ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿ ಸಕಲೇಶಪುರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಸನ ಜಿಲ್ಲೆ, 2054ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಸಕಲೇಶಪುರ ಇದರ ವತಿಯಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರದ ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್ ರವರು ಭಾಗವಹಿಸಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಮಾನವ ಜೀವನವು ಪ್ರಕೃತಿಯ ಅದ್ಭುತ ಸೃಷ್ಟಿಗಳಲ್ಲೊಂದು. ಗಿಡದಲ್ಲಿ ಬಾಡುವ ಹೂವುಗಳು ಮತ್ತೆ ಹೊಸ ಚಿಗುರಾಗಿ ಮೂಡುವಂತೆ, ಮನುಷ್ಯ ಜೀವನದಲ್ಲಿಯೂ ಪುನರ್ಜನ್ಮ ಮತ್ತು ಹೊಸ ಆರಂಭದ ತತ್ತ್ವ ಅಡಕವಾಗಿದೆ ಎಂಬ ಆಧ್ಯಾತ್ಮಿಕ ಚಿಂತನೆ ಸಮಾಜದಲ್ಲಿ ಮಹತ್ವ ಪಡೆದುಕೊಂಡಿದೆ.
ಪರಮಾತ್ಮನ ಅಂಶವೇ ಜೀವಾತ್ಮವಾಗಿ ಮನುಷ್ಯನಲ್ಲಿ ನೆಲೆಸಿದೆ ಎಂಬ ನಂಬಿಕೆ ಅನೇಕ ಧಾರ್ಮಿಕ ಮತ್ತು ತತ್ತ್ವಶಾಸ್ತ್ರೀಯ ಪರಂಪರೆಗಳಲ್ಲಿ ಕಂಡುಬರುತ್ತದೆ. ಜೀವಾತ್ಮವು ಪರಮಾತ್ಮನಿಂದ ಬಂದದ್ದು ಮತ್ತು ಮತ್ತೆ ಅದೇ ಪರಮತತ್ವದ ಕಡೆಗೆ ಸಾಗುವುದು ಜೀವನದ ನಿಜವಾದ ಗುರಿ ಎಂದು ಅಭಿಪ್ರಾಯಪಟ್ಟರು.
ಮಾನವ ಸೃಷ್ಟಿಯ ಹಿಂದೆ ಭಗವಂತನ ಅರ್ಥಪೂರ್ಣ ಉದ್ದೇಶವಿದೆ ಎಂದು ತಿಳಿಯಲಾಗಿದೆ. ಧರ್ಮಾಚರಣೆ, ಸತ್ಯನಿಷ್ಠೆ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುವುದು ಮನುಷ್ಯ ಜನ್ಮದ ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿ ಸತ್ಯವಂತರಾಗಿ ಬದುಕುವುದು ಹಾಗೂ ಇತರರಿಗೆ ಉಪಕಾರ ಮಾಡುವುದೇ ನಿಜವಾದ ಮಾನವೀಯತೆ, ಜೈವಿಕ ವೈವಿಧ್ಯತೆಯಲ್ಲಿ ಪ್ರಾಣಿಗಳು ಸಹಜ ನಿಯಮದಂತೆ ಬದುಕುತ್ತವೆ. ಆದರೆ ಮನುಷ್ಯನಿಗೆ ವಿಶೇಷವಾದ ವಿವೇಚನಾ ಶಕ್ತಿ ಇದೆ. ತಪ್ಪನ್ನು ಅರಿತು ತಿದ್ದಿಕೊಳ್ಳುವ ಸಾಮರ್ಥ್ಯವೂ ಮನುಷ್ಯನಿಗೇ ವಿಶೇಷವಾಗಿದೆ. ಇದೇ ಕಾರಣದಿಂದ ಮನುಷ್ಯ ಮತ್ತು ಪ್ರಾಣಿಗಳ ನಡುವೆ ದೊಡ್ಡ ವ್ಯತ್ಯಾಸ ಕಂಡುಬರುತ್ತದೆ.
ಮನುಷ್ಯನ ಪಂಚೇಂದ್ರಿಯಗಳು ಮೆದುಳಿನೊಂದಿಗೆ ಸಂಪರ್ಕ ಹೊಂದಿದ್ದು, ಅವುಗಳ ಮೂಲಕ ಜ್ಞಾನ ಮತ್ತು ಅನುಭವಗಳು ರೂಪುಗೊಳ್ಳುತ್ತವೆ. ಆದರೆ ಮನಸ್ಸನ್ನು ನಿಯಂತ್ರಿಸುವುದು ಅತಿ ಕಷ್ಟಕರವಾದ ಕಾರ್ಯ ನಮ್ಮ ಆಲೋಚನೆಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ, ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಆಲೋಚನೆಗಳನ್ನು ಅಳವಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳು ಬೆಳೆಯಲು ಸಾಧ್ಯ,
ಮಾನವ ಜೀವನದಲ್ಲಿ ಪುನರ್ಜನ್ಮ ಎನ್ನುವುದು ಕೇವಲ ದೇಹದ ಮರುಜನ್ಮವಲ್ಲ, ಉತ್ತಮ ಚಿಂತನೆ ಮತ್ತು ಸಜ್ಜನಿಕೆಯ ಮೂಲಕ ಹೊಸ ಬದುಕನ್ನು ಆರಂಭಿಸುವುದೇ ನಿಜವಾದ ಪುನರ್ಜನ್ಮವಾಗಿದೆ.
ಜೀವನದಲ್ಲಿ ತಪ್ಪುಗಳನ್ನು ಅರಿತು ಸರಿದಾರಿಯಲ್ಲಿ ನಡೆಯುವ ವ್ಯಕ್ತಿ ನವಜೀವನವನ್ನು ಪಡೆಯುತ್ತಾನೆ, ಮನುಷ್ಯನು ಸತ್ಯ, ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಅವನ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆ ಉಂಟಾಗುತ್ತದೆ. ಇದೇ ಬದಲಾವಣೆ ನಿಜವಾದ ಪುನರ್ಜನ್ಮವಾಗಿದೆ.
ಪ್ರಕೃತಿಯಲ್ಲಿ ಬಾಡಿದ ಹೂವು ಮತ್ತೆ ಹೊಸ ಚಿಗುರಿಗೆ ದಾರಿಯಾಗುವಂತೆ, ಮನುಷ್ಯನ ಜೀವನದಲ್ಲಿಯೂ ಸಂಕಷ್ಟಗಳ ನಂತರ ಉತ್ತಮ ಜೀವನ ಆರಂಭವಾಗಬಹುದು. ಸಜ್ಜನತೆ, ಪ್ರಾಮಾಣಿಕತೆ ಮತ್ತು ಒಳ್ಳೆಯ ಕಾರ್ಯಗಳ ಮೂಲಕ ಸಮಾಜದಲ್ಲಿ ಗೌರವಯುತ ಜೀವನ ನಡೆಸಬಹುದು, ಮಾನವ ಜನ್ಮದ ಮುಖ್ಯ ಉದ್ದೇಶ ಧರ್ಮಾಚರಣೆ ಮತ್ತು ಸತ್ಯವಂತಿಕೆಯ ಜೀವನವಾಗಿದೆ. ಮನುಷ್ಯನಿಗೆ ಇರುವ ವಿವೇಕಶಕ್ತಿ ಅವನನ್ನು ಇತರ ಪ್ರಾಣಿಗಳಿಗಿಂತ ಭಿನ್ನವಾಗಿಸುತ್ತದೆ. ತನ್ನ ತಪ್ಪನ್ನು ಅರಿತು ತಿದ್ದಿಕೊಳ್ಳುವ ಗುಣವೇ ಮನುಷ್ಯನ ಅತ್ಯಂತ ದೊಡ್ಡ ಶಕ್ತಿಯಾಗಿದೆ,
ಮನಸ್ಸಿನ ನಿಯಂತ್ರಣ ಮತ್ತು ಒಳ್ಳೆಯ ಆಲೋಚನೆಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ. ದುಷ್ಟ ಆಲೋಚನೆಗಳಿಂದ ದೂರವಿದ್ದು ಸಜ್ಜನ ಮಾರ್ಗದಲ್ಲಿ ನಡೆಯುವವರು ಸಮಾಜಕ್ಕೆ ಆದರ್ಶವಾಗುತ್ತಾರೆ. ಇಂತಹ ಮೌಲ್ಯಯುತ ಬದುಕೇ ನವಜೀವನದ ನಿಜವಾದ ಅರ್ಥ, ಮನಸ್ಸಿನ ಶುದ್ಧಿ ಮತ್ತು ಸಜ್ಜನ ಜೀವನವೇ ಆತ್ಮವನ್ನು ಪರಮಾತ್ಮನ ಕಡೆಗೆ ನಡೆಸುವ ದಾರಿ” ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, 2054ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರೇಖಾ ಸುರೇಶ್, ಉಪಾಧ್ಯಕ್ಷರಾದ ವಿಜಯಕುಮಾರ್ ಬ್ಯಾಕರವಳ್ಳಿ, ಕೋಶಾಧಿಕಾರಿ ಯೋಗೇಶ್, ಯೋಜನಾಧಿಕಾರಿ ರಾಜೇಶ್ ಎಂ ಕಾನರ್ಪ, ಶಿಬಿರಾಧಿಕಾರಿ ನಂದ ಕುಮಾರ್, ಆರೋಗ್ಯ ಸಹಾಯಕಿ ಫಿಲೋಮಿನಾ ಡಿಸೋಜ ಹಾಗೂ ಯೋಜನೆಯ ಕಾರ್ಯಕರ್ತರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ಸೇವಾ ಪ್ರತಿನಿಧಿಯವರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು





