ವ್ಯಸನ ಮುಕ್ತನಾಗಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ಯುವಕ!!! ಆ ಒಂದು ಮದ್ಯವರ್ಜನ ಶಿಬಿರ ಯುವಕನ ಬದುಕನ್ನೇ ಬದಲಾಯಿಸಿ ಬಿಟ್ಟಿತ್ತೇ!!!? “ಸ್ವಾವಲಂಬಿ ಬದುಕು”

“ಮದ್ಯಮುಕ್ತನಾಗಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ – ಮಂಜು”

ತುಮಕೂರು ತಾಲೂಕಿನ ಅಂತರಸನಹಳ್ಳಿ ಯ ದಿವಂಗತ ವೀರಭದ್ರಪ್ಪನವರ ಮಗನಾದ 34 ವರ್ಷ ವಯಸ್ಸಿನ ಶ್ರೀ ಮಂಜುರವರು ಕಳೆದ 2 ವರ್ಷಗಳ ಹಿಂದೆ ತುಮಕೂರಿನ ಹೋಟೆಲ್ ಅಸೋಸಿಯೇಷನ್ ನಲ್ಲಿ ನಡೆದ ಮದ್ಯವರ್ಜನ ಶಿಬಿರಕ್ಕೆ ಸೇರಿ ಇದೀಗ ಸಂಪೂರ್ಣ ಪಾನಮುಕ್ತರಾಗಿ ಸ್ವತ: ಶ್ರೀ ಗಣೇಶ ಗೋಬಿ ಸೆಂಟರ ನ್ನು ಪ್ರಾರಂಭಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.


ತಂದೆ ವೀರಭದ್ರಯ್ಯ ನವರು ಅಡುಗೆ ಕೆಲಸ ಮಾಡುತ್ತಿದ್ದು ಅವರೂ ಮದ್ಯಪಾನ ಸೇವಿಸುತ್ತಿದ್ದರು…..!
ಸಣ್ಣ ವಯಸ್ಸಿನಲ್ಲಿ ತನ್ನ ಗೆಳೆಯರ ಸಹವಾಸದಿಂದ ಕುಡಿತ ಪ್ರಾರಂಭಿಸಿ ದಿನೇ ದಿನೇ ಕುಡಿತದ ಪ್ರಮಾಣ ಜಾಸ್ತಿಯಾಗುತ್ತಾ ಬಂತು… ತಂದೆ ಬುದ್ಧಿ ಹೇಳಿದರು ಏನೂ ಪ್ರಯೋಜನವಾಗಲಿಲ್ಲ…!! ಕಾರಣ ಅವರೂ ಮದ್ಯವ್ಯಸನಿಯಾಗಿದ್ದ ರು.
ತುಮಕೂರು ಸಿಟಿಯಲ್ಲಿ ಇದ್ದ ಎಲ್ಲಾ ವೈನ್ ಶಾಪ್ ಮತ್ತು ಬಾರ್ ಗಳ ಪರಿಚಯ ಈ ಕುಡಿತದಿಂದ ಆಗಿತ್ತು….!!!
ಕುಡಿತ ಎಷ್ಟು ವಿಪರೀತವಾಗಿತ್ತು ಎಂದರೆ ತಾನು 5 10 ರೂಗಳನ್ನು ಭಿಕ್ಷೆಬೇಡಿಯೂ ಕುಡಿತ ಮಾಡಿಕೊಂಡು ಬಂದ ದಿನಗಳನ್ನು ಈಗ ನೆನಪಿಸಿಕೊಂಡು ಹಳೇ ಜೀವನ ಬಹಳ ಅಸಹ್ಯವಾಗಿತ್ತು…. ಮತ್ತು ಸಮಾಜದಲ್ಲಿ, ಊರಲ್ಲಿ, ಮನೆಯಲ್ಲಿ ಒಂದು ಚೂರು ಮರ್ಯಾದೆಯೇ ಇರಲಿಲ್ಲ!!!! ದಿನಕ್ಕೆ ಅಡುಗೆ ಕೆಲಸ ಮಾಡಿ 500 ರಿಂದ 600 ರೂಪಾಯಿ ಸಂಪಾದಿಸಿದರೂ ಸಂಜೆ ಮನೆಗೆ ಬರಲು ಒಂದು ರೂಪಾಯಿ ಉಳಿಯುತ್ತಿರಲಿಲ್ಲ……..
6 ವರ್ಷಗಳ ಹಿಂದೆ ತಂದೆ ತೀರಿಕೊಂಡರೂ ಬುದ್ಧಿ ಬರಲಿಲ್ಲ,!!! 2011ರಲ್ಲಿ ಮನೆಯಲ್ಲಿ ನಡೆದ ದೊಡ್ಡದೊಂದು ಸಮಸ್ಯೆಯಿಂದ ಕುಡಿತದ ಪ್ರಮಾಣ ಇನ್ನೂ ಜಾಸ್ತಿಯಾಯಿತು. ತಾಯಿಗೆ ಒಂದು ಚೂರು ಪ್ರೀತಿ ಗೌರವ ನೀಡಲಿಲ್ಲ!!! ಬದಲಾಗಿ ಮಾನಸಿಕ ಹಿಂಸೆ ನೀಡುತ್ತಿದ್ದರು…….


