ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎಂದು ಕರೆದು ಅವರನ್ನು ಅವಮಾನಿಸಿದ ಫೈಜ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ! HJS ಆಗ್ರಹ

ಮುಂಬೈ: ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎಂದು ಕರೆದು ಅವರನ್ನು ಅವಮಾನಿಸಿದ ಫೈಜ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು !

ಮೊಹಮ್ಮದ್ ಫೈಜ್ ಖಾನ್ ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು ಮತ್ತು ಅಯೋಧ್ಯೆಗೆ ಮಣ್ಣು ತರುವ ಅಟ್ಟಹಾಸದಿಂದ ಹಿಂದೆ ಸರಿಯಬೇಕು ! ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಅನೇಕ ಹಿಂದೂಗಳ ಪ್ರಾಣಾಹುತಿ, ನೂರಾರು ವರ್ಷಗಳ ಹೋರಾಟ ಮತ್ತು ೫೦೦ ವರ್ಷಗಳ ದೀರ್ಘ ಪ್ರತೀಕ್ಷೆಯ ಫಲವಾಗಿ ಆಗಸ್ಟ್ ೫ ರಂದು ಶ್ರೀರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ದೇವಾಲಯದ ನಿರ್ಮಾಣ ಕಾರ್ಯದ ಶುಭಾರಂಭವಾಗುತ್ತಿದೆ. ಈ ಕ್ಷಣ ಸಂಪೂರ್ಣ ಹಿಂದೂ ಸಮಾಜಕ್ಕ್ಕೆ ತುಂಬಾ ಆನಂದೋತ್ಸವವಾಗಿದೆ. ಭಾರತೀಯ ಮುಸ್ಲಿಮರು ಆಕ್ರಮಣಕಾರಿ ಬಾಬರ್‌ನ ಕುರುಹುಗಳಿಗೆ ತಿಲಾಂಜಲಿ ನೀಡಿ ಪ್ರಭು ಶ್ರೀರಾಮನ ದೇವಾಲಯದ ನಿರ್ಮಾಣಕ್ಕೆ ಈಗಾಗಲೇ ಸಹಕರಿಸಿದ್ದರೆ ಈ ಸಂಘರ್ಷವನ್ನು ತಪ್ಪಿಸಬಹುದಿತ್ತು. ತದ್ವಿರುದ್ಧವಾಗಿ, ಮುಸ್ಲಿಂ ಸಮಾಜವು ವಿರೋಧ ಮಾಡಲು ಪಣತೊಟ್ಟಿತು. ಅದರ ನಂತರವೂ, ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಪ್ರಜಾಸತ್ತಾತ್ಮಕವಾದ ಪ್ರಕ್ರಿಯೆಯ ಮೂಲಕ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಈಗ ಪುನಃ ಶ್ರೀರಾಮ ದೇವಾಲಯದ ಅಡಿಪಾಯಕ್ಕೆ ಮಣ್ಣು ತರಲು ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರ ಒತ್ತಾಯದಿಂದಾಗಿ ವಿವಾದ ಉದ್ಭವಿಸಿದೆ. ಇಂದಿನವರೆಗೂ ರಾಮ ಮಂದಿರಕ್ಕೆ ಮುಸ್ಲಿಮರ ವಿರೋಧದಿಂದಾಗಿ ಹಿಂದೂಗಳ ಮನಸ್ಸಿನಲ್ಲಿ ಈ ಕೃತಿಯ ಬಗ್ಗೆ ವಿರೋಧದ ಭಾವನೆ ಮೂಡುವುದು ಸಹಜವಾಗಿದೆ. ಒಂದು ಪಕ್ಷ ಮೊಹಮ್ಮದ್ ಫೈಜ್ ಖಾನ್ ಅವರ ಭಾವನೆಗಳು ಪವಿತ್ರವಾಗಿವೆ, ಅವರು ರಾಮಭಕ್ತರಾಗಿದ್ದಾರೆ ಎಂದು ನಂಬಿದರೂ ಅವರು ಮೊದಲು ಹಿಂದೂ ಸಮುದಾಯದ ಭಾವನೆಗಳನ್ನು ಗೌರವಿಸಬೇಕು. ಆದ್ದರಿಂದ, ಈ ಸಂದರ್ಭದಲ್ಲಿ, ಶ್ರೀರಾಮ ಜನ್ಮಭೂಮಿಯಲ್ಲಿ ಭೂಮಿಪೂಜೆಯ ಮಹತ್ಕಾರ್ಯಕ್ಕೆ ಯಾವುದೇ ಅಡ್ಡಿಪಡಿಸಬಾರದು, ಈ ಸ್ಥಳದಲ್ಲಿ ಯಾವುದೇ ವಿವಾದಗಳು ಸೃಷ್ಟಿಯಾಗಾದಂತೆ ಮೊಹಮ್ಮದ್ ಫೈಜ್ ಖಾನ್ ನೋಡಬೇಕು. ಇದಕ್ಕಾಗಿ ಫೈಜ್ ಖಾನ್ ಭೂಮಿಪೂಜೆಗೆ ಮಣ್ಣು ತರುವ ಅಟ್ಟಹಾಸವನ್ನು ಕೈಬಿಟ್ಟು ಹಿಂದೆ ಸರಿಯಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಕರೆ ನೀಡಿದ್ದಾರೆ.


ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎನ್ನುವುದು ಅವರ ಅವಮಾನ !
ಮೊಹಮ್ಮದ ಫೈಜ್ ಖಾನ್ ಇವರ ಸೋಶಿಯಲ್ ಮೀಡಿಯಾದ ‘ಪೋಸ್ಟ್’ನಲ್ಲಿ ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎಂದು ಉಲ್ಲೇಖಿಸಿದ್ದಾರೆ. ‘ಇಮಾಮ್’ ಎಂದರೆ ‘ನಮಾಜುಪಠಣ ಮಾಡುವವರು, ಇಸ್ಲಾಮ್ ನಂಬುವವರು ಮತ್ತು ಅದಕ್ಕನುಸಾರ ಆಚರಣೆ ಮಾಡುವವರು’ ! ಪ್ರಭು ಶ್ರೀರಾಮನು ನಮಾಜುಪಠಣ ಮಾಡುವವರೂ ಆಗಿರಲಿಲ್ಲ ಹಾಗೂ ಇಸ್ಲಾಮಿನ ಅನುಯಾಯಿಯೂ ಆಗಿರಲಿಲ್ಲ. ಇಸ್ಲಾಂ ಸ್ಥಾಪನೆಯಾಗುವ ಲಕ್ಷಾಂತರ ವರ್ಷಗಳ ಮೊದಲೇ ತ್ರೇತಾಯುಗದಲ್ಲಿ ಪ್ರಭು ಶ್ರೀರಾಮನು ಅವತರಿಸಿದನು. ಆದ್ದರಿಂದ, ಇಸ್ಲಾಂನಲ್ಲಿ ’ಇಮಾಮ್’ ಎಂಬುವುದರ ಅರ್ಥ ಏನೇ ಇರಲಿ, ಅದನ್ನು ಪ್ರಭು ರಾಮನಿಗಾಗಿ ಬಳಸುವುದೆಂದರೆ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಮುಂತಾದ ಎಲ್ಲ ದೃಷ್ಟಿಯಲ್ಲಿ ತಪ್ಪಾಗಿದೆ. ಮತ್ತೊಂದೆಡೆ, ಅಯೋಧ್ಯೆಯ ಶ್ರೀರಾಮ ಮಂದಿರ ಸಹಿತ ಭಾರತದ ಸಾವಿರಾರು ಮಂದಿರಗಳನ್ನು ಧ್ವಂಸ ಮಾಡಿದ ಇಸ್ಲಾಮೀ ಆಕ್ರಮಣಕಾರರ, ಮೂರ್ತಿ ಪೂಜೆಯನ್ನು ನಂಬದ ಪಂಥದ ‘ಇಮಾಮ್’ ಎಂದು ಕರೆದು ಫೈಜ್ ಖಾನ್ ಇವರು ಪ್ರಭು ಶ್ರೀರಾಮನನ್ನು ಅವಮಾನಿಸಿದ್ದಾರೆ. ಆದ್ದರಿಂದ, ಫೈಜ್ ಖಾನ್ ಸಂಪೂರ್ಣ ಹಿಂದೂ ಸಮಾಜದ ಮತ್ತು ಶ್ರೀರಾಮನ ಭಕ್ತರಿರ ಬಹಿರಂಗ ಕ್ಷಮೆಯಾಚಿಸಬೇಕು, ಎಂದು ಶ್ರೀ. ರಮೇಶ ಶಿಂದೆಯವರು ಹೇಳಿದ್ದಾರೆ.

