ಉಜಿರೆ: ವಿಶ್ವ ಕಾರ್ಟೂನಿಸ್ಟ್ ದಿನಾಚರಣೆ 2026 ಅಂಗವಾಗಿ ಆಯೋಜಿಸಲಾದ ರಾಷ್ಟ್ರ ಮಟ್ಟದ ಕಾರ್ಟೂನ್ ಸ್ಪರ್ಧೆಯಲ್ಲಿ ಕರ್ನಾಟಕದ ಶೈಲೇಶ್ ಉಜಿರೆ ಅವರು ತೃತೀಯ ಬಹುಮಾನವನ್ನು ಗಳಿಸಿ ಗಮನ ಸೆಳೆದಿದ್ದಾರೆ.

“ಯುದ್ಧದ ಕಾಲದಲ್ಲಿ ವಿದೇಶ ಪ್ರವಾಸವನ್ನು ತೊರೆದು, ಶಾಂತಿ ಮತ್ತು ಹಸಿರಿನಿಂದ ಕೂಡಿದ ಬಸ್ತರ್ ಕಡೆ ಬನ್ನಿ” ಎಂಬ ವಿಷಯದ ಮೇಲೆ ನಡೆದ ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಹಲವಾರು ಕಲಾವಿದರು ಭಾಗವಹಿಸಿದ್ದರು.

ಶೈಲೇಶ್ ಉಜಿರೆ ಅವರು ಕಲಾತ್ಮಕತೆ, ಸಾಮಾಜಿಕ ಸಂದೇಶ ಮತ್ತು ವಿನೂತನ ಆಲೋಚನೆಗಳೊಂದಿಗೆ ಆಕರ್ಷಕ ಕಾರ್ಟೂನ್ ಚಿತ್ರಗಳನ್ನು ಮಾಡುತ್ತಿದ್ದು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಶ್ರೀ ಶೈಲೇಶ್ ಕುಮಾರ್ ಅವರುಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥರು (ಎಚ್ಒಡಿ) ಆಗಿದ್ದಾರೆ . ಕಳೆದ 27 ವರ್ಷಗಳ ಶೈಕ್ಷಣಿಕ ಅನುಭವವನ್ನು ಹೊಂದಿದ್ದಾರೆ ಮತ್ತು ಇ-ಕಾಮರ್ಸ್, ಡಿಬಿಎಂಎಸ್ ಮತ್ತು ವಿಬಿ.ನೆಟ್ನಲ್ಲಿ ಪರಿಣತಿ ಹೊಂದಿರುವ ಬಿಸಿಎ ಮತ್ತು ಬಿಎಸ್ಸಿ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಾರೆ.








