ನದಿಯ ವೇದನೆಯ ಹಿಂದಿನ ರೋಧನೆಯಾ ಕೇಳುವವರ್ಯಾರು! ಪಶ್ಚಿಮಘಟ್ಟಗಳ ರಕ್ಷಣೆಗೆ ಬೇಕಿದೆ ಸೂಕ್ತ ಕ್ರಮ

🖊️ ದಿನೇಶ್ ಹೊಳ್ಳ ಸಹ್ಯಾದ್ರಿ ಸಂಚಯ(ರಿ)

ಕುದುರೆಮುಖದ ಎಳನೀರು ಘಾಟಿಯ ಬಂಗ್ರ ಬಲಿಕೆ ಎಂಬ ನೇತ್ರಾವತಿ ನದಿಯ ಉಗಮ ಸ್ಥಾನದ ಸೂಕ್ಷ್ಮ ಜೀವ ವೈವಿದ್ಯತಾ ಪ್ರದೇಶದಲ್ಲಿ ಮೊನ್ನೆ ಭೂಕುಸಿತ ಆಯಿತು ಎಂದರೆ ಇದು ತಳ್ಳಿ ಹಾಕುವಂತಹ ಸಿಲ್ಲಿ ವಿಚಾರವಲ್ಲ. ಇದು ಮುಂದಿನ ಅಪಾಯದ ಮುನ್ಸೂಚನೆ ಅಂತೂ ಖಂಡಿತಾ ಹೌದು. ಮಳೆಗಾಲದ ಭೂಕುಸಿತವೇ ಅಪಾಯಕಾರಿ, ಅದಕ್ಕೇ ಇನ್ನೂ ನಮ್ಮ ಸರಕಾರದ ಯಾವ ಕ್ರಮಗಳೂ ಆಗಿಲ್ಲ, ಅದರ ಬಗ್ಗೆ ಅಧ್ಯಯನ ವರದಿಯೂ ಆಗಲಿಲ್ಲ, ಅದು ಇನ್ನು ಮುಂದೆ ಆಗದಂತೆ ಯೋಚನಾ ಕ್ರಮಗಳೂ, ಕ್ರಿಯೆಗಳೂ ಆಗಿಲ್ಲ. ಇದು ಈ ಸಮಯದಲ್ಲಿ ಏಕಾಏಕಿ ಭೂಕುಸಿತ ಆಗುತ್ತಿದೆ ಎಂದರೆ ಬಹಳಷ್ಟು ಯೋಚಿಸಬೇಕಾದ ಮತ್ತು ಯೋಚನೆಗಳಿಗೆ ಪೂರಕ ಕ್ರಮಗಳನ್ನು ಕೈ ಗೊಳ್ಳಬೇಕಾದ ಪ್ರಮುಖ ವಿಚಾರವಿದು.

ನೇತ್ರಾವತಿ ನದಿಯು ಪಶ್ಚಿಮ ಘಟ್ಟದ ಹಲವಾರು ಗಿರಿ, ಕಾನನ, ಕಣಿವೆಗಳಿಂದ ಹರಿದು ಬರುವ ಕರಾವಳಿಯ ಜೀವನದಿ ಯಾಗಿದ್ದು ಇದರ ಮಹತ್ವ ಮತ್ತು ಅಗತ್ಯವು ರಾಜಕಾರಣಿಗಳಿಗೆ ಬಿಡಿ ದಕ್ಷಿಣ ಕನ್ನಡದ ಕೆಲವು ಪಕ್ಷ, ರಾಜಕೀಯ ಕೃಪಾ ಪೋಷಿತ ಜನತೆಗೆ ಇನ್ನೂ ಅರ್ಥವಾಗಿಲ್ಲ. ಕಡ್ತಕಲ್, ಎಳನೀರು, ಚಾರ್ಮಾಡಿ, ಶಿರಾಡಿ, ಬಿಸಿಲೆ, ಬೈರಾಪುರ ಘಾಟಿ ಪ್ರದೇಶಗಳಿಂದ ಬರುವ 9 ಉಪ ನದಿಗಳಲ್ಲಿ ಎಳನೀರು ಘಾಟಿಯ ಬಂಗ್ರ ಬಲಿಕೆ ಕಣಿವೆಯ ಮೂಲ ಸ್ಥಾನದ ನೀರಿನ ಹರಿವೇ ಪ್ರಮುಖವಾಗಿರುತ್ತದೆ. ಕುದುರೆ ಮುಖದ ಹಿರಿಮರಿ, ತಿರಿಮರಿ ಗುಪ್ಪೆ, ಕೃಷ್ಣ ಗಿರಿಯ ನಡುವಿನ ಶೋಲಾ ಅಡವಿಯಲ್ಲಿ ಉಗಮವಾಗಿ ಅಲ್ಲಿ ಇನ್ನಿತರ ಕಣಿವೆಗಳಲ್ಲಿ ಹರಿದು ಬರುವ ಎಳನೀರು ಹೊಳೆ, ಮಾವಿನಸಸಿ ಹೊಳೆ, ಬಡಮನೆ ಹೊಳೆ, ಶಿರ್ಲಾಲು, ಶಿವನಾಳ ಹೊಳೆ ನೇತ್ರಾವತಿಯ ಪ್ರಮುಖ ಭಾಗವೇ ಆಗಿರುವ ಎಳನೀರು ಹೊಳೆಯ ಹೃದಯ ಭಾಗವೇ ಆಗಿರುತ್ತದೆ. ಬಹುಶಃ ಎಳನೀರು ಹೊಳೆಯ ಮಳೆಗಾಲದ ನೀರಿನ ಇಳುವರಿ ( ವಾಟರ್ ಕ್ಯಾಚ್ ಮೆಂಟ್ ಏರಿಯಾ ) ಕಡಿಮೆ ಆಗುತ್ತಿದ್ದು ನೀರನ್ನು ಹಿಡಿದಿಟ್ಟು ಕೊಳ್ಳುವಂತಹ ಬೆಟ್ಟದ ಮೇಲ್ನೈ ಪದರವು ಗಡಸುತನ ಕಳೆದುಕೊಂಡು ಮೆದುವಾಗುತ್ತಾ ವರ್ಷದಿಂದ ವರ್ಷಕ್ಕೆ ನೀರಿನ ಹಿಡಿತದ ವ್ಯಾಪ್ತಿ ಕಡಿಮೆಯಾಗುತ್ತಾ ಒರತೆಯ ಕೊರತೆ ಆಗುತ್ತಾ ಇರುವುದರಿಂದ 65 ಡಿಗ್ರೀಯಿಂದ 85 ಡಿಗ್ರಿ ವರೆವಿನ ಕಣಿವೆ, ಕಂದರದಲ್ಲಿ ಈ ರೀತಿಯ ಭೂಕುಸಿತ ಆಗುವ ಸಾಧ್ಯತೆಗಳು ಇವೆ. ಈ ಸಂದರ್ಭದಲ್ಲೇ ಭೂಕುಸಿತ ಆದರೆ ಇನ್ನು ಮುಂದಿನ ಮಳೆಗಾಲದಲ್ಲಿ ಇನ್ನಷ್ಟು ಕುಸಿತ ಆಗುವದಂತೂ ಖಂಡಿತ. ಚಾರ್ಮಾಡಿಯಲ್ಲಿ ಕಳೆದ 2 ವರ್ಷಗಳಲ್ಲಿ ಭೂಕುಸಿತ ಆಗಿ ನೇತ್ರಾವತಿಯ ಉಪನದಿ ಮೃತ್ಯುಂಜಯ ನದಿ ಬಡಕಲಾಗುತ್ತ ಬಂದಿದೆ. ಶಿರಾಡಿ ಘಾಟಿಯಲ್ಲಿ ಎತ್ತಿನ ಹೊಳೆ ಯೋಜನೆ ಕಾಮಗಾರಿಯಿಂದ ನೇತ್ರಾವತಿಯ ಇನ್ನೊಂದು ಉಪನದಿ ಕೆಂಪು ಹೊಳೆ ಈಗಾಗಲೇ ಅರ್ಧ ಜೀವವನ್ನು ಕಳೆದು ಕೊಂಡಿದೆ. ಈಗಾಗಲೇ 4 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗುತ್ತಿದ್ದು ಬರಗಾಲದ ತೀರ್ವತೆ ಹೆಚ್ಚಾಗುತ್ತಾ ಇದೆ. ರಾಜಕೀಯದ ಅ0ಡೇ ಪಿರ್ಕಿಗಳಿಗಂತೂ ನದಿ ಎಂದರೆ ದುಡ್ಡು ಲೂಟಿ ಮಾಡುವ ಬಿಗ್ ಪ್ರಾಜೆಕ್ಟ್ ಆಗಿ ಬಿಟ್ಟಿದೆ, ಆದರೆ ನದಿಯನ್ನೇ ಆಶ್ರಯಿಸಿಕೊಂಡು ಬದುಕುವ ಜನರಿಗೆ ಅರ್ಥ ಆಗುತ್ತಿಲ್ಲಾ ಎಂದರೆ ಇದು ಮುಂದೆ ಆಗಲಿರುವ ಪ್ರಾಕೃತಿಕ ದುರಂತ ಕ್ಕಿಂತಲೂ ದೊಡ್ಡ ದುರಂತ…
“ಜೈ ನೇತ್ರಾವತಿ

