ಪೋಲೀಸ್ ಕಸ್ಟಡಿಯಲ್ಲಿ ಅಪ್ಪ-ಮಗನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ 9ಪೋಲೀಸರಿಗೆ ಮರಣದಂಡನೆ ತೀರ್ಪು ವಿಧಿಸಿದ ಮದುರೈ ಕೋರ್ಟ್

ಚೆನ್ನೈ: ತಂದೆ ಹಾಗೂ ಮಗನಿಗೆ ಪೊಲೀಸ್‌ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಅವರ ಸಾವಿಗೆ (Custodial Torture Case) ಕಾರಣರಾಗಿದ್ದ ತಮಿಳುನಾಡಿನ (Tamil Nadu) 9 ಜನ ಪೊಲೀಸರಿಗೆ ಮಧುರೈ ಜಿಲ್ಲಾ ನ್ಯಾಯಾಲಯ (Madurai Court) ಮರಣದಂಡನೆ (Death Sentence) ವಿಧಿಸಿದೆ. ನ್ಯಾಯಾಧೀಶರು ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪ ಎಂದು ಉಲ್ಲೇಖಿಸಿದ್ದಾರೆ.

2020ರ ಜೂನ್ 19 ರಂದು ಮೊಬೈಲ್ ಅಂಗಡಿ ನಡೆಸುತ್ತಿದ್ದ ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಲಾಕ್‌ಡೌನ್ ಸಮಯದಲ್ಲಿ ಅನುಮತಿ ನೀಡಿದ ಅವಧಿಗಿಂತಲೂ 45 ನಿಮಿಷ ಹೆಚ್ಚು ಸಮಯ ಅಂಗಡಿ ತೆರೆದಿದ್ದಕ್ಕೆ ಪೊಲೀಸರು (Police) ಬಂಧಿಸಿದ್ದರು. ನಂತರ ಇಬ್ಬರನ್ನೂ ಸಾಥನ್‌ಕುಲಂ ಪೊಲೀಸ್ ಠಾಣೆಗೆ ಕರೆತಂದು ರಾತ್ರಿಯಿಡೀ ಹಲ್ಲೆ ಮಾಡಿದ್ದರು. ಅಲ್ಲದೇ ತಮ್ಮ ರಕ್ತವನ್ನು ತಮ್ಮದೇ ಬಟ್ಟೆಗಳಿಂದ ನೆಲದಿಂದ ಒರೆಸುವಂತೆ ಒತ್ತಾಯಿಸಲಾಗಿತ್ತು

ಬಳಿಕ ಇಬ್ಬರನ್ನೂ ಜಡ್ಜ್‌ ಮುಂದೆ ಹಾಜರು ಪಡಿಸಲಾಗಿತ್ತು. ಆಗ ಕೋವಿಡ್‌ ಸಮಯ ಆಗಿದ್ದರಿಂದ ನ್ಯಾಯಾಧೀಶರಿಗೆ ಅವರ ಮೇಲಿನ ಹಲ್ಲೆ ನಡೆದಿದ್ದನ್ನು ಪರಿಶೀಲಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಇದಾದ ಮೂರು ದಿನಗಳಲ್ಲಿ ಇಬ್ಬರೂ ಸಾವನ್ನಪ್ಪಿದ್ದರು. ಜಯರಾಜ್‌ಗೆ 17 ಗಾಯಗಳಾಗಿದ್ದವು. ಬೆನ್ನಿಕ್ಸ್‌ಗೆ 13 ಗಾಯಗಳಾಗಿದ್ದವು. ಗುದನಾಳದ ರಕ್ತಸ್ರಾವ ಸೇರಿದಂತೆ, ಮೈಮೇಲೆಲ್ಲ ಗಾಯಗಳಿದ್ದವು. ಅವರ ಸಾವು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.

ಮದ್ರಾಸ್ ಹೈಕೋರ್ಟ್‌ನ ನಿರ್ದೇಶನದಂತೆ ಪ್ರಕರಣದ ತನಿಖೆ ಆರಂಭಿಸಿದ್ದ ಸಿಬಿಐ, 9 ಪೊಲೀಸರನ್ನು ಬಂಧಿಸಿತ್ತು. ಬಂಧಿತರಲ್ಲಿ ಒಬ್ಬ ಇನ್ಸ್‌ಪೆಕ್ಟರ್, ಇಬ್ಬರು ಸಬ್-ಇನ್‌ಸ್ಪೆಕ್ಟರ್‌ಗಳು, ಉಳಿದಂತೆ ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ. ಅವರ ವಿರುದ್ಧ ಕೊಲೆ ಆರೋಪ ಹೊರಿಸಲಾಯಿತು.

ತನಿಖೆಯ ಸಮಯದಲ್ಲಿ, ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರು ತಂದೆ ಮತ್ತು ಮಗನ ಮೇಲೆ ರಾತ್ರೋರಾತ್ರಿ ಹಲ್ಲೆ ನಡೆಸಿದ್ದನ್ನು ಸಿಬಿಐ ಅಧಿಕಾರಿಗಳಿಗೆ ತಿಳಿಸಿದ್ದರು. ಠಾಣೆಯಲ್ಲಿ ಟೇಬಲ್‌ಗಳು ಮತ್ತು ಲಾಠಿಗಳಲ್ಲಿ ರಕ್ತದ ಕಲೆಗಳಿವೆ ಎಂದು ತೋರಿಸಿದ್ದರು. ಇದು ಪ್ರಕರಣದ ಪ್ರಮುಖ ಸಾಕ್ಷಿಯಾಗಿತ್ತು. ಅಲ್ಲದೇ ಸಿಸಿಟಿವಿಯಲ್ಲಿ ಸ್ವಯಂಚಾಲಿತವಾಗಿ ವಿಡಿಯೋ ಡಿಲೀಟ್‌ ಆಗಿದ್ದವು. ಇದರಿಂದ ಅಧಿಕಾರಿಗಳು ಕೆಲವು ಸವಾಲನ್ನು ಎದುರಿಸಿ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿದ್ದರು.

Spread the love
  • Related Posts

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಹಿನ್ನೆಲೆ ಜುಲೈ 8ರಂದು ಶಾಲೆಗಳಿಗೆ ರಜೆ

    ಮಂಗಳೂರು, ಜುಲೈ 7: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು…

    Spread the love

    ವಯನಾಡಿನಲ್ಲಿ ಭೀಕರ ಭೂಕುಸಿತ ಇಬ್ಬರು ಮೃತಪಟ್ಟಿರುವ ಶಂಕೆ!! 30ಕ್ಕೂ ಅಧಿಕ ಮಂದಿ ಕಣ್ಮರೆ!!!!

    ಕೇರಳ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸೋಮವಾರ (ಜು.06) ರಾತ್ರಿಯಿಂದ ಸುರಿಯುತ್ತಿರುವ ಎಡೆಬಿಡದ ಭಾರೀ ಮಳೆಗೆ ಮಂಗಳವಾರ (ಜು.07) ಭೀಕರ ಭೂಕುಸಿತ ಸಂಭವಿಸಿದೆ. ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯ ಕಲ್ಲಾಡಿ ಬಳಿಯ ಮೀನಾಕ್ಷಿ ಸೇತುವೆ ಹತ್ತಿರ ಈ ಘಟನೆ ನಡೆದಿದ್ದು,…

    Spread the love

    You Missed

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಹಿನ್ನೆಲೆ ಜುಲೈ 8ರಂದು ಶಾಲೆಗಳಿಗೆ ರಜೆ

    • By admin
    • July 7, 2026
    • 41 views
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಹಿನ್ನೆಲೆ ಜುಲೈ 8ರಂದು ಶಾಲೆಗಳಿಗೆ ರಜೆ

    ವಯನಾಡಿನಲ್ಲಿ ಭೀಕರ ಭೂಕುಸಿತ ಇಬ್ಬರು ಮೃತಪಟ್ಟಿರುವ ಶಂಕೆ!! 30ಕ್ಕೂ ಅಧಿಕ ಮಂದಿ ಕಣ್ಮರೆ!!!!

    • By admin
    • July 7, 2026
    • 290 views
    ವಯನಾಡಿನಲ್ಲಿ ಭೀಕರ ಭೂಕುಸಿತ ಇಬ್ಬರು ಮೃತಪಟ್ಟಿರುವ ಶಂಕೆ!! 30ಕ್ಕೂ ಅಧಿಕ ಮಂದಿ ಕಣ್ಮರೆ!!!!

    ಅಜಿಕುರಿ ರಸ್ತೆ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ; ರಸ್ತೆ ಬಂದ್ ಮಾಡಿ ಪ್ರತಿಭಟನೆ

    • By admin
    • July 7, 2026
    • 63 views
    ಅಜಿಕುರಿ ರಸ್ತೆ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ; ರಸ್ತೆ ಬಂದ್ ಮಾಡಿ ಪ್ರತಿಭಟನೆ

    ರಸ್ತೆಯೋ, ಗುಂಡಿಗಳ ಸರಪಳಿಯೋ? ಹದಗೆಟ್ಟ ರಸ್ತೆಯ ಅಭಿವೃದ್ಧಿ ಮಾಡುವವರು ಯಾರು? ಹಲವು ವರ್ಷಗಳಿಂದ ಡಾಮರೀಕರಣ ಕಾಣದ ನೆತ್ರಾವತಿ–ಅಜುಕ್ಕುರಿ–ಮುಂಡಾಜೆ ಸಂಪರ್ಕ ರಸ್ತೆ; ಸಾರ್ವಜನಿಕರ ಆಕ್ರೋಶ

    • By admin
    • July 6, 2026
    • 111 views
    ರಸ್ತೆಯೋ, ಗುಂಡಿಗಳ ಸರಪಳಿಯೋ? ಹದಗೆಟ್ಟ ರಸ್ತೆಯ ಅಭಿವೃದ್ಧಿ ಮಾಡುವವರು ಯಾರು? ಹಲವು ವರ್ಷಗಳಿಂದ ಡಾಮರೀಕರಣ ಕಾಣದ ನೆತ್ರಾವತಿ–ಅಜುಕ್ಕುರಿ–ಮುಂಡಾಜೆ ಸಂಪರ್ಕ ರಸ್ತೆ; ಸಾರ್ವಜನಿಕರ ಆಕ್ರೋಶ

    ಮಲೆಯಡ್ಕ ಹಾಟ್ ಮಿಕ್ಸ್ ಘಟಕ ವಿವಾದಕ್ಕೆ ಹೊಸ ತಿರುವು! ಅಧಿಕಾರಿಗಳ ಸರಣಿ ಭೇಟಿ; ಮಲೆಯಡ್ಕದಲ್ಲೇ ನಡೆಯಿತು ಎಸ್‌ಸಿ/ಎಸ್‌ಟಿ ಕುಂದು ಕೊರತೆಗಳ ಸಭೆ

    • By admin
    • July 5, 2026
    • 110 views
    ಮಲೆಯಡ್ಕ ಹಾಟ್ ಮಿಕ್ಸ್ ಘಟಕ ವಿವಾದಕ್ಕೆ ಹೊಸ ತಿರುವು! ಅಧಿಕಾರಿಗಳ ಸರಣಿ ಭೇಟಿ; ಮಲೆಯಡ್ಕದಲ್ಲೇ ನಡೆಯಿತು ಎಸ್‌ಸಿ/ಎಸ್‌ಟಿ ಕುಂದು ಕೊರತೆಗಳ ಸಭೆ

    ವಿದ್ಯುತ್ ಶಾಕ್ ಗೆ ಕಾಡಾನೆ ಬಲಿ!!! ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲಿ ನಡೆದ ದುರ್ಘಟನೆ

    • By admin
    • July 3, 2026
    • 57 views
    ವಿದ್ಯುತ್ ಶಾಕ್ ಗೆ ಕಾಡಾನೆ ಬಲಿ!!! ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲಿ ನಡೆದ ದುರ್ಘಟನೆ