ಭಾರತೀಯ ವಾಯುಸೇನೆಗೆ ಬೆಳ್ತಂಗಡಿ ಸುಲ್ಕೇರಿ ಮೊಗ್ರುವಿನ ಸೂರಜ್ ಆಯ್ಕೆ

ಮಂಗಳೂರು: ಭಾರತೀಯ ವಾಯುಸೇನೆಗೆ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಮೊಗ್ರುವಿನ ಸೂರಜ್ ಮಡಿವಾಳ ಆಯ್ಕೆಯಾಗಿದ್ದಾರೆ. ಇವರು ಬೇಬಿ ಸಾಲ್ಯಾನ್ ಹಾಗೂ ಉಮಾವತಿ ದಂಪತಿಗಳ ಪುತ್ರನಾಗಿದ್ದು ಪ್ರಸ್ತುತ ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ತೃತೀಯ ವರ್ಷದ ವಿದ್ಯಾರ್ಥಿ.

READ ALSO

ವಾಯುಸೇನೆಗೆ ಸೇರಬೇಕೆಂದು ಬಾಲ್ಯದಿಂದಲೂ ಕನಸು ಕಾಣುತ್ತಿದ್ದ ಸೂರಜ್ ಕಳೆದ ವರ್ಷ ಸೈನ್ಯ ಸೇರುವ ಅವಕಾಶದಿಂದ ಕೊನೆಯ ಕ್ಷಣದಲ್ಲಿ ವಂಚಿತರಾಗಿದ್ದರು.

ಸದಾ ಚಟುವಟಿಕೆಯಿಂದಿರುವ ಸೂರಜ್ ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಗಳ ಮೂಲಕ ನಾಯಕತ್ವವನ್ನು ಮೈಗೂಡಿಸಿಕೊಂಡಿದ್ದರು.

ಇದೀಗ ಭಾರತೀಯ ವಾಯುಸೇನೆ ಶಿವಮೊಗ್ಗದಲ್ಲಿ ನಡೆಸಿದ ರಾಲಿಯಲ್ಲಿ ತೇರ್ಗಡೆ ಹೊಂದಿ, ಬೀದರ್ ನಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಟ್ಟು, ಬೆಂಗಳೂರಿನಲ್ಲಿ ಜಾಯಿನಿಂಗ್ ಮೆಡಿಕಲ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ.

ಚೆನ್ನೈನಲ್ಲಿ ನಡೆಯಲಿರುವ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.