Spread the love
  • Related Posts

    ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ

    ಬೆಳ್ತಂಗಡಿ: ಜಿಲ್ಲಾ ನ್ಯಾಯಾಂಗ, ದ.ಕ ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಜನತೆ ಮತ್ತು ವಕೀಲರ ಸಂಘದ ಬಹುದಿನಗಳ ಬೇಡಿಕೆಯಾಗಿದ್ದ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಕರ್ನಾಟಕ ಸರಕಾರಕ್ಕೆ ಸಲ್ಲಿಸಲಾದ ಸುಮಾರು 23 ಕೋಟಿ…

    Spread the love

    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    ಬೆಳ್ತಂಗಡಿ, ಜೂನ್ 13: ಸ್ಥಳೀಯ ಪತ್ರಿಕೋದ್ಯಮವನ್ನು ಮತ್ತಷ್ಟು ಬಲಪಡಿಸುವ ಹಾಗೂ ಪತ್ರಕರ್ತರ ಹಿತರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಬೆಳ್ತಂಗಡಿ ತಾಲೂಕು ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ಸಂಘದ ಮುಂದಿನ ಅವಧಿಗೆ…

    Spread the love

    You Missed

    ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ

    • By admin
    • June 14, 2026
    • 20 views
    ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ

    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    • By admin
    • June 13, 2026
    • 72 views
    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ, ಶ್ರದ್ಧೆ ಮತ್ತು ಪರಿಶ್ರಮದಿಂದ ಉಜ್ವಲ ಭವಿಷ್ಯ ಸಾಧ್ಯ: ಸ್ಮಿತೇಶ್ ಬಾರ್ಯ

    • By admin
    • June 13, 2026
    • 25 views
    ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ, ಶ್ರದ್ಧೆ ಮತ್ತು ಪರಿಶ್ರಮದಿಂದ ಉಜ್ವಲ ಭವಿಷ್ಯ ಸಾಧ್ಯ: ಸ್ಮಿತೇಶ್ ಬಾರ್ಯ

    ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಒಲಿಂಪಿಯಾಡ್ ಕಾರ್ಯಕ್ರಮ,ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

    • By admin
    • June 13, 2026
    • 62 views
    ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಒಲಿಂಪಿಯಾಡ್ ಕಾರ್ಯಕ್ರಮ,ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

    ಬೆಳ್ತಂಗಡಿ ನರಸಿಂಹಗಡ (ಗಡಾಯಿಕಲ್ಲು) ಚಾರಣಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಿದ ಅರಣ್ಯ ಇಲಾಖೆ!!!

    • By admin
    • June 13, 2026
    • 21 views
    ಬೆಳ್ತಂಗಡಿ ನರಸಿಂಹಗಡ (ಗಡಾಯಿಕಲ್ಲು) ಚಾರಣಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಿದ ಅರಣ್ಯ ಇಲಾಖೆ!!!

    ಲ್ಯಾಂಡಿಂಗ್ ವೇಳೆ ದುರಂತ: ಬೆಂಕಿಗಾಹುತಿಯಾದ ವಾಯುಪಡೆಯ AN-32 ವಿಮಾನ

    • By admin
    • June 13, 2026
    • 191 views
    ಲ್ಯಾಂಡಿಂಗ್ ವೇಳೆ ದುರಂತ: ಬೆಂಕಿಗಾಹುತಿಯಾದ ವಾಯುಪಡೆಯ AN-32 ವಿಮಾನ