ಇಂದು 21 ನೇ ಕಾರ್ಗಿಲ್ ವಿಜಯ್ ದಿವಸ್ ದೇಶಕ್ಕಾಗಿ ತನ್ನ ಪ್ರಾಣ ಪಣಕ್ಕಿಟ್ಟು ಹುತಾತ್ಮರಾದ ವೀರ ಯೋಧರಿಗೆ ನಮನ

ನವದೆಹಲಿ: ನಮ್ಮ ಹೆಮ್ಮೆಯ ಯೋಧರಿಗೆ ಗೌರವ ಸೂಚಿಸುವ ‘ಕಾರ್ಗಿಲ್‌ ವಿಜಯ ದಿವಸ’ಕ್ಕೆ 21ರ ಸಂಭ್ರಮ ಇಂದು . ಇಪ್ಪತ್ತೊಂದು ವರ್ಷಗಳ ಹಿಂದೆ ಪಾಕಿಸ್ತಾನದ ಸಂಚನ್ನು ಪ್ರತಿಬಂಧಿಸಿ ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲಾ ರಕ್ಷಿಸಿದ್ದರು. ಅಂಥಾ ವೀರಯೋಧರಿಗೆ ನಮನ ಸಲ್ಲಿಸಲು ಜೂನ್‌ 26ನ್ನು ಪ್ರತಿ ವರ್ಷ ಕಾರ್ಗಿಲ್‌ ದಿವಸವನ್ನಾಗಿ ಆಚರಿಸುತ್ತೇವೆ. ತ್ಯಾಗ ಬಲಿದಾನದ ಮಾಸದ ನೆನಪು ಇಂದಿಗೂ ಹಸಿಯಾಗಿದೆ.


ಸದಾ ಭಾರತದ ಕೆಡುಕನ್ನೇ ಬಯಸುವ ಕಪಟಿ ಪಾಕಿಸ್ತಾನ ಒಂದು ಕಡೆಯಿಂದ ಅಂದಿನ ಪ್ರಧಾನಿ ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಇನ್ನೊಂದು ಕಡೆಯಿಂದ ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರಿನಲ್ಲಿ ನವಾಜ್‌ ಶರೀಫ್‌, ಪ್ರಧಾನಿ ವಾಜಪೇಯಿ ಅವರ ಕೈಕುಲುಕುತ್ತಿರುವಾಗ ಇತ್ತ ಗಡಿ ಭಾಗದಲ್ಲಿ ತನ್ನ ಸೇನೆಯನ್ನು ಜಮಾಗೊಳಿಸಿ, ಭಾರತದ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿತ್ತು. ಸ್ನೇಹ ಹಸ್ತ ಚಾಚುತ್ತಾ ಭಾರತ ಎಲ್ಲೋ ಒಂದು ಬದಿಯಲ್ಲಿ ಪಾಕಿಸ್ತಾನವನ್ನು ನಂಬಿ ಮೈಮರೆತಿತ್ತು.

ವಿಶ್ವಕ್ಕೆ ಶಾಂತಿ ಸಾರಿದ ರಾಷ್ಟ್ರ ನಮ್ಮದು. ಆದರೆ ಪಕ್ಕದ ರಾಷ್ಟ್ರ ನಮ್ಮ ಮೇಲೆ ಆಕ್ರಮಣ ಮಾಡಲು ಬರಬಹುದು ಎಂದು ಊಹಿಸಿಕೊಳ್ಳುವುದಕ್ಕೂ ಮುಂಚೆಯೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ವಾಜಪೇಯಿ ಸರಕಾರದ ವೈಫಲ್ಯವಿದು ಅಂತಾ ಸರಕಾರದ ಮೇಲೆ ಪ್ರತಿಪಕ್ಷ ಗಳು ಮುಗಿಬಿದ್ದವು. ಕೆಲವೊಂದಷ್ಟು ಜನ ಇನ್ನೂ ಮುಂದಕ್ಕೆ ಹೋಗಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟು ಬಿಡಿ ಎಂದರು. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ರಾಜಿನಾಮೆ ನೀಡಬೇಕೆಂಬ ಒತ್ತಡವಿದ್ದರೂ ಯಾವುದಕ್ಕೂ ಬಗ್ಗದೇ ಸೇನೆಗೆ ವಾಜಪೇಯಿ ಶಕ್ತಿ ತುಂಬಿದರು.

ಪ್ರಧಾನಿಯ ಆದೇಶ ಬಂದ ತಕ್ಷ ಣ ಸೇನೆ ತನ್ನ ಕಾರ್ಯಾಚರಣೆಯನ್ನು ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಪ್ರಾರಂಭಿಸಿತು. ಇತ್ತ ಉಕ್ಕಿನ ಮನುಷ್ಯಅಡ್ವಾಣಿ ತಕ್ಷ ಣವೇ ಇಸ್ರೇಲ್‌ಗೆ ತೆರಳಿ ಮದ್ದುಗುಂಡು ಹಾಗು ಅಗತ್ಯ ಸೇನಾ ನೆರವು ಪಡೆದುಕೊಂಡು ಬಂದರು. ಯುದ್ಧ ನಡೆಯುತ್ತಿದ್ದ ಸ್ಥಳದ ಪರಿಸ್ಥಿತಿಯ ಅವಲೋಕನ ನಡೆಸಿ ಅತ್ಯಂತ ಕೆಟ್ಟ ಹವಾಮಾನ, ಕೈಯಲ್ಲಿರುವ ಕಳಪೆ ಸಾಮಾಗ್ರಿಗಳು, ವೈರಿಪಡೆಯ ಅತ್ಯಾಧುನಿಕ ಆಯುಧಗಳ ನಡುವೆಯೂ ನಮ್ಮ ಸೇನೆ ಧೃತಿಗೆಡದೆ ಆಪರೇಷನ್‌ ವಿಜಯ್‌ ಮೂಲಕ ಹೋರಾಟ ನಡೆಸುತ್ತಾ ಒಂದೊಂದೇ ಸ್ಥಳವನ್ನು ವಾಪಸ್ಸು ಪಡೆಯಿತು.