ಕಳೆದ 2 ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರ ದಿಂದ ತನ್ನ ಜೀವನ ಪಾವನವಾಯಿತು…. ಮತ್ತು ಕಳೆದ 3 ತಿಂಗಳ ಹಿಂದೆ ಸಮಾಜದಲ್ಲಿ ಸ್ವಾವಲಂಬಿಯಾಗಿ ಸಾಧನೆಯನ್ನು ಮಾಡಿ ಗೌರವಯುತವಾದ ಜೀವನವನ್ನು ನಡೆಸುವ ಛಲವನ್ನು ಹೊತ್ತುಕೊಂಡು 50000 ಸ್ವತ: ದುಡಿಮೆ ಮಾಡಿ , & ಇತರರ ಸಹಕಾರದಿಂದ ತನ್ನ ತಾಯಿಯ ಮಾರ್ಗದರ್ಶನದಿಂದ 2 ಲಕ್ಷ ರೂಪಾಯಿ ಬಂಡವಾಳ ಹಾಕಿ ತುಮಕೂರಿನ ಯಲ್ಲಾಪುರ ರಸ್ತೆ ಅಂತರಸನಹಳ್ಳಿ ಯಲ್ಲಿ ಶ್ರೀ ಗಣೇಶ ಗೋಬಿ ಸೆಂಟರನ್ನು ಪ್ರಾರಂಭಿಸಿರುತ್ತಾರೆ. ಇಲ್ಲಿ ಗೋಬಿ ಮಂಚೂರಿ ಪಾನಿಪುರಿ ಫ್ರೈಡ್ ರೈಸ್ ಹಾಗು ಎಲ್ಲಾತರದ ತಂಪು ಪಾನೀಯಗಳನ್ನು ಸ್ವತಹ ತಾವೇ ತಯಾರಿಸಿ ವ್ಯಾಪಾರ ಮಾಡಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ.

ಕುಡಿತದ ಸಂದರ್ಭದಲ್ಲಿ ಯಾರು ಕೂಡ ಇವರ ಮೇಲೆ ವಿಶ್ವಾಸವಿಲ್ಲ ದವರು ಈ ಅಂಗಡಿ ತೆರೆಯಲು ಎಲ್ಲರೂ ಸಹಕಾರ ನೀಡಿರುತ್ತಾರೆ…!! ಸೆಂಟರ್ ಪ್ರಾರಂಭಿಸುವಾಗ ಧರ್ಮಸ್ಥಳದ ಪ್ರಸಾದ ಕಾಯಿ ಯನ್ನು ಇಟ್ಟು ಪೂಜೆಮಾಡಿ ಉದ್ಘಾಟನೆ ಮಾಡಿರುತ್ತಾರೆ.
ಈ ಎಲ್ಲಾ ಸಾಧನೆಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ, ಪೂಜ್ಯ ಹೆಗ್ಗಡೆಯವರ ಆಶೀರ್ವಾದ & ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಜನಜಾಗೃತಿ ವೇದಿಕೆಯ ಕಾರ್ಯಕರ್ತರ ಶ್ರಮದಿಂದ ಸಾಧ್ಯವಾಗಿದೆ ಎಂದು ತಾಯಿ ಮಗ ಇಬ್ಬರು ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

Spread the love
  • Related Posts

    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ

    ಧರ್ಮಸ್ಥಳ, ಆ. 4: ಶ್ರೀ ಕ್ಷೇತ್ರ ಧರ್ಮಸ್ಥಳದ ಅಧಿದೈವ ಶ್ರೀ ಮಂಜುನಾಥ ಸ್ವಾಮಿಯ ಮೇಲಿನ ಅಚಲ ಭಕ್ತಿ ಮತ್ತು ಕೃತಜ್ಞತೆಯ ಸಂಕೇತವಾಗಿ ಉಡುಪಿ ಕರಾವಳಿಯ ಆಳಸಮುದ್ರ ಟ್ರಾಲ್ ಬೋಟ್ ಮೀನುಗಾರರು 770 ಗ್ರಾಂ ತೂಕದ ಬೆಳ್ಳಿಯ ‘ರಾಣಿ ಮೀನು’ ಹಾರವನ್ನು ಸಮರ್ಪಿಸಿದ್ದಾರೆ.…

    Spread the love

    ಸಕಲೇಶಪುರ: ಬೈಕೆರೆ ಗ್ರಾಮದಲ್ಲಿ 300 ಹಣ್ಣಿನ ಗಿಡಗಳ ನೆಡುವ ಮೂಲಕ ಪ್ರಾಣಿ–ಪಕ್ಷಿಗಳ ಆಹಾರ ಸಂರಕ್ಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ವಿಶೇಷ ಅಭಿಯಾನ

    ಸಕಲೇಶಪುರ, ಆ. 3: ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳು ಆಹಾರ ಅರಸಿ ಕಾಡಿನಿಂದ ಗ್ರಾಮಗಳಿಗೆ ಬರುತ್ತಿರುವುದರಿಂದ ಮಾನವ–ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಾಗೂ ವನ್ಯಜೀವಿಗಳಿಗೆ ಕಾಡಿನಲ್ಲೇ ಆಹಾರ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಶ್ರೀ…

    Spread the love

    You Missed

    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ

    • By admin
    • August 4, 2026
    • 2 views
    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ

    ಸಕಲೇಶಪುರ: ಬೈಕೆರೆ ಗ್ರಾಮದಲ್ಲಿ 300 ಹಣ್ಣಿನ ಗಿಡಗಳ ನೆಡುವ ಮೂಲಕ ಪ್ರಾಣಿ–ಪಕ್ಷಿಗಳ ಆಹಾರ ಸಂರಕ್ಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ವಿಶೇಷ ಅಭಿಯಾನ

    • By admin
    • August 3, 2026
    • 7 views
    ಸಕಲೇಶಪುರ: ಬೈಕೆರೆ ಗ್ರಾಮದಲ್ಲಿ 300 ಹಣ್ಣಿನ ಗಿಡಗಳ ನೆಡುವ ಮೂಲಕ ಪ್ರಾಣಿ–ಪಕ್ಷಿಗಳ ಆಹಾರ ಸಂರಕ್ಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ವಿಶೇಷ ಅಭಿಯಾನ

    ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

    • By admin
    • August 2, 2026
    • 8 views
    ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

    ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಮುಚ್ಚಿರಡ್ಕದಲ್ಲಿ ದಾರುಣ ಘಟನೆ

    • By admin
    • August 1, 2026
    • 6 views
    ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಮುಚ್ಚಿರಡ್ಕದಲ್ಲಿ ದಾರುಣ ಘಟನೆ

    ಬೆಳ್ತಂಗಡಿಯಲ್ಲಿ ಭಾರಿ ಮಾದಕವಸ್ತು ಬೇಟೆ: ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಜಪ್ತಿ – ದುಬೈಗೆ ತೆರಳಬೇಕಿದ್ದ ಯುವಕ ಜೈಲುಪಾಲು

    • By admin
    • July 30, 2026
    • 10 views
    ಬೆಳ್ತಂಗಡಿಯಲ್ಲಿ ಭಾರಿ ಮಾದಕವಸ್ತು ಬೇಟೆ: ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಜಪ್ತಿ – ದುಬೈಗೆ ತೆರಳಬೇಕಿದ್ದ ಯುವಕ ಜೈಲುಪಾಲು

    ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವಸಂತ ಗೌಡರ ತುರ್ತು ಚಿಕಿತ್ಸೆಗೆ ನೆರವಿಗಾಗಿ ಮನವಿ

    • By admin
    • July 30, 2026
    • 16 views
    ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವಸಂತ ಗೌಡರ ತುರ್ತು ಚಿಕಿತ್ಸೆಗೆ  ನೆರವಿಗಾಗಿ ಮನವಿ