ಗೋಕುಲಾಷ್ಟಮಿಯ ಶುಭದಿನದಂದು ನೇಪಾಳಿ ಭಾಷೆಯಲ್ಲಿ ‘ಸನಾತನ ಸಂಸ್ಥೆ’ಯ ಜಾಲತಾಣದ ಲೋಕಾರ್ಪಣೆ !


ಮಂಗಳೂರು: ಭಾರತ ಮತ್ತು ನೇಪಾಳದ ನಡುವೆ ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕ ಸಂಬಂಧವಿದೆ. ‘ಹಿಂದೂ ಧರ್ಮ’ ಇದು ಎರಡೂ ದೇಶಗಳಲ್ಲಿನ ಸಮಾನವಾದ ಅಂಶವಾಗಿದೆ. ಸಹಜವಾಗಿಯೇ ಎರಡೂ ದೇಶಗಳಲ್ಲಿಯ ಶ್ರದ್ಧಾಸ್ಥಾನಗಳು, ನಂಬಿಕೆ, ಹಬ್ಬ-ಉತ್ಸವ ಇತ್ಯಾದಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮ್ಯತೆ ಇದೆ. ಸನಾತನ ಸಂಸ್ಥೆಯ ಜಾಲತಾಣಕ್ಕೆ ಜಗತ್ತಿನಾದ್ಯಂತ ಹಿಂದೂ ಸಮಾಜದ ವಾಚಕರಿದ್ದಾರೆ. ಈ ಜಾಲತಾಣಕ್ಕೆ ವಿವಿಧ ದೇಶಗಳಲ್ಲಿಯ ಹಿಂದೂ ನಾಗರಿಕರ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅದಕ್ಕಾಗಿ ಕೆಲವು ನೇಪಾಳಿ ಜಿಜ್ಞಾಸುಗಳು ನೇಪಾಳದಲ್ಲಿರುವ ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ಸಿಗಲು ಸನಾತನದ ಜಾಲತಾಣವು ನೇಪಾಳಿ ಭಾಷೆಯಲ್ಲಿಯೂ ಆರಂಭಿಸುವಂತೆ ಆಗ್ರಹಿಸಿದ್ದರು. ಸನಾತನ ಸಂಸ್ಥೆ ಹಿಂದೂ ಧರ್ಮಪ್ರಸಾರದ ವ್ರತವನ್ನು ಕೈಗೆತ್ತಿಕೊಂಡು ಕಾರ್ಯನಿರತವಾಗಿದ್ದರಿಂದ ನಾವು ಈ ಬೇಡಿಕೆಯನ್ನು ಪೂರ್ಣ ಮಾಡುತ್ತಿದ್ದೇವೆ. ಜಗತ್ತಿನಾದ್ಯಂತ ನೇಪಾಳಿ ಭಾಷೆಯವರಿಗೆ ಧರ್ಮಶಿಕ್ಷಣ ಸಿಗಲು ನಾವು ನೇಪಾಳಿ ಜಾಲತಾಣವನ್ನು ಆರಂಭಿಸುತ್ತಿದ್ದೇವೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ್ ಇವರು ಹೇಳಿದ್ದಾರೆ.

ಆಗಸ್ಟ್ 11 ರಂದು ಗೋಕುಲಾಷ್ಟಮಿಯ ಮಂಗಳ ದಿನದಂದು ‘ಆನ್‌ಲೈನ್’ ಕಾರ್ಯಕ್ರಮದ ಮೂಲಕ ಜಾಲತಾಣವನ್ನು ಲೋಕಾರ್ಪಣೆಯನ್ನು ಮಾಡಲಾಯಿತು. ಈ ಸಮಯದಲ್ಲಿ ‘ರಾಷ್ಟ್ರೀಯ ಧರ್ಮಸಭಾ ನೇಪಾಳ’ದ ಅಧ್ಯಕ್ಷ ಡಾ. ಮಾಧವ ಭಟ್ಟರಾಯಿ ಹಾಗೂ ಅವರ ಧರ್ಮಪತ್ನಿ, ಅದೇರೀತಿ ನೇಪಾಳ ಸರಕಾರದ ಮಾಜಿ ರಾಜ್ಯಸಚಿವ ಸೌ. ಕಾಂತಾ ಭಟ್ಟರಾಯಿ ಇವರ ಹಸ್ತದಿಂದ ಲೋಕಾರ್ಪಣೆಯಾಯಿತು. ಈ ಮಂಗಳ ದಿನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರೂ ದೆಹಲಿಯಿಂದ ‘ಆನ್‌ಲೈನ್’ನ ಮೂಲಕ ಉಪಸ್ಥಿತರಿದರು.

ಈ ಪ್ರಸಂಗದಲ್ಲಿ ಡಾ. ಭಟ್ಟರಾಯಿಯವರು ಮಾತನಾಡುತ್ತಾ, “ಸನಾತನ ಸಂಸ್ಥೆಯ ನೇಪಾಳಿ ಭಾಷೆಯ ಜಾಲತಾಣ ನಮಗೆ ಬಹಳ ಉಪಯುಕ್ತವಾಗಿದೆ ಎಂದೆನಿಸಿತು ಮತ್ತು ಇದು ನಮಗೆ ಬಹಳ ಸಹಾಯ ಮಾಡಲಿದೆ. ನೇಪಾಳದಲ್ಲಿ ಈ ರೀತಿಯ ಧಾರ್ಮಿಕ ವೆಬ್‌ಸೈಟ್ಸ್ ತುಂಬ ಕಡಿಮೆ ಇವೆ. ಇದು ಕೇವಲ ಧರ್ಮದ ಬಗ್ಗೆ ಜ್ಞಾನ ಮಾತ್ರವಲ್ಲದೇ, ಹಿಂದೂ ರಾಷ್ಟ್ರದ ಬಗ್ಗೆ ನಮಗೆಲ್ಲರಿಗೂ ಮಾರ್ಗದರ್ಶನ ಮಾಡಲಿದೆ”, ಎಂದರು.

ಈ ಸಮಯದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಮಾತನಾಡುತ್ತಾ, “ವೆಬ್‌ಸೈಟ್‌ನಲ್ಲಿ ನೀಡಿರುವ ಹಿಂದೂ ಧರ್ಮಶಿಕ್ಷಣ ಇತ್ಯಾದಿ ಮಾಹಿತಿಗಳ ಮಾಧ್ಯಮದಿಂದ ಭಾರತ ಮತ್ತು ನೇಪಾಳ ಇವೆರಡೂ ದೇಶಗಳ ಧರ್ಮಬಾಂಧವ್ಯ ದೃಢವಾಗಲಿದೆ, ಎರಡೂ ದೇಶಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಡೆಯುತ್ತಿರುವ ಅಭಿಯಾನವು ಮುಂದುವರಿಯಲಿದೆ”, ಎಂದರು.

ಕನ್ನಡ, ಹಿಂದಿ, ಮರಾಠಿ, ಗುಜರಾತಿ, ಆಂಗ್ಲ, ತೆಲುಗು, ತಮಿಳು, ಮಲ್ಯಾಳಮ್ ಈ ೮ ಭಾಷೆಗಳಲ್ಲಿ ಇರುವ ಈ ಜಾಲತಾಣವು ಇನ್ನು ಮುಂದೆ ನೇಪಾಳಿ ಭಾಷೆಯಲ್ಲೂ ಲಭ್ಯವಿರಲಿದೆ. ಈ ಜಾಲತಾಣದಲ್ಲಿ ಅಧ್ಯಾತ್ಮಿಕ ವಿಷಯದ ಸಂದೇಹ ನಿವಾರಣೆ ಮಾಡಲು ‘ಆನ್‌ಲೈನ್’ ಸಂಪರ್ಕದ ಸೌಲಭ್ಯವು ಲಭ್ಯವಿರಲಿದೆ. ಸನಾತನದ ಜಾಲತಾಣದ ಮೂಲಕ ಜಿಜ್ಞಾಸುಗಳು ಸಾಧನೆಯನ್ನು ಆರಂಭಿಸಿದ್ದಾರೆ ಹಾಗೂ ತಮ್ಮ ಜೀವನವನ್ನು ಆನಂದಮಯವಾಗಿಸಿಕೊಂಡಿದ್ದಾರೆ. ಆದ್ದರಿಂದ ಹೆಚ್ಚೆಚ್ಚು ಜಿಜ್ಞಾಸುಗಳು ಈ ಜಾಲತಾಣಕ್ಕೆ ಭೇಟಿ ನೀಡಿ ಸಾಧನೆಯನ್ನು ಆರಂಭಿಸಬೇಕು, ಎಂದು ಸನಾತನ ಸಂಸ್ಥೆಯ ವತಿಯಿಂದ ಕರೆ ನೀಡಲಾಗಿದೆ.

