ಉಜಿರೆ: ಸಂಗಮ ಕಲಾವಿದರು ಉಜಿರೆ ಇದರ 16ನೇ ವರ್ಷದ ವಾರ್ಷಿಕೋತ್ಸವವು 05/05/2026 ಮಂಗಳವಾರ ಶ್ರೀ ಸದಾಶಿವ ರುದ್ರ ದೇವಸ್ಥಾನ ಸುರ್ಯ ಇದರ ವಠಾರದಲ್ಲಿ ಸಂಜೆ 6.30ರಿಂದ ನಡೆಯಲಿದೆ.

ಡಾ| ಸತೀಶ್ಚಂದ್ರ ಸುರ್ಯಗುತ್ತು ಅಧ್ಯಕ್ಷತೆ ವಹಿಸಲಿದ್ದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಅನಂತರಾಮ ಮಯ್ಯ, ಬಿ.ಮುನಿರಾಜ ಅಜ್ರಿ, ಧರ್ಣಪ್ಪ ಮೂಲ್ಯ, ಶ್ರೀಮತಿ ಲೀಲಾವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಾ|| ಪ್ರದೀಪ್ ಎ ಮತ್ತು ಶ್ರೀ ಪವನ್ ರಾಜ್ ಎಸ್ ಹೆಗ್ಡೆ ಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಮತ್ತು ರಾತ್ರಿ 8ರಿಂದ ತುಳು ಹಾಸ್ಯಮಯ ನಾಟಕ “ಮಾಸ್ಟ್ರ್ ಮನಿಪುಜೆರ್” ಸಂಗಮ ಕಲಾವಿದರಿಂದ ನಡೆಯಲಿದೆ





