ನದಿಯ ವೇದನೆಯ ಹಿಂದಿನ ರೋಧನೆಯಾ ಕೇಳುವವರ್ಯಾರು! ಪಶ್ಚಿಮಘಟ್ಟಗಳ ರಕ್ಷಣೆಗೆ ಬೇಕಿದೆ ಸೂಕ್ತ ಕ್ರಮ

🖊️ ದಿನೇಶ್ ಹೊಳ್ಳ ಸಹ್ಯಾದ್ರಿ ಸಂಚಯ(ರಿ)

ಕುದುರೆಮುಖದ ಎಳನೀರು ಘಾಟಿಯ ಬಂಗ್ರ ಬಲಿಕೆ ಎಂಬ ನೇತ್ರಾವತಿ ನದಿಯ ಉಗಮ ಸ್ಥಾನದ ಸೂಕ್ಷ್ಮ ಜೀವ ವೈವಿದ್ಯತಾ ಪ್ರದೇಶದಲ್ಲಿ ಮೊನ್ನೆ ಭೂಕುಸಿತ ಆಯಿತು ಎಂದರೆ ಇದು ತಳ್ಳಿ ಹಾಕುವಂತಹ ಸಿಲ್ಲಿ ವಿಚಾರವಲ್ಲ. ಇದು ಮುಂದಿನ ಅಪಾಯದ ಮುನ್ಸೂಚನೆ ಅಂತೂ ಖಂಡಿತಾ ಹೌದು. ಮಳೆಗಾಲದ ಭೂಕುಸಿತವೇ ಅಪಾಯಕಾರಿ, ಅದಕ್ಕೇ ಇನ್ನೂ ನಮ್ಮ ಸರಕಾರದ ಯಾವ ಕ್ರಮಗಳೂ ಆಗಿಲ್ಲ, ಅದರ ಬಗ್ಗೆ ಅಧ್ಯಯನ ವರದಿಯೂ ಆಗಲಿಲ್ಲ, ಅದು ಇನ್ನು ಮುಂದೆ ಆಗದಂತೆ ಯೋಚನಾ ಕ್ರಮಗಳೂ, ಕ್ರಿಯೆಗಳೂ ಆಗಿಲ್ಲ. ಇದು ಈ ಸಮಯದಲ್ಲಿ ಏಕಾಏಕಿ ಭೂಕುಸಿತ ಆಗುತ್ತಿದೆ ಎಂದರೆ ಬಹಳಷ್ಟು ಯೋಚಿಸಬೇಕಾದ ಮತ್ತು ಯೋಚನೆಗಳಿಗೆ ಪೂರಕ ಕ್ರಮಗಳನ್ನು ಕೈ ಗೊಳ್ಳಬೇಕಾದ ಪ್ರಮುಖ ವಿಚಾರವಿದು.

ನೇತ್ರಾವತಿ ನದಿಯು ಪಶ್ಚಿಮ ಘಟ್ಟದ ಹಲವಾರು ಗಿರಿ, ಕಾನನ, ಕಣಿವೆಗಳಿಂದ ಹರಿದು ಬರುವ ಕರಾವಳಿಯ ಜೀವನದಿ ಯಾಗಿದ್ದು ಇದರ ಮಹತ್ವ ಮತ್ತು ಅಗತ್ಯವು ರಾಜಕಾರಣಿಗಳಿಗೆ ಬಿಡಿ ದಕ್ಷಿಣ ಕನ್ನಡದ ಕೆಲವು ಪಕ್ಷ, ರಾಜಕೀಯ ಕೃಪಾ ಪೋಷಿತ ಜನತೆಗೆ ಇನ್ನೂ ಅರ್ಥವಾಗಿಲ್ಲ. ಕಡ್ತಕಲ್, ಎಳನೀರು, ಚಾರ್ಮಾಡಿ, ಶಿರಾಡಿ, ಬಿಸಿಲೆ, ಬೈರಾಪುರ ಘಾಟಿ ಪ್ರದೇಶಗಳಿಂದ ಬರುವ 9 ಉಪ ನದಿಗಳಲ್ಲಿ ಎಳನೀರು ಘಾಟಿಯ ಬಂಗ್ರ ಬಲಿಕೆ ಕಣಿವೆಯ ಮೂಲ ಸ್ಥಾನದ ನೀರಿನ ಹರಿವೇ ಪ್ರಮುಖವಾಗಿರುತ್ತದೆ. ಕುದುರೆ ಮುಖದ ಹಿರಿಮರಿ, ತಿರಿಮರಿ ಗುಪ್ಪೆ, ಕೃಷ್ಣ ಗಿರಿಯ ನಡುವಿನ ಶೋಲಾ ಅಡವಿಯಲ್ಲಿ ಉಗಮವಾಗಿ ಅಲ್ಲಿ ಇನ್ನಿತರ ಕಣಿವೆಗಳಲ್ಲಿ ಹರಿದು ಬರುವ ಎಳನೀರು ಹೊಳೆ, ಮಾವಿನಸಸಿ ಹೊಳೆ, ಬಡಮನೆ ಹೊಳೆ, ಶಿರ್ಲಾಲು, ಶಿವನಾಳ ಹೊಳೆ ನೇತ್ರಾವತಿಯ ಪ್ರಮುಖ ಭಾಗವೇ ಆಗಿರುವ ಎಳನೀರು ಹೊಳೆಯ ಹೃದಯ ಭಾಗವೇ ಆಗಿರುತ್ತದೆ. ಬಹುಶಃ ಎಳನೀರು ಹೊಳೆಯ ಮಳೆಗಾಲದ ನೀರಿನ ಇಳುವರಿ ( ವಾಟರ್ ಕ್ಯಾಚ್ ಮೆಂಟ್ ಏರಿಯಾ ) ಕಡಿಮೆ ಆಗುತ್ತಿದ್ದು ನೀರನ್ನು ಹಿಡಿದಿಟ್ಟು ಕೊಳ್ಳುವಂತಹ ಬೆಟ್ಟದ ಮೇಲ್ನೈ ಪದರವು ಗಡಸುತನ ಕಳೆದುಕೊಂಡು ಮೆದುವಾಗುತ್ತಾ ವರ್ಷದಿಂದ ವರ್ಷಕ್ಕೆ ನೀರಿನ ಹಿಡಿತದ ವ್ಯಾಪ್ತಿ ಕಡಿಮೆಯಾಗುತ್ತಾ ಒರತೆಯ ಕೊರತೆ ಆಗುತ್ತಾ ಇರುವುದರಿಂದ 65 ಡಿಗ್ರೀಯಿಂದ 85 ಡಿಗ್ರಿ ವರೆವಿನ ಕಣಿವೆ, ಕಂದರದಲ್ಲಿ ಈ ರೀತಿಯ ಭೂಕುಸಿತ ಆಗುವ ಸಾಧ್ಯತೆಗಳು ಇವೆ. ಈ ಸಂದರ್ಭದಲ್ಲೇ ಭೂಕುಸಿತ ಆದರೆ ಇನ್ನು ಮುಂದಿನ ಮಳೆಗಾಲದಲ್ಲಿ ಇನ್ನಷ್ಟು ಕುಸಿತ ಆಗುವದಂತೂ ಖಂಡಿತ. ಚಾರ್ಮಾಡಿಯಲ್ಲಿ ಕಳೆದ 2 ವರ್ಷಗಳಲ್ಲಿ ಭೂಕುಸಿತ ಆಗಿ ನೇತ್ರಾವತಿಯ ಉಪನದಿ ಮೃತ್ಯುಂಜಯ ನದಿ ಬಡಕಲಾಗುತ್ತ ಬಂದಿದೆ. ಶಿರಾಡಿ ಘಾಟಿಯಲ್ಲಿ ಎತ್ತಿನ ಹೊಳೆ ಯೋಜನೆ ಕಾಮಗಾರಿಯಿಂದ ನೇತ್ರಾವತಿಯ ಇನ್ನೊಂದು ಉಪನದಿ ಕೆಂಪು ಹೊಳೆ ಈಗಾಗಲೇ ಅರ್ಧ ಜೀವವನ್ನು ಕಳೆದು ಕೊಂಡಿದೆ. ಈಗಾಗಲೇ 4 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗುತ್ತಿದ್ದು ಬರಗಾಲದ ತೀರ್ವತೆ ಹೆಚ್ಚಾಗುತ್ತಾ ಇದೆ. ರಾಜಕೀಯದ ಅ0ಡೇ ಪಿರ್ಕಿಗಳಿಗಂತೂ ನದಿ ಎಂದರೆ ದುಡ್ಡು ಲೂಟಿ ಮಾಡುವ ಬಿಗ್ ಪ್ರಾಜೆಕ್ಟ್ ಆಗಿ ಬಿಟ್ಟಿದೆ, ಆದರೆ ನದಿಯನ್ನೇ ಆಶ್ರಯಿಸಿಕೊಂಡು ಬದುಕುವ ಜನರಿಗೆ ಅರ್ಥ ಆಗುತ್ತಿಲ್ಲಾ ಎಂದರೆ ಇದು ಮುಂದೆ ಆಗಲಿರುವ ಪ್ರಾಕೃತಿಕ ದುರಂತ ಕ್ಕಿಂತಲೂ ದೊಡ್ಡ ದುರಂತ…
“ಜೈ ನೇತ್ರಾವತಿ

Spread the love
  • Related Posts

    ಕನ್ಯಾಡಿಯ ಸೇವಾನಿಕೇತನಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ:

