
ಬೆಳ್ತಂಗಡಿ: ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಹಾಗೂ ಲಾಕ್ ಡೌನ್ ಜಾರಿ ಮಾಡುವ ಕುರಿತು 48 ಗ್ರಾ.ಪಂ ವ್ಯಾಪ್ತಿಗಳ ಪ್ರತಿನಿಧಿ ಜೊತೆ ಸಮಾಲೋಚನಾ ಸಭೆ ಜು.11 ರಂದು ಎಸ್.ಡಿ.ಎಮ್ ಸಭಾಂಗಣದಲ್ಲಿ ಜರುಗಿತು.

ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು. ತಾಲೂಕನ್ನು ಕೊರೋನಾ ಮುಕ್ತ ತಾಲೂಕು ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಪ್ರಯತ್ನ ಅಗತ್ಯ. ಕೊರೋನಾ ಹೆಚ್ಚಾಗದಂತೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿ ಬೂತ್ ನಲ್ಲಿ ಕೊರೋನಾ ಸೈನಿಕರ ತಂಡವನ್ನು ರಚಿಸಬೇಕು, ತಾಲೂಕಿನಲ್ಲಿ ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ಅಭಿಪ್ರಾಯ ತಿಳಿಸಬೇಕು ಎಂದು ತಿಳಿಸಿದರು.
ಶೇಕಡ 90 ಜನರ ಅಭಿಪ್ರಾಯ ಮದ್ಯಾಹ್ನ 2ಗಂಟೆವರೆಗೆ ಮಾತ್ರ ಅಂಗಡಿ ಗಳನ್ನು ತೆರೆಯುವುದು ಎಂಬ ತಿರ್ಮಾನ ವ್ಯಕ್ತವಾಯ್ತು. ಹಾಗೂ ತಾಲೂಕಿನ 9 ಖಾಸಗಿ ಆಸ್ಪತ್ರೆ ಗಳು ಇನ್ನೂ ಮುಂದಕ್ಕೆ ಮದ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಿಗ್ಗೆ 8 ಗಂಟೆವರೆಗೆ ಹೊರ ರೋಗಿ ವಿಭಾಗ ಲಬ್ಯವಿರುವುದಿಲ್ಲ ಮತ್ತು ತುರ್ತು ಸೇವೆ,ಅಪಘಾತ ವಿಭಾಗ, ನೊಂದಾವಣೆ ವಿಬಾಗಗಳು ಎಂದಿನಂತೆ 24ಗಂಟೆ ಕರ್ತವ್ಯ ನಿರ್ವಹಿಸುವುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಶಾಸಕರು ಎಲ್ಲರ ಅಭಿಪ್ರಾಯ ಕ್ರೂಡಿಕರಿಸಿ ಇನ್ನೂ ಮುಂದೆ 15 ದಿನಗಳ ಮದ್ಯಾಹ್ನ 2 ಗಂಟೆಯ ನಂತರ ಸ್ವಯಂ ಘೋಷಿತ ಲಾಕ್ ಡೌನ್ ಎಂಬ ತಿರ್ಮಾನ ಕೈಗೊಂಡು ಈ ಲಾಕ್ ಡೌನ್ ಯಾವುದೆ ಒತ್ತಾಯ ಪೂರ್ವಕ ಅಲ್ಲ ಬದಲಿಗೆ ಜನ ಜಾಗೃತಿ ಅಭಿಯಾನ ವಾಗಿ ಕೊರೊನ ನಿಯಂತ್ರಣ ಮಾಡುವಲ್ಲಿ ನಿರ್ಣಯ ಮಾಡೋಣ ಎಂಬ ಜನರ ಒಕ್ಕೊರೊಲಿನ ಜನ ದ್ವನಿಯಾಗಿ ಶಾಸಕ ನೆಲೆಯಲ್ಲಿ ಜನಾಭಿಪ್ರಾಯವನ್ನು ಘೋಷಿಸಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಮಹೇಶ್ ಜೆ, ಕಾರ್ಯನಿರ್ವಾಹಣಾಧಿಕಾರಿ ಜಯರಾಮ್, ನ.ಪಂ ಮುಖ್ಯಾಧಿಕಾರಿ ಸುಧಾಕರ್, ಜಿ.ಪಂ ಸದಸ್ಯ ಕೊರಗಪ್ಪ, ಆರೋಗ್ಯಾಧಿಕಾರಿ ಡಾ.ಕಲಾಮಧು ಉಪಸ್ಥಿತರಿದ್ದರು.
ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ನಿಂದ ತಲಾ ಇಬ್ಬರು ಪ್ರತಿನಿಧಿಗಳು, ನ.ಪಂ, ತಾ.ಪಂ, ಜಿ.ಪಂ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು