ವ್ಯಸನ ಮುಕ್ತನಾಗಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ಯುವಕ!!! ಆ ಒಂದು ಮದ್ಯವರ್ಜನ ಶಿಬಿರ ಯುವಕನ ಬದುಕನ್ನೇ ಬದಲಾಯಿಸಿ ಬಿಟ್ಟಿತ್ತೇ!!!? “ಸ್ವಾವಲಂಬಿ ಬದುಕು”

“ಮದ್ಯಮುಕ್ತನಾಗಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ – ಮಂಜು”

ತುಮಕೂರು ತಾಲೂಕಿನ ಅಂತರಸನಹಳ್ಳಿ ಯ ದಿವಂಗತ ವೀರಭದ್ರಪ್ಪನವರ ಮಗನಾದ 34 ವರ್ಷ ವಯಸ್ಸಿನ ಶ್ರೀ ಮಂಜುರವರು ಕಳೆದ 2 ವರ್ಷಗಳ ಹಿಂದೆ ತುಮಕೂರಿನ ಹೋಟೆಲ್ ಅಸೋಸಿಯೇಷನ್ ನಲ್ಲಿ ನಡೆದ ಮದ್ಯವರ್ಜನ ಶಿಬಿರಕ್ಕೆ ಸೇರಿ ಇದೀಗ ಸಂಪೂರ್ಣ ಪಾನಮುಕ್ತರಾಗಿ ಸ್ವತ: ಶ್ರೀ ಗಣೇಶ ಗೋಬಿ ಸೆಂಟರ ನ್ನು ಪ್ರಾರಂಭಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.


ತಂದೆ ವೀರಭದ್ರಯ್ಯ ನವರು ಅಡುಗೆ ಕೆಲಸ ಮಾಡುತ್ತಿದ್ದು ಅವರೂ ಮದ್ಯಪಾನ ಸೇವಿಸುತ್ತಿದ್ದರು…..!
ಸಣ್ಣ ವಯಸ್ಸಿನಲ್ಲಿ ತನ್ನ ಗೆಳೆಯರ ಸಹವಾಸದಿಂದ ಕುಡಿತ ಪ್ರಾರಂಭಿಸಿ ದಿನೇ ದಿನೇ ಕುಡಿತದ ಪ್ರಮಾಣ ಜಾಸ್ತಿಯಾಗುತ್ತಾ ಬಂತು… ತಂದೆ ಬುದ್ಧಿ ಹೇಳಿದರು ಏನೂ ಪ್ರಯೋಜನವಾಗಲಿಲ್ಲ…!! ಕಾರಣ ಅವರೂ ಮದ್ಯವ್ಯಸನಿಯಾಗಿದ್ದ ರು.
ತುಮಕೂರು ಸಿಟಿಯಲ್ಲಿ ಇದ್ದ ಎಲ್ಲಾ ವೈನ್ ಶಾಪ್ ಮತ್ತು ಬಾರ್ ಗಳ ಪರಿಚಯ ಈ ಕುಡಿತದಿಂದ ಆಗಿತ್ತು….!!!
ಕುಡಿತ ಎಷ್ಟು ವಿಪರೀತವಾಗಿತ್ತು ಎಂದರೆ ತಾನು 5 10 ರೂಗಳನ್ನು ಭಿಕ್ಷೆಬೇಡಿಯೂ ಕುಡಿತ ಮಾಡಿಕೊಂಡು ಬಂದ ದಿನಗಳನ್ನು ಈಗ ನೆನಪಿಸಿಕೊಂಡು ಹಳೇ ಜೀವನ ಬಹಳ ಅಸಹ್ಯವಾಗಿತ್ತು…. ಮತ್ತು ಸಮಾಜದಲ್ಲಿ, ಊರಲ್ಲಿ, ಮನೆಯಲ್ಲಿ ಒಂದು ಚೂರು ಮರ್ಯಾದೆಯೇ ಇರಲಿಲ್ಲ!!!! ದಿನಕ್ಕೆ ಅಡುಗೆ ಕೆಲಸ ಮಾಡಿ 500 ರಿಂದ 600 ರೂಪಾಯಿ ಸಂಪಾದಿಸಿದರೂ ಸಂಜೆ ಮನೆಗೆ ಬರಲು ಒಂದು ರೂಪಾಯಿ ಉಳಿಯುತ್ತಿರಲಿಲ್ಲ……..
6 ವರ್ಷಗಳ ಹಿಂದೆ ತಂದೆ ತೀರಿಕೊಂಡರೂ ಬುದ್ಧಿ ಬರಲಿಲ್ಲ,!!! 2011ರಲ್ಲಿ ಮನೆಯಲ್ಲಿ ನಡೆದ ದೊಡ್ಡದೊಂದು ಸಮಸ್ಯೆಯಿಂದ ಕುಡಿತದ ಪ್ರಮಾಣ ಇನ್ನೂ ಜಾಸ್ತಿಯಾಯಿತು. ತಾಯಿಗೆ ಒಂದು ಚೂರು ಪ್ರೀತಿ ಗೌರವ ನೀಡಲಿಲ್ಲ!!! ಬದಲಾಗಿ ಮಾನಸಿಕ ಹಿಂಸೆ ನೀಡುತ್ತಿದ್ದರು…….


