ಪೆರಾಜೆ ಯುವಕ ಮಂಡಲ(ರಿ) ಪೆರಾಜೆ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಏಳು ಜನರ ಕ್ರಿಕೆಟ್ ಪಂದ್ಯಾಟ: ಶ್ರೀ ವಿಷ್ಣುಪೆರಾಜೆ ಚಾಂಪಿಯನ್


ಬಂಟ್ವಾಳ/ಮಾಣಿ: ಪೆರಾಜೆ ಯುವಕ ಮಂಡಲ(ರಿ) ಪೆರಾಜೆ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಏಳು ಜನರ ಕ್ರಿಕೆಟ್ ಪಂದ್ಯಾಟ ಪೆರಾಜೆ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.. ಶಿಕ್ಷಕ ಲಕ್ಷ್ಮೀಶ್ ಪಿ. ದೀಪ ಬೆಳಗಿಸಿ ಪಂದ್ಯಾಟ ಉದ್ಘಾಟಿಸಿದರು. ಅದ್ಯಕ್ಷತೆಯನ್ನು ಯುವಕ ಮಂಡಳದ ಅದ್ಯಕ್ಷರಾದ ಬಾಬು ಪೂಜಾರಿ ಕೊಪ್ಪಳ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅದ್ಯಕ್ಷೆ ರೋಹಿಣಿ, ಶಾಂತಪ್ಪ ಮೂಲ್ಯ ಎನಾಜೆ, ಕೃಷ್ಣ ಗೌಡ ಮಂಜೊಟ್ಟಿ, ಕುಶಾಲ ಎಂ ಪೆರಾಜೆ, ಚಂದಪ್ಪ ನಾಯ್ಕ ಅಡ್ಕರೆಕೋಡಿ, ರೋಹಿತ್ ಗಡಿಯಾರ, ದೀಪಕ್ ಪೆರಾಜೆ ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ಶ್ರೀ ವಿಷ್ಣುಪೆರಾಜೆ ಪ್ರಥಮ ಬಹುಮಾನ, ಪ್ರೆಂಡ್ಸ್ ಪಿಲಿಗೂಡು ದ್ವೀತಿಯ ಸ್ಥಾನ, ಸ್ಟಾರ್ ಪ್ರೆಂಡ್ಸ್ ಮಾಣಿ ತೃತೀಯ ಮತ್ತು ಎಸ್.ಎಂ.ಕೆ ಅರ್ಕ ಚತುರ್ಥ ಬಹುಮಾನ ಪಡೆದವು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಬಾಬು ಪೂಜಾರಿ ಕೊಪ್ಪಳ, ನಿತೀನ್ ಅರ್ಬಿ, ದೇಜಪ್ಪ ಪೂಜಾರಿ ಜೋಗಿಬೆಟ್ಟು, ಸುಂದರ ಬಂಗೇರ ಕೇಪುಳಕೆರೆ, ಕುಶಾಲ ಎಂ ಪೆರಾಜೆ, ಹಾಗೂ ಯುವಕ ಮಂಡಲದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸುಕೇಶ್ ಬಡೆಕೋಡಿ ಸ್ವಾಗತಿಸಿ, ಹರೀಶ್ ಮಂಜೊಟ್ಟಿ ಧನ್ಯವಾದವಿತ್ತರು , ಸಚಿನ್ ಮಂಜೊಟ್ಟಿ, ಮನೋಜ್ ಅಂಚನ್ ಕೊಪ್ಪಳ ಕಾರ್ಯಕ್ರಮ ನಿರೂಪಿಸಿದರು ಮತ್ತು ನಿಶಾಂತ್ ಸಾದಿಕುಕ್ಕು,ದಿನೇಶ್ ಬಡೆಕೋಡಿ,ರಕ್ಷಿತ್ ಪಾನೊರು ಕಾರ್ಯಕ್ರಮ ನಿರ್ವಹಿಸಿದರು.

READ ALSO