ಜಾಲತಾಣದ ಲಿಂಕ್ : www.Sanatan.org/nepali

Spread the love
  • Related Posts

    ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಆ.29ರಂದು ನಡೆಯಲಿದೆ. ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    ಬಂಗಾಡಿ, ಆ.7: ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಬಂಗಾಡಿಯ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 29, 2026ರ ಶನಿವಾರ ಬೆಳಿಗ್ಗೆ 9.30 ಗಂಟೆಗೆ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು…

    Spread the love

    “ಶಿಕ್ಷಣದ ಹೆಮ್ಮೆಗೆ ಡ್ರಗ್ಸ್ ಕರಿನೆರಳು: ಎಚ್ಚೆತ್ತುಕೊಳ್ಳಬೇಕಿದೆ ಬೆಳ್ತಂಗಡಿಯ ಜನತೆ!!!”

    🖊️• ವರದಿ: ರಾಜೇಶ್ ಎಂ ಕಾನರ್ಪ ಬೆಳ್ತಂಗಡಿಯ ಶೈಕ್ಷಣಿಕ ಘನತೆಗೆ ಕಪ್ಪುಚುಕ್ಕೆಯಾಗುತ್ತಿರುವ ಮಾದಕ ದ್ರವ್ಯ ಜಾಲ: ಈಗಲೇ ಎಚ್ಚೆತ್ತುಕೊಳ್ಳಬೇಕಾದ ಸಮಯ ಒಂದು ಕಾಲದಲ್ಲಿ ಶಿಕ್ಷಣ, ಸಂಸ್ಕಾರ ಮತ್ತು ಶಾಂತಿಯ ನೆಲವೆಂದು ಗುರುತಿಸಿಕೊಂಡಿದ್ದ ಬೆಳ್ತಂಗಡಿ ತಾಲೂಕು ಇಂದು ರಾಜ್ಯದ ಶೈಕ್ಷಣಿಕ ನಕ್ಷೆಯಲ್ಲಿ ತನ್ನದೇ…

    Spread the love

    You Missed

    ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಆ.29ರಂದು ನಡೆಯಲಿದೆ. ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    • By admin
    • August 7, 2026
    • 3 views
    ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಆ.29ರಂದು ನಡೆಯಲಿದೆ. ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    “ಶಿಕ್ಷಣದ ಹೆಮ್ಮೆಗೆ ಡ್ರಗ್ಸ್ ಕರಿನೆರಳು: ಎಚ್ಚೆತ್ತುಕೊಳ್ಳಬೇಕಿದೆ ಬೆಳ್ತಂಗಡಿಯ ಜನತೆ!!!”

    • By admin
    • August 6, 2026
    • 9 views
    “ಶಿಕ್ಷಣದ ಹೆಮ್ಮೆಗೆ ಡ್ರಗ್ಸ್ ಕರಿನೆರಳು: ಎಚ್ಚೆತ್ತುಕೊಳ್ಳಬೇಕಿದೆ ಬೆಳ್ತಂಗಡಿಯ ಜನತೆ!!!”

    ಸಕಲೇಶಪುರ: ಬಾಳುಪೇಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    • By admin
    • August 6, 2026
    • 5 views
    ಸಕಲೇಶಪುರ: ಬಾಳುಪೇಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಬೆಸ್ಟ್ ಎಂಎಲ್ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಬಿಜೆಪಿ ಮೋರ್ಚಾಗಳಿಂದ ಅಭಿನಂದನೆ

    • By admin
    • August 6, 2026
    • 7 views
    ಬೆಸ್ಟ್ ಎಂಎಲ್ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಬಿಜೆಪಿ ಮೋರ್ಚಾಗಳಿಂದ ಅಭಿನಂದನೆ

    ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿ: ಶಾಸಕ ಹರೀಶ್ ಪೂಂಜ ಕರೆ

    • By admin
    • August 6, 2026
    • 5 views
    ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿ: ಶಾಸಕ ಹರೀಶ್ ಪೂಂಜ ಕರೆ

    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ

    • By admin
    • August 4, 2026
    • 6 views
    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