ಕಳೆದ 2 ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರ ದಿಂದ ತನ್ನ ಜೀವನ ಪಾವನವಾಯಿತು…. ಮತ್ತು ಕಳೆದ 3 ತಿಂಗಳ ಹಿಂದೆ ಸಮಾಜದಲ್ಲಿ ಸ್ವಾವಲಂಬಿಯಾಗಿ ಸಾಧನೆಯನ್ನು ಮಾಡಿ ಗೌರವಯುತವಾದ ಜೀವನವನ್ನು ನಡೆಸುವ ಛಲವನ್ನು ಹೊತ್ತುಕೊಂಡು 50000 ಸ್ವತ: ದುಡಿಮೆ ಮಾಡಿ , & ಇತರರ ಸಹಕಾರದಿಂದ ತನ್ನ ತಾಯಿಯ ಮಾರ್ಗದರ್ಶನದಿಂದ 2 ಲಕ್ಷ ರೂಪಾಯಿ ಬಂಡವಾಳ ಹಾಕಿ ತುಮಕೂರಿನ ಯಲ್ಲಾಪುರ ರಸ್ತೆ ಅಂತರಸನಹಳ್ಳಿ ಯಲ್ಲಿ ಶ್ರೀ ಗಣೇಶ ಗೋಬಿ ಸೆಂಟರನ್ನು ಪ್ರಾರಂಭಿಸಿರುತ್ತಾರೆ. ಇಲ್ಲಿ ಗೋಬಿ ಮಂಚೂರಿ ಪಾನಿಪುರಿ ಫ್ರೈಡ್ ರೈಸ್ ಹಾಗು ಎಲ್ಲಾತರದ ತಂಪು ಪಾನೀಯಗಳನ್ನು ಸ್ವತಹ ತಾವೇ ತಯಾರಿಸಿ ವ್ಯಾಪಾರ ಮಾಡಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ.

ಕುಡಿತದ ಸಂದರ್ಭದಲ್ಲಿ ಯಾರು ಕೂಡ ಇವರ ಮೇಲೆ ವಿಶ್ವಾಸವಿಲ್ಲ ದವರು ಈ ಅಂಗಡಿ ತೆರೆಯಲು ಎಲ್ಲರೂ ಸಹಕಾರ ನೀಡಿರುತ್ತಾರೆ…!! ಸೆಂಟರ್ ಪ್ರಾರಂಭಿಸುವಾಗ ಧರ್ಮಸ್ಥಳದ ಪ್ರಸಾದ ಕಾಯಿ ಯನ್ನು ಇಟ್ಟು ಪೂಜೆಮಾಡಿ ಉದ್ಘಾಟನೆ ಮಾಡಿರುತ್ತಾರೆ.
ಈ ಎಲ್ಲಾ ಸಾಧನೆಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ, ಪೂಜ್ಯ ಹೆಗ್ಗಡೆಯವರ ಆಶೀರ್ವಾದ & ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಜನಜಾಗೃತಿ ವೇದಿಕೆಯ ಕಾರ್ಯಕರ್ತರ ಶ್ರಮದಿಂದ ಸಾಧ್ಯವಾಗಿದೆ ಎಂದು ತಾಯಿ ಮಗ ಇಬ್ಬರು ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

Spread the love
  • Related Posts

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಜಿಲ್ಲೆಯಾದ್ಯಂತ ಬಾರಿ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ನದಿತೀರಗಳಿಗೆ ತಗ್ಗು ಪ್ರದೇಶಗಳಿಗೆ ತೆರಳದಂತೆ ಸೂಚನೆ ನೀಡಿದೆ ಮುನ್ನೆಚ್ಚರಿಕೆ ಕ್ರಮವಾಗಿ ದ.ಕ ಜಿಲ್ಲೆಯ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿಸಲಾಗಿದೆ Spread the love

    Spread the love

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ಬಳಿಕ ಚರಂಡಿ ನಿರ್ಮಿಸಿದ್ದು, ಕೆಲವು ಕಡೆ ಮುಚ್ಚಲಾಗಿಲ್ಲ, ಇಂದು ಸಂಜೆ ತೆರೆದ ಚರಂಡಿಯ ಬಗ್ಗೆ ಅರಿವಿಲ್ಲದೆ ಅಂಗಡಿಯಿಂದ ಸಾಮಾಗ್ರಿ ಖರೀದಿಸಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯಗೊಂಡಿರುವ…

    Spread the love

    You Missed

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • June 16, 2025
    • 138 views
    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ  ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    • By admin
    • June 15, 2025
    • 154 views
    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    • By admin
    • June 12, 2025
    • 97 views
    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    • By admin
    • June 12, 2025
    • 56 views
    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    ಬೆಳ್ತಂಗಡಿ, ಪುಂಜಾಲಕಟ್ಟೆ PSI ನಂದಕುಮಾರ್ ರವರಿಗೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ

    • By admin
    • June 11, 2025
    • 67 views
    ಬೆಳ್ತಂಗಡಿ, ಪುಂಜಾಲಕಟ್ಟೆ PSI ನಂದಕುಮಾರ್ ರವರಿಗೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ

    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು

    • By admin
    • June 11, 2025
    • 75 views
    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು