ವನವಾಸಿ ಕಲ್ಯಾಣ ಆಶ್ರಮದ ಶಾಂತಾರಾಂ ಸಿದ್ಧಿ ವಿಧಾನಪರಿಷತ್ ಗೆ ಆಯ್ಕೆ

ಬೆಂಗಳೂರು: ಮೂರು ದಶಕಗಳಿಂದ ಪಶ್ಚಿಮ ಘಟ್ಟದ ವನವಾಸಿಗಳ ನಡುವೆ ಕೆಲಸ ಮಾಡುತ್ತಿರುವ ಶಾಂತಾರಾಂ ಸಿದ್ಧಿ ಯವರನ್ನು ಮೇಲ್ಮನೆಗೆ ರಾಜ್ಯಪಾಲರು ನಾಮಕರಣ ಮಾಡಿದ್ದಾರೆ .

ಇವರು ಸಿದ್ಧಿ ಸಮುದಾಯದ ಮೊದಲ ಪದವೀಧರರು . 7ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ಪ್ರತಿಭಾವಂತ . ಪದವಿಯ ನಂತರ ವನವಾಸಿಗಳ ನಡುವೆ ಕೆಲಸ ಮಾಡಲು ವನವಾಸಿ ಕಲ್ಯಾಣಾಶ್ರಮದ ಪೂರ್ಣಾವಧಿ ಕಾರ್ಯಕರ್ತರಾದರು.

ಶಿರಸಿ – ಯಲ್ಲಾಪುರ ನಡುವಿನ ಹಿತ್ಲಳ್ಳಿ ಗ್ರಾಮದಲ್ಲಿನ ಪುಟ್ಟ ಮನೆಯಲ್ಲಿ ನೆಲಸಿರುವ ಶಾಂತಾರಾಂ ಸಿದ್ಧಿ ಈ ಹಿಂದೆ ಪಶ್ಛಿಮ ಘಟ್ಟ ಕಾರ್ಯಪಡೆಯ ಸದಸ್ಯರಾಗಿದ್ದರು.
ಕಾಲೇಜು ದಿನಗಳಿಂದ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು.

ಆಫ್ರಿಕಾದ ಜಾಂಬೇಶೀಯಾ ಎಂಬ ಪ್ರದೇಶದ ಸಿಧಾಮೋ ಎಂಬ ಸಮುದಾಯದ ಜನರನ್ನು ಬ್ರಿಟಿಷರು ಕೂಲಿ ಆಳುಗಳನ್ನಾಗಿ ಭಾರತಕ್ಕೆ ಕರೆತಂದು ಬ್ರಿಟೀಷರು ವಾಪಾಸ್ ಹೋದಾಗ ಇವರು ಹೊಟ್ಟೆ ಪಾಡಿಗೆ ಗೋವಾದ ಅಡವಿಯಿಂದ ಉತ್ತರಕನ್ನಡ ಜಿಲ್ಲೆಗೆ ಬಂದು ಇರುವವರೇ ಈ ಸಿದ್ಧಿ ಸಮುದಾಯದವರು.

ಪಶ್ಚಿಮ ಘಟ್ಟದ ಉತ್ತರ ಕನ್ನಡ ಜಿಲ್ಲೆಯ ದಟ್ಟ ಅಡವಿಯ ಒಳಗಿಂದ ಅಗೋಚರವಾಗಿ ಹೊರ ಬಂದ ವನ ನಿನಾದದಲ್ಲಿ ಒಂದು ಕೂಗು ಇತ್ತು, ವೇದನೆಯ ಆಚೆಯ ಸಾವಿರದ ನೋವು ಇದ್ದೇ ಇತ್ತು. ನಮ್ಮ ಹಂದರವನು ಕಾಪಾಡಿ ಎಂದು ಮರ, ಗಿಡಗಳು ಹಕ್ಕಿಗಳ ಮೂಲಕ ಆಕಾಶಕ್ಕೆ ಮತ್ತು ನಮ್ಮ ಬದುಕನ್ನು ಉಳಿಸಿ ಎಂದು ಎಲೆಗಳ ಮೂಲಕ ನೆಲಕ್ಕೆ ಸಂದೇಶಗಳು ರವಾನೆ ಆಗುತ್ತಲೇ ಇದ್ದವು. ಅಡವಿ ಹಕ್ಕಿಗಳು ಹಣ್ಣು ಕುಕ್ಕಿದವು, ಮಣ್ಣಿನ ಒಳಗಿಂದ ಬೀಜಗಳು ಮೊಳಕೆ ಬಂದು ಚಿಗುರಿದವು. ಕೂಗಿಗೆ ಒಂದು ರಾಗ ಬದ್ಧ ಪಥ ಇದ್ದರೂ ಎಳೆದೊಯ್ದ ದಡ ಸೇರಿಸುವ ರಥ ಇರಲಿಲ್ಲ.
ಪಶ್ಚಿಮ ಘಟ್ಟದ ಯಲ್ಲಾಪುರದ ಸಿದ್ಧಿ ಬುಡಕಟ್ಟು ಸಮುದಾಯದ ಶಾಂತಾರಾಮ್ ಸಿದ್ಧಿ ಯವರಿಗೆ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶನ ಆಗಿರುವುದು ನಿಜಕ್ಕೂ ಸಂತಸದ ವಿಷಯ. ಸಿದ್ಧಿ ಸಮುದಾಯದ ಒಬ್ಬ ವ್ಯಕ್ತಿಗೆ ರಾಜಕೀಯ ಸ್ಥಾನ ಮಾನ ಲಭಿಸಿರುವುದು ಇದು ಪ್ರಪ್ರಥಮ ಬಾರಿಗೆ. ಕತ್ತಲೆಯ ಬದುಕಿನಲ್ಲಿ ಕತ್ತು ಬಗ್ಗಿಸಿಕೊಂಡು ಅಳುಕಿನಲ್ಲಿ ಇದ್ದ ಸಿದ್ಧಿ ಸಮುದಾಯಕ್ಕೆ ಇದು ಒಂದು ಬೆಳಕು ಆಗಬಹುದು ಎಂದು ನಮ್ಮೆಲ್ಲರ ನಿರೀಕ್ಷೆ.

ದಿನೇಶ್ ಹೊಳ್ಳ ಸಹ್ಯಾದ್ರಿ ಸಂಚಯ (ರಿ)

Spread the love
  • Related Posts

    ನಿಡ್ವಾಳದಲ್ಲಿ ಪಂಚಕಲ್ಯಾಣ ಮಹೋತ್ಸವ ಹಾಗೂ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಫೆ.18 ರಿಂದ 22ರವರೆಗೆ ವೈಭವದ ಧಾರ್ಮಿಕ ಕಾರ್ಯಕ್ರಮ

    ಪುದುವೆಟ್ಟು: ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಹಚ್ಚ ಹಸಿರು ಪ್ರಕೃತಿಯ ಮಡಿಲಿನಲ್ಲಿ ನೆಲೆಸಿರುವ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ, ನಿಡ್ವಾಳದಲ್ಲಿ ಫೆಬ್ರವರಿ 18ರಿಂದ 22ರವರೆಗೆ ಪಂಚಕಲ್ಯಾಣ ಮಹೋತ್ಸವ ಹಾಗೂ ಧಾಮ ಸಂಪ್ರೋಕ್ಷಣಾ…

    Spread the love

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಡಾ.ಹೆಗ್ಗಡೆಯವರಿಂದ ಚಾಲನೆ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದೀಪಬೆಳಗಿಸಿ ಚಾಲನೆ ನೀಡಿದರು. “ಸರ್ವೇಜನಾಃ ಸುಖಿನೋ ಭವಂತು”. ಎಲ್ಲರಿಗೂ ಸುಖ-ಶಾಂತಿ, ನೆಮ್ಮದಿಯೊಂದಿಗೆ ಸನ್ಮಂಗಳವಾಗಲಿ ಸರ್ವರಿಗೂ ಕಲ್ಯಾಣವಾಗಲಿ ಎಂದು ಹಾರೈಸಿದರು. ಬಳಿಕ ಎಲ್ಲರೂ ಸಾಮೂಹಿಕವಾಗಿ…

    Spread the love

    You Missed

    ನಿಡ್ವಾಳದಲ್ಲಿ ಪಂಚಕಲ್ಯಾಣ ಮಹೋತ್ಸವ ಹಾಗೂ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಫೆ.18 ರಿಂದ 22ರವರೆಗೆ ವೈಭವದ ಧಾರ್ಮಿಕ ಕಾರ್ಯಕ್ರಮ

    • By admin
    • February 16, 2026
    • 22 views
    ನಿಡ್ವಾಳದಲ್ಲಿ ಪಂಚಕಲ್ಯಾಣ ಮಹೋತ್ಸವ ಹಾಗೂ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ  ಫೆ.18 ರಿಂದ 22ರವರೆಗೆ ವೈಭವದ ಧಾರ್ಮಿಕ ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಡಾ.ಹೆಗ್ಗಡೆಯವರಿಂದ ಚಾಲನೆ

    • By admin
    • February 15, 2026
    • 25 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಡಾ.ಹೆಗ್ಗಡೆಯವರಿಂದ ಚಾಲನೆ

    ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಬಡಿಸಲು ಆಮೆಗಳ ಬೇಟೆ, ಆಮೆಗಳ ಸಹಿತ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

    • By admin
    • February 15, 2026
    • 80 views
    ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಬಡಿಸಲು ಆಮೆಗಳ ಬೇಟೆ, ಆಮೆಗಳ ಸಹಿತ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

    ಮುಂಡಾಜೆ ಮೈರಣಗುಡ್ಡೆಯಲ್ಲಿ ಕಾಣಿಸಿಕೊಂಡ ಬೆಂಕಿ

    • By admin
    • February 14, 2026
    • 26 views
    ಮುಂಡಾಜೆ ಮೈರಣಗುಡ್ಡೆಯಲ್ಲಿ  ಕಾಣಿಸಿಕೊಂಡ ಬೆಂಕಿ

    ಬೆಳ್ತಂಗಡಿಯ KAF ಕ್ರಿಯೇಟಿವ್ ಶಾಪ್ ನಲ್ಲಿ ಹಿಲಿಯಂ ಗ್ಯಾಸ್ ಬ್ಲಾಸ್ಟ್

    • By admin
    • February 14, 2026
    • 54 views
    ಬೆಳ್ತಂಗಡಿಯ KAF ಕ್ರಿಯೇಟಿವ್ ಶಾಪ್ ನಲ್ಲಿ  ಹಿಲಿಯಂ ಗ್ಯಾಸ್ ಬ್ಲಾಸ್ಟ್

    ಪುತ್ತೂರಿನಲ್ಲಿ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆ

    • By admin
    • February 13, 2026
    • 39 views
    ಪುತ್ತೂರಿನಲ್ಲಿ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