ವ್ಯಸನ ಮುಕ್ತನಾಗಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ಯುವಕ!!! ಆ ಒಂದು ಮದ್ಯವರ್ಜನ ಶಿಬಿರ ಯುವಕನ ಬದುಕನ್ನೇ ಬದಲಾಯಿಸಿ ಬಿಟ್ಟಿತ್ತೇ!!!? “ಸ್ವಾವಲಂಬಿ ಬದುಕು”

“ಮದ್ಯಮುಕ್ತನಾಗಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ – ಮಂಜು”

ತುಮಕೂರು ತಾಲೂಕಿನ ಅಂತರಸನಹಳ್ಳಿ ಯ ದಿವಂಗತ ವೀರಭದ್ರಪ್ಪನವರ ಮಗನಾದ 34 ವರ್ಷ ವಯಸ್ಸಿನ ಶ್ರೀ ಮಂಜುರವರು ಕಳೆದ 2 ವರ್ಷಗಳ ಹಿಂದೆ ತುಮಕೂರಿನ ಹೋಟೆಲ್ ಅಸೋಸಿಯೇಷನ್ ನಲ್ಲಿ ನಡೆದ ಮದ್ಯವರ್ಜನ ಶಿಬಿರಕ್ಕೆ ಸೇರಿ ಇದೀಗ ಸಂಪೂರ್ಣ ಪಾನಮುಕ್ತರಾಗಿ ಸ್ವತ: ಶ್ರೀ ಗಣೇಶ ಗೋಬಿ ಸೆಂಟರ ನ್ನು ಪ್ರಾರಂಭಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.


ತಂದೆ ವೀರಭದ್ರಯ್ಯ ನವರು ಅಡುಗೆ ಕೆಲಸ ಮಾಡುತ್ತಿದ್ದು ಅವರೂ ಮದ್ಯಪಾನ ಸೇವಿಸುತ್ತಿದ್ದರು…..!
ಸಣ್ಣ ವಯಸ್ಸಿನಲ್ಲಿ ತನ್ನ ಗೆಳೆಯರ ಸಹವಾಸದಿಂದ ಕುಡಿತ ಪ್ರಾರಂಭಿಸಿ ದಿನೇ ದಿನೇ ಕುಡಿತದ ಪ್ರಮಾಣ ಜಾಸ್ತಿಯಾಗುತ್ತಾ ಬಂತು… ತಂದೆ ಬುದ್ಧಿ ಹೇಳಿದರು ಏನೂ ಪ್ರಯೋಜನವಾಗಲಿಲ್ಲ…!! ಕಾರಣ ಅವರೂ ಮದ್ಯವ್ಯಸನಿಯಾಗಿದ್ದ ರು.
ತುಮಕೂರು ಸಿಟಿಯಲ್ಲಿ ಇದ್ದ ಎಲ್ಲಾ ವೈನ್ ಶಾಪ್ ಮತ್ತು ಬಾರ್ ಗಳ ಪರಿಚಯ ಈ ಕುಡಿತದಿಂದ ಆಗಿತ್ತು….!!!
ಕುಡಿತ ಎಷ್ಟು ವಿಪರೀತವಾಗಿತ್ತು ಎಂದರೆ ತಾನು 5 10 ರೂಗಳನ್ನು ಭಿಕ್ಷೆಬೇಡಿಯೂ ಕುಡಿತ ಮಾಡಿಕೊಂಡು ಬಂದ ದಿನಗಳನ್ನು ಈಗ ನೆನಪಿಸಿಕೊಂಡು ಹಳೇ ಜೀವನ ಬಹಳ ಅಸಹ್ಯವಾಗಿತ್ತು…. ಮತ್ತು ಸಮಾಜದಲ್ಲಿ, ಊರಲ್ಲಿ, ಮನೆಯಲ್ಲಿ ಒಂದು ಚೂರು ಮರ್ಯಾದೆಯೇ ಇರಲಿಲ್ಲ!!!! ದಿನಕ್ಕೆ ಅಡುಗೆ ಕೆಲಸ ಮಾಡಿ 500 ರಿಂದ 600 ರೂಪಾಯಿ ಸಂಪಾದಿಸಿದರೂ ಸಂಜೆ ಮನೆಗೆ ಬರಲು ಒಂದು ರೂಪಾಯಿ ಉಳಿಯುತ್ತಿರಲಿಲ್ಲ……..
6 ವರ್ಷಗಳ ಹಿಂದೆ ತಂದೆ ತೀರಿಕೊಂಡರೂ ಬುದ್ಧಿ ಬರಲಿಲ್ಲ,!!! 2011ರಲ್ಲಿ ಮನೆಯಲ್ಲಿ ನಡೆದ ದೊಡ್ಡದೊಂದು ಸಮಸ್ಯೆಯಿಂದ ಕುಡಿತದ ಪ್ರಮಾಣ ಇನ್ನೂ ಜಾಸ್ತಿಯಾಯಿತು. ತಾಯಿಗೆ ಒಂದು ಚೂರು ಪ್ರೀತಿ ಗೌರವ ನೀಡಲಿಲ್ಲ!!! ಬದಲಾಗಿ ಮಾನಸಿಕ ಹಿಂಸೆ ನೀಡುತ್ತಿದ್ದರು…….


ಕಳೆದ 2 ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರ ದಿಂದ ತನ್ನ ಜೀವನ ಪಾವನವಾಯಿತು…. ಮತ್ತು ಕಳೆದ 3 ತಿಂಗಳ ಹಿಂದೆ ಸಮಾಜದಲ್ಲಿ ಸ್ವಾವಲಂಬಿಯಾಗಿ ಸಾಧನೆಯನ್ನು ಮಾಡಿ ಗೌರವಯುತವಾದ ಜೀವನವನ್ನು ನಡೆಸುವ ಛಲವನ್ನು ಹೊತ್ತುಕೊಂಡು 50000 ಸ್ವತ: ದುಡಿಮೆ ಮಾಡಿ , & ಇತರರ ಸಹಕಾರದಿಂದ ತನ್ನ ತಾಯಿಯ ಮಾರ್ಗದರ್ಶನದಿಂದ 2 ಲಕ್ಷ ರೂಪಾಯಿ ಬಂಡವಾಳ ಹಾಕಿ ತುಮಕೂರಿನ ಯಲ್ಲಾಪುರ ರಸ್ತೆ ಅಂತರಸನಹಳ್ಳಿ ಯಲ್ಲಿ ಶ್ರೀ ಗಣೇಶ ಗೋಬಿ ಸೆಂಟರನ್ನು ಪ್ರಾರಂಭಿಸಿರುತ್ತಾರೆ. ಇಲ್ಲಿ ಗೋಬಿ ಮಂಚೂರಿ ಪಾನಿಪುರಿ ಫ್ರೈಡ್ ರೈಸ್ ಹಾಗು ಎಲ್ಲಾತರದ ತಂಪು ಪಾನೀಯಗಳನ್ನು ಸ್ವತಹ ತಾವೇ ತಯಾರಿಸಿ ವ್ಯಾಪಾರ ಮಾಡಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ.

ಕುಡಿತದ ಸಂದರ್ಭದಲ್ಲಿ ಯಾರು ಕೂಡ ಇವರ ಮೇಲೆ ವಿಶ್ವಾಸವಿಲ್ಲ ದವರು ಈ ಅಂಗಡಿ ತೆರೆಯಲು ಎಲ್ಲರೂ ಸಹಕಾರ ನೀಡಿರುತ್ತಾರೆ…!! ಸೆಂಟರ್ ಪ್ರಾರಂಭಿಸುವಾಗ ಧರ್ಮಸ್ಥಳದ ಪ್ರಸಾದ ಕಾಯಿ ಯನ್ನು ಇಟ್ಟು ಪೂಜೆಮಾಡಿ ಉದ್ಘಾಟನೆ ಮಾಡಿರುತ್ತಾರೆ.
ಈ ಎಲ್ಲಾ ಸಾಧನೆಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ, ಪೂಜ್ಯ ಹೆಗ್ಗಡೆಯವರ ಆಶೀರ್ವಾದ & ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಜನಜಾಗೃತಿ ವೇದಿಕೆಯ ಕಾರ್ಯಕರ್ತರ ಶ್ರಮದಿಂದ ಸಾಧ್ಯವಾಗಿದೆ ಎಂದು ತಾಯಿ ಮಗ ಇಬ್ಬರು ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

Spread the love
  • Related Posts

    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    ಉಜಿರೆ: ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮೊಬೈಲ್‌ ಫೋನ್‌ ರಿಪೇರಿ ತರಬೇತಿಯನ್ನು ಆಯೋಜಿಸಿದ್ದು ದಿನಾಂಕ: 17.03.2025 ರಿಂದ 15.04.2025ರ ವರೆಗೆ (30ದಿನ) ತರಬೇತಿ ನಡೆಯುತ್ತದೆ. ತರಬೇತಿಯು ಊಟ, ವಸತಿಯೊಂದಿಗೆ ಉಚಿತವಾಗಿದ್ದು 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ ಭಾಗವಹಿಸಿಸುವವರು ಈ ಕೆಳಗಿನ ಲಿಂಕ್…

    Spread the love

    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    ಮಡಿಕೇರಿ:- ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಶ್ರೀ ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ(ರಿ.), ಅಶ್ವಿನಿ ಆಸ್ಪತ್ರೆ ಮಡಿಕೇರಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಶಾಖೆ…

    Spread the love

    You Missed

    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    • By admin
    • March 15, 2025
    • 60 views
    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

    • By admin
    • February 21, 2025
    • 53 views
    ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    • By admin
    • February 15, 2025
    • 60 views
    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

    • By admin
    • February 15, 2025
    • 228 views
    ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

    ತುಳುನಾಡಿನ ಕೆಡ್ಡಸ ಹಬ್ಬದ ಆಚರಣೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ತುಳುನಾಡ ಕಂಪನ್ನು ರಾಷ್ಟ್ರ ರಾಜಧಾನಿಯಲ್ಲಿ ಪಸರಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು

    • By admin
    • February 12, 2025
    • 80 views
    ತುಳುನಾಡಿನ ಕೆಡ್ಡಸ ಹಬ್ಬದ ಆಚರಣೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ತುಳುನಾಡ ಕಂಪನ್ನು ರಾಷ್ಟ್ರ ರಾಜಧಾನಿಯಲ್ಲಿ ಪಸರಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು

    ಕಡಿರುದ್ಯಾವರ ಗ್ರಾಮದ ಬೆಳ್ಳೂರು ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ

    • By admin
    • February 12, 2025
    • 156 views
    ಕಡಿರುದ್ಯಾವರ ಗ್ರಾಮದ ಬೆಳ್ಳೂರು ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