    ಕನ್ಯಾಡಿ : ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾಗಿರುವ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ ತಂಡವು ಕನ್ಯಾಡಿಯ ಸೇವಾನಿಕೇತನಕ್ಕೆ ಫೆಬ್ರವರಿ 8 ರಂದು ಭೇಟಿ ನೀಡಿದರು. ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಸಂಸ್ಥೆಯ ಬಗ್ಗೆ ಮಾತನಾಡಿ, ಬೆನ್ನುಹುರಿ…

    Spread the love

    ಯುವ ಸಿರಿ ರೈತ ಭಾರತದ ಐಸಿರಿ ಎಂಬ ಪರಿಕಲ್ಪನೆಯೊಂದಿಗೆ ಏಕಕಾಲದಲ್ಲಿ 1000ಕ್ಕೂ ಮಿಕ್ಕಿ ಯುವ ಜನತೆಯಿಂದ ಭತ್ತ ಕಟಾವು ಕಾರ್ಯಕ್ರಮ

    ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಹಾಗೂ ಮಾತೃ ಶ್ರೀ ಹೇಮಾವತಿ.ವಿ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಶ್ರೀ.ಧ.ಮಂ.ಕಾಲೇಜು(ಸ್ವಾಯತ್ತ) ಉಜಿರೆ, ಶ್ರೀ.ಧ.ಮಂ.ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಶ್ರೀ.ಧ.ಮಂ.ಸ್ಪೋರ್ಟ್ಸ್ ಕ್ಲಬ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ(ರಿ) ಬೆಳ್ತಂಗಡಿ, ವ್ಯವಸ್ಥಾಪನಾ ಸಮಿತಿ…

    Spread the love

    You Missed

    ಕನ್ಯಾಡಿಯ ಸೇವಾನಿಕೇತನಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ:

    • By admin
    • February 9, 2025
    • 16 views
    ಕನ್ಯಾಡಿಯ ಸೇವಾನಿಕೇತನಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ:

    ಯುವ ಸಿರಿ ರೈತ ಭಾರತದ ಐಸಿರಿ ಎಂಬ ಪರಿಕಲ್ಪನೆಯೊಂದಿಗೆ ಏಕಕಾಲದಲ್ಲಿ 1000ಕ್ಕೂ ಮಿಕ್ಕಿ ಯುವ ಜನತೆಯಿಂದ ಭತ್ತ ಕಟಾವು ಕಾರ್ಯಕ್ರಮ

    • By admin
    • February 9, 2025
    • 15 views
    ಯುವ ಸಿರಿ ರೈತ ಭಾರತದ ಐಸಿರಿ ಎಂಬ ಪರಿಕಲ್ಪನೆಯೊಂದಿಗೆ ಏಕಕಾಲದಲ್ಲಿ 1000ಕ್ಕೂ ಮಿಕ್ಕಿ ಯುವ ಜನತೆಯಿಂದ ಭತ್ತ ಕಟಾವು ಕಾರ್ಯಕ್ರಮ

    ರಾಷ್ಟ್ರಮಟ್ಟದ ರಸ್ತೆ ಸುರಕ್ಷತಾ ಕಾರ್ಟೂನ್ ಸ್ಪರ್ಧೆಯಲ್ಲಿ ವಿಶೇಷ ಬಹುಮಾನ ಪಡೆದ ಶೈಲೇಶ್ ಉಜಿರೆ

    • By admin
    • February 7, 2025
    • 46 views
    ರಾಷ್ಟ್ರಮಟ್ಟದ ರಸ್ತೆ ಸುರಕ್ಷತಾ ಕಾರ್ಟೂನ್ ಸ್ಪರ್ಧೆಯಲ್ಲಿ ವಿಶೇಷ ಬಹುಮಾನ ಪಡೆದ ಶೈಲೇಶ್ ಉಜಿರೆ

    ಮೈಕ್ರೋ ಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆಗಿಲ್ಲ ರಾಜ್ಯಪಾಲರ ಅಂಕಿತ

    • By admin
    • February 7, 2025
    • 35 views
    ಮೈಕ್ರೋ ಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆಗಿಲ್ಲ ರಾಜ್ಯಪಾಲರ ಅಂಕಿತ

    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮ ಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಶಿಶಿಲದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

    • By admin
    • February 2, 2025
    • 85 views
    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮ ಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಶಿಶಿಲದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

    ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಆಡಳಿತ ಮಂಡಳಿ ಚುನಾವಣೆಯಲ್ಲಿ ಸಹಕಾರ ಭಾರತೀಯ ಅಭ್ಯರ್ಥಿಗಳ ಪ್ರಚಂಡ ಗೆಲುವು

    • By admin
    • February 2, 2025
    • 276 views
    ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಆಡಳಿತ ಮಂಡಳಿ ಚುನಾವಣೆಯಲ್ಲಿ   ಸಹಕಾರ ಭಾರತೀಯ ಅಭ್ಯರ್ಥಿಗಳ ಪ್ರಚಂಡ ಗೆಲುವು