆ ಅಗತ್ಯ

ಸಮಸ್ಯೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿತ ನಿಯಂತ್ರಣ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತವು ಮಧ್ಯಪ್ರವೇಶಿಸಿ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ. ಒಟ್ಟಿನಲ್ಲಿ, ಇದು ತಾತ್ಕಾಲಿಕ ತೊಂದರೆ ಅಲ್ಲ; ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಗ್ರಾಹಕರ ವಿಶ್ವಾಸ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ.

ಬಳಕೆದಾರರ ಅಸಮಾಧಾನ:

ನೆಟ್ವರ್ಕ್ ವ್ಯತ್ಯಯದಿಂದ ವಿದ್ಯಾರ್ಥಿಗಳು, ಆನ್‌ಲೈನ್ ಕೆಲಸಗಾರರು ಹಾಗೂ ವ್ಯವಹಾರಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವು ಮಂದಿ ಈಗಲೇ ಬೇರೆ ನೆಟ್ವರ್ಕ್‌ಗಳಿಗೆ ಬದಲಾಯಿಸುವ ಬಗ್ಗೆ ಚಿಂತಿಸುತ್ತಿದ್ದಾರೆ.

Spread the love
  • Related Posts

    ಚಾರ್ಮಾಡಿ–ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ನಡುವೆ ಅಪಾಯಕಾರಿ ಮರಗಳ ಭೀತಿ: ನಿರ್ಲಕ್ಷ್ಯ ಮುಂದುವರಿದರೆ ಆಪತ್ತು ಕಟ್ಟಿಟ್ಟ ಬುತ್ತಿ

    ಜೀವ ಬಲಿಯಾದ ಬಳಿಕವೇ ಕ್ರಮವೇ? ಹೆದ್ದಾರಿಯಲ್ಲಿ ಮರ ಧರಾಶಾಹಿ – ಅಪಾಯಕಾರಿ ಮರಗಳ ತೆರವಿಗೆ ಸಾರ್ವಜನಿಕರ ಆಗ್ರಹ ಬೆಳ್ತಂಗಡಿ, ಜೂನ್ 9: ನಿರ್ಮಾಣ ಹಂತದಲ್ಲಿರುವ ಚಾರ್ಮಾಡಿ–ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಆದರೆ ಹೆದ್ದಾರಿಯ…

    Spread the love

    “ಭಜನೆಯಿಂದ ಸಂಸ್ಕಾರ ವೃದ್ಧಿಯಾಗಿ, ಸಮಾಜಸೇವೆಯ ಮನೋಭಾವ ಬೆಳೆಯಲಿ; ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲಿ” : ಶಾಸಕ ಹರೀಶ್ ಪೂಂಜಾ

    ಕಡಿರುದ್ಯಾವರ ಗ್ರಾಮದ ಬೆಳ್ಳೂರುಬೈಲಿನಲ್ಲಿ ಶ್ರೀ ಮಾರಿಯಮ್ಮ ದೇವಿ ಭಜನಾ ಮಂದಿರದ ನೂತನ ಕಟ್ಟಡ ಉದ್ಘಾಟನೆ ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಬೆಳ್ಳೂರುಬೈಲಿನಲ್ಲಿ ಶ್ರೀ ಮಾರಿಯಮ್ಮ ದೇವಿ ಭಜನಾ ಮಂದಿರದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಇಂದು ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ನೆರವೇರಿತು.…

    Spread the love

    You Missed

    ಚಾರ್ಮಾಡಿ–ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ನಡುವೆ ಅಪಾಯಕಾರಿ ಮರಗಳ ಭೀತಿ: ನಿರ್ಲಕ್ಷ್ಯ ಮುಂದುವರಿದರೆ ಆಪತ್ತು ಕಟ್ಟಿಟ್ಟ ಬುತ್ತಿ

    • By admin
    • June 9, 2026
    • 26 views
    ಚಾರ್ಮಾಡಿ–ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ನಡುವೆ ಅಪಾಯಕಾರಿ ಮರಗಳ ಭೀತಿ: ನಿರ್ಲಕ್ಷ್ಯ ಮುಂದುವರಿದರೆ ಆಪತ್ತು ಕಟ್ಟಿಟ್ಟ ಬುತ್ತಿ

    “ಭಜನೆಯಿಂದ ಸಂಸ್ಕಾರ ವೃದ್ಧಿಯಾಗಿ, ಸಮಾಜಸೇವೆಯ ಮನೋಭಾವ ಬೆಳೆಯಲಿ; ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲಿ” : ಶಾಸಕ ಹರೀಶ್ ಪೂಂಜಾ

    • By admin
    • June 7, 2026
    • 187 views

    ಎಕ್ಸೆಲ್ ಕಾಲೇಜಿಗೆ ಮತ್ತೊಂದು ಗರಿ: ಸಿಇಟಿಯಲ್ಲಿ ಮಿಂಚಿದ ಎಕ್ಸೆಲ್ ವಿದ್ಯಾರ್ಥಿಗಳು; ರಾಜ್ಯ ಮಟ್ಟದಲ್ಲಿ ಗಮನಾರ್ಹ ರ‍್ಯಾಂಕ್

    • By admin
    • June 6, 2026
    • 241 views
    ಎಕ್ಸೆಲ್ ಕಾಲೇಜಿಗೆ ಮತ್ತೊಂದು ಗರಿ: ಸಿಇಟಿಯಲ್ಲಿ ಮಿಂಚಿದ ಎಕ್ಸೆಲ್ ವಿದ್ಯಾರ್ಥಿಗಳು; ರಾಜ್ಯ ಮಟ್ಟದಲ್ಲಿ ಗಮನಾರ್ಹ ರ‍್ಯಾಂಕ್

    ಮನೆ ಮೇಲೆ ತೆಂಗಿನಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ಘಟಕದಿಂದ ನೆರವು

    • By admin
    • June 5, 2026
    • 104 views
    ಮನೆ ಮೇಲೆ ತೆಂಗಿನಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ಘಟಕದಿಂದ ನೆರವು

    “ಗಡಾಯಿಕಲ್ಲಿನಲ್ಲಿ ಚಾರಣಕ್ಕೆ ಬಂದ ಯುವಕನ ಕಾಲು ಟ್ವಿಸ್ಟ್: ಮೂರು ಗಂಟೆಗಳ ಸಾಹಸಮಯ ರಕ್ಷಣಾ ಕಾರ್ಯಾಚರಣೆ”

    • By admin
    • June 4, 2026
    • 88 views
    “ಗಡಾಯಿಕಲ್ಲಿನಲ್ಲಿ  ಚಾರಣಕ್ಕೆ ಬಂದ ಯುವಕನ ಕಾಲು ಟ್ವಿಸ್ಟ್: ಮೂರು ಗಂಟೆಗಳ ಸಾಹಸಮಯ ರಕ್ಷಣಾ ಕಾರ್ಯಾಚರಣೆ”

    “ಮಳೆಯ ಸವಿಯಲ್ಲಿ ಶಿರಾಡಿಯ ಕೆ.ಟಿ.: ರುಚಿ ಮತ್ತು ಸ್ನೇಹದ ಅಪೂರ್ವ ಸಂಗಮ”

    • By admin
    • June 2, 2026
    • 40 views
    “ಮಳೆಯ ಸವಿಯಲ್ಲಿ ಶಿರಾಡಿಯ ಕೆ.ಟಿ.: ರುಚಿ ಮತ್ತು ಸ್ನೇಹದ ಅಪೂರ್ವ ಸಂಗಮ”