ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳನ್ನು ಟೀಕಿಸುವ ಮತ್ತು ಸಮಾಜದಲ್ಲಿ ಅಶಾಂತಿಯನ್ನು ಮೂಡಿಸಲು ಪ್ರಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ HJS ಮನವಿ

ಮಂಗಳೂರು: ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳನ್ನು ಟೀಕಿಸುವ ಮತ್ತು ಸಮಾಜದಲ್ಲಿ ಅಶಾಂತಿಯನ್ನು ಮೂಡಿಸಲು ಪ್ರಯತ್ನಿಸುವ ಕಮ್ಯುನಿಸ್ಟರ ಹಾಗೂ ನಕ್ಸಲ್ ಸಂಘಟನೆಗಳ
ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಮತ್ತು ಕಾರ್ಯಕ್ರಮದ ಮೇಲೆ ಶಿಸ್ತಿನ ಕ್ರಮ ಜರುಗಿಸಲು ದಕ್ಷಿಣ ಕನ್ನಡ ಅಪಾರ ಜಿಲ್ಲಾಧಿಕಾರಿಗಳಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ ನೀಡಲಾಯಿತು.

ದಿನಾಂಕ ೫ ಸೆಪ್ಟೆಂಬರ್ ನಂದು ಅಂದರೆ ನಾಳೆ ಗೌರಿ ಲಂಕೇಶ ಹತ್ಯೆಯ ಪ್ರಕರಣದ ಸಂಬಂಧ ಎಡಪಂಥೀಯ ವಿಚಾರಧಾರೆಯ ವಿಚಾರವಾದಿಗಳು “ನಾವು ಎದ್ದು ನಿಲ್ಲದಿದ್ದರೆ ?” ಎಂಬ ಹೆಸರಿನಡಿಯಲ್ಲಿ ಸುಮಾರು 400 ಸಮವಿಚಾರಿ ಸಂಘಟನೆಗಳು ಸೇರಿ ಆಂದೋಲನವನ್ನು ಹಮ್ಮಿಕೊಂಡಿದೆ. ಈ ಆಂದೋಲನವನ್ನು ಮೇಲ್ನೋಟಕ್ಕೆ ನೋಡಿದಾಗ ಗೌರಿ ಹತ್ಯೆಯ ಹೆಸರಿನಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವುದಕ್ಕಿಂತ ಕೇಂದ್ರ ಸರಕಾರವನ್ನು ತೀವ್ರವಾಗಿ ಟೀಕಿಸುವ ಉದ್ದೇಶವೇ ಹೆಚ್ಚು ಇದೆ ಎಂಬ ಸಂಶಯ ಮೂಡುತ್ತದೆ. ಈಗಾಗಲೇ ದಿಲ್ಲಿ ಮತ್ತು ಬೆಂಗಳೂರಿನಲ್ಲಿ ನಡೆದ ದಂಗೆಯು ಸಹ ಪೂರ್ವನಿಯೋಜಿತವಾಗಿದ್ದು, ಪೋಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಸಾಮಾಜಿಕ ಆಸ್ತಿ ಪಾಸ್ತಿಗಳಿಗೆ ಮಾಡಿದ ಹಾನಿಯನ್ನು ನೋಡಿದರೆ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸುವ ದೃಷ್ಟಿಯಲ್ಲಿಯೇ ಈ ಹುನ್ನಾರ ನಡೆದಿದೆ ಎಂಬುವುದು ಸ್ಪಷ್ಟವಾಗುತ್ತದೆ. ಹಾಗಾಗಿ, ಸಪ್ಟಂಬರ 5, 2020 ರಂದು ಅಂದರೆ ನಾಳೆ ಆಯೋಜಿಸಲಾಗಿರುವ ಕಾರ್ಯಕ್ರಮವು ಕೇಂದ್ರ ಸರಕಾರವನ್ನು ಟೀಕಿಸುವ ಮತ್ತು ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಹಾಗೂ ಜನರನ್ನು ವಿಭಜಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದಲೇ ಮಾಡಲಾಗುತ್ತಿದೆ ಎಂಬುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇಲ್ಲಿ ಗೌರಿ ಲಂಕೇಶರು ಸಹ ನಕ್ಸಲರ ಬೆಂಬಲಿಗರಾಗಿದ್ದು , ಅವರು ಸಾಕೇತ ರಾಜನ್ ಎಂಬ ಅಪಾಯಕಾರಿ ನಕ್ಸಲ್ ಮುಖಂಡನ ಬಗ್ಗೆ ಲೇಖನ ಸಹ ಬರೆದಿದ್ದರು. ಮಾತ್ರವಲ್ಲದೇ, ಅವರ ಕಾರ್ಯಕರ್ತರು ಸಹ ನಕ್ಸಲ್ ಚಟುವಟಿಕೆಗಳಿಗಾಗಿ ಬಂಧಿಸಲ್ಪಟ್ಟಿದ್ದಾರೆ. ಗಿರೀಶ ಕಾರ್ನಾಡರು ಸಹ ೨೦೧೮ ರಲ್ಲಿ ಇಂತಹ ಆಂದೋಲನಗಳಲ್ಲಿ ಬಹಿರಂಗವಾಗಿ ಭಾಗವಹಿಸಿ ‘ನಾನು ಸಹ ನಗರ ನಕ್ಸಲ್’ ಎಂದು ನಕ್ಸಲ್‌ವಾದವನ್ನು ಸಮರ್ಥಿಸಿ ನೀಡಿದ ಹೇಳಿಕೆಯನ್ನು ಸಹ ಇಲ್ಲಿ ಮುಖ್ಯವಾಗಿ ಉಲ್ಲೇಖಿಸಬೇಕೆನಿಸುತ್ತದೆ.

ಹಾಗಾಗಿ ಇಂತಹ ಅಭಿಯಾನಗಳು ಕಾನೂನು ಮತ್ತು ಸುವ್ಯವಸ್ಥೆಗೆ ನೇರ ಹಾಗೂ ನಿಜವಾದ ಬೆದರಿಕೆಯಾಗಿವೆ ಎಂದರೆ ತಪ್ಪಾಗಲಾರದು. ಹಾಗಾಗಿ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು. ಇಲ್ಲದಿದ್ದರೆ ಅವರ ಮೇಲೆ ಅಗತ್ಯ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ರಾಷ್ಟ್ರಾಭಿಮಾನಿಗಳು, ಸಮಾಜಹಿತವನ್ನು ಬಯಸುವ ಧರ್ಮಪ್ರೇಮಿಗಳು ರಾಜ್ಯದ ಬೆಂಗಳೂರು, ಮಂಗಳೂರು, ಉಡುಪಿ, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಹಾಸನ, ಮೈಸೂರು, ಶಿವಮೊಗ್ಗ ಹೀಗೆ ವಿವಿಧ ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಸಹಭಾಗವೂ ಇತ್ತು.

ಈ ಕಾರ್ಯಕ್ರಮದ ಮೇಲೆ ಜರುಗಿಸಬೇಕಾದ ಅವಶ್ಯಕ ಕ್ರಮಗಳು:
೧. ಇಂತಹ ಕಾರ್ಯಕ್ರಮಗಳನ್ನು / ಆಂದೋಲನಗಳನ್ನು ಮಾಡಲು ಬಿಡಬಾರದು. ಇಂತಹ ಕಾರ್ಯಕ್ರಮಗಳನ್ನು ನಿಷೇಧ ಮಾಡುವಂತದ್ದು ಕೊರೊನಾ ಮಹಾಮಾರಿಯ ದೃಷ್ಟಿಯಿಂದಲೂ ಅತ್ಯಂತ ಅವಶ್ಯಕವಾಗಿದೆ.
೨. ಇದು ತಮಗೆ ಸಾಧ್ಯವಿಲ್ಲದಿದ್ದಲ್ಲಿ ಇಂತಹ ಸಂಘಟನೆಗಳಿಗೆ, ಸಂಘಟನೆಗಳ ಆಯೋಜಕರಿಗೆ ಅವಶ್ಯವಿರುವ ನೋಟಿಸು, ಧೋರಣೆಗಳನ್ನು ಜಾರಿಗೊಳಿಸಬೇಕು.
೩. ಆದರೂ ಈ ಆಂದೋಲನಗಳನ್ನು ನಡೆಸುವುದಾದರೆ ದಯಮಾಡಿ ಈ ಆಂದೋಲನಗಳ ವಿಡಿಯೋ ಶೂಟಿಂಗ ಮಾಡಿಡಬೇಕು . ಇದರಿಂದ ಮುಂದೆ ಅಪರಾಧಿಗಳ ದೃಷ್ಟಿಯಿಂದ ಅವಶ್ಯಕತೆ ಬಿದ್ದಾಗ ಅದನ್ನು ಉಪಯೋಗಿಸಬಹುದು.
೪. ಈ ಪ್ರಕರಣದಲ್ಲಿ ಕಾನೂನುಬಾಹಿರ ಕೃತ್ಯಗಳಾಗಿರುವುದು ಕಂಡುಬಂದಲ್ಲಿ ಅದರಲ್ಲಿ ಭಾಗವಹಿಸಿದವರೆಲ್ಲರ ಮೇಲೆ ಅವಶ್ಯವಿರುವ ಕಾನೂನು ಕ್ರಮಗಳನ್ನು ಜರುಗಿಸಬೇಕು.
ಈ ಸಂಧರ್ಭದಲ್ಲಿ ಮದುಸೂಧನ್ ಅಯ್ಯರ,ಉಪೇಂದ್ರ ಆಚಾರ್ಯ,ಸುಧಾಕರ್,ರಾಜೇಶ್ ಮುಂತಾದವರು ಇದ್ದರು.

