ಪ್ರಜಾಪ್ರಭುತ್ವವನ್ನು ವೈಭವೀಕರಿಸುವ ಡಾ. ದಾಭೊಲಕರರ ಕುಟುಂಬದವರಿಗೆ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೇಲೆಯೇ ನಂಬಿಕೆ ಇಲ್ಲ !

‘ಸಿಬಿಐ’ನ ವೈಫಲ್ಯವೋ ಅಥವಾ ರಾಷ್ಟ್ರವಾದಿಯ ತಪ್ಪಾದ ತನಿಖೆಯ ಪರಿಣಾಮವೋ ! – ಸನಾತನ ಸಂಸ್ಥೆ

ಸರ್ವೋಚ್ಚ ನ್ಯಾಯಾಲಯವು ಸುಶಾಂತಸಿಂಹ ರಾಜಪೂತ್ ಇವರ ಮೃತ್ಯು ಪ್ರಕರಣದ ತನಿಖೆಯನ್ನು ಮುಂಬಯಿ ಪೊಲೀಸರಿಂದ ‘ಸಿಬಿಐ’ಗೆ ಒಪ್ಪಿಸಿದ್ದರಿಂದ ಸಿಡಿಮಿಡಿಗೊಂಡಿದ್ದರಿಂದ ‘ಸಿಬಿಐ’ಗೆ ಗುರಿ ಮಾಡಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ನಾಯಕರು ಹೇಳಿಕೆಯನ್ನು ನೀಡುತ್ತಿದ್ದಾರೆ; ಆದರೆ ದಾಭೊಲಕರ ಪ್ರಕರಣದಲ್ಲಿ ಅವರದ್ದೇ ಗೃಹ ಇಲಾಖೆಯು ಮಾಡಿದ ತಪ್ಪಾದ ತನಿಖೆಯ ಪರಿಣಾಮವನ್ನು ಸನಾತನ ಸಂಸ್ಥೆಯು ಅನುಭವಿಸಬೇಕಾಗುತ್ತಿದೆ.

2013 ರಲ್ಲಿ ಡಾ. ಧಾಭೊಲಕರರ ಹತ್ಯೆಯಾಯಿತು, ಅದೇ ಸಮಯದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ನಾಯಕ ಹಾಗೂ ರಾಜ್ಯದ ಅಂದಿನ ಗೃಹಸಚಿವರಾದ ಆರ್.ಆರ್. ಪಾಟಿಲ್ ಇವರ ಮಾರ್ಗದರ್ಶನದಲ್ಲಿ ಪೊಲೀಸರು ತಕ್ಷಣವೇ ತನಿಖೆಯನ್ನು ಮಾಡುತ್ತಾ ಮನೀಷ ನಾಗೋರಿ ಹಾಗೂ ವಿಕಾಸ ಖಂಡೆಲವಾಲ ಎಂಬ ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರಿಗಳನ್ನು ಬಂಧಿಸಿದರು. ಅವರಲ್ಲಿ ಪತ್ತೆಯಾದ ಪಿಸ್ತೂಲಿನಿಂದ ದಾಭೋಲಕರ ಇವರ ಹತ್ಯೆಯಾಯಿತು, ಅದಕ್ಕಾಗಿ ಸಾಕ್ಷಿಯೆಂದು ‘ಫಾರೆನ್ಸೀಕ್ ವರದಿ’ಯನ್ನೂ ನ್ಯಾಯಾಲದಲ್ಲಿ ಸಲ್ಲಿಸಿದ್ದರು. ನಂತರ ಈ ತನಿಖೆಯಿಂದ ಅಸಮಾಧಾನಗೊಂಡಿರುವ ದಾಭೋಲಕರ ಕುಟುಂಬದವರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತನಿಖೆಯನ್ನು ‘ಸಿಬಿಐ’ಗೆ ನೀಡುವಂತೆ ಆಗ್ರಹಿಸಿದರು. ಅದಕ್ಕನುಸಾರ ‘ಸಿಬಿಐ’ ತನಿಖೆಯನ್ನು ಆರಂಭಿಸಿತು ಹಾಗೂ ಅದು ಮಾನ್ಯ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ.

ಹೀಗಿರುವಾಗ ಒಂದು ವೇಳೆ ರಾಷ್ಟ್ರವಾದಿ ನಾಯಕರು ಹಾಗೂ ದಾಭೊಲಕರ ಕುಟುಂಬ ಇಂದು ‘ಸಿಬಿಐ’ ವಿಫಲಗೊಂಡಿದೆ ಎಂದು ನಿರ್ಧರಿಸುತ್ತಿದ್ದರೆ, ಅದು ಅವರದ್ದೇ ವೈಫಲ್ಯವಾಗಿದೆ. ‘ಸಿಬಿಐ’ನ ವೈಫಲ್ಯದ ಬಗ್ಗೆ ಮಾತನಾಡುವುದಿದ್ದರೆ, ಆರ್.ಆರ್.ಪಾಟಿಲ್ ಇವರ ಕಾಲದಲ್ಲಿ ನಡೆದ ತನಿಖೆಯ ಮೇಲೆಯೂ ಪ್ರಶ್ನೆಚಿಹ್ನೆ ನಿರ್ಮಾಣವಾಗುತ್ತದೆ. ಈ ಎರಡು ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರಿಗ ಅಪರಾಧ ‘ಫಾರೆನ್ಸಿಕ್ ವರದಿ’ಯಲ್ಲಿ ಸಿದ್ಧವಾಗಿರುವಾಗ ಈ ಇಬ್ಬರಿಗೆ ‘ಕ್ಲೀನ್‌ಚೀಟ್’ ಹೇಗೆ ಸಿಕ್ಕಿತು? ಇದರ ಬಗ್ಗೆ ದಾಭೊಲಕರ ಕುಟುಂಬದವರಾಗಲಿ, ಆಗಿನ ರಾಜ್ಯ ಸರಕಾರವಾಗಲಿ ಏನೂ ಮಾತನಾಡುವುದಿಲ್ಲ, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್-ಎನ್‌ಸಿಪಿ ಸರ್ಕಾರದ ಅವಧಿಯಲ್ಲಿ 2013 ರಲ್ಲಿ ದಾಭೋಲ್ಕರರ ಹತ್ಯೆಯಾದಾಗ, ದಾಭೋಲ್ಕರ್ ಅವರ ಕುಟುಂಬವು ತನಿಖೆಯನ್ನು ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡಿತು. ಕಾಲಕ್ರಮೇಣ ತನಿಖೆಯು ಸಿಬಿಐಗೆ ಹೋಯಿತು, ಅನಂತರ ರಾಜ್ಯದಲ್ಲಿ ಅಧಿಕಾರ ಹಸ್ತಾಂತರವಾಯಿತು. ಈ ಪ್ರಕರಣದಲ್ಲಿ ವಿನಾಕಾರಣ ಕೆಲವು ಹಿಂದುತ್ವನಿಷ್ಠ ಕಾರ್ಯಕರ್ತರ ಬಂಧನವಾಯಿತು. ಇನ್ನೂ ಏನೂ ಆಗಲಿಲ್ಲ ಎಂದು ದಾಭೋಲ್ಕರ್ ಕುಟುಂಬ ಕೂಗುತ್ತಲೇ ಇತ್ತು. ಈಗ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಈ ಮೂರು ಪಕ್ಷಗಳ ‘ಮಹಾವಿಕಾಸ್ ಮೈತ್ರಿಕೂಟ’ ಅಧಿಕಾರಕ್ಕೆ ಬಂದಿರುವುದರಿಂದ, ತನಿಖೆ ಮತ್ತು ಸರ್ಕಾರದ ಬಗ್ಗೆ ಇನ್ನೂ ಪ್ರಶ್ನೆಗಳು ಎದ್ದಿವೆ. ಈ ಘಟನೆಯಿಂದ ಎದ್ದು ಕಾಣುವ ಒಂದು ವಿಷಯವೇನೆಂದರೆ, ಯಾವುದೇ ಪಕ್ಷದ ಸರ್ಕಾರವಿದ್ದರೂ ತನಿಖಾದಳ ಯಾವುದೇ ಇರಲಿ; ‘ದಾಭೋಲ್ಕರರ ನಿಜವಾದ ಕೊಲೆಗಾರರು ಯಾರು’ ಎಂಬುದಕ್ಕಿಂತ ದಾಭೋಲ್ಕರ್ ಕುಟುಂಬದವರು ಯಾರನ್ನು ‘ಕೊಲೆಗಾರ’ ಎಂದು ನಿರ್ಧರಿಸಿದೆಯೋ ಆ ‘ಕೊಲೆಗಾರ’ರ ಬಂಧನ ಇನ್ನೂ ಆಗಿಲ್ಲ, ಆದುದರಿಂದ ಈ ಕೋಲಾಹಲ ನಡೆಯುತ್ತಿದೆ. ಇದರಿಂದ ಪ್ರಜಾಪ್ರಭುತ್ವ ತತ್ವಗಳ ಹೆಸರಿನಲ್ಲಿ ಕೋಲಾಹಲವುಂಟು ಮಾಡುವ ದಾಬೋಲ್ಕರ್ ಕುಟುಂಬವು ನಿಜವಾಗಿಯೂ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ನಂಬುತ್ತದೆಯೇ ? ಈಗ ‘ಭಾರತದ ಎಲ್ಲ ತನಿಖಾ ದಳಗಳು ತನಿಖೆ ಮಾಡಿಯೂ ಏನೂ ಸಿಗುತ್ತಿಲ್ಲ’, ಎಂದು ಹೇಳುತ್ತಾ, ಇನ್ನು ವಿದೇಶದ ‘ಎಫ್‌ಬಿಐ’ ಅಥವಾ ‘ಸ್ಕಾಟ್‌ಲ್ಯಾಂಡ್ ಯಾರ್ಡ್’ಗೆ ತನಿಖೆಯನ್ನು ಹಸ್ತಾಂತರಿಸಬೇಕೆಂದು ದಾಭೋಲ್ಕರ್ ಕುಟುಂಬ ಒತ್ತಾಯಿಸಲಿದೆಯೇ ?