Spread the love
  • Related Posts

    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    🖊️• ಬರಹ: ರಾಜೇಶ್ ಎಂ ಕಾನರ್ಪ ಮಂಗಗಳ ಕೈಯಲ್ಲಿ ಕುರುಕುರೇ ಪ್ಯಾಕೇಟ್!!! ಪ್ರೀತಿಯ ಹೆಸರಿನಲ್ಲಿ ವಾನರಗಳಿಗೆ ವಿಷವಿಕ್ಕುತ್ತಿರುವ ಮನುಜಕುಲ??? ವಾನರಗಳಿಗೆ ಪ್ಯಾಕೆಟ್‌ ತಿಂಡಿ ಬೇಡ, ಪ್ರಕೃತಿಯ ಆಹಾರ ಬೇಕು!!! ಪ್ರಕೃತಿಯ ಮಡಿಲಲ್ಲಿ ಸ್ವತಂತ್ರವಾಗಿ ಬದುಕಬೇಕಾದ ವಾನರಗಳು ಇಂದು ಮನುಷ್ಯರ ಕೈಯಲ್ಲಿರುವ ಕುರುಕುರೆ,…

    Spread the love

    ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ

    ಮಂಗಳೂರು: ನಾಗರಪಂಚಮಿ ಹಬ್ಬದ ಪ್ರಯುಕ್ತ ಆಗಸ್ಟ್ 17ರಂದು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರಿ ಕಚೇರಿಗಳಿಗೆ ಸೋಮವಾರ ರಜೆ ಇರಲಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.…

    Spread the love

    You Missed

    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    • By admin
    • August 20, 2026
    • 6 views
    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ

    • By admin
    • August 16, 2026
    • 7 views
    ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ

    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    • By admin
    • August 15, 2026
    • 10 views
    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ

    • By admin
    • August 14, 2026
    • 26 views
    ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ

    ಬಂಟ್ವಾಳ ಕಾವಳ ಪಡೂರಿನಲ್ಲಿ ಪೊಲೀಸ್‌ ದಾಳಿ: ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ 4 ಲಕ್ಷ 90 ಸಾವಿರ ಮೌಲ್ಯದ ಸೊತ್ತುಗಳು ವಶಕ್ಕೆ

    • By admin
    • August 14, 2026
    • 15 views
    ಬಂಟ್ವಾಳ ಕಾವಳ ಪಡೂರಿನಲ್ಲಿ ಪೊಲೀಸ್‌ ದಾಳಿ: ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ 4 ಲಕ್ಷ 90 ಸಾವಿರ ಮೌಲ್ಯದ ಸೊತ್ತುಗಳು ವಶಕ್ಕೆ

    ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಆಗಸ್ಟ್ 15-16ರಂದು ಶೈಕ್ಷಣಿಕ ಸಾಧಕರ ಅಭಿನಂದನೆ ಮತ್ತು “ರಕ್ಷಕ ನಮನ-2026” ಕಾರ್ಯಕ್ರಮ

    • By admin
    • August 14, 2026
    • 14 views
    ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಆಗಸ್ಟ್ 15-16ರಂದು ಶೈಕ್ಷಣಿಕ ಸಾಧಕರ ಅಭಿನಂದನೆ ಮತ್ತು “ರಕ್ಷಕ ನಮನ-2026” ಕಾರ್ಯಕ್ರಮ