Spread the love
  • Related Posts

    ಗ್ರಾಹಕರ ದೂರುಗಳ ಬೆನ್ನಿಗೆ ಕ್ರಮ: ಗ್ಯಾಸ್ ಏಜೆನ್ಸಿಗೆ ಅಂತಿಮ ಎಚ್ಚರಿಕೆ, ಬೆಳ್ತಂಗಡಿ ಆಹಾರ ಇಲಾಖೆಯಿಂದ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಗೆ ನೋಟೀಸ್ ಜಾರಿ

    ಬೆಳ್ತಂಗಡಿ : ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಗ್ಯಾಸ್ ಸರಬರಾಜು ಮಾಡದೆ ಕಚೇರಿಗೆ ಹೋದಾಗ ಪ್ರತಿನಿತ್ಯ ಗಲಾಟೆ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಆಹಾರ ಇಲಾಖೆಗೆ ಬಂದ ದೂರಿನ ಆಧಾರದಲ್ಲಿ ಕೊನೆಯ ಎಚ್ಚರಿಕೆಯ ನೋಟಿಸ್ ಜಾರಿ ಮಾಡಲಾಗಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಲಾಯಿಲ…

    Spread the love

    ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ

    ಬೆಂಗಳೂರು: 2026ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಾಳೆ (ಏಪ್ರಿಲ್ 23) ಪ್ರಕಟಗೊಳ್ಳಲಿದೆ. ಏ.22 ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಈ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಫಲಿತಾಂಶದ ಮುಖ್ಯಾಂಶಗಳು: ದಿನಾಂಕ…

    Spread the love

    You Missed

    ಗ್ರಾಹಕರ ದೂರುಗಳ ಬೆನ್ನಿಗೆ ಕ್ರಮ: ಗ್ಯಾಸ್ ಏಜೆನ್ಸಿಗೆ ಅಂತಿಮ ಎಚ್ಚರಿಕೆ, ಬೆಳ್ತಂಗಡಿ ಆಹಾರ ಇಲಾಖೆಯಿಂದ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಗೆ ನೋಟೀಸ್ ಜಾರಿ

    • By admin
    • April 23, 2026
    • 122 views
    ಗ್ರಾಹಕರ ದೂರುಗಳ ಬೆನ್ನಿಗೆ ಕ್ರಮ: ಗ್ಯಾಸ್ ಏಜೆನ್ಸಿಗೆ ಅಂತಿಮ ಎಚ್ಚರಿಕೆ,  ಬೆಳ್ತಂಗಡಿ ಆಹಾರ ಇಲಾಖೆಯಿಂದ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಗೆ ನೋಟೀಸ್ ಜಾರಿ

    ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ

    • By admin
    • April 22, 2026
    • 36 views
    ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿಭಾವದೊಂದಿಗೆ ವಿಷು ಜಾತ್ರಾ ಮಹೋತ್ಸವ ಸಂಪನ್ನ

    • By admin
    • April 22, 2026
    • 22 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿಭಾವದೊಂದಿಗೆ ವಿಷು ಜಾತ್ರಾ ಮಹೋತ್ಸವ ಸಂಪನ್ನ

    ಗೂಡ್ಸ್ ವಾಹನದಲ್ಲಿ ಪ್ರಯಾಣಿಕರು – ಚಾರ್ಮಾಡಿ ಘಾಟಿಯಲ್ಲಿ ಪಿಕಪ್ ವಾಹನ ಪಲ್ಟಿ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    • By admin
    • April 22, 2026
    • 45 views
    ಗೂಡ್ಸ್ ವಾಹನದಲ್ಲಿ ಪ್ರಯಾಣಿಕರು – ಚಾರ್ಮಾಡಿ ಘಾಟಿಯಲ್ಲಿ  ಪಿಕಪ್ ವಾಹನ ಪಲ್ಟಿ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ತ್ರಿಶೂರ್ನ ಪಟಾಕಿ ಶೆಡ್ನಲ್ಲಿ ಸ್ಫೋಟ: 10ಮಂದಿ ಸಜೀವ ದಹನ ಹಲವರಿಗೆ ಗಂಭೀರ ಗಾಯ

    • By admin
    • April 21, 2026
    • 30 views
    ತ್ರಿಶೂರ್ನ ಪಟಾಕಿ ಶೆಡ್ನಲ್ಲಿ ಸ್ಫೋಟ: 10ಮಂದಿ ಸಜೀವ ದಹನ ಹಲವರಿಗೆ ಗಂಭೀರ ಗಾಯ

    ಬೃಹತ್ ಪ್ರಮಾಣದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ: 46.50ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ

    • By admin
    • April 20, 2026
    • 60 views
    ಬೃಹತ್ ಪ್ರಮಾಣದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ: 46.50ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