Spread the love
  • Related Posts

    ಸಕಲೇಶಪುರ: ಅಕ್ರಮ ಭೂ ಮಂಜೂರಾತಿ ಹಗರಣ – ಬಂಧನ ಭೀತಿಯಿಂದ ನೂರಕ್ಕೂ ಹೆಚ್ಚು ಅಧಿಕಾರಿಗಳು ಸಾಮೂಹಿಕ ರಜೆ!

    ಸಕಲೇಶಪುರ: ಅಕ್ರಮ ಭೂ ಮಂಜೂರಾತಿ(Illegal land allocation) ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಬಂಧನದ(Arrest) ಭೀತಿ ಎದುರಿಸುತ್ತಿರುವ ಕಂದಾಯ ಮತ್ತು ಭೂಮಾಪನಾ (Survey) ಇಲಾಖೆಯ ನೂರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಮೂಹಿಕ ರಜೆ ಮೇಲೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ…

    Spread the love

    ಕರಾವಳಿಯಲ್ಲಿ ಮುಂದುವರಿದ ಮಳೆ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

    ಮಂಗಳೂರು: ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ನಾಳೆ (ಜುಲೈ 25) ರಜೆ ಘೋಷಿಸಿ…

    Spread the love

    You Missed

    ಸಕಲೇಶಪುರ: ಅಕ್ರಮ ಭೂ ಮಂಜೂರಾತಿ ಹಗರಣ – ಬಂಧನ ಭೀತಿಯಿಂದ ನೂರಕ್ಕೂ ಹೆಚ್ಚು ಅಧಿಕಾರಿಗಳು ಸಾಮೂಹಿಕ ರಜೆ!

    • By admin
    • July 25, 2026
    • 6 views
    ಸಕಲೇಶಪುರ: ಅಕ್ರಮ ಭೂ ಮಂಜೂರಾತಿ ಹಗರಣ – ಬಂಧನ ಭೀತಿಯಿಂದ ನೂರಕ್ಕೂ ಹೆಚ್ಚು ಅಧಿಕಾರಿಗಳು ಸಾಮೂಹಿಕ ರಜೆ!

    ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ: ಆರೋಗ್ಯಕರ ಜೀವನಕ್ಕೆ ಸಮತೋಲಿತ ಆಹಾರ ಹಾಗೂ ಸ್ವಚ್ಛತೆ ಅಗತ್ಯ – ಡಾ. ನಿಶ್ಚಯ್ ಎಚ್.ಎನ್.

    • By admin
    • July 24, 2026
    • 5 views
    ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ: ಆರೋಗ್ಯಕರ ಜೀವನಕ್ಕೆ ಸಮತೋಲಿತ ಆಹಾರ ಹಾಗೂ ಸ್ವಚ್ಛತೆ ಅಗತ್ಯ – ಡಾ. ನಿಶ್ಚಯ್ ಎಚ್.ಎನ್.

    ಕರಾವಳಿಯಲ್ಲಿ ಮುಂದುವರಿದ ಮಳೆ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

    • By admin
    • July 24, 2026
    • 4 views
    ಕರಾವಳಿಯಲ್ಲಿ ಮುಂದುವರಿದ ಮಳೆ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಶುಕ್ರವಾರ 24ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

    • By admin
    • July 23, 2026
    • 6 views
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಶುಕ್ರವಾರ 24ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

    ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಯೆಲ್ಲೊ – ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

    • By admin
    • July 22, 2026
    • 8 views
    ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಯೆಲ್ಲೊ – ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ

    • By admin
    • July 18, 2026
    • 10 views
    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