ನದಿಯ ವೇದನೆಯ ಹಿಂದಿನ ರೋಧನೆಯಾ ಕೇಳುವವರ್ಯಾರು! ಪಶ್ಚಿಮಘಟ್ಟಗಳ ರಕ್ಷಣೆಗೆ ಬೇಕಿದೆ ಸೂಕ್ತ ಕ್ರಮ

🖊️ ದಿನೇಶ್ ಹೊಳ್ಳ ಸಹ್ಯಾದ್ರಿ ಸಂಚಯ(ರಿ)

ಕುದುರೆಮುಖದ ಎಳನೀರು ಘಾಟಿಯ ಬಂಗ್ರ ಬಲಿಕೆ ಎಂಬ ನೇತ್ರಾವತಿ ನದಿಯ ಉಗಮ ಸ್ಥಾನದ ಸೂಕ್ಷ್ಮ ಜೀವ ವೈವಿದ್ಯತಾ ಪ್ರದೇಶದಲ್ಲಿ ಮೊನ್ನೆ ಭೂಕುಸಿತ ಆಯಿತು ಎಂದರೆ ಇದು ತಳ್ಳಿ ಹಾಕುವಂತಹ ಸಿಲ್ಲಿ ವಿಚಾರವಲ್ಲ. ಇದು ಮುಂದಿನ ಅಪಾಯದ ಮುನ್ಸೂಚನೆ ಅಂತೂ ಖಂಡಿತಾ ಹೌದು. ಮಳೆಗಾಲದ ಭೂಕುಸಿತವೇ ಅಪಾಯಕಾರಿ, ಅದಕ್ಕೇ ಇನ್ನೂ ನಮ್ಮ ಸರಕಾರದ ಯಾವ ಕ್ರಮಗಳೂ ಆಗಿಲ್ಲ, ಅದರ ಬಗ್ಗೆ ಅಧ್ಯಯನ ವರದಿಯೂ ಆಗಲಿಲ್ಲ, ಅದು ಇನ್ನು ಮುಂದೆ ಆಗದಂತೆ ಯೋಚನಾ ಕ್ರಮಗಳೂ, ಕ್ರಿಯೆಗಳೂ ಆಗಿಲ್ಲ. ಇದು ಈ ಸಮಯದಲ್ಲಿ ಏಕಾಏಕಿ ಭೂಕುಸಿತ ಆಗುತ್ತಿದೆ ಎಂದರೆ ಬಹಳಷ್ಟು ಯೋಚಿಸಬೇಕಾದ ಮತ್ತು ಯೋಚನೆಗಳಿಗೆ ಪೂರಕ ಕ್ರಮಗಳನ್ನು ಕೈ ಗೊಳ್ಳಬೇಕಾದ ಪ್ರಮುಖ ವಿಚಾರವಿದು.

ನೇತ್ರಾವತಿ ನದಿಯು ಪಶ್ಚಿಮ ಘಟ್ಟದ ಹಲವಾರು ಗಿರಿ, ಕಾನನ, ಕಣಿವೆಗಳಿಂದ ಹರಿದು ಬರುವ ಕರಾವಳಿಯ ಜೀವನದಿ ಯಾಗಿದ್ದು ಇದರ ಮಹತ್ವ ಮತ್ತು ಅಗತ್ಯವು ರಾಜಕಾರಣಿಗಳಿಗೆ ಬಿಡಿ ದಕ್ಷಿಣ ಕನ್ನಡದ ಕೆಲವು ಪಕ್ಷ, ರಾಜಕೀಯ ಕೃಪಾ ಪೋಷಿತ ಜನತೆಗೆ ಇನ್ನೂ ಅರ್ಥವಾಗಿಲ್ಲ. ಕಡ್ತಕಲ್, ಎಳನೀರು, ಚಾರ್ಮಾಡಿ, ಶಿರಾಡಿ, ಬಿಸಿಲೆ, ಬೈರಾಪುರ ಘಾಟಿ ಪ್ರದೇಶಗಳಿಂದ ಬರುವ 9 ಉಪ ನದಿಗಳಲ್ಲಿ ಎಳನೀರು ಘಾಟಿಯ ಬಂಗ್ರ ಬಲಿಕೆ ಕಣಿವೆಯ ಮೂಲ ಸ್ಥಾನದ ನೀರಿನ ಹರಿವೇ ಪ್ರಮುಖವಾಗಿರುತ್ತದೆ. ಕುದುರೆ ಮುಖದ ಹಿರಿಮರಿ, ತಿರಿಮರಿ ಗುಪ್ಪೆ, ಕೃಷ್ಣ ಗಿರಿಯ ನಡುವಿನ ಶೋಲಾ ಅಡವಿಯಲ್ಲಿ ಉಗಮವಾಗಿ ಅಲ್ಲಿ ಇನ್ನಿತರ ಕಣಿವೆಗಳಲ್ಲಿ ಹರಿದು ಬರುವ ಎಳನೀರು ಹೊಳೆ, ಮಾವಿನಸಸಿ ಹೊಳೆ, ಬಡಮನೆ ಹೊಳೆ, ಶಿರ್ಲಾಲು, ಶಿವನಾಳ ಹೊಳೆ ನೇತ್ರಾವತಿಯ ಪ್ರಮುಖ ಭಾಗವೇ ಆಗಿರುವ ಎಳನೀರು ಹೊಳೆಯ ಹೃದಯ ಭಾಗವೇ ಆಗಿರುತ್ತದೆ. ಬಹುಶಃ ಎಳನೀರು ಹೊಳೆಯ ಮಳೆಗಾಲದ ನೀರಿನ ಇಳುವರಿ ( ವಾಟರ್ ಕ್ಯಾಚ್ ಮೆಂಟ್ ಏರಿಯಾ ) ಕಡಿಮೆ ಆಗುತ್ತಿದ್ದು ನೀರನ್ನು ಹಿಡಿದಿಟ್ಟು ಕೊಳ್ಳುವಂತಹ ಬೆಟ್ಟದ ಮೇಲ್ನೈ ಪದರವು ಗಡಸುತನ ಕಳೆದುಕೊಂಡು ಮೆದುವಾಗುತ್ತಾ ವರ್ಷದಿಂದ ವರ್ಷಕ್ಕೆ ನೀರಿನ ಹಿಡಿತದ ವ್ಯಾಪ್ತಿ ಕಡಿಮೆಯಾಗುತ್ತಾ ಒರತೆಯ ಕೊರತೆ ಆಗುತ್ತಾ ಇರುವುದರಿಂದ 65 ಡಿಗ್ರೀಯಿಂದ 85 ಡಿಗ್ರಿ ವರೆವಿನ ಕಣಿವೆ, ಕಂದರದಲ್ಲಿ ಈ ರೀತಿಯ ಭೂಕುಸಿತ ಆಗುವ ಸಾಧ್ಯತೆಗಳು ಇವೆ. ಈ ಸಂದರ್ಭದಲ್ಲೇ ಭೂಕುಸಿತ ಆದರೆ ಇನ್ನು ಮುಂದಿನ ಮಳೆಗಾಲದಲ್ಲಿ ಇನ್ನಷ್ಟು ಕುಸಿತ ಆಗುವದಂತೂ ಖಂಡಿತ. ಚಾರ್ಮಾಡಿಯಲ್ಲಿ ಕಳೆದ 2 ವರ್ಷಗಳಲ್ಲಿ ಭೂಕುಸಿತ ಆಗಿ ನೇತ್ರಾವತಿಯ ಉಪನದಿ ಮೃತ್ಯುಂಜಯ ನದಿ ಬಡಕಲಾಗುತ್ತ ಬಂದಿದೆ. ಶಿರಾಡಿ ಘಾಟಿಯಲ್ಲಿ ಎತ್ತಿನ ಹೊಳೆ ಯೋಜನೆ ಕಾಮಗಾರಿಯಿಂದ ನೇತ್ರಾವತಿಯ ಇನ್ನೊಂದು ಉಪನದಿ ಕೆಂಪು ಹೊಳೆ ಈಗಾಗಲೇ ಅರ್ಧ ಜೀವವನ್ನು ಕಳೆದು ಕೊಂಡಿದೆ. ಈಗಾಗಲೇ 4 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗುತ್ತಿದ್ದು ಬರಗಾಲದ ತೀರ್ವತೆ ಹೆಚ್ಚಾಗುತ್ತಾ ಇದೆ. ರಾಜಕೀಯದ ಅ0ಡೇ ಪಿರ್ಕಿಗಳಿಗಂತೂ ನದಿ ಎಂದರೆ ದುಡ್ಡು ಲೂಟಿ ಮಾಡುವ ಬಿಗ್ ಪ್ರಾಜೆಕ್ಟ್ ಆಗಿ ಬಿಟ್ಟಿದೆ, ಆದರೆ ನದಿಯನ್ನೇ ಆಶ್ರಯಿಸಿಕೊಂಡು ಬದುಕುವ ಜನರಿಗೆ ಅರ್ಥ ಆಗುತ್ತಿಲ್ಲಾ ಎಂದರೆ ಇದು ಮುಂದೆ ಆಗಲಿರುವ ಪ್ರಾಕೃತಿಕ ದುರಂತ ಕ್ಕಿಂತಲೂ ದೊಡ್ಡ ದುರಂತ…
“ಜೈ ನೇತ್ರಾವತಿ