74 ದಿನಗಳ ಕಾಲ ನಡೆದ ಯುದ್ಧದಲ್ಲಿ ದಿನಕ್ಕೆ 15 ಕೋಟಿಯಂತೆ ಸುಮಾರು 1100 ಕೋಟಿಗಳಷ್ಟು ಹಣ ವ್ಯಯಿಸಲಾಗಿತ್ತು. ಖರ್ಚಾದ ಹಣವಿರಲಿ, ಆದರೆ ದೇಶ ಅದೆಷ್ಟೋ ಯುವ ಸೇನಾನಿಗಳನ್ನು ಕಳೆದುಕೊಂಡಿತ್ತು. ನಮ್ಮವರು 527, ಪಾಕಿಸ್ತಾನದವರು 696 ಜನ ಸಾವಿಗೀಡಾದರು. ಜುಲೈ 26ರಂದು ಕಾರ್ಗಿಲ್‌ನ ಕೊನೆಯ ಠಾಣೆಯನ್ನು ಭಾರತೀಯ ಸೇನೆ ವಶಪಡಿಸಿಕೊಂಡು ಗೆಲುವು ಘೋಷಿಸಿತು. ಅದುವೇ ಕಾರ್ಗಿಲ್‌ ವಿಜಯ ದಿವಸ.

ಅಂದು ಭಾರತ ಪಾಕಿಸ್ತಾನದ ಒಳಗೆ ಹೋಗಿ ಯುದ್ಧ ಮಾಡಿರಲಿಲ್ಲ. ಅಂತಾರಾಷ್ಟ್ರೀಯ ಗಡಿರೇಖೆ ಉಲ್ಲಂಘಿಸಿರಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ಯುದ್ಧ ಗೆದ್ದಿತ್ತು. ಸೇನೆಯಲ್ಲಿ ಮದ್ದು ಗುಂಡುಗಳಿರದಿದ್ದರೂ ಯೋಧರ ಆತ್ಮವಿಶ್ವಾಸ ಕಾರ್ಗಿಲ್‌ನ ಎತ್ತರದ ಬೆಟ್ಟಗುಡ್ಡಗಳನ್ನೂ ಮೀರಿಸುವಂತಿತ್ತು. ಹೀಗೆ ಪಾಕಿಸ್ತಾನಕ್ಕೆ ನಮ್ಮ ಯೋಧರು ಪಾಠ ಕಲಿಸಿ 20 ವರ್ಷ ಇಂದಿಗೆ ಕಳೆದಿದೆ. ವಿಜಯದ ಸಂಕೇತವಾಗಿ ಹುತಾತ್ಮರಿಗೆ ನಮನಗಳನ್ನು ಸಲ್ಲಿಸಲು ಜುಲೈ 26ನ್ನು ಕಾರ್ಗಿಲ್‌ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ಹುತಾತ್ಮ ಯೋಧರಿಗೆ ನಮನಗಳು.

Spread the love
  • Related Posts

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಜಿಲ್ಲೆಯಾದ್ಯಂತ ಬಾರಿ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ನದಿತೀರಗಳಿಗೆ ತಗ್ಗು ಪ್ರದೇಶಗಳಿಗೆ ತೆರಳದಂತೆ ಸೂಚನೆ ನೀಡಿದೆ ಮುನ್ನೆಚ್ಚರಿಕೆ ಕ್ರಮವಾಗಿ ದ.ಕ ಜಿಲ್ಲೆಯ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿಸಲಾಗಿದೆ Spread the love

    Spread the love

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ಬಳಿಕ ಚರಂಡಿ ನಿರ್ಮಿಸಿದ್ದು, ಕೆಲವು ಕಡೆ ಮುಚ್ಚಲಾಗಿಲ್ಲ, ಇಂದು ಸಂಜೆ ತೆರೆದ ಚರಂಡಿಯ ಬಗ್ಗೆ ಅರಿವಿಲ್ಲದೆ ಅಂಗಡಿಯಿಂದ ಸಾಮಾಗ್ರಿ ಖರೀದಿಸಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯಗೊಂಡಿರುವ…

    Spread the love

    You Missed

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • June 16, 2025
    • 138 views
    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ  ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    • By admin
    • June 15, 2025
    • 154 views
    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    • By admin
    • June 12, 2025
    • 97 views
    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    • By admin
    • June 12, 2025
    • 56 views
    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    ಬೆಳ್ತಂಗಡಿ, ಪುಂಜಾಲಕಟ್ಟೆ PSI ನಂದಕುಮಾರ್ ರವರಿಗೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ

    • By admin
    • June 11, 2025
    • 67 views
    ಬೆಳ್ತಂಗಡಿ, ಪುಂಜಾಲಕಟ್ಟೆ PSI ನಂದಕುಮಾರ್ ರವರಿಗೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ

    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು

    • By admin
    • June 11, 2025
    • 75 views
    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು