ಮೈಸೂರು: ಸನ್ಮಾನ್ಯ ಶ್ರೀ ಪ್ರತಾಪ್ ಸಿಂಹ ಸಂಸದರು ಮೈಸೂರು – ಕೊಡಗು ಸಂಸದರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆಯ ಮೂಲಕ ಕೊಡುಗೆಯಾಗಿ ನೀಡಿದ ಹೊಸ ಟಾಟಾ-ವಿಂಗರ್🚑 ಅಂಬುಲೆನ್ಸ್ ವಾಹನವನ್ನು ಮಾನ್ಯ ಸಂಸದರ ಪತ್ನಿ ಡಾ.ಅರ್ಪಿತಾ ಸಿಂಹ ರವರು ಇಂದು ಬಿಡುಗಡೆಗೊಳಿಸಿ ಹಸ್ತಾಂತರಿಸಿದರು,ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ,ಮುಖ್ಯ ವೈದ್ಯಾಧಿಕಾರಿ ಡಾ ವಂದನಾ ಎಂ ಇರ್ವತ್ರಾಯ,ಪಿ ಆರ್ ಓ ಗಣೇಶ್ ಮೊದಲಾದವರಿದ್ದರು.
ಶ್ರೀ ಕೃಷ್ಣ ಯೋಗಕ್ಷೇಮ ಯೋಜನೆಯು ಸುಮಾರು ಏಳು ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಡಾ ಮುರಳಿಕೃಷ್ಣ ಇರ್ವತ್ರಾಯ ಇವರ ವೈದ್ಯಕೀಯ ಸೇವೆಯ ಒಂದು ಅದ್ಬುತ ಪರಿಕಲ್ಪನೆಯುಳ್ಳ ಯೋಜನೆಯಾಗಿದೆ,ಆಸ್ಪತ್ರೆಗೆ ತೆರಳಲು ಆಗದಂತಹ ಹಾಸಿಗೆ ಹಿಡಿದ ಹಳ್ಳಿ ದುರ್ಗಮ ಪ್ರದೇಶದ ರೋಗಿಗಳಿಗೆ/ಹಿರಿಯ ನಾಗರಿಕರಿಗೆ ಅವರ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುವುದು,ಮತ್ತು ಅವರನ್ನು ಸೂಕ್ತ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ತಲುಪಿಸುವುದು ಆಗಿದೆ. ಈ ಯೋಜನೆಗೆ ತುಳುಕೂಟ ಕುವೈತ್ ಇವರು ಪ್ರೊತ್ಸಾಹವನ್ನು ನೀಡುತ್ತಿದ್ದಾರೆ. ಸಹಾಯವಾಣಿ:9483525100