Spread the love
  • Related Posts

    ಬೆಳ್ತಂಗಡಿ: ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನಕ್ಕೆ ಯುವ ಕಾಂಗ್ರೆಸ್ ಚಾಲನೆ

    ಬೆಳ್ತಂಗಡಿ:ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಬೆಳ್ತಂಗಡಿ ತಾಲೂಕನ್ನು ಮಾದಕ ವಸ್ತು ಮುಕ್ತಗೊಳಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. “ನಶೆ ಬೇಡ… ನಾಳೆಯ ಭವಿಷ್ಯ ಬೇಕು” ಹಾಗೂ…

    Spread the love

    ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಏಕದಂತ

    ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ರಾತ್ರಿ ಮತ್ತೆ ದೈತ್ಯ ಗಾತ್ರದ ಕಾಡಾನೆ ಕಂಡುಬಂದಿದೆ. ಘಾಟಿ ಭಾಗದಲ್ಲಿ ಆಗಾಗ ಕಾಣಸಿಗುವ ಈ ಕಾಡಾನೆ ರಸ್ತೆ ಬದಿ ನಿಂತಿದ್ದು ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿದ್ದು ಕಾಡಾನೆಯನ್ನು ಕಾಡಿಗಟ್ಟುವ…

    Spread the love

    You Missed

    ಬೆಳ್ತಂಗಡಿ: ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನಕ್ಕೆ ಯುವ ಕಾಂಗ್ರೆಸ್ ಚಾಲನೆ

    • By admin
    • August 10, 2026
    • 4 views
    ಬೆಳ್ತಂಗಡಿ: ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನಕ್ಕೆ ಯುವ ಕಾಂಗ್ರೆಸ್ ಚಾಲನೆ

    ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಏಕದಂತ

    • By admin
    • August 10, 2026
    • 5 views
    ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಏಕದಂತ

    ಪಶ್ಚಿಮ ಘಟ್ಟದ ಪ್ರಕೃತಿ ಮಡಿಲಿನ ‘ನೇತ್ರಾವತಿ ಹೋಂ ಸ್ಟೇ’ – ಪ್ರವಾಸಿಗರಿಗಾಗಿ ಪರಿಪೂರ್ಣ ತಾಣ

    • By admin
    • August 9, 2026
    • 6 views

    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ

    • By admin
    • August 8, 2026
    • 11 views
    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ

    “ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ”

    • By admin
    • August 8, 2026
    • 7 views
    “ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ”

    ಭಾರಿ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

    • By admin
    • August 7, 2026
    • 10 views
    ಭಾರಿ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